-->

Sandalwood Kannada updates

Sandalwood updates

Amruthadhaare Story:ಅಮೃತಧಾರೆ ಸೀರಿಯಲ್‌ನಲ್ಲಿ ಮಂಕಾದ ಭೂಮಿಕಾ; ಪಾರ್ಥನ ಮದುವೆ ವಿಷಯ ಪಾರ್ಥನಿಗೆ ಬಿಟ್ಟು ಮತ್ತೆಲ್ಲರಿಗೂ ಗೊತ್ತಾಯ್ತು

Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥನ ಮದುವೆ ವಿಚಾರವೇ ಪ್ರಮುಖ ಹೈಲೈಟ್‌. ಪಾರ್ಥನಿಗೆ ಹುಡುಗಿ ಹುಡುಕುತ್ತಿರುವ ವಿಷಯ ಅಪೇಕ್ಷಾಳಿಗೆ ತಿಳಿದು ಅವಳ ಮನಸ್ಸು ವಿಲವಿಲ ಒದ್ದಾಡಿದೆ. ಆನಂದ್‌ ಮೇಲೆ ಅಪರ್ಣಾ ಮುನಿಸು ದೂರವಾಗಿದೆ.

ವಿಎಫ್‌ಎಕ್ಸ್‌ ಕಮಿಷನ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಎಪಿ ಅರ್ಜುನ್‌; ನನ್ನಿಂದ ವಂಚನೆ ನಡೆದಿಲ್ಲ ಎಂದ ಮಾರ್ಟಿನ್‌ ಸಿನಿಮಾದ ನಿರ್ದೇಶಕರು

Martin Movie Director AP Arjun: ವಿಎಫ್‌ಎಕ್ಸ್‌ ವಂಚನೆ ಕುರಿತಂತೆ ತನ್ನ ಮೇಲೆ ಬಂದ ಆರೋಪಗಳಿಗೆ ಮಾರ್ಟಿನ್‌ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನಿಂದ ಯಾವುದೇ ರೀತಿಯ ವಂಚನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಗೆ ತಮ್ಮ ಲಾಯರ್‌ ಜತೆಗೆ ಇವರು ಆಗಮಿಸಿದ್ದರು.

Chandu champion OTT: ಒಟಿಟಿಗೆ ಬಂತು ಕಾರ್ತಿಕ್‌ ಆರ್ಯನ್‌ ನಟನೆಯ ಚಂದು ಚಾಂಪಿಯನ್‌; ಸಿನಿಮಾ ನೋಡಲು ಷರತ್ತುಗಳು ಅನ್ವಯ

Chandu champion OTT Release: ಕಾರ್ತಿನ್‌ ಆರ್ಯನ್‌ ನಟನೆಯ ಕ್ರೀಡಾ ಡ್ರಾಮಾ ಚಂದು ಚಾಂಪಿಯನ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದು ಎಂಬ ವಿವರ ಇಲ್ಲಿದೆ.

ರೂಪಾಂತರ ಸಿನಿಮಾ ವಿಮರ್ಶೆ ಮಾಡಿದ ರಿಷಬ್‌ ಶೆಟ್ಟಿ; 4ರಲ್ಲಿ 2 ಕಥೆ ತುಂಬಾ ಇಷ್ಟ ಆಯ್ತು, ಅಜ್ಜಅಜ್ಜಿಯಂತೂ ಚಿತ್ರದ ಪ್ರಮುಖ ಆಕರ್ಷಣೆ

Roopanthara Kannada Movie Review: ರೂಪಾಂತರ ಸಿನಿಮಾವನ್ನು ನೋಡಿರುವ ರಾಜ್‌ ಬಿ ಶೆಟ್ಟಿ ತುಂಬಾ ಚೆನ್ನಾಗಿದೆ. ನಾಲ್ಕರಲ್ಲಿ 2 ಕಥೆಗಳು ತುಂಬಾ ಇಷ್ಟ ಆಯ್ತು ಎಂದಿದ್ದಾರೆ. ಇದೇ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ವೀಕ್ಷಕರು ವಿಮರ್ಶೆ ಹಂಚಿಕೊಂಡಿದ್ದಾರೆ.

Martin Movie VFX: ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ವಿಎಫ್‌ಎಕ್ಸ್‌ ವಿವಾದ; ನಿರ್ದೇಶಕ ಎಪಿ ಅರ್ಜುನ್‌ಗೂ ಸಂಕಷ್ಟ?

Martin Movie VFX cheating case: ಕೆಲವು ದಿನಗಳ ಹಿಂದೆಯಷ್ಟೇ ಮಾರ್ಟಿನ್‌ ನಿರ್ಮಾಪಕರಾದ ಉದಯ್‌ ಕೆ ಮೆಹ್ತಾ ಅವರು ಮಾರ್ಟಿನ್‌ ಸಿನಿಮಾದ ವಿಎಫ್‌ಎಕ್ಸ್‌ಗೆ ಸಂಬಂಧಪಟ್ಟಂತೆ ನಡೆದ ಮೋಸದ ವಿರುದ್ಧ ವಂಚನೆ ದೂರು ದಾಖಲಿಸಿದ್ದರು. ಇಬ್ಬರ ಬಂಧನವೂ ಆಗಿತ್ತು.

