-->

ನೈತಿಕ ಕಥೆ - ಎರಡು ತೊಲೆ ಮಾಂಸ - Moral story

 ಮಗಧ ಸಾಮ್ರಾಟ ಬಿಂದುಸಾರನು ಒಮ್ಮೆ ತನ್ನ ಆಸ್ಥಾನದಲ್ಲಿ ಕೇಳಿದನು:

ದೇಶದ ಆಹಾರ ಸಮಸ್ಯೆಯನ್ನು ಪರಿಹರಿಸಲು
*ಎಲ್ಲಕ್ಕಿಂತ ಅಗ್ಗದ ವಸ್ತು ಯಾವುದು?*

ಮಂತ್ರಿಗಳು ಮತ್ತು ಇತರ ಸದಸ್ಯರು ಯೋಚನೆಯಲ್ಲಿ ಮುಳುಗಿದರು. ಅಕ್ಕಿ, ಗೋಧಿ, ಜೋಳ, ನವಣೆ, ಸೆಜ್ಜೆ, ಮುಂತಾದವು ಬಹಳ ಪರಿಶ್ರಮದಿಂದ ಸಿಗುತ್ತವೆ, ಅದು ಕೂಡ ಪ್ರಕೃತಿ ವಿಕೋಪ ಇಲ್ಲವಾದರೆ. ಇಂತಹ ಸ್ಥಿತಿಯಲ್ಲಿ ಆಹಾರ ಅಗ್ಗವಾಗಲಾರದು. 
 

 
 
 ಆಗ ಬೇಟೆಯ ಹುಚ್ಚು ಇರುವ ಸಾಮಂತನೊಬ್ಬ ಹೇಳಿದ:
ರಾಜಾ,
*ಎಲ್ಲಕ್ಕಿಂತ ಅಗ್ಗದ ಆಹಾರ ಮಾಂಸ!*

ಇದನ್ನು ಪಡೆಯಲು ಪರಿಶ್ರಮ ಕಡಿಮೆ ಸಾಕು ಮತ್ತು ಪೌಷ್ಟಿಕ ಆಹಾರವೂ ತಿನ್ನಲು ಸಿಗುತ್ತದೆ. ಎಲ್ಲರೂ ಇದನ್ನು ಸಮರ್ಥಿಸಿದರು.

ಆದರೆ ಪ್ರಧಾನ ಮಂತ್ರಿ ಚಾಣಕ್ಯ ಸುಮ್ಮನಿದ್ದನು.

ಸಾಮ್ರಾಟನು ಅವನನ್ನು ಕೇಳಿದ:
ತಾವು ಇದರ ಬಗ್ಗೆ ಏನು ಹೇಳುತ್ತೀರಾ?

ಚಾಣಕ್ಯನು ಹೇಳಿದ:  ನಾನು ನನ್ನ ವಿಚಾರವನ್ನು ನಾಳೆ ತಮ್ಮ ಮುಂದೆ ಇಡುವೆನು.

ರಾತ್ರಿಯಾದ ಮೇಲೆ ಪ್ರಧಾನ ಮಂತ್ರಿ ಚಾಣಕ್ಯನು ಆ ಸಾಮಂತನ ಮನೆಗೆ ಹೋದ. ಸಾಮಂತ ಬಾಗಿಲು ತೆರೆದು ಇಷ್ಟು ರಾತ್ರಿಯಲ್ಲಿ ಪ್ರಧಾನ ಮಂತ್ರಿ ತನ್ನ ಮನೆಗೆ ಬಂದುದನ್ನು ನೋಡಿ ಗಾಬರಿಗೊಂಡನು!

ಚಾಣಕ್ಯನು ಹೇಳಿದನು:
ಸಂಜೆ ಹೊತ್ತಿಗೆ ಮಹಾರಾಜರು ಒಮ್ಮೆಲೆ ಕಾಯಿಲೆ ಬಿದ್ದರು. ರಾಜವೈದ್ಯರು ಅವರ ಔಷಧಕ್ಕೆ ಯಾರಾದರೂ ದೊಡ್ಡ ಮನುಷ್ಯರ ಹೃದಯದ ಮಾಂಸ ಎರಡು ತೊಲೆ ಸಿಕ್ಕಿದರೆ ರಾಜರ ಪ್ರಾಣ ಉಳಿಯಬಹುದೆಂದು ಹೇಳಿದ್ದಾರೆ.
ಆದ್ದರಿಂದ ನಿಮ್ಮ ಹೃದಯದ 💓 ಕೇವಲ ಎರಡು ತೊಲೆ ಮಾಂಸ ಪಡೆಯಲು ಬಂದಿದ್ದೇನೆ. ಇದಕ್ಕಾಗಿ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ನೀವು ಪಡೆಯಬಹುದು.

