Sandalwood updates
ʻಕಪಟ ನಾಟಕ ಸೂತ್ರಧಾರಿʼ ಚಿತ್ರದ ಟ್ರೇಲರ್ ಬಿಡುಗಡೆ; ಜುಲೈ 4ರಂದು ಚಿತ್ರಮಂದಿರಕ್ಕೆ ಹೊಸಬರ ಹೊಸ ಪ್ರಯತ್ನ
ಧೀರಜ್ ಎಂ.ವಿ ನಿರ್ದೇಶನದ, ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸಿರುವ ʻಕಪಟ ನಾಟಕ ಸೂತ್ರಧಾರಿʼ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಜುಲೈ 4ರಂದು ಸಿನಿಮಾ ರಿಲೀಸ್ ಆಗಲಿದೆ. 
ʻಅವನಿರಬೇಕಿತ್ತುʼ ಚಿತ್ರ ಬಿಡುಗಡೆಗೆ ರೆಡಿ; ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ
ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ʻಅವನಿರಬೇಕಿತ್ತುʼ. ಈ ಸಿನಿಮಾ ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. 
ʻಕಮಲ್ ಶ್ರೀದೇವಿʼ ಚಿತ್ರಕ್ಕೂ ಕಮಲ್ ಹಾಸನ್ ಮತ್ತು ಶ್ರೀದೇವಿಗೇನು ಸಂಬಂಧ? ಕುತೂಹಲ ಮೂಡಿಸಿದ ಚಿತ್ರದ ಫಸ್ಟ್ ಲುಕ್
ʻಕಮಲ್ ಶ್ರೀದೇವಿʼ ಅನ್ನೋ ಲೆಜಂಡರಿ ಜೋಡಿಯ ಹೆಸರಿಟ್ಟು, ಸಾಂಕೇತಿಕವಾಗಿ ಹಲವು ಆಯಾಮವನ್ನು ಸೂಚಿಸುವ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹಲವು ಪ್ರಶ್ನೆಗಳ ಜೊತೆಗೆ ಕೌತುಕ ಹುಟ್ಟಿಸಿದೆ.
ಬಿಡುಗಡೆಗೆ ಅಣಿಯಾದ ನಟ ಸುಚೇಂದ್ರ ಪ್ರಸಾದ್ ನಿರ್ದೇಶನದ ʻಪದ್ಮಗಂಧಿʼ ಚಿತ್ರ
ಸ್ಯಾಂಡಲ್ವುಡ್ ನಟ ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಪದ್ಮಗಂಧಿ ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಂಡಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್ಗೆ ತಪ್ಪದ ಸಂಕಷ್ಟ; ಜೈಲಿನಲ್ಲೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್ ಅನುಮತಿ
ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ಗೆ ಸಂಕಷ್ಟ ತಪ್ಪಿಲ್ಲ. ಜೈಲಿನಲ್ಲಿಯೇ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಕೋರ್ಟ್ ಅನುಮತಿ ನೀಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು) 
ʻಕರಿಕಾಡʼ ಸಿನಿಮಾ ಮೂಲಕ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಟೆಕ್ಕಿ ನಟರಾಜ್
ಬಣ್ಣದ ಲೋಕದ ಕನಸು ಹೊತ್ತು ಕಾಡ ನಟರಾಜ್ ‘ಕರಿಕಾಡ’ ಚಿತ್ರದ ಮೂಲಕ ಪ್ರೇಕ್ಷಕರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಬರುತ್ತಿದ್ದಾರೆ. ಕಾಡ ನಟರಾಜ್ ಈ ಸಿನಿಮಾದ ನಾಯಕ. ಸದಾ ಚಿತ್ರಜಗತ್ತಿನ ಕನಸು ಕಾಣುತ್ತಾ ಐಟಿ ವಲಯದಲ್ಲಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕೆಲಸ ಮಾಡ್ತಿರೋ ಕಲಾವಿದ.
