-->

ದಸರಾ ಹಬ್ಬ ಬಂತು

" ದಸರಾ ಹಬ್ಬ ಬಂತು, 

ಬಂತು ವಿಜಯದ ಹಬ್ಬ. 

ನಮ್ಮ ಕರ್ನಾಟಕದ ಹಬ್ಬ, 

ಸಂಭ್ರಮದ ಹಬ್ಬ.

ದಸರಾ ಹಬ್ಬದ ಶುಭಾಶಯಗಳು, 

ನಿಮ್ಮೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.

ದುರ್ಗೆಯ ದರ್ಶನ ಪಡೆದು, 

ಭಕ್ತಿಯಿಂದ ಪೂಜಿಸೋಣ. 

ರಾವಣನ ಮೇಲೆ ರಾಮನ ವಿಜಯ, 

ನಮ್ಮ ಜೀವನದ ದುಷ್ಟತೆಗಳ ಮೇಲೆ ನಮ್ಮ ವಿಜಯ.

ದಸರಾ ಹಬ್ಬದ ಶುಭಾಶಯಗಳು, 

ನಿಮ್ಮೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.

ಕುಟುಂಬ ಮತ್ತು ಸ್ನೇಹಿತರೊಂದಿಗೆ, ಸಂಭ್ರಮದಿಂದ ದಸರಾ ಆಚರಿಸೋಣ. 

ಹೊಸ ಬಟ್ಟೆಗಳನ್ನು ಧರಿಸಿ, ಸಿಹಿತಿಂಡಿಗಳನ್ನು ಹಂಚಿಕೊಂಡು, ನವರಾತ್ರಿಯ ಪೂಜೆ ಮಾಡೋಣ.

ದಸರಾ ಹಬ್ಬದ ಶುಭಾಶಯಗಳು, 

ನಿಮ್ಮೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.

ದಸರಾ ಹಬ್ಬ ಬಂತು, ಬಂತು ವಿಜಯದ ಹಬ್ಬ. 

ನಮ್ಮ ಕರ್ನಾಟಕದ ಹಬ್ಬ, ಸಂಭ್ರಮದ ಹಬ್ಬ.

ದಸರಾ ಹಬ್ಬದ ಶುಭಾಶಯಗಳು! "

Dasara Mysuru Palace

 

Part 150 - Jokes , Fun , Haasya , Humor , Quotes , Greetings

 ಮೂರ್ ದಿನ ಆಗಿತ್ತು. ಹೆಂಡತಿ ಗಂಡನ ಜೊತೆ ಠೂ ಬಿಟ್ಟು...

ಎಷ್ಟೂಂತ ಬಾಯಿ ಮುಚ್ಕೊಂಡಿರಕಾಗುತ್ತೆ ಹೆಂಡತಿ. ಬಾಯಿ ನೋಯಕ್ಕೆ ಶುರುವಾಯ್ತು.

ಕಡೆಗೆ ಹೆಂಡತಿ ಅಂದ್ಲು:

"ಏನೋ ಗಂಡ ಹೆಂಡತಿ ಅಂದ್ರೆ ಒಂದ್ ಮಾತು ಬರುತ್ತೆ ಹೋಗುತ್ತೆ. ಅದಕ್ಕೇ ಇಷ್ಟ್ ದಿನ ಬಾಯ್ಮುಚ್ಕೊಂಡಿರ್ಬೇಕಾ?? 😠😠😠 ಇವಾಗ ನಾನು ಹತ್ತರವರೆಗೂ ಎಣಿಸ್ತೀನಿ. ಮಾತಾಡಿಲ್ಲಾಂದ್ರೆ ನಮ್ಮಮ್ಮನ ಮನೆಗೆ ಹೋಗ್ತೀನಿ ಅಷ್ಟೇ 😠😠😠"

ಹತ್ ನಿಮಿಷ ಆದ್ರೂ ಗಂಡ ಕಿಮಕ್ಕನ್ಲಿಲ್ಲ.

ಹೆಂಡತಿ ಎಣಿಸೋಕೆ ಶುರು ಹಚ್ಕೊಂಡ್ಲು.

...
...

ಒನ್..

ಟೂ...

ಥ್ರೀ..

ಉಹೂಂ. ಗಂಡ ಗಪ್ ಚುಪ್
 😷😷

ಹೆಂಡತಿ ಹತ್ತು ನಿಮಿಷ ಬಿಟ್ಟು...

ಫೋರ್..

ಫೈವ್...

ಅಂದ್ಲು. 😠😠

ಗಂಡ... ಉಹೂಂ. ಬಾಯಿ ಬಿಡಲಿಲ್ಲ.

ಸಿಕ್ಸ್...

ಸೆವೆನ್.. 😵😧😧

(ಗಂಡ ಒಳಗೊಳಗೇ ಹಿಗ್ಗಿ ಹೀರೇಕಾಯಿ ಆಗಿದ್ದರೂ ತೋರಿಸಿಕೊಳ್ಳಲಿಲ್ಲ). 😷😷

ಕ್ಲೈಮ್ಯಾಕ್ಸು....

ಎಯ್ಟ್

ಅಂದ್ಲು ಹೆಂಡತಿ.

ಉಹೂಂ.. ಗಂಡ ಚುಪ್ ಚಾಪ್.

ನೈನ್..

(ಗಂಡಂಗೆ ಎದ್ದು ಕುಣಿಯೋಷ್ಟು ಖುಷಿ).

ಹೆಂಡತಿ ಏನ್ಮಾಡಿದ್ಲು ಅಂದ್ರೆ...

ಬಾಯಿ ಬಿಡಲಿಲ್ಲ.

ಹೆಂಡತಿ ಈಗ ಫುಲ್ ಸೈಲೆಂಟು.

🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊

...
ಗಂಡಂಗೆ ಟೆನ್ಷನ್ನಾಗೋಯ್ತು.

ಹತ್ತು ನಿಮಿಷ ಕಾದ್ರು.

ತಡೆಯೋಕಾಗ್ದೆ

" ಲೇಯ್.. ಯಾಕೆ ನಿಲ್ಲಿಸ್ದೆ?? ಎಣಿಸೂ.. ಟೆನ್ ಅಂತ್ಹೇಳು" ಅಂದ್ರು. 😳😳😳😵

ಹೆಂಡತಿ ಅಂದ್ಲು.

"ಅಬ್ಬಾ!! ದೇವ್ರು ದೊಡ್ಡೋನು ಕಂಡ್ರೀ.... ಬಾಯಿ ಬಿಟ್ರಿ. ಇಲ್ದಿದ್ದರೆ ನಮ್ಮಮ್ಮನ ಮನೆಗೆ ಹೋಗ್ತಿದ್ದೆ. ಪಾಪ ನಿಮಗೆಷ್ಟು ತೊಂದರೆ ಆಗ್ತಿತ್ತು!!! ತಾಳಿ ಇದೇ ಖುಷೀಲಿ ಪಾಯಸ ಮಾಡ್ತೀನಿ 🏃🏃🏃" ಅಂತ ಕಿಚನ್ನಿಗೆ ಹೋದ್ಲು...
..

😭😳😟

ಗಂಡ ಈ ಘಟನೆಯನ್ನು ತನ್ನ ಆತ್ಮಚರಿತ್ರೆಯಲ್ಲಿ "ತಾಳ್ಮೆ ಕಳೆದುಕೊಳ್ಳುವುದರಿಂದ ಆಗುವ ಅನಾಹುತಗಳು" ಅಧ್ಯಾಯದಲ್ಲಿ ಸೇರಿಸಲಿದ್ದಾನಂತೆ.
😊😊

 

*********

ಗುಂಡಣ್ಣ ಫ್ಲಿಪ್ ಕಾರ್ಟ್ ಗೆ ಫೋನ್ ಮಾಡಿದ.
ಹಲೋ  ಇದು ಫ್ಲಿಪ್ ಕಾರ್ಟ್ ಅವರ ಆಫೀಸ್ ತಾನೇ?
ಫ್ಲಿಪ್  ಕಾರ್ಟ್: ಹೌದು ಸರ್, ಹೇಳಿ ನಮ್ಮಿಂದ ಏನು ಸಹಾಯ ಬೇಕು
ಗುಂಡಣ್ಣ : ಇವತ್ತು ನನ್ನ ಶ್ರೀಮತಿಗೆ ಡೆಲಿವರಿ ಆಗಿದೆ. ನಮಗೆ ಮುದ್ದಾದ ಗಂಡು ಮಗು ಹುಟ್ಟಿದೆ. ಈ ಸಂತೋಷದ ಸುದ್ದಿ ನಿಮಗೆ ತಿಳಿಸೋಣ ಅಂತ ಫೋನ್ ಮಾಡಿದೆ
ಫ್ಲಿಪ್ ಕಾರ್ಟ್: ತುಂಬಾ ಸಂತೋಷ್ ಸರ್, ನಿಮಗೂ ಮತ್ತು ನಿಮ್ಮ ಮನೆಯವರಿಗೆ ನಮ್ಮ ಅಭಿನಂದನೆಗಳು. ಆದರೆ ನಮ್ಮಿಂದ ತಮಗೆ ಏನು ಸೇವೆ ಆಗಬೇಕು ತಿಳಿಸಿ
ಗುಂಡಣ್ಣ: ಹೆಚ್ಚಿನ ವಿಶೇಷ ಏನಿಲ್ಲಾ, ನನ್ನ ಬ್ಯಾಂಕಿನ ಖಾತೆಯ ನಂಬರ್ ಬರೆದು ಕೊಳ್ರಿ, ಮತ್ತ ಲಗೂನ ಅದಕ್ಕ ರೊಕ್ಕಾ ಜಮಾ ಮಾಡ್ರಿ.
ಫ್ಲಿಪ್ ಕಾರ್ಟ್: ಸರ್ ನಿಮಗ ಏನೋ ಕನ್ಫ್ಯೂಸ್ ಆಗ್ಯದ ಅನಸ್ತದ, ರೊಕ್ಕಾ ನಿಮ್ಮ ಖಾತೆಗೆ ನಾವ್ಯಾಕ ಜಮಾ ಮಾಡಬೇಕು ಹೇಳ್ರಿ
ಗುಂಡಣ್ಣ: ಭಾಳ ಜಾಣ ನ ಹಂಗ ಮಾತಾಡ್ತಿಯಪಾ, ಅಲ್ಲಾ ಮತ್ತ ಊರ ತುಂಬಾ 'ಕ್ಯಾಶ್ ಆನ್ ಡೆಲಿವರಿ' ಅಂತ ದೊಡ್ಡ ದೊಡ್ಡ ಬೋರ್ಡ್ ಯಾಕೆ ಹಾಕಿರಿ, ಅದನ್ನ ಹೇಳ್ರಿ
ಫ್ಲಿಪ್ ಕಾರ್ಟ್ ಮೂರ್ಛೆ ಹೋದವನು ಇನ್ನು ಎದ್ದಿಲ್ಲ.
😁😁😁😁😁😁😁😁 

