-->

Interesting facts about Lakshmana in Ramayana

ರಾಮಾಯಣದಲ್ಲಿ ರಾಮನ ಪಾತ್ರದಷ್ಟೇ ಪ್ರಮುಖವಾದುದ್ದು ಲಕ್ಷ್ಮಣನ ಪಾತ್ರ. ರಾಮ ವಿಷ್ಣುವಿನ ಅವತಾರವಾದರೆ ಲಕ್ಷ್ಮಣ ಯಾರ ಅವತಾರ ಗೊತ್ತಾ..? ಇಲ್ಲಿದೆ ಲಕ್ಷ್ಮಣನಿಗೆ ಸಂಬಂಧಿಸಿದ 10 ನೈಜ ಸಂಗತಿಗಳು.

ಹಿಂದೂ ಮಹಾಕಾವ್ಯಗಳಲ್ಲಿ ರಾಮಾಯಣವು ಅತ್ಯಂತ ಶ್ರೇಷ್ಠವಾದ ಕಾವ್ಯವಾಗಿದೆ. ರಾಮಾಯಣದಲ್ಲಿ ರಾಮನ ಪಾತ್ರವೇ ಪ್ರಮುಖವಾದುದ್ದೆಂದು ಹೇಳಲಾಗುತ್ತದೆ. ಆದರೆ ಲಕ್ಷ್ಮಣನೂ ಕೂಡ ರಾಮಾಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾನೆ. ಲಕ್ಷ್ಮಣನೆಂಬ ಶಬ್ಧವು ರಾಮನಿಂದ ಬೇರ್ಪಡಿಸಲಾಗದ ಬಾಂಧವ್ಯ. ಲಕ್ಷ್ಮಣನ ನಿಷ್ಠೆ, ಪ್ರಾಮಾಣಿಕತೆ ಮತ್ತು ಆತನ ಮಧುರ ಬಾಂಧವ್ಯ ರಾಮಾಯಣದಲ್ಲಿ ಬೇರಾರಲ್ಲೂ ಕಾಣಲು ಸಾಧ್ಯವಿಲ್ಲ. ರಾಮಾಯಣದಲ್ಲಿ ಹನುಮನ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಲಕ್ಷ್ಮಣನ ಪಾತ್ರ ಕೂಡ ಮುಖ್ಯವಾಗಿದೆ. ಆದರೆ ಲಕ್ಷ್ಮಣನ ಬಗ್ಗೆ ತಿಳಿಯದ ವಿಷಯಗಳು ಸಾಕಷ್ಟಿವೆ. ಲಕ್ಷ್ಮಣನ ಬಗ್ಗೆ ನಿಮಗೆ ತಿಳಿಯದ ನೈಜ ಕಥೆಗಳು ಇಲ್ಲಿದೆ.

*ಶೇಷನಾಗನ ಅವತಾರ*

ಲಕ್ಷ್ಮಣನನ್ನು ಶೇಷನಾಗನ ಅವತಾರವೆಂದು ಪರಿಗಣಿಸಲಾಗುತ್ತದೆ. ವಿಷ್ಣು ಕ್ಷೀರಸಾಗರದಲ್ಲಿ ವಿಶ್ರಮಿಸುವುದು ಕೂಡ ಇದೇ ಶೇಷನಾಗನ ಮೇಲೆ. ಅಷ್ಟು ಮಾತ್ರವಲ್ಲ, ಇಡೀ ಬ್ರಹ್ಮಾಂಡವನ್ನೇ ತನ್ನ ಹೆಡೆಯ ಮೇಲಿಟ್ಟುಕೊಂಡವನೂ ಇವನೇ. ಶೇಷನಾಗನನ್ನು ಸರ್ಪಗಳ ರಾಜನೆಂದು ಹೇಳಲಾಗುತ್ತದೆ. ಭಗವಾನ್‌ ವಿಷ್ಣು ರಾಮನಾಗಿ ಭೂಮಿಯಲ್ಲಿ ಅವತರಿಸಿದಾಗ ತನ್ನ ಪ್ರಭು ವಿಷ್ಣುವನ್ನು ಅನುಸರಿಸಿಕೊಂಡು ಲಕ್ಷ್ಮಣನ ಅವತಾರದಲ್ಲಿ ಭೂಮಿಗೆ ಕಾಲಿಟ್ಟವನು ಶೇಷನಾಗ. ಮಿಥಿಲಾಳನ್ನು ಕೊಲ್ಲಲು ಬಂದ ರಾವಣನ ಸರ್ಪವು ಲಕ್ಷ್ಮಣನನ್ನು ಕಂಡು ಓಡಿ ಹೋಗಿದ್ದೂ ಕೂಡ ಲಕ್ಷ್ಮಣ ದೈತ್ಯ ಸರ್ಪವೆಂಬ ಕಾರಣಕ್ಕೆ ಎನ್ನಲಾಗಿದೆ.

