National news updates
ಹೋಂಡಾ ಸಿಬಿ 125 ಹಾರ್ನೆಟ್ ಬೈಕ್ ಬಿಡುಗಡೆ; ಆಗಸ್ಟ್ 1ರಿಂದ ಬುಕಿಂಗ್ ಆರಂಭ
ಹೊಸ ಹೋಂಡಾ ಸಿಬಿ 125 ಹಾರ್ನೆಟ್ ಬೈಕ್ ಬಿಡುಗಡೆಯಾಗಿದೆ. ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಬಿಡುಗಡೆಯಾದ ಬೈಕ್ ಅನ್ನು, ಮುಂದಿನ ತಿಂಗಳಿಂದ ಬುಕಿಂಗ್ ಮಾಡಬಹುದು.
ಉಪರಾಷ್ಟ್ರಪತಿ ಚುನಾವಣೆ; ಸಂಸತ್ತಿನ ಉಭಯ ಸದನಗಳಲ್ಲಿ ಎನ್ಡಿಎ - ವಿಪಕ್ಷ, ಸಂಖ್ಯಾ ಬಲ ಹೀಗಿದೆ ನೋಡಿ
ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ ಬಳಿಕ ಉಪರಾಷ್ಟ್ರಪತಿ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತಾರೂಢ ಬಿಜೆಪಿ, ಎನ್ಡಿಎ ಹಾಗೂ ವಿಪಕ್ಷ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಸಂಖ್ಯಾ ಬಲ ಹೇಗಿದೆ ನೋಡೋಣ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ವಿಸ್ತರಣೆ, ಆ ನಂತರವೂ ತಡವಾದರೆ ದಂಡ ಖಚಿತ
ಹಣಕಾಸು ವರ್ಷ 2024-25 (ಮೌಲ್ಯಮಾಪನ ವರ್ಷ 2025-26)ರ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವು ಕೊಂಚ ವಿಸ್ತರಣೆಯಾಗಿದ್ದು ತೆರಿಗೆ ಪಾವತಿದಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆಡಿಟ್ ಮಾಡದ ಪ್ರಕರಣಗಳಲ್ಲಿ ಐಟಿಆರ್ ಸಲ್ಲಿಕೆಯ ಗಡುವು ವಿಸ್ತರಿಸಿದ್ದು, ಹೊಸ ಗಡುವನ್ನು ಪ್ರಕಟಿಸಿದೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಜುಲೈ 29ಕ್ಕೆ ಆಪರೇಷನ್ ಸಿಂದೂರ ಕುರಿತ ಚರ್ಚೆ ಸಾಧ್ಯತೆ
ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಈ ಬಾರಿ ಜುಲೈ 29 ರಂದು ಆಪರೇಷನ್ ಸಿಂದೂರ ಕುರಿತ ಚರ್ಚೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಉಪ ರಾಷ್ಟ್ರಪತಿ ಧನಕರ್ ದಿಢೀರ್ ರಾಜೀನಾಮೆ ಅನೇಕ ಪ್ರಶ್ನೆಗಳನ್ನು ಉಳಿಸಿದೆ: ಸುರ್ಜೆವಾಲಾ
<p>ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆಯ ನಂತರ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ ಮಂಗಳವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಕ್ಷವು "ಸಾಂವಿಧಾನಿಕ ಕಚೇರಿಗಳು ಮತ್ತು ಪ್ರಕ್ರಿಯೆಗಳನ್ನು ದುರ್ಬಲಗೊಳಿಸುವ" ದಾಖಲೆಯನ್ನು ಹೊಂದಿದೆ ಎಂದು ಹೇಳಿದರು.</p>
ಮುಂಬೈನಲ್ಲಿ ಭಾರೀ ಮಳೆ; ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದ ಐಎಂಡಿ