*********

Part 150 - Jokes , Fun , Haasya , Humor , Quotes , Greetings

 

 

*ನ್ಯೂ ವರ್ಷನ್ ಗಾದೆಗಳು.!!


● ಕೈಗೆ ಸ್ಯಾನಿಟೈಸರಾದರೆ., 👏🏻 ಬಾಯಿಗೆ ಮಾಸ್ಕು..😷

● ಒಗ್ಗಟ್ಟಿನಲ್ಲಿ ಕರೋನ ಇದೆ..!🤔😳

● ಉಪ್ಪಿಗಿಂತ ರುಚಿಯಿಲ್ಲ.,😛 ವೈದ್ಯರಿಗಿಂತ👨🏻‍⚕️ ದೇವರಿಲ್ಲ..👆🏼🙏🏻

● ಮಾತು ಆಡಿದರೆ ಹೋಯ್ತು., 😏ಮುತ್ತು ಕೊಟ್ಟರೆ ಹೊಯ್ತು..😘🥵

● ಕೊರೋನಾದಿಂದ ಕೆಟ್ಟು ಹಳ್ಳಿ ಸೇರು..🙃😇

● ಮಾತು ಬಲ್ಲವನಿಗೆ ಜಗಳವಿಲ್ಲ., 🧐🤩ಮಾಸ್ಕ್ ಧರಿಸಿವನಿಗೆ ರೋಗವಿಲ್ಲ..😷😍

● ಮಾತು ಮನೆ ಕೆಡುಸ್ತು.,😒🏡 ಕರೋನ ಪ್ರಪಂಚ ಕೆಡುಸ್ತು..🥳🌃🌆🌇

● ಮನೇಲಿದ್ದೋನೆ🏡👆🏼👍🏻💪🏻🤷🏻‍♂️ ಮಹಾಶೂರ., ಹೊರಗ್ ಹೋದವ ಹರೋಹರ..🛵🚘🙃😇🏥😤🥺🥶

● ಬೆಂಗಳೂರಿನಿಂದ ಬಂದಾಗ ಹೋದ ಮಾನ.,😩😫 ಮಾಸ್ಕ್,😷 ಸ್ಯಾನಿಟೈಸರ್,👏🏻  ಹಾಕ್ಕೊಂಡು ತಿರುಗಿದರೂ🚶🏻‍♂️ ಬಾರದು..🙆🏻‍♂️

● ಮಾಸ್ಕು ಬೆಳ್ಳಿ.,😷 Distance ಬಂಗಾರ..!🏃🏻‍♂️🧍🏻

● ಉಪ್ಪಿಗಿಂತ ರುಚಿ ಇಲ್ಲ.,😋 ಕರೋನಗಿಂತ ರೋಗವಿಲ್ಲ..!🥵😡🥶

● ಹಾಕೋಳ್ಳೋಕೆ ಹೊಸಾ ಚೆಡ್ಡಿ ಇಲ್ಲಾಂದ್ರೂ., 🩳🩲ಮುಖಕ್ಕೆ ಮಾಸ್ಕ್, 😷ಕೈಗೆ ಸಾನಿಟೈಜರ್,👏🏻 ಇರ್ಲೇಬೇಕಂತೆ..🤷🏻‍♂️😎

● ಪ್ಲೇಗಿಗೊಂದು ಕಾಲ.,🙊 ಕರೊನಕ್ಕೊಂದು ಕಾಲ..🐡❄️

● ಕೆಮ್ಮಿದ್ದೆಲ್ಲಾ ಕೊರೋನಾ ಅಲ್ಲ., 🤤😪ಕೈಲಿದ್ದಿದ್ದೆಲ್ಲಾ ಸ್ಯಾನಿಟೈಝರ್ ಅಲ್ಲ..👊🏻👎🏻👏🏻😸😹

● ಸುಮ್ಮನೆ ಇರಲಾರದೆ., 😙 ಕೊರೋನಾ❄️🐡 ಬಿಟ್ಕೋಂಡ್ರಂತೆ..🙆🏻‍♂️

● ಕರೀನಾಗೊಂದು ಕಾಲ,💃🏻🤷🏻‍♀️ ಕೊರೊನಾಗೊಂದು ಕಾಲ..❄️🐡🤷🏻‍♂️

● ಬೀದೀಲಿ ಕೆಮ್ಮಿ ನೋಡು., 🥵😡ಹಾದೀಲಿ ಸೀನಿ ನೋಡು..😪😤 


******************

ಈ ಲಾಕ್ಡೌನ್ ಒಂಥರಾ ಡಿಫರೆಂಟ್
ಎಷ್ಟು ಬೇಕಾದ್ರೂ ಲಿಕ್ಕರ್ 🍺 ಸಿಗುತ್ತೆ,
ಆದ್ರೆ ಅರ್ಜೆಂಟ್ ಆಗಿ ಒಂದು ನಿಕ್ಕರ್ 🩳 ಬೇಕು ಅಂದ್ರು ಸಿಗಲ್ಲ......
😂😂😂😂😂


ಮದುವೆಗೆ ಅವಕಾಶ ಇದೆ ಅಂತೆ....
ಆದ್ರೆ,
ಬಟ್ಟೆ ಅಂಗಡಿ 👕,
ಆಭರಣ ಅಂಗಡಿ 👑,
ಫ್ಯಾನ್ಸಿ ಅಂಗಡಿ 💄
ಎಲ್ಲವೂ ಬಂದ್... ಹಾಗಾದರೆ ಮದುಮಕ್ಕಳು ಬರ್ಮುಡಾ ಮತ್ತು ನೈಟಿ ಯಲ್ಲಿ ಮದುವೆ ಮಾಡಿಕೊಳ್ಳುವುದೇ.....
😂😂😂😂😂


ಎಣ್ಣೆ, ಬಾರ್, ರೆಸ್ಟೋರೆಂಟ್ ಬಂದ್
        ಹೆಂಡತಿ ಖುಷ್. 🙎🏻‍♀️
ಬೆಳ್ಳಿ, ಬಂಗಾರ, ಸೀರೆ ಅಂಗಡಿ ಬಂದ್
        ಗಂಡ ಖುಷ್.    🙎🏻‍♂️
ಸ್ಕೂಲ್, ಕಾಲೇಜ್ ಬಂದ್
    ಮಕ್ಕಳು ಖುಷ್.    👯🏻‍♀️
ಒಟ್ನಲ್ಲಿ ಸುಖ ಸಂಸಾರಕ್ಕೆ ಇನ್ನೂ ಏನ್ ಬೇಕು......
😂😂😂😂😂


ನಿಮ್ಮ ನೆಚ್ಚಿನ ಆಟ ಯಾವುದೂ !!?
  🤔🤔🤔🤔
ಸಧ್ಯಕ್ಕೆ.....    ಉಸಿರಾಟ
  😤😤😤😤
😂😂😂😂😂


ಸರ್ಕಾರ ಹೇಳಿದಾಂಗೆ ಮನೇಲಿ ಇದ್ರೆ
   "ಮೇ"    ನಲ್ಲಿ ಸಿಗೋಣ,
ವಿನಾ ಕಾರಣ ಮನೆ ಬಿಟ್ಟು ಹೊರಗೆ ಬಂದ್ರೆ     "ಮೇಲೆ"     ಸಿಗೋಣ.
😂😂😂😂😂


ಸಧ್ಯಕ್ಕೆ ಈಗ ಇರೋದು ಏರಡೇ ಕಾಲಗಳು..... 🤔🤔
ಒಳಗಡೆ ಇದ್ರೆ    "ಉಳಿಗಾಲ"       🏘️
ಹೊರಗಡೆ ಬಂದ್ರೆ "ಕೊನೆಗಾಲ"    🎡
😂😂😂😂😂