*​ಬಲರಾಮನಾಗಿ ಪುನರ್ಜನ್ಮ ಪಡೆದ ಲಕ್ಷ್ಮಣ*

ಒಮ್ಮೆ ರಾಮನು ಲಕ್ಷ್ಮಣನಿಗಿಂತ ದೊಡ್ಡವನಾಗಿದ್ದಾಗ ರಾಮನು ಲಕ್ಷ್ಮಣನಿಗೆ ಕೆಲವೊಂದು ವಿಷಯದಲ್ಲಿ ಆಜ್ಞೆಯನ್ನು ನೀಡುತ್ತಿದ್ದನು ಆಗ ಲಕ್ಷ್ಮಣನಿಗೂ ಕೂಡ ನಾನು ಅಣ್ಣನಾಗಬೇಕೆಂಬ ಆಸೆಯಾಗುತ್ತದೆ. ಲಕ್ಷ್ಮಣನ ಆಸೆ ಅವನ ಮುಂದಿನ ಜನ್ಮದಲ್ಲಿ ಈಡೇರುತ್ತದೆ. ಮುಂದಿನ ಜನ್ಮದಲ್ಲಿ ಭಗವಾನ್‌ ವಿಷ್ಣು ಕೃಷ್ಣನಾಗಿ ಜನ್ಮ ತಾಳಿದಾಗ ಲಕ್ಷ್ಮಣನು ಬಲರಾಮನ ಅವತಾರದಲ್ಲಿ ಅವನ ಅಣ್ಣನಾಗಿ ಜನ್ಮ ತಾಳುತ್ತಾನೆ. ಶೇಷನಾಗ ಹಾಗೂ ಭಗವಾನ್‌ ವಿಷ್ಣುವಿನ ನಡುವೆ ಅವಿನಾಭಾವ ಸಂಬಂಧವಿದ್ದುದರಿಂದ ವಿಷ್ಣು ಎಲ್ಲಿರುತ್ತಾನೋ ಅಲ್ಲಿ ಶೇಷನಾಗನಿರುತ್ತಿದ್ದನು. ವಿಷ್ಣು ರಾಮನಾಗಿ ಭೂಮಿಗಿಳಿದಾಗ ಶೇಷನಾಗನು ಲಕ್ಷ್ಮಣನಾಗಿ ಭೂಮಿಗಿಳಿಯುತ್ತಾನೆ. ವಿಷ್ಣು ಕೃಷ್ಣನಾಗಿ ಭೂಮಿಗಿಳಿದಾಗ ಶೇಷನಾಗ ಬಲರಾಮನಾಗಿ ಭೂಮಿಗಿಳಿಯುತ್ತಾನೆ.

