-->

National news updates

National news updates

ಕಣ್ಣಿಗೆ ಪಟ್ಟಿ ಕಟ್ಟಿ, ಶಸ್ತ್ರಾಸ್ತ್ರ ವಶಪಡಿಸಿ, ಬಿಎಸ್‌ಎಫ್ ಯೋಧನ ಫೋಟೋ ಬಹಿರಂಗಗೊಳಿಸಿದ ಪಾಕ್, ಯೋಧ ಯಾರು, ಘಟನೆ ಹೇಗಾಯಿತು

ಬಿಎಸ್‌ಎಫ್‌ ಯೋಧನ ಫೋಟೋ: ಕಾಶ್ಮೀರದ ಪಹಲ್ಗಾಮ್ ದಾಳಿಯ ಬಳಿಕ ಪಂಜಾಬ್ ಗಡಿ ಭಾಗದಲ್ಲಿ ಅಚಾನಕ್‌ ಗಡಿದಾಟಿದ ಬಿಎಸ್‌ಎಫ್ ಯೋಧನನ್ನು ಪಾಕಿಸ್ಥಾನದ ರೇಂಜರ್ಸ್‌ ಬಂಧಿಸಿದ್ದರು.  ಕಣ್ಣಿಗೆ ಪಟ್ಟಿಕಟ್ಟಿ, ಶಸ್ತ್ರಾಸ್ತ್ರ ವಶಪಡಿಸಿಕೊಂಡು ಯೋಧನ ಫೋಟೋ ಬಹಿರಂಗಗೊಳಿಸಿದೆ ಪಾಕ್‌.

ಗಸ್ತು ವೇಳೆ ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ಎಫ್ ಯೋಧನನ್ನು ವಶಕ್ಕೆ ಪಡೆದ ಪಾಕಿಸ್ತಾನ ರೇಂಜರ್ಸ್, ಬಿಡುಗಡೆಗೆ ಮಾತುಕತೆ

ಕಾಶ್ಮೀರದಲ್ಲಿ ಉಗ್ರರ ದಾಳಿ ನಂತರ ಗಡಿಯಲ್ಲಿ ಗಸ್ತು ಹೆಚ್ಚಿದ್ದು, ಈ ವೇಳೆ ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ಎಫ್ ಯೋಧನನ್ನು ಪಾಕ್ ರೇಂಜರ್ಸ್ ವಶಕ್ಕೆ ಪಡೆದಿದ್ದಾರೆ. ಬಿಡುಗಡೆಗಾಗಿ ಮಾತುಕತೆ ಮುಂದುವರಿದಿದೆ.

ಜಮ್ಮುಕಾಶ್ಮೀರದಲ್ಲಿ ಉಗ್ರರಿಗಾಗಿ ಬೇಟೆ ಆರಂಭಿಸಿದ ಸೇನೆ; ಪಹಲ್ಗಾಮ್ ಸುತ್ತ ಹೆಚ್ಚಿನ ಸೇನಾ ತುಕಡಿ ರವಾನೆ

<p>ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಸೇನೆ ಉಗ್ರರಿಗಾಗಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪಹಲ್ ಗಾಮ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸೇನೆಯ ಹೆಚ್ಚಿನ ತುಕುಡಿಗಳನ್ನು ರವಾನಿಸಲಾಗಿದ್ದು, ಅವಿತಿರುವ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪ್ರವಾಸಿಗರ ಮೇಲೆ ದಾಳಿ ನಡೆದ ಬಳಿಕ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯನ್ನು ಹತ್ತಿಕ್ಕಲು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗಿದೆ.</p>

ಪಾಕಿಸ್ತಾನಕ್ಕೆ ಮಾಸ್ಟರ್ ಸ್ಟ್ರೋಕ್; ಅಟ್ಟಾರಿ-ವಾಘಾ ಗಡಿ ಚೆಕ್ ಪೋಸ್ಟ್ ಬಂದ್, ಪಾಕಿಸ್ತಾನೀಯರ ವೀಸವೂ ರದ್ದು

<p>ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಭಾರತ ಸರ್ಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ನಿನ್ನೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ವಿರುದ್ಧ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಖ್ಯವಾಗಿ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್‌ಗಳನ್ನು ಬಂದ್ ಮಾಡಿ ಪಾಕಿಸ್ತಾನಕ್ಕೆ ಶಾಕ್ ನೀಡಿದ್ದಾರೆ.</p>

2 ಹೋಳಾಗುತ್ತಿದೆಯಾ ಭಾರತ?, ಹಿಮಾಲಯದ ಕೆಳಗಿನ ಭಾರತೀಯ ಭೂತಟ್ಟೆ ಜಾರುತ್ತಿರೋದಲ್ಲ ಎಂದ ಹೊಸ ಸಂಶೋಧನೆ

ಭಾರತ ಎರಡು ಹೋಳಾಗುತ್ತಿದೆಯಾ? ಹಿಮಾಲಯದ ಕೆಳಗಿನ ಭೂತಟ್ಟೆ ಚಲಿಸುತ್ತಿರುವ ಕಾರಣ ಪದೇಪದೆ ಭೂಕಂಪ ಸಂಭವಿಸುತ್ತಿದೆ ಎಂಬ ಅಂಶ ಪದೇಪದೆ ವರದಿಯಾಗುತ್ತಿತ್ತು. ಆದರೆ, ಈಗ ಹಿಮಾಲಯದ ಕೆಳಗಿನ ಭೂತಟ್ಟೆ ಜಾರುತ್ತಿರೋದಲ್ಲ, ಒಡೆಯುತ್ತಿದೆ ಎಂದು ಹೊಸ ಸಂಶೋಧನಾ ವರದಿ ಹೇಳಿದೆ.

