Sandalwood updates
ʻಕರಿಕಾಡʼ ಸಿನಿಮಾ ಮೂಲಕ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಟೆಕ್ಕಿ ನಟರಾಜ್
ಬಣ್ಣದ ಲೋಕದ ಕನಸು ಹೊತ್ತು ಕಾಡ ನಟರಾಜ್ ‘ಕರಿಕಾಡ’ ಚಿತ್ರದ ಮೂಲಕ ಪ್ರೇಕ್ಷಕರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಬರುತ್ತಿದ್ದಾರೆ. ಕಾಡ ನಟರಾಜ್ ಈ ಸಿನಿಮಾದ ನಾಯಕ. ಸದಾ ಚಿತ್ರಜಗತ್ತಿನ ಕನಸು ಕಾಣುತ್ತಾ ಐಟಿ ವಲಯದಲ್ಲಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕೆಲಸ ಮಾಡ್ತಿರೋ ಕಲಾವಿದ.
ಅಂತಿಮ ಘಟ್ಟದತ್ತ ಸರಿಗಮಪ ಶೋ; ಆರು ಸ್ಪರ್ಧಿಗಳಲ್ಲಿ ಯಾರ ಮುಡಿಗೆ ವಿನ್ನರ್ ಪಟ್ಟ?
6 ವರ್ಷದಿಂದ 60 ವರ್ಷದ ವರೆಗಿನ ಸ್ಪರ್ಧಿಗಳು ಭಾಗವಹಿಸಿದ ಸರೆಗಮಪ ಆವೃತ್ತಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಇನ್ನು ಈ ಆವೃತ್ತಿಯು ಅಂತಿಮ ಘಟ್ಟ ತಲುಪಿದ್ದು 6 ಸ್ಪರ್ಧಿಗಳಲ್ಲಿ ಸರಿಗಮಪ ಟೈಟಲ್ ಯಾರ ಮುಡಿಗೇರಲಿದೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಈ ಕುತೂಹಲಕ್ಕೆ ಬ್ರೇಕ್ ಇದೇ ಜೂನ್ 7 ರಂದು ಸಂಜೆ 6 ಗಂಟೆಗೆ ಸಿಗಲಿದೆ.
ʻದಿಲ್ದಾರ್ʼ ಚಿತ್ರದಲ್ಲಿ ಕಾಲೇಜ್ ಬಾಯ್ ಲುಕ್ನಲ್ಲಿ ಖಡಕ್ ಖಳನಾದ ನಟ ಭಜರಂಗಿ ಲೋಕಿ
ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಂಡಿರುವ ʻದಿಲ್ದಾರ್ʼ ಚಿತ್ರತಂಡವೀಗ ಭಜರಂಗಿ ಲೋಕಿ ಅವರಿಗೆ ಪೋಸ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಇದರೊಂದಿಗೆ ಭಜರಂಗಿ ಲೋಕಿಯ ಲುಕ್ ಕೂಡ ರಿವೀಲ್ ಆದಂತಾಗಿದೆ.
ಕಲರ್ಸ್ ಕನ್ನಡ ವಾಹಿನಿಗೆ ಹತ್ತು ವರ್ಷದ ಸಂಭ್ರಮ; ಜೂನ್ 7 ಮತ್ತು 8ರಂದು ʻದಶಕದ ಮಹೋತ್ಸವʼ ವಿಶೇಷ ಕಾರ್ಯಕ್ರಮ
ಕಳೆದ ಒಂದು ದಶಕದಿಂದ ಕಲರ್ಸ್ ಕನ್ನಡ ವಾಹಿನಿ ತನ್ನ ವಿಭಿನ್ನ ಕತೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದೆ. ಇಂತಹ ಸಿಹಿ ಗಳಿಗೆಯಲ್ಲಿ ಹಲವು ಕಲಾವಿದರು ಮತ್ತು ಮಹನೀಯರನ್ನು ಸ್ಮರಿಸಿ ಗೌರವಿಸುವ ಮಹೋನ್ನತ ಪರಂಪರೆಯನ್ನು ಸಂಭ್ರಮಿಸುವ ಕಾರ್ಯಕ್ರಮವೇ 'ದಶಕದ ಮಹೋತ್ಸವ'.