*​ಲಕ್ಷ್ಮಣನನ್ನು ಗುಡಾಕೇಶ ಎಂದೂ ಕರೆಯಲಾಗುತ್ತದೆ*

ರಾಮನು 14 ವರ್ಷಗಳ ಕಾಲ ವನವಾಸಕ್ಕೆ ತೆರಳಲು ಸಿದ್ಧನಾದಾಗ ಲಕ್ಷ್ಮಣನು ಕೂಡ ತನ್ನ ಅಣ್ಣನೊಂದಿಗೆ ವನವಾಸಕ್ಕೆ ತೆರಳಲು ಮುಂದಾಗುತ್ತಾನೆ. ಕಾಡಿನಲ್ಲಿ 14 ವರ್ಷಗಳ ವನವಾಸದಲ್ಲಿ ತನ್ನ ಅಣ್ಣ ಮತ್ತು ಅತ್ತಿಗೆ ಸೀತಾ ಮಾತೆಗೆ ಏನು ತೊಂದರೆಯಾಗದಂತೆ ಕಾಪಾಡುವುದು ಅವನ ಜವಾಬ್ದಾರಿಯಾಗಿತ್ತು. ಆದ್ದರಿಂದ ಲಕ್ಷ್ಮಣನು ತನಗೆ 14 ವರ್ಷಗಳವರೆಗೆ ನಿದ್ರೆ ಬಾರದಂತೆ ನಿದ್ರಾ ದೇವಿಯನ್ನು ಪ್ರಾರ್ಥಿಸುತ್ತಾನೆ. ಆಗ ನಿದ್ರಾದೇವಿಗೆ ರಾಮನ ಮೇಲಿದ್ದ ಲಕ್ಷ್ಮಣನ ಪ್ರಿತಿ, ನಿಷ್ಠೆ ಇಷ್ಟವಾಗಿ ಲಕ್ಷ್ಮಣನಿಗೆ 14 ವರ್ಷಗಳವರೆಗೆ ನಿದ್ರೆ ಬಾರದಿರುವಂತೆ ವರವನ್ನು ನೀಡುತ್ತಾಳೆ. 14 ವರ್ಷಗಳ ಕಾಲ ಲಕ್ಷ್ಮಣ ನಿದ್ರೆಯನ್ನು ತ್ಯಜಿಸಿರುವುದರಿಂದ ಆತನನ್ನು ಗುಡಾಕೇಶ ಎಂದು ಕರೆಯಲಾಗುತ್ತದೆ. ಹಾಗೂ ಲಕ್ಷ್ಮಣನು ಸುದೀರ್ಘ ವರ್ಷಗಳವರೆಗೆ ನಿದ್ರೆಯನ್ನು ತ್ಯಜಿಸಿದವರಿಂದ ಮಾತ್ರ ನಿನ್ನ ಸಾವು ಸಂಭವಿಸಲಿದೆ ಎಂದು ವರವನ್ನು ಪಡೆದ ಮೇಘನಾದನನ್ನು ಕೊಲ್ಲಲು ಸಹಕಾರಿಯಾಯಿತು. ಗುಡಾಕೇಶ ಎಂದರೆ ನಿದ್ರೆಯನ್ನು ಗೆದ್ದವನು ಎಂದರ್ಥ.

