ಅತ್ತೆಯೊಬ್ಬಳಿಗೆ 👵 ತನ್ನ ಅಳಿಯಂದಿರಿಗೆ👨👳👮 ತನ್ನ ಮೇಲಿರುವ ಪ್ರೀತಿ 💖 ಎಷ್ಟು ಎಂಬುದನ್ನು ಪರೀಕ್ಷಿಸುವ 🤔 ಮನಸ್ಸಾಯಿತು.
ಕೂಡಲೇ ಆಕೆ ಮನೆಯ 🏡 ಪಕ್ಕದಲ್ಲಿದ್ದ ಬಾವಿಗೆ ಜಿಗಿದು ಬಿಟ್ಟಳು.
ಅಲ್ಲೇ ಕುಳಿತು ಹರಟೆ ಹೊಡೆಯುತ್ತಿದ್ದ ಅಳಿಯಂದಿರು 👨👳👮 ಓಡಿ ಬಂದರು.
👮ಮೊದಲನೆಯ ಅಳಿಯ ಬಾವಿಗೆ ಹಾರಿ ಆಕೆಯನ್ನು ಕಾಪಾಡಿದ.
ಹಿರಿಹಿರಿ ಹಿಗ್ಗಿದ ಅತ್ತೆಮ್ಮ👵, ಅವನಿಗೆ👮 ತನ್ನ ಕಾರ್🚖 ಕೊಟ್ಟುಬಿಟ್ಟಳು.
ಎರಡನೆಯ ದಿನ ಮತ್ತೆ ಬಾವಿಗೆ ಹಾರಿದಳು. ಎರಡನೆಯ ಅಳಿಯ👨 ಜಿಗಿದು ಆಕೆಯನ್ನು ಬದುಕುಳಿಸಿದ. ಅವನಿಗೆ ಬೈಕ್🏍 ಕೊಟ್ಟಳು.
ಮೂರನೆಯ ಅಳಿಯನನ್ನು👳 ಪರೀಕ್ಷಿಸಬೇಕೆಂದು ಮೂರನೇ ದಿನವೂ ಬಾವಿಯಲ್ಲಿ ಜಿಗಿದಳು. 👳ಮೂರನೇ ಅಳಿಯ ಇನ್ನೇನು ಆಕೆಯನ್ನು ಉಳಿಸುವವನಿದ್ದ, ಅಷ್ಟರಲ್ಲೇ ಅವನು 🤔ಅಂದುಕೊಂಡ: ‘ಇನ್ನೇನು ಮನೆಯಲ್ಲಿ 🏚ಹಳೆಯ ಸೈಕಲ್🚲 ಅಷ್ಟೇ ಉಳಿದಿರೋದು. ಆ ಡಬ್ಬಾ ಸೈಕಲ್ಗಾಗಿ🚲 ಯಾಕೆ ಕಷ್ಟ ಪಡಬೇಕು? ಹೀಗೆ ಯೋಚಿಸಿದವನೇ. ಸುಮ್ಮನಾಗಿಬಿಟ್ಟ. 🤔😏😒
👵ಅತ್ತೆ ಸತ್ತೇಹೋದಳು😵.
ಆದರೂ ಮರುದಿನ ಈ ಮೂರನೇ👳 ಅಳಿಯನಿಗೆ ಮರ್ಸಿಡಿಸ್🚘 ಕಾರು ಸಿಕ್ಕಿತು. ಹೇಗೆ ಗೊತ್ತಾ?
.
.
.
.
ಮಾವ👴 ತಂದು ಕೊಟ್ಟ!!!
