-->

State news updates

State news updates

ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ಕೃಷಿ ವಿಭಾಗದಲ್ಲಿ ಅಕ್ಷಯ್ ಹೆಗ್ಡೆ ಪ್ರಥಮ, ಟಾಪ್-10 ರ‍್ಯಾಂಕ್ ಪಡೆದವರಿವರು!

ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ವಿಜ್ಞಾನ ವಿಭಾಗ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಸಂಬಂಧಿಸಿ ನಡೆದಿದ್ದ ಕೆ-ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಕೃಷಿ ವಿಭಾಗದಲ್ಲಿ ಟಾಪ್​-10 ಶ್ರೇಯಾಂಕ ಪಡೆದವರ ಪಟ್ಟಿ ಇಲ್ಲಿದೆ.

ಜೂನ್‌ ತಿಂಗಳಲ್ಲಿ ಒಂದು ದಿನ ಅರಸೀಕೆರೆ ಮೈಸೂರು ರೈಲು ಸಂಚಾರ ರದ್ದು, ಶಿವಮೊಗ್ಗ ಎಕ್ಸ್‌ಪ್ರೆಸ್‌ ಭಾಗಶಃ ಸಂಚಾರ

 ಭಾರತೀಯ ರೈಲ್ವೆ ನೈರುತ್ಯ ವಲಯದ ಮೈಸೂರು ವಿಭಾಗದಲ್ಲಿ ರೈಲ್ವೆ ಸೇತುವೆ ಕಾಮಗಾರಿ ಇರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ಜೂನ್‌ನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಲಾಗಿದೆ.

ಮುಂದಿನ ವರ್ಷ 600 ಕೋಟಿ ವೆಚ್ಚದ ಕರ್ನಾಟಕದ ಅನುಭವ ಮಂಟಪ ಲೋಕಾರ್ಪಣೆ: ಮೈಸೂರಿನ ಬಸವಜಯಂತಿಯಲ್ಲಿ ಸಿದ್ದರಾಮಯ್ಯ ಅಭಯ

ಮೈಸೂರಿನಲ್ಲಿ ಬಸವ ಬಳಗಗಳ ಒಕ್ಕೂಟದಿಂದ ಆಯೋಜಿಸಿರುವ ಎರಡು ದಿನಗಳ ಬಸವ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಬಸವಣ್ಣನ ವಿಚಾರಗಳ ಕುರಿತು ಮಾತನಾಡಿದ್ದಾರೆ.

ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಪ್ರಕಟ: ವಿವಿಧ ವಿಭಾಗಗಳಲ್ಲಿ ಟಾಪ್‌ 3 ರಾಂಕ್‌ ಪಡೆದ ವಿದ್ಯಾರ್ಥಿಗಳ ವಿವರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಭವೇಶ್ ಜಯಂತಿ ಮೊದಲ ಸ್ಥಾನ ಗಳಿಸಿದ್ದರೆ, ಕೃಷಿ ವಿಭಾಗದಲ್ಲಿ ಅಕ್ಷಯ್ ಎಂ ಹೆಗಡೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಟಾಪ್ 3 ರ‍್ಯಾಂಕ್ ಪಡೆದವರ ಪಟ್ಟಿ ಇಲ್ಲಿದೆ. 

ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು, ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆ ವಾತಾವರಣ: ವಾಡಿಕೆಗಿಂತ 8 ದಿನ ಮೊದಲೇ ಮಳೆ ಶುರು

ಈ ಬಾರಿಯ ಮುಂಗಾರು ಕೇರಳವನ್ನು ಪ್ರವೇಶಿಸಿದೆ. ಒಂದು ವಾರ ಮುಂಚೆಯೇ ಕೇರಳದ ಮೂಲಕ ಮುಂಗಾರು ಆಗಮಿಸಿದ್ದು, ಕರ್ನಾಟಕದಲ್ಲೂ ಶನಿವಾರದಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿದೆ.

NH 75: ಮಳೆ ಆರಂಭವಾಗಿದೆ… ಹೇಗೆ ಶಿರಾಡಿ ಘಾಟ್? ಹೋಗಬಹುದಾ?

ಪ್ರಮುಖ ಹೆದ್ದಾರಿಗಳಲ್ಲಿ ಒಂದಾದ ಮಂಗಳೂರು ಬೆಂಗಳೂರು ನಡುವಣ ಶಿರಾಡಿ ಘಾಟ್‌ನಲ್ಲಿ ಮಳೆಗಾಲ ಆರಂಭವಾದ ತಕ್ಷಣ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಗುಡ್ಡ ಕುಸಿತ, ರಸ್ತೆಯ ಸಮಸ್ಯೆ, ಘಾಟ್‌ನಲ್ಲಿ ಕೆಟ್ಟು ನಿಲ್ಲುವ ವಾಹನ, ಅಪಘಾತ ಹೀಗೆ ಹಲವು ತೊಂದರೆಗಳನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಪ್ರಕಟ; ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ ಪ್ರಥಮ

ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಇಂದು (ಮೇ 24) ಪ್ರಕಟವಾಗಿದೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಸಿಬಿಎಸ್‌ಇ ಶಾಲೆಯ ಭವೇಶ್ ಜಯಂತಿ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.

ಬೇಕರಿಗೆ ಅಡ್ಡವಿದ್ದ ರಿಕ್ಷಾ ಸರಿಸಲು ಹೇಳಿದ ಮಾಲೀಕ: ಕೋಪಗೊಂಡ ರಿಕ್ಷಾ ಚಾಲಕನಿಂದ ಹಲ್ಲೆಗೆ ಯತ್ನ

ರಿಕ್ಷಾ ಚಾಲಕನು ತನ್ನ ಸಂಗಡಿಗರೊಂದಿಗೆ ಬೇಕರಿ ಮಾಲೀಕನಿಗೆ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಸಮೀಪದ ತೊಕ್ಕೊಟ್ಟಿನಲ್ಲಿ ನಡೆಸಿದೆ.

ಮಂಗಳೂರು: ಪತ್ನಿಯ ಸೀಮಂತದಂದೇ ಪತಿ ಹೃದಯಾಘಾತದಿಂದ ನಿಧನ

ಸತೀಶ್ ಅವರ ಪತ್ನಿಯ ಸೀಮಂತ ಶುಕ್ರವಾರ ನಿಗದಿಯಾಗಿತ್ತು. ಈ ವೇಳೆ ಸತೀಶ್ ಏಕಾಏಕಿ ತಮ್ಮ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.

ನಮ್ಮ ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಿಸಿ ರೀಲ್ಸ್ ಪೋಸ್ಟ್: ಬೆಂಗಳೂರು ಪೊಲೀಸರಿಂದ ವ್ಯಕ್ತಿಯ ಬಂಧನ

ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಪ್ರಯಾಣಿಕರು ತಮ್ಮ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Credits : HTimes Kannada

Terms | Privacy | 2024 🇮🇳
–>