ಅಂತಿಮ ಘಟ್ಟದತ್ತ ಸರಿಗಮಪ ಶೋ; ಆರು ಸ್ಪರ್ಧಿಗಳಲ್ಲಿ ಯಾರ ಮುಡಿಗೆ ವಿನ್ನರ್ ಪಟ್ಟ?
6 ವರ್ಷದಿಂದ 60 ವರ್ಷದ ವರೆಗಿನ ಸ್ಪರ್ಧಿಗಳು ಭಾಗವಹಿಸಿದ ಸರೆಗಮಪ ಆವೃತ್ತಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಇನ್ನು ಈ ಆವೃತ್ತಿಯು ಅಂತಿಮ ಘಟ್ಟ ತಲುಪಿದ್ದು 6 ಸ್ಪರ್ಧಿಗಳಲ್ಲಿ ಸರಿಗಮಪ ಟೈಟಲ್ ಯಾರ ಮುಡಿಗೇರಲಿದೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಈ ಕುತೂಹಲಕ್ಕೆ ಬ್ರೇಕ್ ಇದೇ ಜೂನ್ 7 ರಂದು ಸಂಜೆ 6 ಗಂಟೆಗೆ ಸಿಗಲಿದೆ.
ʻದಿಲ್ದಾರ್ʼ ಚಿತ್ರದಲ್ಲಿ ಕಾಲೇಜ್ ಬಾಯ್ ಲುಕ್ನಲ್ಲಿ ಖಡಕ್ ಖಳನಾದ ನಟ ಭಜರಂಗಿ ಲೋಕಿ
ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಂಡಿರುವ ʻದಿಲ್ದಾರ್ʼ ಚಿತ್ರತಂಡವೀಗ ಭಜರಂಗಿ ಲೋಕಿ ಅವರಿಗೆ ಪೋಸ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಇದರೊಂದಿಗೆ ಭಜರಂಗಿ ಲೋಕಿಯ ಲುಕ್ ಕೂಡ ರಿವೀಲ್ ಆದಂತಾಗಿದೆ.
ಕಲರ್ಸ್ ಕನ್ನಡ ವಾಹಿನಿಗೆ ಹತ್ತು ವರ್ಷದ ಸಂಭ್ರಮ; ಜೂನ್ 7 ಮತ್ತು 8ರಂದು ʻದಶಕದ ಮಹೋತ್ಸವʼ ವಿಶೇಷ ಕಾರ್ಯಕ್ರಮ
ಕಳೆದ ಒಂದು ದಶಕದಿಂದ ಕಲರ್ಸ್ ಕನ್ನಡ ವಾಹಿನಿ ತನ್ನ ವಿಭಿನ್ನ ಕತೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದೆ. ಇಂತಹ ಸಿಹಿ ಗಳಿಗೆಯಲ್ಲಿ ಹಲವು ಕಲಾವಿದರು ಮತ್ತು ಮಹನೀಯರನ್ನು ಸ್ಮರಿಸಿ ಗೌರವಿಸುವ ಮಹೋನ್ನತ ಪರಂಪರೆಯನ್ನು ಸಂಭ್ರಮಿಸುವ ಕಾರ್ಯಕ್ರಮವೇ 'ದಶಕದ ಮಹೋತ್ಸವ'.
ಖೇಲಾ ಚಿತ್ರದ ಪುಣ್ಯಾತ್ಗಿತ್ತೀ ಹಾಡಿಗೆ ಪ್ರಶಂಸೆಯ ಸುರಿಮಳೆ, ಶ್ರಾವಣಿ ಸುಬ್ರಹ್ಮಣ್ಯ ನಟನ ಸಿನಿಮಾ
“ಸ್ಯಾಂಡಲ್ವುಡ್ನ ಹೊಸ ಸಿನಿಮಾ ಖೇಲಾ”ಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ "ಪುಣ್ಯಾತ್ ಗಿತ್ತೀ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
Credits : HTimes Kannada
Subscribe , Follow on