😄😄😆😂
*********
~~~~ಪ್ರಕೃತಿ~ವಿಕೃತಿ~ಸಂಸ್ಕೃತಿ ~~~
Ⓜ ಕಣ್ಣು ಪ್ರಕೃತಿ 👀
ಕೆಂಗಣ್ಣು ವಿಕೃತಿ 😠
ಕರುಣೆಯ ಕಣ್ಣು ಸಂಸ್ಕೃತಿ 👁❣👁
Ⓜಆಲಿಸೋದು ಪ್ರಕೃತಿ👂
ಕದ್ದಾಲಿಸೋದು ವಿಕೃತಿ 🤔
ದೀನದಲಿತರ ದನಿಯನ್ನು
ಕೇಳಿಸಿಕೊಳ್ಳೋದು ಸಂಸ್ಕೃತಿ 😒
Ⓜ ಕೆನ್ನೆ ಪ್ರಕೃತಿ 😗
ಕೆನ್ನೆಗೆ ಬಾರಿಸೋದು ವಿಕೃತಿ 👋
ಕೆನ್ನೆ ಸವರಿ ಪ್ರೀತಿಯಿಂದ ಮಾತನಾಡೋದು ಸಂಸ್ಕೃತಿ 🤗
Ⓜಮೂಗು ಪ್ರಕೃತಿ 👃
ಇನ್ನೊಬ್ಬರ ವಿಚಾರದಲ್ಲಿ ಮೂಗು
ತೋರಿಸೋದು ವಿಕೃತಿ😏
ಮೂಗಿಗೊಂದು ಮೂಗುತಿ ಸಂಸ್ಕೃತಿ 😘
Ⓜ ಕಾಲು ಪ್ರಕೃತಿ 👢👢
ಒದೆತ ವಿಕೃತಿ 👟
ಕುಣಿತ ಸಂಸ್ಕೃತಿ💃🏽
Ⓜ ಆಚಾರ ಪ್ರಕೃತಿ 🖐
ಅನಾಚಾರ ವಿಕೃತಿ 👊
ಸದಚಾರ ಸಂಸ್ಕೃತಿ 🙏
Ⓜ ಆಸೆ ಪ್ರಕೃತಿ 😋
ದುರಾಸೆ ವಿಕೃತಿ 😤
ಸದಾಶಯ ಸಂಸ್ಕೃತಿ 🙌
Ⓜ ನಮಗಾಗಿ ದುಡಿಯೊದು ಪ್ರಕೃತಿ 👐
ಇತರರಿಂದ ದುಡಿಸಿಕೊಳ್ಳೋದು ವಿಕೃತಿ 👋
ಇತರರಿಗಾಗಿ ದುಡಿಯೋದು ಸಂಸ್ಕೃತಿ 👏
Ⓜ ದುಡಿದು ತಿನ್ನೋದು ಪ್ರಕೃತಿ 🤕
ದುಡಿಸಿ ತಿನ್ನೋದು ವಿಕೃತಿ 😎
ತಾನು ದುಡಿದು ಇನ್ನೊಬ್ಬರಿಗೆ
ತಿನಿಸೋದು ಸಂಸ್ಕೃತಿ 🤗
Ⓜ ಹಸಿವಾದಾಗ ಊಟ ಮಾಡೋದು ಪ್ರಕೃತಿ🍛
ಹಸಿವಾಗದಿದ್ದರೂ ಊಟ ಮಾಡೋದು ವಿಕೃತಿ🍕🌯
ಹಸಿದವನಿಗೆ ಉಣಿಸೋದು ಸಂಸ್ಕೃತಿ 🤒👌
Ⓜ ಭಯ ಪ್ರಕೃತಿ 😳
ಭಯೋತ್ಪಾದನೆ ವಿಕೃತಿ 😱
ದಯೋತ್ಪಾದನೆ ಸಂಸ್ಕೃತಿ 😚
Ⓜ ಹಾಸ್ಯ ಪ್ರಕೃತಿ😀
ಅಪಹಾಸ್ಯ ವಿಕೃತಿ😂
ತಿಳಿಹಾಸ್ಯ ಸಂಸ್ಕೃತಿ😍
Ⓜ ಜ್ಯೋತಿ ಪ್ರಕೃತಿ🕯