Rajinikanth: ಮೊಮ್ಮಗನನ್ನು ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್‌; ಶಾಲೆಯಲ್ಲಿ ಕಣ್ಣರಳಿಸಿ ತಲೈವಾನ ಕಣ್ತುಂಬಿಕೊಂಡ್ರು ಪುಟಾಣಿ ಮಕ್ಕಳು

ಸೌಂದರ್ಯ ರಜನಿಕಾಂತ್‌ ಮಗನಿಗೆ ಇಂದು ಸ್ಕೂಲ್‌ಗೆ ಹೋಗಲು ಇಷ್ಟವೇ ಇರಲಿಲ್ಲ. ಆದರೆ, ತಾತಾ ರಜನಿಕಾಂತ್‌ ಸುಮ್ಮನಿರಬೇಕಲ್ವ. ಮೊಮ್ಮಗನನ್ನು ಪುಸಲಾಯಿಸಿ ಶಾಲೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ರಜನಿಕಾಂತ್‌ನನ್ನು ನೋಡಿ ಕಣ್ಣರಳಿಸಿದರು.

ನಾಗಿಣಿ ಭರಣ ನಿರ್ದೇಶನದ ಜೀನಿಯಸ್ ಮುತ್ತ ಚಿತ್ರಕ್ಕೆ ಸಾಥ್ ನೀಡಿದ ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ

ಹಿರಿಯನಿರ್ದೇಶಕ ನಾಗಾಭರಣ ಅವರ ಪತ್ನಿ ನಾಗಿಣಿ ಭರಣ, ಜೀನಿಯಸ್‌ ಮುತ್ತ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ  ತಂಡಕ್ಕೆ ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ಶುಭ ಕೋರಿದರು.  

ದರ್ಶನ್‌ ಭೇಟಿ ಬಳಿಕ ರೇಣುಕಾಸ್ವಾಮಿ ಕುಟುಂಬ ಸಂತೈಸಿದ ವಿನೋದ್‌ ರಾಜ್;‌ ಹುಟ್ಟೋ ಮಗುವಿಗಾಗಿ ಹಣಕಾಸಿನ ನೆರವು

Chitradurga Renukaswamy Murder: ನಟ ವಿನೋದ್‌ ರಾಜ್‌ ಮೃತ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗಿದ್ದಾರೆ. ಇಂದು ರೇಣುಕಸ್ವಾಮಿ ಪೋಷಕರನ್ನು ಭೇಟಿಯಾಗಿದ್ದು, ಸಾಂತ್ವನ ಹೇಳಿದ್ದಾರೆ. ಇದೇ ಸಮಯದಲ್ಲಿ ಆ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿದ್ದಾರೆ.

Raayan Review: ಇವನು ರಾಯನ್‌ ಅಲ್ಲ ರಾವಣ, ಅಕ್ಷರಶಃ ನರರೂಪಿ ರಾಕ್ಷಸ!; ಹೇಗಿದೆ ಧನುಷ್‌ ನಟನೆಯ 50ನೇ ಸಿನಿಮಾ?

ಧನುಷ್‌ ನಟನೆಯ 50ನೇ ಸಿನಿಮಾ ಎಂಬ ವಿಶೇಷಣದ ಜತೆಗೆ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೂ ರಾಯನ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿಬಂದಿದೆ. ಕುಟುಂಬಕ್ಕಿಂತ ಹೆಚ್ಚಿನದೇನೂ ಇಲ್ಲ ಎಂಬ ಸಂದೇಶವನ್ನೂ ಈ ಸಿನಿಮಾ ಮೂಲಕ ದಾಟಿಸಿದ್ದಾರವರು.

ನಾನಾ ನೀನಾ! ಮೊದಲ ಸ್ಥಾನದಲ್ಲಿ ಎರಡು ಧಾರಾವಾಹಿಗಳು, TRPಯಲ್ಲಿ ಮುಂದುವರಿದ ಪೈಪೋಟಿ; ಇನ್ನುಳಿದ ಸೀರಿಯಲ್‌ಗಳ ಕಥೆ ಏನು?

ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವೆ ಬಿರುಸಿನ ಪೈಪೋಟಿ ಮುಂದುವರಿದಿದೆ. ಟಿಆರ್‌ಪಿ ವಿಚಾರದಲ್ಲಿ ಒಂದಕ್ಕೊಂದು ಧಾರಾವಾಹಿಗಳು ಸ್ಪರ್ಧೆಯೊಡ್ಡುತ್ತಿವೆ. ಹಾಗಾದರೆ, ಈ ವಾರದ ಟಿಆರ್‌ಪಿ ಅಂಕಿ ಅಂಶದಲ್ಲಿ ಟಾಪ್‌ 10ರಲ್ಲಿರುವ ಧಾರಾವಾಹಿಗಳು ಇಲ್ಲಿವೆ ನೋಡಿ.

Credits : HTimes Kannada

–>