ಪ್ರೇಮಿಗಳು ಒಟ್ಟಿಗೆ ಇರೋ ದಿನ
"ವ್ಯಾಲೆಂಟೈನ್"  ❤️  ಡೇ.
ಮನೆ ಮಂದಿಯೆಲ್ಲಾ ಒಟ್ಟಿಗೆ ಇರೋ ದಿನ "ಕ್ವಾರಂಟೆನ್"  🏚️  ಡೇ.
😂😂😂😂😂

ಅಂದು ಯುದ್ಧ ⚔️⚔️ಮಾಡಿ ದೇಶವನ್ನು ಉಳಿಸಬೇಕಿತ್ತು.
ಆದ್ರೆ ಈ ಇಂದು ನಿದ್ದೆ 😴😴  ಮಾಡಿ ದೇಶವನ್ನು ಉಳಿಸುವ ಪರಿಸ್ಥಿತಿ ಬಂದಿದೆ.
😂😂😂😂😂


ಅಂತೂ ಇಂತೂ
"ಎಣ್ಣೆ  🍻    ಹಾಲು" 🥛
ಬೆಳಿಗ್ಗೆ ಒಟ್ಟಿಗೆ ತರೂ ಟೈಮ್ ಬಂತು.....
😂😂😂😂😂


ಇನ್ಮುಂದೆನೂ ಕೋರೋನಾ ತೊಲಗದೆ ಇದ್ರೆ ಬಿಲ್ಡರ್ಸ್ ಗಳು ಹೀಗೆ ಜಾಹೀರಾತು ನೀಡಬಹುದು.....
2 ಬೆಡ್ ರೂಮ್,
ಕಿಚನ್, ಹಾಲ್,
ಐಸೋಲೇಷನ್ ರೂಮ್,
ಆಕ್ಸಿಜನ್ ಪೈಪ್ ಲೈನ್, ಮತ್ತೆ ವೆಂಟಿಲೇಟರ್ ಸೌಲಭ್ಯ ಇದೆ". !!!!!
😂😂😂😂😂


ಏನ್ ಮಾಡಿದ್ರೂ ಟೈಮ್ ಪಾಸ್ ಆಗ್ತಾ ಇಲ್ಲಾ ಅಂದ್ರೆ.....
ನೀವೇ ನಟಿಸಿರುವ ,  ನಿಮ್ಮದೇ ಮೂವೀ
             " ನಿಮ್ಮ ಮದುವೆ "
ಸಿಡಿ ಹಾಕಿಕೊಂಡು ನೋಡಿ.... 😂
ಸತ್ಯ ಘಟನೆ ಆಧಾರಿತ ಚಿತ್ರ.
😂😂😂😂😂

New Year Wishes and Greetings

May this year being new happiness , new goals , new achievements and a lot of new inspirations on your life. Wishing you a year fully loaded with happiness

May this new year be happier , better and healthier to you and your family

Wishing you & your family a very Happy New Year !  May this year be the best of your life. May you find success, happiness & good health. Even in these difficult times, we must keep our courage and pray for better tomorrow

May you and your family enjoy the holiday spirit throughout the year. We wish you success and prosperity in abundance. Here’s to a happy and healthy new year

As we celebrate this new year , wish everyone success , a healthy life and a fresh new start . Happy new year
Look forward to the new year with hope and confidence and you are sure to be blessed with great things . Wish you and your dear ones a happy new year

Wish you all all a happy and prosperous new year , may this new year be better than the previous 

As the sun gives light , the sensation gives birth to the compassion and the flowers always spread the fragrance , the same way may our new year be a pleasant one for us every day , every moment. 

May this year be the best year of your life , may you find success , happiness and everything your heart desires. Wishing you and loved ones a very happy new year.

We will open the book , its pages are blank. We are going to put words on them ourselves . The book is called opportunity and its first chapter is New Year day. Happy New Year 

Another new year , new beginnings , new dreams , new memories , new blessings. Happy New Year 

Happy New year , Here's wishing that the new year will bring Joy , Love , Peace and happiness to you.

A new year is like a blank book. The pen is in your hands , it is your chance to write a beautiful story for yourself. Happy new year.
In walking into this new year with a clear heart and mind , If you owe me - don't worry about it. If you wronged me , it's all good, lesson learned. If you are angry with me , you won. I have let it go. If we are not speaking , its cool. I truly wish you well . If you feel i have wronged you I apologize , it was not intentional. I am grateful for every experience that i have received. Life is too short for pent up anger , holding grudges , extra stress and pain. Remember forgiving is the best thing you have done for yourself, so never block your blessings for others. Let this year be a year of positivity and season of forgiveness. Happy new year.

 



New Year Wishes

 ನಿಮಗೂ ನಿಮ್ಮ ಪ್ರೀತಿಯ ಕುಟುಂಬದವರಿಗೂ ಹೊಸ ವರ್ಷ ಶುಭಾಶಯಗಳು
ಜನವರಿ ಎಂಬ ಜೀವನದಲ್ಲಿ , ಫೆಬ್ರವರಿ ಎಂಬ ಪ್ರೀತಿಯಲ್ಲಿ , ಮಾರ್ಚ್ ಎಂಬ ಮಮತೆಯಲ್ಲಿ , ಏಪ್ರಿಲ್ ಎಂಬ ಏಕಾಂತದಲ್ಲಿ , ಮೇ  ಎಂಬ ಮಮಕಾರದಲ್ಲಿ , ಜೂನ್ ಎಂಬ ಜೋಕಾಲಿಯಲ್ಲಿ , ಜೂಲೈ ಎಂಬ ಜಾಲಿಯಲ್ಲಿ , ಆಗಸ್ಟ್ ಎಂಬ ಆಕಾಶದಲ್ಲಿ , ಸೆಪ್ಟೆಂಬರ್ ಎಂಬ ಸವಿನೆನಪಿನಲ್ಲಿ , ಅಕ್ಟೋಬರ್ ಎಂಬ ಆಗಸದಲ್ಲಿ , ನವೆಂಬರ್ ಎಂಬ ನಕ್ಷತ್ರದಲ್ಲಿ , ಡಿಸೆಂಬರ್ ಕೊನೆ ವರೆಗೂ ನಗು ನಗುತಾ ಇರಿ ಜೀವನದಲಿ , ಹೊಸ ವರ್ಷ ಶುಭಾಶಯಗಳು

ಎಲ್ಲರಿಗೂ ಪ್ರೀತಿ , ಸಂತೋಷ ಹಂಚುತ್ತಾ , ಹೊಸ ಕನಸು , ಹೊಸ ಸಂಕಲ್ಪದಿ ಹೊಸ ವರ್ಷ ಆಚರಿಸೋಣ . ಹೊಸ ವರ್ಷದ ಶುಭಾಶಯಗಳು

12 ತಿಂಗಳು ಸಂತೋಷದಿಂದ  , 365 ದಿನ ಯಶಸ್ಸಿನಿಂದ , 53 ವಾರ ಆರೋಗ್ಯದಿಂದ , 8760 ಗಂಟೆ ಸುಖದಿಂದ , 3153600 ಸೆಕೆಂಡುಗಳು ನೆಮ್ಮದಿಯಿಂದ ಕೂಡಿರಲಿ , ನಿಮ್ಮ ಮುಂದಿನ ಜೀವನ ಚೇತನದಿಂದ ಕೂಡಿರಲಿ , ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ನೆನ್ನೆಯಿಂದ ಕಲಿಯೋಣ , ಈ ದಿನ ಬದುಕೋಣ , ನಾಳೆಗೆ ಭರವಸೆ ಇಡೋಣ . ಹೊಸ ವರ್ಷದ  ಹಾರ್ದಿಕ ಶುಭಾಶಯಗಳು

ಕಹಿ ನೆನಪು ಮರೆಯಾಗಲಿ , ಸಿಹಿ ನೆನಪು ಚಿರವಾಗಲಿ , ಹೊಸ ದಿನಗಳಲ್ಲಿ  ನೀವು ಕಂಡ ಕನಸು ನನಸಾಗಲಿ , ಆ ದೇವರು ನಿಮ್ಮನ್ನು ಸದಾ ಸಂತೋಶದಿಂದಿರಿಸಲಿ , ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಹೊಸ ವರ್ಷ ಒಳಿತು ಮಾಡಲಿ , ನಿಮ್ಮ ಕನಸುಗಳು ನನಸಾಗಲಿ , ಖುಷಿ , ನೆಮ್ಮದಿ , ಶಾಂತಿ , ಪ್ರೀತಿ , ಅದೃಷ್ಟ ಮತ್ತು ಅರೋಗ್ಯ ಎಲ್ಲವು ನಿಮಗೆ ಸಿಗಲಿ , ಎಲ್ಲಾ ಆತ್ಮೀಯ ಬಾಂಧವರಿಗೂ ಹಾಗು ಸ್ನೇಹಿತರಿಗೂ ಹೊಸ ವರ್ಷದ ಶುಭಾಶಯಗಳು

ಕುಡಿದರೂ ಕುಡಿಯದಂತಿರಬೇಕು,ಕುಡಿದರೆ ವಾಸನೆ ಬರದಂತಿರಬೇಕು,
ಕುಡಿದರೆ ತೂರಾಡದಂತಿರಬೇಕು,ಕುಡಿದರೆ ವಾಂತಿ ಮಾಡದಂತಿರಬೇಕು,
ಕುಡಿದರೆ ತೊದಲು ನುಡಿ ಬಾರದಂತಿರಬೇಕು, ಕುಡಿದರೆ ಪರನಿಂದನೆ ಮಾಡದಂತಿರಬೇಕು, ಕುಡಿದರೂ ಹೆಂಡತಿ ಮೆಚ್ಚಿ ಅಹುದಹುದೆನಬೇಕು,
ಆದ್ದರಿಂದ ಗೆಳೆಯರೆ ,  31 st night  ಕುದಿಸಿ,ಆರಿಸಿದ ನೀರನ್ನೇ ಕುಡಿಯಿರಿ,,,
Happy New year in advance

Rama Navami wishes , greetings , information

 


 

🌺Sree Ram Jaya Ram🌺
Wishing all a very Happy Rama Navami. May the blessings of Maha Pabu Sri Ram bring peace and harmony to everyone.