ಜ್ವಾಲೆ ವಿಕೃತಿ🔥
ನಂದಾದೀಪ ಸಂಸ್ಕೃತಿ♨
Ⓜ ನೀರು ಪ್ರಕೃತಿ💦
ನೆರೆ ವಿಕೃತಿ 🌊
ನೀರಿನ ನಾಲೆ ಸಂಸ್ಕೃತಿ🚿
Ⓜ ತಲೆಯೊಳಗಿನ ಬುದ್ದಿ ಪ್ರಕೃತಿ😴
ಅದು ಕೆಟ್ಟದ್ದಾಗಿದ್ದರೆ ವಿಕೃತಿ👹
ಅದು ನೆಟ್ಟಗಿದ್ದರೆ ಸಂಸ್ಕೃತಿ☺
Ⓜ ಮುಖ ಪ್ರಕೃತಿ😊
ಸಿಡುಕುಮುಖ ವಿಕೃತಿ😡
ನಗುಮುಖ ಸಂಸ್ಕೃತಿ..😊
*********
ಗಂಡಸರ ಗೋಳು
ಗಂಡ ಹೆಂಡತಿಗೆ ಹೊಡೆದರೆ-ಕ್ರೂರಿ
ಹೆಂಡತಿಹೊಡೆದರೆ- ನಾಮರ್ದ
ಮಕ್ಕಳಿಗೆ ಬೈದರೆ- ಹಿಟ್ಲರ್
ಫ್ರೀಯಾಗಿ ಬಿಟ್ಟರೆ- ಬೇಜವಾಬ್ದಾರ
ಅಮ್ಮನ ಮಾತು ಕೇಳಿದ್ರೆ - ಕೂಸು
(ಇದರ ಮುಖಕ್ಕೆ ಮದ್ವೆ ಬೇರೆ ಕೇಡು)
ಹೆಂಡ್ತಿ ಮಾತು ಕೇಳಿದ್ರೆ- ಅಮ್ಮಾವ್ರ ಗಂಡ.
ಕೋಪ ಮಾಡ್ಕೊಂಡ್ರೆ- ದೂರ್ವಾಸ
ಮಾಡ್ಕೊಳದಿದ್ರೆ- ತೀರ ಸಾಧು..ಯಾವ್ದಕ್ಕೂ ಪ್ರಯೋಜನವಿಲ್ಲ
ಕೆಲಸ ಮಾಡಿದ್ರೆ- ಈ ಸುಖಕ್ಕೆ ಮದ್ವೆ ಯಾಕೆ ಆಗ್ಬೇಕಿತ್ತೋ
ಮನೇಲಿ ಕೂತ್ರೆ- ಉದ್ಯೋಗಂ ಪುರುಷ ಲಕ್ಷಣಂ
ಹೆಂಡತಿ ಸ್ನೇಹಿತೇರ ಜತೆ ಮಾತಾಡದಿದ್ರೆ- ಮೂಷಾಂಡಿ
ನಗ್ತ ಮಾತಾಡಿದ್ರೆ- ತೀರ ಚೆಲ್ಲು..ಜಡೆ ನೋಡಿದ್ರೆ ಜೊಲ್ಲು ಸುರಿಸುತ್ತೆ.
ಖರ್ಚು ಮಾಡದಿದ್ರೆ -ಜುಗ್ಗ
ಮಾಡಿದ್ರೆ- ದಾನಶೂರ ಕರ್ಣ
ಬೇಗ ಮನೆಗೆ ಬಂದ್ರೆ- ಸಂಶಯಪಿಶಾಚಿ
ಬರದಿದ್ರೆ- ಉಂಡಾಡಿಗುಂಡ.
ಓದದಿದ್ದರೆ- ಸರಸ್ವತಿ ದ್ವೇಷಿ
ಓದಿದರೆ- ಪುಸ್ತಕದ ಹುಳ
ಧಾರಾವಾಹಿ ನೋಡದಿದ್ರೆ-ಅರಸಿಕ
ನೋಡಿದ್ರೆ- ಬೇರೇನಿದೆ ಕಡಿಯೋಕೆ?
ಓ ದೇವಾ ಹೇಗಯ್ಯ ಬದುಕಲಿ?
