-->

State news updates

State news updates

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಮೇ 5ರಿಂದ ಗಣತಿ; ಮೂರು ಹಂತಗಳಲ್ಲಿ ನಡೆಯಲಿದೆ ಸಮೀಕ್ಷೆ

ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗಾಗಿ ಮೇ 5 ರಿಂದ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ–2025 ನಡೆಯಲಿದೆ. ಮೂರು ಹಂತಗಳಲ್ಲಿ ಈ ಸಮೀಕ್ಷೆಯ ಮೊದಲ ಹಂತದಲ್ಲಿ ಗಣತಿ ನಡೆಯಲಿದೆ.

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

ಕರ್ನಾಟಕ ಹವಾಮಾನ: ಕರ್ನಾಟಕದ ಮೈಸೂರು, ಹಾಸನ, ಕೊಡಗು, ದಕ್ಷಿಣ ಕನ್ನಡ ಸೇರಿ 10 ಜಿಲ್ಲೆಗಳ ಕೆಲವು ಕಡೆ ಅಲ್ಲಲ್ಲಿ ಇಂದು (ಏಪ್ರಿಲ್ 25) ಮಳೆಯಾಗಬಹುದು. ಉತ್ತರ ಒಳನಾಡು ಪ್ರದೇಶದ ಕೆಲವು ತಾಲೂಕುಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಳವಾಗಲಿದ್ದು ಅಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಹವಾಮಾನದ ವಿವರ ಹೀಗಿದೆ-

ಕನಿಷ್ಠ ಬೆಂಬಲ ಯೋಜನೆಯಡಿ ಜೋಳ ಖರೀದಿಗೆ ಸರ್ಕಾರದ ಆದೇಶ, ಮೇ 31ರವರೆಗೆ ಉಂಟು ಅವಕಾಶ; ನೋಂದಣಿಗೆ ಹೀಗೆ ಮಾಡಿಕೊಳ್ಳಿ

ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಯೋಗದಲ್ಲಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. 

ಮಾನವ-ವನ್ಯಜೀವಿ ಸಂಘರ್ಷ ತಡೆಗೆ 157 ಕೋಟಿ ರೂ ಹೆಚ್ಚುವರಿ ಅನುದಾನ, ಸಚಿವ ಸಂಪುಟ ಸಭೆ ಅನುಮತಿ

 ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯು ಮಾನವ ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದ 157 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಅನುಮತಿ ನೀಡಿದೆ.

ಜೋಗ ಜಲಪಾತ ಮೇ 1 ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತ, ವೀಕ್ಷಣೆಗೆ ಹೊರಡಿ

ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಜೋಗ ಜಲಪಾತವನ್ನು ಸಾರ್ವಜನಿಕರ ವೀಕ್ಷಣೆಗೆ ಮೇ 1 ರಿಂದ ಮುಕ್ತಗೊಳಿಸಲಾಗುತ್ತಿದೆ.

ಉಗ್ರರ ದಾಳಿಗೆ ತುತ್ತಾದ ಮಂಜುನಾಥ್ ಮೃತದೇಹ ತವರಿಗೆ; ಕಣ್ಣೀರಿಟ್ಟ ಆತ್ಮೀಯರು

<p>ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಸಾವನ್ನಪ್ಪಿದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಅವರ ಹುಟ್ಟೂರಿಗೆ ಕೊಂಡೊಯ್ಯಲಾಗಿದೆ. ಬೆಂಗಳೂರಿಗೆ ಆಗಮಿಸಿದ ಪಾರ್ಥೀವ ಶರೀರ ಕಂಡು ಆತ್ಮೀಯರು ಕಂಬನಿ ಮಿಡಿದಿದ್ದಾರೆ. ಜೊತೆಗೆ ಸಚಿವರು, ಶಾಸಕರು ಕೂಡ ಅಂತಿಮ ವಿದಾಯ ಸಲ್ಲಿಸಿದ್ದಾರೆ. ಹುಟ್ಟೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.</p>