Sri Ramar Navami which marks the appearance day of Sri Ramachandra Moorthi.

On this blessed day chant Sri Rama Rama Rameti with heart full of devotion. When Maha Prabu's name is chanted with all sincerity and devotion one gets the effect of chanting  the whole of Vishnu Sahasranama Stotra.

Shri Rama Rama Rameti, Rame Rame Manorame;
Sahasrenama tattulyam, Rama Nama Varanane

Meaning:
1: By meditating on "Rama Rama Rama" (the Name of Rama), my Mind gets absorbed in the Divine Consciousness of Rama, which is Transcendental,
2: The Name of Rama is as Great as the Thousand Names of God (Vishnu Sahasranama-stotra, Uttara-khanda, Padma Purana 72.335).

Or you may simply chant Sri Ram Jaya Ram Jaya Jaya Ram 108 times

Chanting Ramar Namam
instills confidence and promotes peace and harmony. More importantly Sri Ram, Hanuman and Sri Raghavendra Swamy will bless you and your family.

*************************

 

ಶ್ರೀರಾಮ ರಾಮ ರಾಮೇತಿ ರಮೇರಾಮೇ ಮನೋರಮೇ।
 ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ।।

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ।
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ।।

 🙏🙏ಈ  ಶ್ರೀರಾಮನವಮಿಯು ಸರ್ವರಿಗೂ ಸನ್ಮಂಗಲವನ್ನುಂಟುಮಾಡಿ ಸರ್ವರೋಗ ರುಜಿನಗಳು ದೂರವಾಗಿ, ಆ ಸೀತಾಸಮೇತ ಶ್ರೀ ರಾಮನು ಸಮಸ್ತ ಜೀವಿಗಳಿಗೂ ಆಯುರಾರೋಗ್ಯ ಐಶ್ವರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ 🙏🙏 

 

**************************

 

॥ನಾಮರಾಮಾಯಣಂ॥
॥ಬಾಲಕಾಂಡಃ॥
ಶುದ್ಧಬ್ರಹ್ಮಪರಾತ್ಪರ ರಾಮ॥೧॥
ಕಾಲಾತ್ಮಕಪರಮೇಶ್ವರ ರಾಮ॥೨॥
ಶೇಷತಲ್ಪಸುಖನಿದ್ರಿತ ರಾಮ॥೩॥
ಬ್ರಹ್ಮಾದ್ಯಮರಪ್ರಾರ್ಥಿತ ರಾಮ॥೪॥
ಚಂಡಕಿರಣಕುಲಮಂಡನ ರಾಮ॥೫॥
ಶ್ರೀಮದ್ದಶರಥನಂದನ ರಾಮ॥೬॥
ಕೌಸಲ್ಯಾಸುಖವರ್ಧನ ರಾಮ॥೭॥
ವಿಶ್ವಾಮಿತ್ರಪ್ರಿಯಧನ ರಾಮ॥೮॥
ಘೋರತಾಟಕಾಘಾತಕ ರಾಮ॥೯॥
ಮಾರೀಚಾದಿನಿಪಾತಕ ರಾಮ॥೧೦॥
ಕೌಶಿಕಮಖಸಂರಕ್ಷಕ ರಾಮ॥೧೧॥
ಶ್ರೀಮದಹಲ್ಯೋದ್ಧಾರಕ ರಾಮ॥೧೨॥
ಗೌತಮಮುನಿಸಂಪೂಜಿತ ರಾಮ॥೧೩॥
ಸುರಮುನಿವರಗಣಸಂಸ್ತುತ ರಾಮ॥೧೪॥
ನಾವಿಕಧಾವಿತಮೃದುಪದ ರಾಮ॥೧೫॥
ಮಿಥಿಲಾಪುರಜನಮೋಹಕ ರಾಮ॥೧೬॥
ವಿದೇಹಮಾನಸರಂಜಕ ರಾಮ॥೧೭॥
ತ್ರ್ಯಂಬಕಕಾರ್ಮುಕಭಂಜಕ ರಾಮ॥೧೮॥
ಸೀತಾರ್ಪಿತವರಮಾಲಿಕ ರಾಮ॥೧೯॥
ಕೃತವೈವಾಹಿಕಕೌತುಕ ರಾಮ॥೨೦॥
ಭಾರ್ಗವದರ್ಪವಿನಾಶಕ ರಾಮ॥೨೧॥
ಶ್ರೀಮದಯೋಧ್ಯಾಪಾಲಕ ರಾಮ॥೨೨॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅಯೋಧ್ಯಾಕಾಂಡಃ॥
ಅಗಣಿತಗುಣಗಣಭೂಷಿತ ರಾಮ॥೨೩॥
ಅವನೀತನಯಾಕಾಮಿತ ರಾಮ॥೨೪॥
ರಾಕಾಚಂದ್ರಸಮಾನನ ರಾಮ॥೨೫॥
ಪಿತೃವಾಕ್ಯಾಶ್ರಿತಕಾನನ ರಾಮ॥೨೬॥
ಪ್ರಿಯಗುಹವಿನಿವೇದಿತಪದ ರಾಮ॥೨೭॥
ತತ್ಕ್ಷಾಲಿತನಿಜಮೃದುಪದ ರಾಮ॥೨೮॥
ಭರದ್ವಾಜಮುಖಾನಂದಕ ರಾಮ॥೨೯॥
ಚಿತ್ರಕೂಟಾದ್ರಿನಿಕೇತನ ರಾಮ॥೩೦॥
ದಶರಥಸಂತತಚಿಂತಿತ ರಾಮ॥೩೧॥
ಕೈಕೇಯೀತನಯಾರ್ಥಿತ ರಾಮ॥೩೨॥
ವಿರಚಿತನಿಜಪಿತೃಕರ್ಮಕ ರಾಮ॥೩೩॥
ಭರತಾರ್ಪಿತನಿಜಪಾದುಕ ರಾಮ॥೩೪॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅರಂಯಕಾಂಡಃ॥
ದಂಡಕಾವನಜನಪಾವನ ರಾಮ॥೩೫॥
ದುಷ್ಟವಿರಾಧವಿನಾಶನ ರಾಮ॥೩೬॥
ಶರಭಂಗಸುತೀಕ್ಷ್ಣಾರ್ಚಿತ ರಾಮ॥೩೭॥
ಅಗಸ್ತ್ಯಾನುಗ್ರಹವರ್ಧಿತ ರಾಮ॥೩೮॥
ಗೃಧ್ರಾಧಿಪಸಂಸೇವಿತ ರಾಮ॥೩೯॥
ಪಂಚವಟೀತಟಸುಸ್ಥಿತ ರಾಮ॥೪೦॥
ಶೂರ್ಪಣಖಾರ್ತ್ತಿವಿಧಾಯಕ ರಾಮ॥೪೧॥
ಖರದೂಷಣಮುಖಸೂದಕ ರಾಮ॥೪೨॥
ಸೀತಾಪ್ರಿಯಹರಿಣಾನುಗ ರಾಮ॥೪೩॥
ಮಾರೀಚಾರ್ತಿಕೃತಾಶುಗ ರಾಮ॥೪೪॥
ವಿನಷ್ಟಸೀತಾಂವೇಷಕ ರಾಮ॥೪೫॥
ಗೃಧ್ರಾಧಿಪಗತಿದಾಯಕ ರಾಮ॥೪೬॥
ಶಬರೀದತ್ತಫಲಾಶನ ರಾಮ॥೪೭॥
ಕಬಂಧಬಾಹುಚ್ಛೇದನ ರಾಮ॥೪೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಕಿಷ್ಕಿಂಧಾಕಾಂಡಃ॥
ಹನುಮತ್ಸೇವಿತನಿಜಪದ ರಾಮ॥೪೯॥
ನತಸುಗ್ರೀವಾಭೀಷ್ಟದ ರಾಮ॥೫೦॥
ಗರ್ವಿತವಾಲಿಸಂಹಾರಕ ರಾಮ॥೫೧॥
ವಾನರದೂತಪ್ರೇಷಕ ರಾಮ॥೫೨॥
ಹಿತಕರಲಕ್ಷ್ಮಣಸಂಯುತ ರಾಮ॥೫೩॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಸುಂದರಕಾಂಡಃ॥
ಕಪಿವರಸಂತತಸಂಸ್ಮೃತ ರಾಮ॥೫೪॥
ತದ್ಗತಿವಿಘ್ನಧ್ವಂಸಕ ರಾಮ॥೫೫॥
ಸೀತಾಪ್ರಾಣಾಧಾರಕ ರಾಮ॥೫೬॥
ದುಷ್ಟದಶಾನನದೂಷಿತ ರಾಮ॥೫೭॥
ಶಿಷ್ಟಹನೂಮದ್ಭೂಷಿತ ರಾಮ॥೫೮॥
ಸೀತಾವೇದಿತಕಾಕಾವನ ರಾಮ॥೫೯॥
ಕೃತಚೂಡಾಮಣಿದರ್ಶನ ರಾಮ॥೬೦॥
ಕಪಿವರವಚನಾಶ್ವಾಸಿತ ರಾಮ॥೬೧॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಯುದ್ಧಕಾಂಡಃ॥
ರಾವಣನಿಧನಪ್ರಸ್ಥಿತ ರಾಮ॥೬೨॥
ವಾನರಸೈನ್ಯಸಮಾವೃತ ರಾಮ॥೬೩॥
ಶೋಷಿತಸರಿದೀಶಾರ್ಥಿತ ರಾಮ॥೬೪॥
ವಿಭೀಷಣಾಭಯದಾಯಕ ರಾಮ॥೬೫॥
ಪರ್ವತಸೇತುನಿಬಂಧಕ ರಾಮ॥೬೬॥
ಕುಂಭಕರ್ಣಶಿರಶ್ಛೇದಕ ರಾಮ॥೬೭॥
ರಾಕ್ಷಸಸಂಘವಿಮರ್ದಕ ರಾಮ॥೬೮॥
ಅಹಿಮಹಿರಾವಣಚಾರಣ ರಾಮ॥೬೯॥
ಸಂಹೃತದಶಮುಖರಾವಣ ರಾಮ॥೭೦॥
ವಿಧಿಭವಮುಖಸುರಸಂಸ್ತುತ ರಾಮ॥೭೧॥
ಖಃಸ್ಥಿತದಶರಥವೀಕ್ಷಿತ ರಾಮ॥೭೨॥
ಸೀತಾದರ್ಶನಮೋದಿತ ರಾಮ॥೭೩॥
ಅಭಿಷಿಕ್ತವಿಭೀಷಣನತ ರಾಮ॥೭೪॥
ಪುಷ್ಪಕಯಾನಾರೋಹಣ ರಾಮ॥೭೫॥
ಭರದ್ವಾಜಾಭಿನಿಷೇವಣ ರಾಮ॥೭೬॥
ಭರತಪ್ರಾಣಪ್ರಿಯಕರ ರಾಮ॥೭೭॥
ಸಾಕೇತಪುರೀಭೂಷಣ ರಾಮ॥೭೮॥
ಸಕಲಸ್ವೀಯಸಮಾನತ ರಾಮ॥೭೯॥
ರತ್ನಲಸತ್ಪೀಠಾಸ್ಥಿತ ರಾಮ॥೮೦॥
ಪಟ್ಟಾಭಿಷೇಕಾಲಂಕೃತ ರಾಮ॥೮೧॥
ಪಾರ್ಥಿವಕುಲಸಮ್ಮಾನಿತ ರಾಮ॥೮೨॥
ವಿಭೀಷಣಾರ್ಪಿತರಂಗಕ ರಾಮ॥೮೩॥
ಕೀಶಕುಲಾನುಗ್ರಹಕರ ರಾಮ॥೮೪॥
ಸಕಲಜೀವಸಂರಕ್ಷಕ ರಾಮ॥೮೫॥
ಸಮಸ್ತಲೋಕಾಧಾರಕ ರಾಮ॥೮೬॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಉತ್ತರಕಾಂಡಃ॥
ಆಗತಮುನಿಗಣಸಂಸ್ತುತ ರಾಮ॥೮೭॥
ವಿಶ್ರುತದಶಕಂಠೋದ್ಭವ ರಾಮ॥೮೮॥
ಸಿತಾಲಿಂಗನನಿರ್ವೃತ ರಾಮ॥೮೯॥
ನೀತಿಸುರಕ್ಷಿತಜನಪದ ರಾಮ॥೯೦॥
ವಿಪಿನತ್ಯಾಜಿತಜನಕಜ ರಾಮ॥೯೧॥
ಕಾರಿತಲವಣಾಸುರವಧ ರಾಮ॥೯೨॥
ಸ್ವರ್ಗತಶಂಬುಕಸಂಸ್ತುತ ರಾಮ॥೯೩॥
ಸ್ವತನಯಕುಶಲವನಂದಿತ ರಾಮ॥೯೪॥
ಅಶ್ವಮೇಧಕ್ರತುದೀಕ್ಷಿತ ರಾಮ॥೯೫॥
ಕಾಲಾವೇದಿತಸುರಪದ ರಾಮ॥೯೬॥
ಆಯೋಧ್ಯಕಜನಮುಕ್ತಿದ ರಾಮ॥೯೭॥
ವಿಧಿಮುಖವಿಬುಧಾನಂದಕ ರಾಮ॥೯೮॥
ತೇಜೋಮಯನಿಜರೂಪಕ ರಾಮ॥೯೯॥
ಸಂಸೃತಿಬಂಧವಿಮೋಚಕ ರಾಮ॥೧೦೦॥
ಧರ್ಮಸ್ಥಾಪನತತ್ಪರ ರಾಮ॥೧೦೧॥
ಭಕ್ತಿಪರಾಯಣಮುಕ್ತಿದ ರಾಮ॥೧೦೨॥
ಸರ್ವಚರಾಚರಪಾಲಕ ರಾಮ॥೧೦೩॥
ಸರ್ವಭವಾಮಯವಾರಕ ರಾಮ॥೧೦೪॥
ವೈಕುಂಠಾಲಯಸಂಸ್ಥಿತ ರಾಮ॥೧೦೫॥
ನಿತ್ಯಾನಂದಪದಸ್ಥಿತ ರಾಮ॥೧೦೬॥
ರಾಮ ರಾಮ ಜಯ ರಾಜಾ ರಾಮ॥೧೦೭॥
ರಾಮ ರಾಮ ಜಯ ಸೀತಾ ರಾಮ॥೧೦೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಇತಿ ನಾಮರಾಮಾಯಣಂ ಸಂಪೂರ್ಣಂ॥