*ಲಕ್ಷ್ಮಣನು 14 ವರ್ಷಗಳವರೆಗೆ ಯಾವುದೇ ಮಹಿಳೆಯ ಮುಖವನ್ನು ನೋಡಿದವನಲ್ಲ*

ಲಕ್ಷ್ಮಣನು ನಿಜವಾದ ಸದ್ಗುಣಗಳುಳ್ಳ ವ್ಯಕ್ತಿ. 14 ವರ್ಷಗಳ ವನವಾಸದ ಸಮಯದಲ್ಲಿ ಲಕ್ಷ್ಮಣನು ತನ್ನ ಅಣ್ಣ ರಾಮ ಮತ್ತು ಅತ್ತಿಗೆ ಸೀತೆಯೊಂದಿಗೆ ಇದ್ದನಾದರೂ ಒಂದು ದಿನವೂ ಕೂಡ ಸೀತೆಯನ್ನು ಕಣ್ಣೆತ್ತಿ ನೋಡಿದವನಲ್ಲ. ಲಕ್ಷ್ಮಣನು ಯಾವಾಗಲು ಸೀತೆಯೊಂದಿಗೆ ವ್ಯವಹರಿಸುವಾಗ ಆಕೆಯ ಪಾದವನ್ನು ನೋಡಿಕೊಂಡೇ ವ್ಯವಹರಿಸುತ್ತಿದ್ದನು. ರಾವಣನು ಸೀತೆಯನ್ನು ಲಂಕಾಗೆ ಅಪಹರಿಸಿದಾಗ ಆಕೆ ಎಸೆದ ಆಭರಣಗಳನ್ನು, ಆಕೆಯ ಪಾದದ ಗುರುತುಗಳನ್ನು ಲಕ್ಷ್ಮಣನು ನೋಡಿದ ಮೆಲೆ ಅದು ತನ್ನ ಅತ್ತಿಗೆಯ ಪಾದದ ಗುರುತೆಂದು ಗುರುತಿಸುತ್ತಾನೆ.

Interesting facts about Lakshmana in Ramayana



*​ಲಕ್ಷ್ಮಣನು ರಾವಣನ ಮಗ ಇಂದ್ರಜಿತ್‌ನನ್ನು ಹತ್ಯೆಗೈಯುತ್ತಾನೆ*

ಯುದ್ಧದ ನಂತರ ಒಮ್ಮೆ ಅಗಸ್ತ್ಯ ಋಷಿಗಳು ಅಯೋಧ್ಯೆಗೆ ಬರುತ್ತಾರೆ. ಆಗ ಅಗಸ್ಯ್ತರು ಲಕ್ಷ್ಮಣನನ್ನು ಕುರಿತು ನೀನು ಮೇಘನಾದನನ್ನು ಹೇಗೆ ಸಾಯಿಸಿದೆ..? ಅದು ಅಷ್ಟು ಸುಲಭದ ಕೆಲಸವಲ್ಲ. ಮೇಘನಾದನು ತ್ರಿಮೂರ್ತಿ, ಬ್ರಹ್ಮಾಸ್ತ್ರ, ನಾರಾಯಣಾಸ್ತ್ರ ಮತ್ತು ಪಾಶುಪತಾಸ್ತ್ರವನ್ನು ಹೊಂದಿದವನು. ಆದ್ದರಿಂದ ಆತನನ್ನು ಕೇವಲ ಗುಡಾಕೇಶರಿಂದ ಮಾತ್ರ ಸಾಯಿಸಲು ಸಾಧ್ಯ. ಅದು ನಿನ್ನಿಂದ ಹೇಗೆ ಸಾಧ್ಯವಾಯಿತೆಂದು ಕೇಳುತ್ತಾರೆ. ಆಗ ಲಕ್ಷ್ಮಣನು ಅಗಸ್ತ್ಯ ಮುನಿಗಳನ್ನು ಕುರಿತು, ನಾನು 14 ವರ್ಷಗಳ ವನವಾಸದಲ್ಲಿ ನಿದ್ದೆ, ಆಹಾರ ಸೇವನೆಯನ್ನು ತ್ಯಜಿಸಿ ಬಿಟ್ಟಿದ್ದೆ ಹಾಗೂ ಯಾವುದೇ ಮಹಿಳೆಯರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅಲ್ಲಿ ನನಗೆ ತನ್ನ ಅಣ್ಣ ರಾಮನ ಮತ್ತು ಅತ್ತಿಗೆ ಸೀತಾ ಮಾತೆಯ ಯೋಗಕ್ಷೇಮ ಮಾತ್ರ ಮುಖ್ಯವಾಗಿತ್ತೆಂದು ಲಕ್ಷ್ಮಣನು ಹೇಳುತ್ತಾನೆ.