☹️☹️☹️
*********
ಗುರುವಿಗೆ ಶಿಷ್ಯ ಹೇಳಿದ-- "ಗುರುದೇವ....
ಆಶ್ರಮಕ್ಕೆ ಒಬ್ಬ ವ್ಯಕ್ತಿ ಹಸುವನ್ನು ದಾನವಾಗಿ ನೀಡಿದ್ದಾನೆ...
ಗುರು ಹೇಳಿದ-- ಒಳ್ಳೆದಾಯ್ತು..!! ಕುಡಿಯೋಕೆ ಹಾಲು ಸಿಕ್ತು....
ಒಂದು ವಾರದ ನಂತರ ---
ಶಿಷ್ಯ ಬಂದು ಗುರುವಿನ ಹತ್ತಿರ-- ಗುರುದೇವ..ಯಾವ ವ್ಯಕ್ತಿ ಒಂದು ವಾರದ ಹಿಂದೆ ಹಸು ನೀಡಿದ್ದನೋ..ಅದನ್ನಾ ಅವನು ವಾಪಸ್ ತೆಗೆದುಕೊಂಡು ಹೋದಾ....
ಗುರು-- ಒಳ್ಳೆದಾಯ್ತು... ಸಗಣಿ ಎತ್ತೋ ಕೆಲಸದಿಂದಾದ್ರೂ ಮುಕ್ತಿ ಸಿಕ್ಕಿತು...!!!
" ಪರಿಸ್ಥಿತಿ " ಬದಲಾದ್ರೆ ನಿಮ್ಮ "ಮನಸ್ಥಿತಿ" ಬದಲಾಯಿಸಿ...
ದುಃಖ ಸುಖವಾಗಿ ಬದಲಾಗುತ್ತೆ....
#ಶಾಸ್ತ್ರ
*********
ಮಾಸ್ತರ- ಯಾಕೋ ಗುಂಡಾ ನಾ ಎಷ್ಟ ಬ್ಯೆದರೂ ಸಿಟ್ಟು ಮಾಡಿಕೊಳ್ಳುವದಿಲ್ಲ? ಎದರು ಮಾತಾಡುದಿಲ್ಲ? ಯಾಕಲೇ?
ಗುಂಡ - ಸರ್ ನೀವು ಹೇಳಿದ ವೇದವಾಕ್ಯ ನನ್ನ ಕಿವ್ಯಾಗ ಇನ್ನೂ ಗುಂಯ್ ಗುಡತ್ತ ......
ಮಾಸ್ತರ- ಎಷ್ಟ ಒಳ್ಳೆಯ ಶಿಷ್ಯಾಲೆ ನೀನು, ಯಾವದಲೇ ಆ ವೇದವಾಕ್ಯ ಅದು?😴😴😴😴
ಗುಂಡ - ನೀವೇ ಹೇಳಿದ್ದು ಸರ್, " ನಾಯಿ ಬೊಗಳಿದ್ರ ದೇವಲೋಕ ಹಾಳಾಗತೈತೇನು?" 😜😜😜😜
*********
*ಸದಾ ನೆನಪಿಟ್ಟುಕೊಳ್ಳಬೇಕಾದ ಮೂರು ವಿಷಯಗಳು*
*〰〰〰〰〰〰〰〰〰〰*
⚫ ಗೌರವಿಸಬೇಕಾದ ಮೂರು ವಿಷಯಗಳು
*ತಾಯಿ,*
*ತಂದೆ,*
*ಗುರು.*
⚫ ಜಾಗ್ರತೆ ವಹಿಸಬೇಕಾದ ಮೂರು ವಿಷಯಗಳು
*ಪತ್ನಿ,*
*ಐಶ್ವರ್ಯ,*
*ಬುದ್ಧಿವಂತಿಕೆ*
⚫ ಮರೆಯಬಾರದ ಮೂರು ವಿಷಯಗಳು
*ಸಾಲ,*
*ಕರ್ತವ್ಯ,*
*ಖಾಯಿಲೆ,*
⚫ ನಿಯಂತ್ರಣದಲ್ಲಿಡಬೇಕಾದ ಮೂರು ವಿಷಯಗಳು
*ಆಸೆ,*
*ನಾಲಿಗೆ,*
*ಕಾಮ*
⚫ ಸಂತೋಷಕ್ಕಾಗಿ ಬಿಡಬೇಕಾದ ಮೂರು ವಿಷಯಗಳು
*ಕೋಪ,*
*ಅಸೂಯೆ,*
*ಮತ್ಸರ*