*************************

 ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳು
Wishes of Safe and Happy Shrirama navami to everyone
 

**************************

ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ.. ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು🕉️🙏ಜೈ ಶ್ರೀ ರಾಮ

**************************

🌸On this holy occasion of Rama Navami, I am wishing that blessings of Shri Rama be with you. Your heart and home be filled with happiness, peace and prosperity. Happy Ram Navami🌸

**************************

ಮಾನ್ಯರೇ, ಸರ್ವರಿಗೂ ಶ್ರೀ ರಾಮ ನವಮಿ ಶುಭಾಶಯಗಳು ಸಾಮಾನ್ಯ ವಾಗಿ ನಾವು ಪಠಿಸುವ ಶ್ರೀ ರಾಮ ಶ್ಲೋಕದ ಅರ್ಥ ಈ ಶುಭದಿನದಲ್ಲಿ ತಿಳಿಯುವ ಪ್ರಯತ್ನ ......     **_ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
    ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ|||**

ರಾಮ - ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ರಾಮಾ ಎಂದು ಕರೆಯುತ್ತಿದ್ದನಂತೆ.

ರಾಮಚಂದ್ರ - ಇನ್ನು ತಾಯಿಯಾದ ಕೌಸಲ್ಯೆ ಮಗನನ್ನು  ವಾತ್‌ಲ್ಯದಿಂದ ರಾಮಭದ್ರ ಎನ್ನುತ್ತಿದ್ದಳಂತೆ.

ರಾಮಚಂದ್ರ - .ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು. ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ ಸಮಾಧಾನಪಡಿಸಿದ್ದರು.!

ವೇಧಸೇ - ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದೂ, ವೇದಪ್ರತಿಪಾದ್ಯನೆಂದೂ ತಿಳಿದು ವೇಧಸೇ ಎಂದು ಕರೆಯುತ್ತಿದ್ದರು.

ರಘುನಾಥ - ಅಯೋಧ್ಯೆಯ ಪುರಜನರೆಲ್ಲಾ ರಘುವಂಶದ ಅತ್ಯಂತ ಸಮರ್ಥ ರಾಜ ಎಂಬರ್ಥದಲ್ಲಿ ರಘುನಾಥ ಎಂದು ಕರೆಯುತ್ತಿದ್ದರು.

ನಾಥ -  ಸೀತಾದೇವಿ ಮಾತ್ರ. ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು. ಏಕಪತ್ನೀ ವ್ರತಸ್ಥ ರಾಮಚಂದ್ರನನ್ನು ನಾಥ ಎನ್ನುತ್ತಿದ್ದಳು.

ಸೀತಾಪತಯೇ ನಮಃ: -  ಜನಕರಾಜಾದಿ ಮಿಥಿಲೆಯ ಜನರೆಲ್ಲರೂ ’ನಮ್ಮ ಸೀತೆಯ ಗಂಡ’ ಎಂಬ ಅಭಿಮಾನದಿಂದ ಸೀತಾಯ ಪತಯೇ ಎನ್ನುತ್ತಿದ್ದರು. 