ಖೇಲಾ ಚಿತ್ರದ ಪುಣ್ಯಾತ್ಗಿತ್ತೀ ಹಾಡಿಗೆ ಪ್ರಶಂಸೆಯ ಸುರಿಮಳೆ, ಶ್ರಾವಣಿ ಸುಬ್ರಹ್ಮಣ್ಯ ನಟನ ಸಿನಿಮಾ
“ಸ್ಯಾಂಡಲ್ವುಡ್ನ ಹೊಸ ಸಿನಿಮಾ ಖೇಲಾ”ಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ "ಪುಣ್ಯಾತ್ ಗಿತ್ತೀ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಉಪೇಂದ್ರ ಅವರಿಂದ ಸಾಕಷ್ಟು ಕದ್ದಿದ್ದೇನೆ ಎಂದ ‘ಪುಷ್ಪ’ ನಿರ್ದೇಶಕ ಸುಕುಮಾರ್
‘ನಾನೇನಾದರೂ ಉಪೇಂದ್ರ ಅವರ ತರಹ ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರೆ, ಇಷ್ಟೊತ್ತಿಗೆ ಸಂತೋಷದಿಂದ ರಿಟೈರ್ ಆಗಿರುತ್ತಿದ್ದೆ’ ಎಂದು ‘ಪುಷ್ಪ’ ಖ್ಯಾತಿಯ ನಿರ್ದೇಶಕ ಸುಕುಮಾರ್ ಹೇಳಿಕೊಂಡಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣ: ವಿದೇಶಕ್ಕೆ ತೆರಳಲು ನಟ ದರ್ಶನ್ಗೆ ಅವಕಾಶ; ಆದರೆ ಒಂದು ಷರತ್ತು ವಿಧಿಸಿದ ಕೋರ್ಟ್, ಏನದು?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ವಿದೇಶಕ್ಕೆ ತೆರಳಲು ನ್ಯಾಯಾಲಯ ಅವಕಾಶ ನೀಡಿದೆ. ಆದರೆ ಒಂದು ಷರತ್ತು ವಿಧಿಸಿದ ಕೋರ್ಟ್, ಏನದು? ವರದಿ-ಎಚ್.ಮಾರುತಿ
ಕನ್ನಡ ಪ್ರೀತಿ ಅನ್ನೋದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು: ಶಿವರಾಜಕುಮಾರ್
ಕಮಲ್ ಹಾಸನ್ ಅವರಿಗೆ ಕನ್ನಡದ ಮೇಲೆ ಪ್ರೀತಿ ಇದೆ. ಕನ್ನಡ ಸಿನಿಮಾಗಳ ನಟಿಸಿದ್ದಾರೆ. ಬೆಂಗಳೂರಿಗೆ ಬಂದಾಗಲೂ ಕನ್ನಡದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. (ವರದಿ:  ಚೇತನ್ ನಾಡಿಗೇರ್)
ಸೂಲಗಿತ್ತಿ ಬದುಕು ಬವಣೆಯ ಸುತ್ತ ತಿರುಗುವ ʻತಾಯವ್ವʼ ಚಿತ್ರ ಈ ವಾರ ತೆರೆಗೆ
ಗೀತಪ್ರಿಯಾ ಮೊದಲ ಬಾರಿಗೆ ನಿರ್ಮಿಸಿ ಜತೆಗೆ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ತಾಯವ್ವ' ಚಿತ್ರ ರಾಜ್ಯದಾದ್ಯಂತ ನಾಳೆ (ಮೇ. 30) ತೆರೆಗೆ ಬರಲಿದೆ.
ಅಣ್ಣಯ್ಯ: ಪ್ರಾಣವನ್ನೇ ಒತ್ತೆಯಾಗಿಟ್ಟು ಹೆಂಡತಿಗೆ ಲೈಸನ್ಸ್ ದಕ್ಕಿಸಿಕೊಟ್ಟ ಶಿವಣ್ಣ; ಮಾವನೇ ನನ್ನ ಪಾಲಿನ ದೇವರು ಎಂದ ಪಾರ್ವತಿ
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 208ನೇ ಎಪಿಸೋಡ್ನಲ್ಲಿ ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಪಾರ್ವತಿಗೆ ಶಿವು ಹೊಸ ಮೆಡಿಕಲ್ ಲೈಸನ್ಸ್ ದೊರೆಯವಂತೆ ಮಾಡುತ್ತಾನೆ. (ಬರಹ: ರಕ್ಷಿತಾ)
Credits : HTimes Kannada
Subscribe , Follow on