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಆಗಮನ; ಗುಣಮಟ್ಟ ಓಕೆ,ಇಳುವರಿ ಕಡಿಮೆಯಾಗಿದ್ದು ಏಕೆ? ರೈತರು ವಿಜ್ಞಾನಿಗಳ ಅಭಿಪ್ರಾಯವೇನು

ಕರ್ನಾಟಕದಲ್ಲಿ ಈ ವರ್ಷದ ಮಾವಿನ ಹಣ್ಣಿನ ಹಂಗಾಮು ಶುರುವಾಗಿದೆ. ಚೆನ್ನಾಗಿರುವ ಹಣ್ಣು ಮಾರುಕಟ್ಟೆಗೆ ಬಂದರೂ ಇಳುವರಿ ಪ್ರಮಾಣ ಈ ಬಾರಿ ಕೊಂಚ ಕಡಿಮೆಯೇ ಇದೆ. ಇದಕ್ಕೆ ಕಾರಣ ಏನು ಎನ್ನುವ ಅಭಿಪ್ರಾಯ ಇಲ್ಲಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಇಂದಿರಾಗಾಂಧಿ ಅವರೊಂದಿಗೆ ನಿಕಟ ನಂಟು ಹೊಂದಿದ್ದ ಮಲೆನಾಡಿನ ರಾಜಕಾರಣಿ, ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ

&amp;nbsp;ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದಿಂದ ಶಾಸಕರಾಗಿ ನಂತರ ಸಚಿವರೂ ಆಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಬೇಗಾನೆ ರಾಮಯ್ಯ ಗುರುವಾರ ನಿಧನಾಗಿದ್ದಾರೆ.

ಮಲೈ ಮಹದೇಶ್ವರ ಬೆಟ್ಟ ಇನ್ನು ಮುಂದೆ ಸಂಪೂರ್ಣ ಪಾನ ಮುಕ್ತ, ಸ್ವಚ್ಚತೆಗೆ ಇನ್ನಿಲ್ಲದ ಒತ್ತು; 100 ಗ್ರಾಂ ತೂಕದ ಪ್ರಸಾದ ಲಾಡು 35 ರೂ.ಗೆ

&amp;nbsp;ಕರ್ನಾಟಕದ ಲಕ್ಷಾಂತರ ಭಕ್ತರ ಪವಿತ್ರ ಧಾರ್ಮಿಕ ತಾಣ ಮಲೈ ಮಹದೇಶ್ವರ ಬೆಟ್ಟದಲ್ಲಿ ಇನ್ನು ಮುಂದೆ ಮದ್ಯ ಸರಬರಾಜು ಕೂಡ ಬಂದ್‌ ಆಗಲಿದೆ. ಬೆಟ್ಟವನ್ನು ಸಂಪೂರ್ಣ ಪಾನ ಮುಕ್ತ ಎಂದು ಸರ್ಕಾರ ಘೋಷಿಸಿದೆ

ಭಾರತೀಯ ರೈಲ್ವೆ ಮುಂಗಾರು ವೇಳಾಪಟ್ಟಿ ಜಾರಿ; ಬೆಂಗಳೂರು–ಕಾರವಾರ ಸಹಿತ ಪ್ರಮುಖ ರೈಲುಗಳ ಸಂಚಾರ ಸಮಯ ಬದಲಾವಣೆ

ಮುಂಗಾರು ಮಳೆ ಶುರುವಾಗುವುದರಿಂದ ಕರ್ನಾಟಕದಲ್ಲಿ ಸಂಚರಿಸುವ ಕೆಲವು ಪ್ರಮುಖ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಲಿದೆ. ಈ ಕುರಿತು ನೈರುತ್ಯ ರೈಲ್ವೆ ಮಾಹಿತಿಯನ್ನು ನೀಡಿದೆ.

Credits : HTimes Kannada

Terms | Privacy | 2024 🇮🇳
–>