************************

||ರಾಮನಾಮ ಪಾಯಸಕ್ಕೆ
ಕೃಷ್ಣನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ
||ಬಾಯಿ ಚಪ್ಪರಿಸಿರೊ|| ||

||ಒಮ್ಮನ ಗೋಧಿಯ ತಂದು
ವೈರಾಗ್ಯ ಕಲ್ಲಲಿ ಬೀಸಿ||
||ಸುಮ್ಮನೆ ಸಜ್ಜಿಗೆ ತೆಗೆದು
ಸಣ್ಣ ಶಾವಿಗೆಯ ಮಾಡಿರೊ||

||ರಾಮನಾಮ ಪಾಯಸಕ್ಕೆ||

||ಹೃದಯವೆಂಬೊ ಮಡಿಕೆಯಲ್ಲಿ
ಭಾವವೆಂಬೊ ಎಸರು ಇಟ್ಟು||
||ಬುದ್ದಿಯಿಂದ ಪಕ್ವವ ಮಾಡಿ ಅರಿವಾಣದಿ ಬಡಿಸಿಕೊಂಡು||
||ಆನಂದ ಆನಂದವೆಂಬೊ
ತೇಗು ಬಂದಾಗ
ಎರಡು ತೇಗು ಬಂದಾಗ||
||ಆನಂದಮೂರುತಿ ನಮ್ಮ
ಪುರಂದರವಿಠಲನ ನೆನೆಯಿರೊ||

||ರಾಮನಾಮ ಪಾಯಸಕ್ಕೆ||

*******************

ಶ್ರೀ ರಾಮಚಂದ್ರನ ವಂಶವೃಕ್ಷ

ಬ್ರಹ್ಮನ ಮಗ ಮರೀಚಿ

ಮರೀಚಿಯ ಮಗ ಕಾಶ್ಯಪ

ಕಾಶ್ಯಪರ ಮಗ ಸೂರ್ಯ

ಸೂರ್ಯನ ಮಗ ಮನು

ಮನುವಿನ ಮಗ ಇಕ್ಷ್ವಾಕು

ಇಕ್ಷ್ವಾಕುವಿನ ಮಗ ಕುಕ್ಷಿ

ಕುಕ್ಷಿಯ ಮಗ ವಿಕುಕ್ಷಿ

ವಿಕುಕ್ಷಿಯ ಮಗ ಬಾಣ

ಬಾಣನ ಮಗ ಅನರಣ್ಯ

ಅನರಣ್ಯನ ಮಗ ಪೃಥು

ಪೃಥುವಿನ ಮಗ ತ್ರಿಶಂಕು

ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)

ದುಂಧುಮಾರುವಿನ ಮಗ ಮಾಂಧಾತ

ಮಾಂಧಾತುವಿನ ಮಗ ಸುಸಂಧಿ

ಸುಸಂಧಿಯ ಮಗ ಧೃವಸಂಧಿ

ಧೃವಸಂಧಿಯ ಮಗ ಭರತ

ಭರತನ ಮಗ ಅಶೀತಿ

అಶೀತಿಯ ಮಗ ಸಗರ

ಸಗರನ ಮಗ ಅಸಮಂಜಸ

ಅಸಮಂಜಸನ ಮಗ ಅಂಶುಮಂತ

ಅಂಶುಮಂತನ ಮಗ ದಿಲೀಪ

ದಿಲೀಪನ ಮಗ ಭಗೀರಥ

ಭಗೀರಥನ ಮಗ ಕಕುತ್ಸು

ಕಕುತ್ಸುವಿನ ಮಗ ರಘು

ರಘುವಿನ ಮಗ ಪ್ರವುರ್ಧ

ಪ್ರವುರ್ಧನ ಮಗ ಶಂಖನು

ಶಂಖನುವಿನ ಮಗ ಸುದರ್ಶನ

ಸುದರ್ಶನನ ಮಗ ಅಗ್ನಿವರ್ಣ

ಅಗ್ನಿವರ್ಣನ ಮಗ ಶೀಘ್ರವೇದ

ಶೀಘ್ರವೇದನ ಮಗ ಮರು

ಮರುವಿನ ಮಗ ಪ್ರಶಿಷ್ಯಕ

ಪ್ರಶಿಷ್ಯಕನ ಮಗ ಅಂಬರೀಶ

ಅಂಬರೀಶನ ಮಗ ನಹುಶ

ನಹುಶನ ಮಗ ಯಯಾತಿ

ಯಯಾತಿಯ ಮಗ ನಾಭಾಗ

ನಾಭಾಗನ ಮಗ ಅಜ

ಅಜನ ಮಗ ದಶರಥ

ದಶರಥನ ಮಗ ರಾಮ

Happy ಶ್ರೀ ರಾಮ ನವಮಿ. 

**********************

ಆಪದಾಮಪಹರ್ತಾರಂ ದಾತರಾಂ ಸರ್ವಸಂಪದಾಂ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ ||

ರಾಮಾಯ ರಾಮ ಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯ ಪತಯೇ ನಮ: ||

ನೀಲಾಂಬುಜ ಶ್ಯಾಮಲಾ ಕೋಮಲಾಂಗಂ  ಸೀತಾಸಮರೋಪಿತ ವಾಮಭಾಗಂ |
ಪಾಣೌ ಮಹಾಸಾಯಕಚಾರುಚಾಪಂ ನಮಾಮಿ ರಾಮಂ ರಘುವಂಶನಾಥಂ ||

ಮಾತಾ ರಾಮೋ ಮತ್ಪತಿತಾ ರಾಮಚಂದ್ರ: ಭ್ರಾತಾ ರಾಮೋ ಮತ್ಸಖಾ ರಾಘವೇಶ: |
ಸರ್ವಸ್ವಂ ಮೇ ರಾಮಚಂದ್ರೋದಯಾಲು: ನಾನ್ಯಂ ದೈವಂ ನೈವ ಜಾನೇ ನ ಜಾನೇ ||

ನಮೋಸ್ತು ರಾಮಾಯ ಸಲಕ್ಷಣಾಯ ದೇವೈ: ಚ ತಸ್ಮೈ ಜನಕಾತ್ಮಜಾಯೈ |
ನಮೋಸ್ತು ರುದ್ರೇಂದ್ರ ಯಮಾನಿಲೇಭ್ಯೋ ನಮಸ್ತು ಚಂದ್ರಾರ್ಕ ಮರುದ್ಗೇಣೇಭ್ಯ: ||

🙏🙏ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು, ರಾಮಚಂದ್ರಪ್ರಭು ಸಕಲರಿಗೂ ಆರೋಗ್ಯ ಭಾಗ್ಯ ದಯಪಾಲಿಸಲಿ, ಶುಭವಾಗಲಿ🙏🙏
 
*********

ಶ್ರೀ ರಾಮನವಮಿ ಆಚರಣೆಯ ಆಧ್ಯಾತ್ಮಿಕ ಮಹತ್ವವೇನು ಗೊತ್ತಾ?
 ‌                                                                            

ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ. 
                                                          
*​ಪೌರಾಣಿಕ ಹಿನ್ನೆಲೆ*

ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

*ರಾಮನವಮಿಯ ಮಹತ್ವ*

ಶ್ರೀರಾಮನು ಜನಿಸಿದ ದಿನವೆಂದು ಆಚರಿಸಲಾಗುವ ಹಬ್ಬ ರಾಮನವಮಿ. ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ.

ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ಶ್ರೀರಾಮತತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಪ ಜಪ, ಶ್ರೀರಾಮನ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.

*ರಾಮನವಮಿಯ ಆಧ್ಯಾತ್ಮಿಕ ಮಹತ್ವ*
                                                                             ರಾಮ ಎನ್ನುವ ಎರಡು ಅಕ್ಷರದಲ್ಲಿ ಮಹತ್ವಪೂರ್ಣವಾದ ಅರ್ಥವಿದೆ 'ರಾ' ಎಂದರೆ ಬೆಳಕು 'ಮ' ಎಂದರೆ ಒಳಗೆ. ಅಂದರೆ ನಿಮ್ಮೊಳಗಿನ ದೈವಿಕ ಬೆಳಕು ರಾಮ.

ದಶರಥ: ಶ್ರೀರಾಮನ ತಂದೆ ದಶರಥ 'ದಶ' ಎಂದರೆ ಹತ್ತು, 'ರಥ' ಎಂದರೆ ರಥ. ಹತ್ತು ರಥಗಳು ಎಂದರೆ ಐದು ಕಾರ್ಯ ಇಂದ್ರಿಯಗಳು. ಇದನ್ನು ಕರ್ಮೇಂದ್ರಿಯಗಳು ಎಂದೂ ಕರೆಯುತ್ತಾರೆ. ಇದರಲ್ಲಿ ಮಾತನಾಡುವ ಸಾಮರ್ಥ್ಯ, ಕೈಗಳು, ಕಾಲುಗಳು, ಚಲಿಸುವ ಭಾಗಗಳು ಹಾಗೂ ಜನನಾಂಗಗಳು ಸೇರಿವೆ. ಉಳಿದವು ಐದು ಜ್ಞಾನೇಂದ್ರಿಗಳು ಇದರಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಪ್ರಜ್ಞೆ ಸೇರಿದೆ.