⚫ ದೂರವಿಡಬೇಕಾದ ಮೂರು ವಿಷಯಗಳು
*ಕೆಟ್ಟವರ ಸಹವಾಸ,*
*ಸ್ವಾರ್ಥ,*
*ದುರಾಳತನ*
⚫ ಸಮೃದ್ಧಿ ಹೊಂದುವ ಮೂರು ವಿಷಯಗಳು
*ದೇವರು,*
*ವಿದ್ಯೆ,*
*ಕಠಿಣ ಪರಿಶ್ರಮ*
⚫ ಎಲ್ಲರೂ ಕಾಯಬೇಕಾದ ಮೂರು ವಿಷಯಗಳು
*ಸಮಯ,*
*ಸಾವು,*
*ಗಿರಾಕಿ*
⚫ ಅರಿವಿನ ಮೂರು ವಿಷಯಗಳು
*ಕ್ಷಮೆ,*
*ಮರೆಯುವಿಕೆ,*
*ಗೆಳೆತನ*
⚫ ಜೀವನದಲ್ಲಿ ಪಾಠ ಕಲಿಸುವ ಮೂರು ವಿಷಯಗಳು
*ಖಾಲಿ ಜೇಬು,*
*ಹಸಿದ ಹೊಟ್ಟೆ,*
*ಒಡೆದ ಹೃದಯ*
⚫ಹಿಂದಕ್ಕೆ ಬಾರದ ಮೂರು ವಿಷಯಗಳು
*ಕಳೆದು ಹೋದ ಸಮಯ,*
*ಆಡಿದ ಮಾತು,*
*ಹೋದ ಪ್ರಾಣ*
*ಬಿಡುವು ದೊರೆತರೆ, ಕಾಡುವುದು ಚಿಂತೆ-ಭಯ.
ಬಿಡುವಿಲ್ಲದವನೇ ಭಾಗ್ಯಶಾಲಿ.ಏಕೆಂದರೆ,
ಅವನಿಗೆ ಯೋಚಿಸುವುದಕ್ಕೂ ಅವಕಾಶವಿರುವುದಿಲ್ಲ.*👁
*********
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು?
ಸತ್ಯ ಸದಾಚಾರ ಇಲ್ಲದವನು ಜಪ
ಹತ್ತು ಸಾವಿರ ಮಾಡಿ ಫಲವೇನು?||೧||
ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿದರೆ ಫಲವೇನು?
ಬಿನ್ನಣದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು?||೨||
ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು?
ತಾಪತ್ರಯದ ಸಂಸಾರ ಕೆಡಿಸುವಂಥ
ಪಾಪಿ ಮಗನು ಇದ್ದು ಫಲವೇನು? ||೩|
ತಾಂಡವ ಧನದಿಂದ ತಂದೆ ಮಾತು ಕೇಳದ
ತುಂಡು ಮಗನು ಇದ್ದು ಫಲವೇನು?
ಭಂಡುಮಾಡಿ ಅತ್ತಿ ಮಾವನ ಬೈವ
ಮಂಡ ಸೊಸೆಯಿದ್ದು ಫಲವೇನು? ||೪|
ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು
ಕಾನನದೊಳಗಿದ್ದು ಫಲವೇನು?
ಆನಂದ ಮೂರುತಿ ಪುರಂದರ ವಿಠಲನ
ನೆನೆಯದ ತನುವಿದ್ದು ಫಲವೇನು? ||೫||
Subscribe , Follow on