<p>ಮುಂಬೈನಲ್ಲಿ ಭಾರಿ ಮಳೆಯಾಗಿದ್ದು, ಹಲವಾರು ಪ್ರದೇಶಗಳಲ್ಲಿ ಗಮನಾರ್ಹ ಮಳೆಯಾಗಿದೆ. ಮುಂಬರುವ ಗಂಟೆಗಳಲ್ಲಿ ಮುಂಬೈ ಮತ್ತು ಇತರ ಪ್ರದೇಶಗಳಲ್ಲಿ ಮಧ್ಯಮ ಮಳೆ ಮುಂದುವರಿಯುತ್ತದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.</p>
ವಿಯೆಟ್ನಾಂನಲ್ಲಿ ದೋಣಿ ದುರಂತ; ಪ್ರವಾಸಿ ದೋಣಿ ಮಗುಚಿ 34 ಮಂದಿ ಸಾವು, 8 ಜನ ನಾಪತ್ತೆ
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ದೋಣಿ ಮಗುಚಿದ ಪರಿಣಾಮ 34 ಮಂದಿ ಮೃತ ಪಟ್ಟಿದ್ದು, 8 ಮಂದಿ ನಾಪತ್ತೆಯಾದ ಘಟನೆ ನಡೆದಿದೆ. ಅತಿಯಾದ ಮಳೆಯು ದೋಣಿ ಮಗುಚಲು ಕಾರಣ ಎನ್ನಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ 20ನೇ ಕಂತು; ಹಣ ಬಿಡುಗಡೆ ಯಾವಾಗ, ಪರಿಶೀಲಿಸುವುದು ಹೇಗೆ
ಪಿಎಂ ಕಿಸಾನ್ ಕಂತು ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಬಿಡುಗಡೆಯಾಗುತ್ತಿದ್ದು, 19ನೇ ಕಂತು ಫೆಬ್ರವರಿ 2025ರಲ್ಲಿ ಬಿಡುಗಡೆಯಾಗಿತ್ತು. 2024ರಲ್ಲಿ ಜೂನ್ ತಿಂಗಳಲ್ಲಿ ಕಂತಿನ ಹಣ ಬಿಡುಗಡೆಯಾಗಿತ್ತು. ಈ ಬಾರಿ ಪಿಎಂ ಕಿಸಾನ್ ಕಂತು ಬಿಡುಗಡೆ ತಡವಾಗಿದೆ. ಪ್ರಧಾನಿ ಮೋದಿಯವರು ಶೀಘ್ರವೇ ಪಿಎಂ ಕಿಸಾನ್ ನಿಧಿಯ ಹಣ ಬಿಡುಗಡೆ ಮಾಡುವ ನಿರೀಕ್ಷೆ ಇದೆ. &nbsp;ಆ ವಿವರ ಇಲ್ಲಿದೆ.
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಝೆಡ್ ಫೋಲ್ಡ್ 7, ಫ್ಲಿಪ್ 7 ಸದ್ದು, ಗಮನಸೆಳೆದಿದೆ 5 ಎಐ ಫೀಚರ್ಗಳು
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸದ್ಯ ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ ಝೆಡ್ ಫೋಲ್ಡ್ 7 ಮತ್ತು ಗ್ಯಾಲಕ್ಸಿ ಝೆಡ್ ಫ್ಲಿಪ್ 7 ಫೋನ್ಗಳದ್ದೇ ಮಾತುಕತೆ. ಇದರಲ್ಲಿರುವ 5 ವಿಶೇಷ ಎಐ ಫೀಚರ್ಗಳು ಗಮನಸೆಳೆದಿದ್ದು, ವಿವರ ಇಲ್ಲಿದೆ.
ಟೇಕಾಫ್ ಆದ 5 ನಿಮಿಷದಲ್ಲಿ ಪತನವಾಯಿತು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ; ಅಹಮಬಾದ್ನಲ್ಲಿ ನಡೆದ ದುರಂತ, 8 ಮುಖ್ಯ ಅಂಶಗಳು
ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ಧಾಣದಿಂದ ಲಂಡನ್ಗೆ ಹೊರಟ ಏರ್ ಇಂಡಿಯಾ ವಿಮಾನ ಗುರುವಾರ (ಜೂನ್ 12) ಅಪರಾಹ್ನ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರ ಜೀವ ಅಪಾಯಕ್ಕೀಡಾಗಿದೆ. ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ. ನಮಗೆ ತಿಳಿದ ಇದುವರೆಗಿನ 8 ಅಂಶಗಳ ವಿವರ ಇಲ್ಲಿದೆ.
Credits : HTimes Kannada
Subscribe , Follow on