ಕೌಸಲ್ಯಾ: ಕೌಸಲ್ಯೆ ರಾಮನ ತಾಯಿ. ಕೌಸಲ್ಯಾ ಹೆಸರಿನ ಅರ್ಥ 'ಕೌಶಲ್ಯ' . ಒಬ್ಬ ನುರಿತ ರಥಿಕನು ಹತ್ತು ರಥಗಳನ್ನು ಸವಾರಿ ಮಾಡುತ್ತಾನೆ. ಇಂತಹ ಶಕ್ತಿಯು ರಾಮನಲ್ಲಿದೆ.

ಆಯೋಧ್ಯೆ: ಶ್ರೀರಾಮನು ಜನಿಸಿದ ಸ್ಥಳ. 'ಯೋಧ್ಯಾ' ಎಂದರೆ ಯುದ್ಧ, 'ಅ' ಎಂದರೆ ಯುದ್ಧದ ಋಣಾತ್ಮಕ ಪೂರ್ವಪ್ರತ್ಯಯ. ಅಂದರೆ ಯುದ್ಧವಿಲ್ಲದ, ಸಮೃದ್ಧಿ ಹಾಗೂ ನ್ಯಾಯಯುತವಾಗಿರುವ ಸ್ಥಳವನ್ನು ಅಯೋಧ್ಯೆ ಎಂದು ಕರೆಯುತ್ತಾರೆ.

*ಶ್ರೀರಾಮನ ಕುರಿತಾಗಿರುವ ಅಚ್ಚರಿಯ ಸಂಗತಿಗಳು ಏನು ಗೊತ್ತಾ?*

​ನಮ್ಮೊಳಗಿರುವ ಶ್ರೀ ರಾಮ
ಸತ್ಯಯುಗದಲ್ಲಿ ವಿವಿಧ ಗ್ರಹಗಳ ದೇವರು ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದವು. ತ್ರೇತಾಯುಗದಲ್ಲಿ ಒಂದೇ ಗ್ರಹದಲ್ಲಿ ವಾಸಿಸುತ್ತಿದ್ದ ದೇವರು ಮತ್ತು ಅಸುರರ ಮಧ್ಯೆ ಯುದ್ಧ ನಡೆದವು. ಅಂದರೆ ಅಯೋಧ್ಯೆಯಿಂದ ರಾಮ ಹಾಗೂ ಲಂಕೆಯ ರಾವಣನ ಮಧ್ಯೆ ಯುದ್ಧ ನಡೆಯಿತು. ದ್ವಾಪರ ಯುಗದಲ್ಲಿ ಒಂದೇ ಕುಟುಂಬದಲ್ಲಿರುವ ಜನರ ಮಧ್ಯೆ ಯುದ್ಧಗಳು ನಡೆದವು. ಅಂದರೆ ಪಾಂಡವರು ಮತ್ತು ಕೌರವರ ಮಧ್ಯೆ. ಕಲಿಯುಗದಲ್ಲಿ ಯುದ್ಧಗಳು ನಮ್ಮೊಳಗೇ ನಡೆಯುತ್ತಿವೆ.

ರಾಮನು ನಮ್ಮ ಆತ್ಮವಾದರೆ, ಸೀತೆಯು ನಮ್ಮ ಮನಸ್ಸು, ಹನುಮಾನ್‌ ನಮ್ಮ ಜೀವಶಕ್ತಿಯಾದರೆ ರಾವಣನು ನಮ್ಮ ಅಹಂ. ಅಹಂ ಮನಸ್ಸನ್ನು ಆವರಿಸಿಕೊಂಡಾಗ ನಮ್ಮ ಆತ್ಮವು ಪ್ರಕ್ಷುಬ್ಧಗೊಳ್ಳುತ್ತದೆ. ಮನಸ್ಸು ಮತ್ತು ಆತ್ಮವನ್ನು ಸಮನತ್ವಯಗೊಳಿಸಲು, ಧ್ಯಾನ ಮಾಡಿ, ಉಸಿರಾಟದ ಮೂಲಕ ನಮ್ಮ ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಬಹುದು. ರಾಮ ಮತ್ತು ಸೀತೆ ಒಂದಾದರೆ ಅಹಂ ನಾಶವಾಗುತ್ತದೆ.

*​ರಾಮ ನವಮಿಯ ಆಚರಣೆ*
                                                                                    ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ.ಈ ದಿನದಂದು ಉಪವಾಸವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ರಾಮನವಮಿಯಂದು ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಕೈಗೊಳ್ಳಬೇಕು. ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀ ರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡಬಹುದು.

ಕೆಲವೆಡೆ ಪ್ರತಿಪಾದದಿಂದ ನವಮಿಯವರೆಗೂ ಒಂಭತ್ತು ದಿನಗಳಲ್ಲಿ ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುತ್ತಾರೆ.ಈ ದಿನ ಕೆಲವು ಭಕ್ತರು ಕಟ್ಟುನಿಟ್ಟಾದ ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ನಿರಾಹಾರ ಉಪವಾಸವನ್ನೂ ಮಾಡುವವರಿದ್ದಾರೆ. ಕೆಲವರು ಸೌಮ್ಯವಾದ ಉಪವಾಸವನ್ನು ಆಚರಿಸಿ, ನೀರು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ರಾಮನವಮಿಯಂದು ಶ್ರೀರಾಮನ 
ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ. ‌   ‌      ‌    ‌    ‌       ‌   ‌     ‌                               ‌    ‌              ‌ಧರ್ಮವನ್ನು ರಕ್ಷಿಸಲು ಮತ್ತು ಉತ್ತಮ ನಡತೆಯ ಮಾದರಿಯನ್ನು ಹೊಂದಿಸಲು ಅವರು ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟರು, ಅವರು ತಮ್ಮನ್ನು ತಾವು ಆದರ್ಶ ಪುರುಷ ಎಂದು ಜೀವನದುದ್ದಕ್ಕೂ ನೋಡಿಕೊಂಡರು. ಈ ಕಾರಣದಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದು ಕರೆಯುತ್ತಾರೆ. ಕಷ್ಟಕಾಲದಲ್ಲಿಯೂ ಶ್ರೀರಾಮನು ಧರ್ಮ ಮಾರ್ಗವನ್ನು ಅರ್ಧಕ್ಕೆ ಬಿಡದೆ ಸಮಾಜದ ಮುಂದೆ ತಾನೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಸಾಬೀತುಪಡಿಸಿದನು.

*ರಾಮ ನವಮಿಯ ಪೂಜೆ ವಿಧಾನ:*
- ರಾಮ ನವಮಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿದ ನಂತರ ಶುಭ್ರವಾದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಉಪವಾಸದ ಪ್ರತಿಜ್ಞೆ ಮಾಡಿ. ಇದರೊಂದಿಗೆ ಗಂಗಾಜಲವನ್ನು ಸಿಂಪಡಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.

- ರಾಮನ ಪೂಜೆಯಲ್ಲಿ ತುಳಸಿ ಪತ್ರೆಗಳು ಮತ್ತು ಕಮಲದ ಹೂವು ಕಡ್ಡಾಯವಾಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

- ಮರದ ಪೀಠವನ್ನು ತೆಗೆದುಕೊಂಡು, ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ರಾಮನು ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವನ್ನು ಅಥವಾ ವಿಗ್ರಹವನ್ನು ಸ್ಥಾಪಿಸಿ.

- ಇದರ ನಂತರ ಗಂಗಾಜಲವನ್ನು ಸಿಂಪಡಿಸಿ ಮತ್ತು ಅಕ್ಕಿಯಿಂದ ಅಷ್ಟದಳವನ್ನು ಮಾಡಿ. ಅಷ್ಟದಳದ ಮೇಲೆ ತಾಮ್ರದ ಕಲಶವನ್ನು ಇಟ್ಟು ನಾಲ್ಕು ಮುಖದ ದೀಪವನ್ನು ಬೆಳಗಿಸಿ.

- ಬೇಕಿದ್ದರೆ ತೊಟ್ಟಿಲಿನಲ್ಲಿ ಬಾಲ ರಾಮನ ಅಥವಾ ರಾಮ ಲೀಲೆಯ ವಿಗ್ರಹವನ್ನು ಇಟ್ಟು ತೂಗಿ, ನಂತರ ರಾಮನಿಗೆ ಆರತಿಯನ್ನು ಮಾಡಬೇಕು ಅಥವಾ ವಿಷ್ಣು ಸಹಸ್ರನಾಮ ಪಠಿಸಬಹುದು. ಇದರ ನಂತರ, ಖೀರ್ ಅಂದರೆ ಪಾಯಸ, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.

- ಈ ದಿನ ನೀವು ರಾಮನ ಭಕ್ತಿಯಲ್ಲಿ ಮುಳುಗಿ ಕೀರ್ತನೆಯನ್ನು ಹಾಡಬಹುದು. ಹಾಗೂ ಈ ದಿನ ರಾಮಚರಿತ ಮಾನಸ ಮತ್ತು ರಾಮ ಸ್ತೋತ್ರವನ್ನು ಸಹ ಪಠಿಸಬಹುದು. ಇದರೊಂದಿಗೆ ಸಂಜೆ ರಾಮನಿಗೆ ಸಂಬಂಧಿಸಿದ ಕಥೆಯನ್ನು ಕೂಡ ಕೇಳಿ.

- ರಾಮನವಮಿ ಉಪವಾಸವನ್ನು ಆಚರಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಇದು ಶ್ರೀರಾಮನ ಆಶೀರ್ವಾದವನ್ನು ಪಡೆದುಕೊಳ್ಳಲು ಕೂಡ ಹೆಚ್ಚು ಸಹಕಾರಿಯಾಗಿದೆ.