*ಲಕ್ಷ್ಮಣನ ಮರಣ*

ರಾಮನಿಗೆ ಭೂಮಿಯಲ್ಲಿ ತಾನು ತನ್ನೆಲ್ಲಾ ಕರ್ತವ್ಯವನ್ನು ಪೂರೈಸಿದ್ದೇನೆಂದು ಎಣಿಸಿದಾಗ ಅವನು ಭೂಮಿಯನ್ನು ತ್ಯಜಿಸಲು ಮುಂದಾಗುತ್ತಾನೆ. ಆಗ ರಾಮನು ಯಮನನ್ನು ಆಹ್ವಾನಿಸಿದನು. ಆದರೆ ಯಮ ರಾಮನಿಗೆ ಒಂದು ಷರತ್ತನ್ನು ಇಡುತ್ತಾನೆ. ನಾನು ನೀನು ಸಾವಿನ ಕುರಿತು ವ್ಯವಹರಿಸುವಾಗ ಯಾರಾದರು ಮಧ್ಯೆ ಬಂದರೆ ಅವರು ಸಾಯಲೇಬೇಕು ಇದಕ್ಕೆ ನಿನ್ನ ಒಪ್ಪಿಗೆ ಇದೆಯೇ ಎಂದು ಕೇಳುತ್ತಾನೆ. ಆಗ ರಾಮನು ಸರಿ ಎಂದು ಯಮನ ಷರತ್ತಿಗೆ ಒಪ್ಪಿಕೊಂಡು ಲಕ್ಷ್ಮಣನನ್ನು ಕೋಣೆಯ ಬಾಗಿಲಿನ ಹೊರಗೆ ಯಾರು ಬಾರದಂತೆ ನೋಡಿಕೋ ಎಂದು ಕಾವಲಿರಿಸುತ್ತಾನೆ. ಅದೇ ಸಮಯಕ್ಕೆ ದುರ್ವಾಸ ಮುನಿಗಳು ರಾಮನನ್ನು ಭೇಟಿಯಾಗಲು ಬರುತ್ತಾರೆ. ದುರ್ವಾಸರನ್ನು ಲಕ್ಷ್ಮಣನು ಬಾಗಿಲಲ್ಲೇ ಅಡ್ಡಹಾಕಿ ರಾಮನನ್ನು ನೋಡಲು ಸಾಧ್ಯವಿಲ್ಲವೆನ್ನುತ್ತಾನೆ. ಆಗ ದುರ್ವಾಸರು ಒಂದು ವೇಳೆ ನನಗೆ ರಾಮನನ್ನು ನೋಡಲು ಅವಕಾಶ ನೀಡದಿದ್ದರೆ ಅಯೋಧ್ಯೆ ಗೆ ಶಾಪ ಹಾಕುತ್ತೇನೆಂದು ಹೇಳುತ್ತಾರೆ.

ಅಯೋಧ್ಯೆಯನ್ನು ರಕ್ಷಿಸುವ ಸಲುವಾಗಿ ಲಕ್ಷ್ಮಣನು ಯಮ ಮತ್ತು ರಾಮನ ಸಂವಹನದ ನಡುವೆ ಆಗಮಿಸುತ್ತಾನೆ. ಆಗ ಲಕ್ಷ್ಮಣನು ತನ್ನ ಅಣ್ಣನು ನೀಡಿದ್ದ ಮಾತಿಗೆ ದಕ್ಕೆ ಬರಬಾರದೆಂದು ತಾನೇ ಸ್ವ ಇಚ್ಛೆಯಿಂದ ಸರಾಯು ನದಿ ದಡಕ್ಕೆ ಹೋಗಿ ತನ್ನ ಪ್ರಾಣವನ್ನು ತ್ಯಜಿಸುತ್ತಾನೆ. ಅದಾಗ್ಯೂ, ರಾಮನ ಸಾವಿಗೂ ಮುಂಚಿತವಾಗಿ ಲಕ್ಷ್ಮಣನು ಸಾಯಲೇಬೇಕಿತ್ತು. ಯಾಕೆಂದರೆ ರಾಮನ ಅವತಾರದಲ್ಲಿದ್ದ ವಿಷ್ಣು ಕ್ಷೀರಸಾಗರವನ್ನು ತಲುಪುವುದಕ್ಕಿಂತ ಮೊದಲು ಲಕ್ಷ್ಮಣನ ಅವತಾರದಲ್ಲಿದ್ದ ಶೇಷನಾಗನು ಶೇಷನಾಗನ ಅವತಾರದಲ್ಲಿ ಕ್ಷೀರಸಾಗರಕ್ಕೆ ಹೋಗಬೇಕಿತ್ತು. ಆದ್ದರಿಂದ ರಾಮನಿಗಿಂತ ಮೊದಲು ಲಕ್ಷ್ಮಣನು ಸಾವನ್ನಪ್ಪುತ್ತಾನೆ.