ಪೆಹಲ್ಗಾಮ್‌ ಉಗ್ರರ ದಾಳಿ: ಒಬ್ಬೊಬ್ಬ ಉಗ್ರನನ್ನೂ ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು ಅಬ್ಬರಿಸಿದ ನರೇಂದ್ರ ಮೋದಿ

<p>ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ 28 ಜನರು ಬಲಿಯಾದ ಘಟನೆಯ ವಿರುದ್ಧ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತವು ಈ ಘಟನೆಗೆ ಕಾರಣರಾದ ಉಗ್ರರನ್ನು ಹುಡುಕಿ ಶಿಕ್ಷಿಸುತ್ತದೆ. ಪ್ರತಿಯೊಬ್ಬ ಉಗ್ರರನ್ನು ಮತ್ತು ಅವರ ಬೆಂಬಲಿಗರನ್ನು ಮಟ್ಟಹಾಕಲಿದ್ದೇವೆ ಎಂದು ಅವರು ಹೇಳಿದ್ದಾರೆ.</p>

ಪಹಲ್ಗಾಮ್ ದಾಳಿ ನಂತರ ಭಾರತದ ಪ್ರತೀಕಾರದ ಕಡೆಗೆ ಎಲ್ಲರ ನೋಟ, ಪಾಕ್‌ ಜತೆಗಿನ ಸಮರ ಸಾಧ್ಯತೆ ಎಷ್ಟು, ಸಿಐಎ ಹಳೆ ವರದಿ ವೈರಲ್

ಪಹಲ್ಗಾಮ್ ದಾಳಿ ನಂತರ ಉಗ್ರರ ಮೇಲೆ ಭಾರತ ಹೇಗೆ ಪ್ರತೀಕಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉಗ್ರರನ್ನು ಹಾಗೂ ಪೋಷಿಸುತ್ತಿರುವವರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಘೋಷಿಸಿದ ಬಳಿಕ ಭಾರತ- ಪಾಕ್ ಯುದ್ಧ ಸಾಧ್ಯತೆ ವಿಚಾರ ಹೆಚ್ಚು ಚರ್ಚೆಗೆ ಒಳಗಾಗಿದೆ. ಇದೇ ವೇಳೆ, ಸಿಐಎ ಹಳೆ ವರದಿ ವೈರಲ್ ಆಗಿದೆ.

ಪಹಲ್ಗಾಮ್‌ ದಾಳಿ ಎಫ್‌ಐಆರ್‌: ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ 30 ನಿಮಿಷ ನಡೆಯಿತು ಹತ್ಯಾಕಾಂಡ- 8 ಮುಖ್ಯ ಅಂಶಗಳಿವು

ಪಹಲ್ಗಾಮ್‌ ದಾಳಿ ಎಫ್‌ಐಆರ್‌: ಜಮ್ಮು- ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರ ದಾಳಿಗೆ ಸಂಬಂಧಿಸಿದ ಎಫ್‌ಐಆರ್ ದಾಖಲಾಗಿದೆ. ಅದರಲ್ಲಿ, ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ 30 ನಿಮಿಷ ಹತ್ಯಾಕಾಂಡ ನಡೆಯಿತು ಎಂಬ ಅಂಶವೂ ಸೇರಿ 8 ಮುಖ್ಯ ಅಂಶಗಳಿವೆ. ಆ ವಿವರ ಇಲ್ಲಿದೆ.&amp;nbsp;

ಪಹಲ್ಗಾಮ್‌ ದಾಳಿ ಬಗ್ಗೆ ಮೋದಿ ಮಾತು: 9/11 ನಂತರ ಬುಷ್ ಮಾಡಿದ್ದ ಭಾಷಣಕ್ಕಿಂತಲೂ ಕಠಿಣ ಮತ್ತು ನಿಖರ, ಇಲ್ಲಿವೆ 9 ಮುಖ್ಯಾಂಶಗಳು

ಬಿಹಾರದ ಮಧುಬನಿಯಲ್ಲಿ ಗುರುವಾರ (ಏ 24) ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯ ಕುರಿತು ಮಾತನಾಡಿದರು. &amp;nbsp;ಈ ಭಾಷಣದಲ್ಲಿ ಅವರು ಪ್ರಸ್ತಾಪಿಸಿದ 9 ಪ್ರಮುಖ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.&amp;nbsp;

ಭಾರತದ ಆತ್ಮದ ಮೇಲೆ ದಾಳಿ ನಡೆಸುವ ದುಸ್ಸಾಹಸ ಸಹಿಸುವುದಿಲ್ಲ, ಉಗ್ರರು ಊಹಿಸಲು ಆಗದ ಶಿಕ್ಷೆ ಕಾದಿದೆ: ನರೇಂದ್ರ ಮೋದಿ

ಪಹಲ್ಗಾಮ್‌ನಲ್ಲಿ ಮುಗ್ಧರನ್ನು ಕೊಂದ ಭಯೋತ್ಪಾದಕರು ಎಲ್ಲಿ ಅಡಗಿದ್ದರೂ ಬೇಟೆಯಾಡದೆ ಬಿಡುವುದಿಲ್ಲ. ಭಯೋತ್ಪಾದನೆಗೆ ಬಳಸಿದ ಸ್ಥಳವನ್ನೂ ನಿರ್ನಾಮ &amp;nbsp;ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದರು.

Credits : HTimes Kannada

Terms | Privacy | 2024 🇮🇳
–>