ರಾಮ ನವಮಿಯಂದು ಈ ಮೇಲಿನಂತೆ ರಾಮನನ್ನು ಪೂಜಿಸುವುದರಿಂದ ಅಥವಾ ರಾಮ ನವಮಿ ವ್ರತವನ್ನು ಆಚರಿಸುವುದರಿಂದ ಭಗವಾನ್‌ ರಾಮನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ರಾಮ ನವಮಿ ದಿನದಂದು ಶುಭ ಮುಹೂರ್ತದಲ್ಲಿ ರಾಮನನ್ನು ಪೂಜಿಸಿದರೆ ಪೂಜೆಯ ಫಲ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುವುದು ವಾಡಿಕೆ.

Dasara Wishes - Kannada Greetings collections

Our wholehearted Dasara festival wishes to our thinkbangalore community and followers . We wish this occasion bring in more joy and prosperity in your life . 

Celebrate further by sharing a sweet message on this occasion from these kannada greetings collections. 


--*--*--*--

ಎಲ್ಲಾ ಬಂದು ಮಿತ್ರ ರಿಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮಾತೆ ದುರ್ಘದೇವಿ ಎಲ್ಲಾ ಕಾರ್ಯಗಳಿಗೆ ವಿಜಯವನ್ನು ತಂದು ಕೊಡಲಿ ಎಲ್ಲರಿಗೂ ಸುಖ ಶಾಂತಿ ನೆಮ್ಮದಿಯ ಸಂತೋಷದ ಜೀವನವನ್ನು ಕರುಣಿಸಲಿ ಶ್ರೀಮಾತೆಯ ಕೃಪೆ ಸದಾ ಎಲ್ಲರ ಮೇಲೆ ಇರಲಿ ಎಲ್ಲರಿಗೂ ಶುಭವಾಗಲಿ

--*--*--*--

ಸರ್ವರಿಗೂ *ವಿಜಯದಶಮಿಯ* ಹಾರ್ದಿಕ *ಶುಭಾಶಯಗಳು*.

ಶಮೀ ಪತ್ರೆಯ ವಿನಿಮಯದಿಂದ
ಬಂಧುತ್ವ ವೃದ್ಧಿಸಿ,
ತಾಪತ್ರಯಗಳು ದೂರಾಗಿ,ತಮ್ಮೆಲ್ಲರ ಬಾಳಿನಲ್ಲಿ ಸುಖ-ಶಾಂತಿ-ಆರೋಗ್ಯ-ಸಂಪತ್ತು-ಆಯಸ್ಸು ವೃದ್ಧಿಸಲಿ.

--*--*--*--




☘☘  ಬನ್ನಿ ☘☘
🍁ಬಾಳು ಬಂಗಾರವಾಗಲಿ🍁
   🌹ಪ್ರೀತಿ  ಪವಿತ್ರವಾಗಲಿ🌹
  🌸ಸ್ನೇಹಚಿರಕಾಲವಿರಲಿ🌸  💐💐 ತಾಯಿ 💐💐
    💐ಚಾಮುಂಡೇಶ್ವರಿಯು💐
🌼ನಿಮಗು ನಿಮ್ಮ 🌼 ಕುಟುಂಬದವರಿಗೂ
  🌺ಆರೋಗ್ಯ, ಸುಖ ಸಂಪತ್ತು
   ನೀಡಲೇಂದು ಹಾರೈಸುತ್ತ🌺 
        ☘☘ದಸರಾ ಹಬ್ಬದ☘☘
🌺ಹಾರ್ದಿಕ ಶುಭಾಷಯ🌺
      ☘☘🙏🏻🙏🏻☘☘

--*--*--*--

ಈ ವಿಜಯದಶಮಿ 10 ವಿಜಯಗಳನ್ನು ನಮ್ಮ ಜೀವನದಲ್ಲಿ ಸಾಧಿಸಬೇಕು 
*ಸ್ವಾರ್ಥವನ್ನು ಸೇವಾಮನೋಭಾವ ಗೆಲ್ಲಲಿ.
*ದೃಪ್ತತೆಯನ್ನು ದೈವೀ ಬಲ ಗೆಲ್ಲಲಿ.
* ಕಾಮವನ್ನು ಸದಾಚಾರ ಗೆಲ್ಲಲಿ.
* ಆಲಸ್ಯವನ್ನು ಕರ್ತವ್ಯ ನಿಷ್ಠೆ ಗೆಲ್ಲಲಿ.
* ಮನೋ ದೌರ್ಬಲ್ಯವನ್ನು ಗುರುವಿಶ್ವಾಸ ಗೆಲ್ಲಲಿ.
* ನೀಚನಮ್ರತೆಯನ್ನು ಹರಿಭಕ್ತಿಯು ಗೆಲ್ಲಲಿ.
* ಅಂಧಾನುಕರಣೆಯನ್ನು ಪರಿಪಕ್ವ ಜ್ಞಾನವು ಗೆಲ್ಲಲಿ.
* ಅಜ್ಞಾನವನ್ನು ಗುರು ಶುಶ್ರೂಷೆ ಗೆಲ್ಲಲಿ
* ಆಪತ್ತುಗಳನ್ನು ಪಾರಾಯಣಗಳು ಗೆಲ್ಲಲಿ.
* ಮಾತ್ಸರ್ಯವನ್ನು ಸ್ನೇಹ ಗೆಲ್ಲಲಿ
ಈ ಹತ್ತು ವಿಜಯಗಳ ಸಂಪತ್ತು ನಿಮ್ಮ ಚಿತ್ತಕ್ಕೆ ಮತ್ತೆ ಮತ್ತೆ ಬರುತ್ತಿರಲಿ.
ವಿಜಯದಶಮಿಯ ಶುಭಾಶಯಗಳು😇

--*--*--*--

ನಿಮಗೂ &  ನಿಮ್ಮ ಕುಟುಂಬದವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಾರ್ಧಿಕ ಶುಭಾಶಯಗಳು🌻

--*--*--*--

ನಿಮಗೂ ಮತ್ತು ನಿಮ್ಮ ಮನೆಯವರಿಗೆಲ್ಲ ಆಯುಧ ಪೂಜಾ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು, ಭಗವಂತನು  ನಿಮಗೆಲ್ಲ  ಆಯುರಾರೋಗ್ಯ, ಸುಖ -ಸಂತೋಷ, ಅಭಿವೃದ್ಧಿ ಕರುಣಿಸಿ, ಎಲ್ಲರ ಮನೋಕಾಮನೆಗಳನ್ನು ಈಡೇರಿಸಲೆಂದು ಪ್ರಾರ್ಥಿಸುವೆ....✍ಬನ್ನಿ ತೆಗೆದುಕೊಂಡು ಬಂಗಾರದಂತೆ ಇರೋಣ.🙏 

--*--*--*--

ಎದೆಯಲ್ಲಿ  ಆತ್ಮವಿಶ್ವಾಸವಿದ್ಧರೆ ಅದೇ  ಆಯುಧ , ಮುಖದಲ್ಲಿ ನಗುವಿದ್ದರೆ ಅದೇ ವಿಜಯ , ಎರಡೂ ಸದಾ ನಿಮ್ಮಲಿದ್ಧು ನವಚೈತನ್ಯ ನೀಡಲಿ , ನಿಮ್ಮ ಬದುಕೆಂಬ ಜಂಬೂಸವಾರಿಯೂ ದಸರಾ  ದರ್ಬಾರ್ ನಂತೆ ಸದಾ ಇರಲಿ . ನಿಮಗೂ ನಿಮ್ಮ ಕುಟುಂಬಕ್ಕೂ ಆಯುಧ ಪೂಜೆ ಹಾಗು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏

--*--*--*--
 
ಸರ್ವರಿಗೂ ನಾಡ ಹಬ್ಬ ವಿಜಯ ದಶಮಿ ಶುಭಾಶಯಗಳು 🙏💕🙏
ತಾಯಿ ಶ್ರೀ ಚಾಮುಂಡೇಶ್ವರಿಯು
ಸರ್ವ ಜೀವಿಗಳ ಕಷ್ಟಗಳನ್ನು ಸಂಹರಿಸಲೆಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುವೆ. 🌹🙏🌹🙏
 
 --*--*--*--

May all the evils and negative energies in your life with the celebrations of Vijaya Dashami . Wishing you and your family a Happy Dussehra

--*--*--*--
 
May this Dasara light up you with the hopes of Happy times and dreams for a year full of smile . Happy Dasara

--*--*--*--
 
Happy Dussehra . On this special day , as you celebrate valor and courage , triumph of good over evil. Wish you Success and happiness in everything you do.  
 
--*--*--*--
 
Ram is your soul , Sita is your heart . Ravan is your mind that steals your heart from your soul. Lakshman is your consciousness always with you and active on your behalf. Hanuman is your intuition and courage that helps retrieve your heart to re-animate your soul. Happy Dasara 
 
--*--*--*--
 
A time for celebrations , A time for victory of good over bad , A time when world see the example of power of good. Lets continue the same true spirit . Blessing of Dussehra. Happy Dussehra
 
--*--*--*--
 

Terms | Privacy | 2024 🇮🇳
–>