*​ಲಕ್ಷ್ಮಣನು ವನವಾಸದಲ್ಲೂ ರಾಮನನ್ನು ಹಿಂಬಾಲಿಸುತ್ತಾನೆ*

ರಾಮನು ವನವಾಸಕ್ಕೆ ತೆರಳುವುದು ನಿಶ್ಚಯವಾದಾಗ ರಾಮನು ತನ್ನ ಪತ್ನಿಯ ಬಳಿ ರಾಜ್ಯದಲ್ಲೇ ಇರುವಂತೆ ಹೇಳುತ್ತಾನೆ ಆದರೆ ಸೀತಾದೇವಿಯು ಇದಕ್ಕೆ ಒಪ್ಪುವುದಿಲ್ಲ. ಆದರೆ ರಾಮನು ಲಕ್ಷ್ಮಣನ ಬಳಿ ರಾಜ್ಯದಲ್ಲಿ ಇರುವಂತೆ ಹೇಳುವುದಿಲ್ಲ. ಯಾಕೆಂದರೆ ರಾಮನಿಗೆ ತಾನು ಎಲ್ಲಿ ಹೋದರೂ ಲಕ್ಷ್ಮಣನು ತನ್ನನ್ನು ಹಿಂಬಾಲಿಸುತ್ತಾನೆಂಬುದೂ ತಿಳಿದಿತ್ತು. ಲಕ್ಷ್ಮಣನಿಗೆ ರಾಮನನ್ನು ಹೊರತುಪಡಿಸಿ ಬೇರೆ ಪ್ರಪಂಚವೇ ಇರಲಿಲ್ಲ.

*​ಭಗವಾನ್‌ ರಾಮನು ಕೂಡ ಲಕ್ಷ್ಮಣನನ್ನು ಅಷ್ಟೇ ಪ್ರೀತಿಸುತ್ತಿದ್ದನು*

ಲಕ್ಷ್ಮಣನಿಗೆ ರಾಮನ ಮೇಲೆ ಎಲ್ಲಿಲ್ಲದ ಪ್ರೀತಿ, ಗೌರವವಿತ್ತು. ಲಕ್ಷ್ಮಣನು ತನಗಾಗಿ ಬದುಕುವುದಕ್ಕಿಂತ ರಾಮನ ಸೇವೆಗಾಗಿ ಬದುಕುತ್ತಿದ್ದನು. ರಾಮನಿಗೂ ಕೂಡ ಲಕ್ಷ್ಮಣನೆಂದರೆ ಅಷ್ಟೇ ಪ್ರೀತಿಯಿತ್ತು. ಒಮ್ಮೆ ಯುದ್ಧಭೂಮಿಯಲ್ಲಿ ಲಕ್ಷ್ಮಣ ಗಾಯಗೊಂಡು, ಬಹುತೇಕ ಜನರು ಮರಣಹೊಂದುತ್ತಾರೆ. ಲಕ್ಷ್ಮಣನಿಗಾದ ಗಾಯವನ್ನು ಕಂಡು ರಾಮನು ಅಳುತ್ತಾ ನಾನು ಸಿರಿ, ಸಂಪತ್ತಿಲ್ಲದೇ, ಅಯೋಧ್ಯೆಯಿಲ್ಲದೇ, ಸೀತೆಯಿಲ್ಲದೇ ಬೇಕಾದರೂ ಬದುಕುತ್ತೇನೆ ಆದರೆ ನೀನಿಲ್ಲದೇ ನಾನು ಬದುಕಲು ಸಾಧ್ಯವಿಲ್ಲವೆಂದು ರಾಮನು ಗೋಗರೆಯುತ್ತಾನೆ.

*​ಲಕ್ಷ್ಮಣನು ರಾಮನಿಗೆ ಸಲಹೆ ನೀಡುತ್ತಿದ್ದನು, ಪ್ರೇರೇಪಿಸುತ್ತಿದ್ದನು*

ಸೀತೆಯು ವನವಾಸದ ಸಮಯದಲ್ಲಿ ಕಣ್ಮರೆಯಾದಾಗ ರಾಮನು ಖಿನ್ನತೆಗೆ ಒಳಗಾಗುತ್ತಾನೆ. ಆದರೆ ಲಕ್ಷ್ಮಣನು ತನ್ನ ಅಣ್ಣನಿಗೆ ಯಾವಾಗಲು ಬೆನ್ನೆಲುಬಾಗಿ ನಿಂತು ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದನು. ರಾಮನು ಕಾಡಿನಲ್ಲಿದ್ದ ಮರ, ಗಿಡ, ಪ್ರಾಣಿ, ಪಕ್ಷಿಗಳಲ್ಲಿ ತನ್ನ ಪತ್ನಿ ಸೀತೆ ಎಲ್ಲಿ ಎಂದು ಕೇಳುತ್ತಿದ್ದಾಗ ಲಕ್ಷ್ಮಣನು ರಾಮನಿಗೆ ಧೈರ್ಯ ತುಂಬುತ್ತಿದ್ದನು. ಸೀತೆಯನ್ನು ಹುಡುಕಿ ಹೊರಟಿದ್ದ ರಾಮ ಮೂರ್ಛೆ ತಪ್ಪಿ ಬಿದ್ದಾಗ ಲಕ್ಷ್ಮಣನು ಆತನೊಂದಿಗಿದ್ದು, ಮಾತನಾಡಿಸುತ್ತಾ ಆ ಘಟನೆಯಿಂದ ಹೊರತರಲು ಪ್ರಯತ್ನಿಸುತ್ತಿದ್ದನು.

*ಲಕ್ಷ್ಮಣನ ಗುರು*

ಲಕ್ಷ್ಮಣನ ಗುರು ಆತನ ಸಹೋದರ ರಾಮ. ರಾಮ ಕೇವಲ ಲಕ್ಷ್ಮಣನ ಸಹೋದರ ಮಾತ್ರನಾಗಿರಲಿಲ್ಲ. ಆತನಿಗೆ ತಂದೆಯ ಸ್ಥಾನವನ್ನು, ಗುರುವಿನ ಸ್ಥಾನವನ್ನು ತುಂಬಿದ್ದನು. ವಿಶ್ವಾಮಿತ್ರ ಮುನಿಗಳು ರಾಮನಿಗೆ ಅಸ್ತ್ರಗಳ ಬಗ್ಗೆ, ಶಾಸ್ತ್ರಗಳ ಬಗ್ಗೆ ಉಪದೇಶ ನೀಡಿದಾಗ ಅದನ್ನು ರಾಮನು ಲಕ್ಷ್ಮಣನಿಗೂ ಕಲಿಸಿಕೊಡುತ್ತಿದ್ದನು.
 

ಕೃಪೆ : ಶ್ರೀ ಮದಾಚಾರ್ಯ ವಿರಚಿತ ಶ್ರೀ ಸುಂದರ ಕಾಂಡ ರಾಮಾಯಣ

–>