ಇದನ್ನು ಕೇಳುತ್ತಲೇ ಸಾಮಂತನ ಮುಖ ಬಿಳುಚಿಕೊಂಡಿತು! ಅವನು ಚಾಣಕ್ಯನ ಕಾಲು ಹಿಡಿದು ಕ್ಷಮೆ ಕೇಳಿದ.
*ಅದಕ್ಕೆ ಬದಲಾಗಿ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ಕೊಟ್ಟು ಈ ಹಣದಿಂದ ಬೇರೆ ಯಾರಾದರೂ ಸಾಮಂತರ ಹೃದಯದ ಮಾಂಸ ತೆಗೆದುಕೊಳ್ಳಲು ಹೇಳಿದ.*

ಅದೇ ರೀತಿ ಚಾಣಕ್ಯನು ಅವನನ್ನು ಸಮರ್ಥಿಸಿದ ಎಲ್ಲಾ ಸಾಮಂತರ ಮತ್ತು ಸೇನಾಧಿಕಾರಿಗಳ ಹತ್ತಿರ ಹೋಗಿ ಕೇಳಿದ.

*ಎಲ್ಲರ ಹತ್ತಿರವೂ ಅವರ ಹೃದಯದ ಎರಡು ತೊಲೆ ಮಾಂಸ ಕೇಳಿದ. ಆದರೆ ಯಾರೂ ಕೊಡಲು ತಯಾರಿರಲಿಲ್ಲ. ಬದಲಾಗಿ ಎಲ್ಲರೂ ತಮ್ಮನ್ನು ಪಾರು ಮಾಡಲು ಚಾಣಕ್ಯನಿಗೆ ಒಂದು ಲಕ್ಷ, ಎರಡು ಲಕ್ಷ, ಐದು ಲಕ್ಷ, ಹೀಗೆ ಚಿನ್ನದ ನಾಣ್ಯಗಳನ್ನು ಕೊಟ್ಟರು.*

ಈ ರೀತಿ ಸುಮಾರು ಎರಡು ಕೋಟಿ ಚಿನ್ನದ ನಾಣ್ಯಗಳನ್ನು ಕಲೆ ಹಾಕಿ ಚಾಣಕ್ಯನು ಬೆಳಗಾಗುವುದರೊಳಗೆ ತನ್ನ ಮನೆಗೆ ತಲುಪಿದ. 

ಮರುದಿನ ಆಸ್ಥಾನದಲ್ಲಿ ಚಾಣಕ್ಯನು ಸಾಮ್ರಾಟನ ಮುಂದೆ ಎರಡು ಕೋಟಿ ಚಿನ್ನದ ನಾಣ್ಯಗಳನ್ನು ಇಟ್ಟುಬಿಟ್ಟ.

ಸಾಮ್ರಾಟನು ಕೇಳಿದ: ಇದೆಲ್ಲಾ ಏನು?

ಚಾಣಕ್ಯನು ಹೇಳಿದನು: ಎರಡು ತೊಲೆ ಮಾಂಸ ಕೊಂಡುಕೊಳ್ಳಲು
*ಇಷ್ಟು ಹಣ ಸಂಗ್ರಹವಾಯಿತು. ಆದರೂ ಎರಡು ತೊಲೆ ಮಾಂಸ ಸಿಗಲಿಲ್ಲ!*

ರಾಜಾ, ಈಗ ನೀವೇ ಸ್ವತಃ ವಿಚಾರ ಮಾಡಿ ಮಾಂಸ ಎಷ್ಟು ಅಗ್ಗವೆಂದು!

*ಜೀವನ ಅಮೂಲ್ಯ. ಯಾವ ರೀತಿ ನಮಗೆ ನಮ್ಮ ಜೀವದ ಮೇಲೆ ಆಸೆ ಇದೆಯೋ ಅದೇ ರೀತಿ ಎಲ್ಲಾ ಜೀವಿಗಳಿಗೂ ತಮ್ಮ ಜೀವದ ಮೇಲೆ ಆಸೆಯಿದೆ, ಆದರೆ ಅವು ತಮ್ಮ ಪ್ರಾಣ ಉಳಿಸಲು ಅಸಮರ್ಥವಾಗಿವೆ ಎಂಬುದನ್ನು ನಾವು ಮರೆಯಬಾರದು.*

ಮತ್ತೆ ಮನುಷ್ಯ ತನ್ನ ಪ್ರಾಣ ಉಳಿಸಲು ಎಲ್ಲಾ ರೀತಿಯಿಂದ ಪ್ರಯತ್ನಿಸುತ್ತಾನೆ. ಹೇಳಿ, ಸಂತಸ ಪಡಿಸಿ, ಹೆದರಿಸಿ, ಲಂಚ ಕೊಟ್ಟು, ಇತ್ಯಾದಿ!

*ಪ್ರಾಣಿಗಳು ಪಾಪ! ಹೇಳಲಾರವು, ತಮ್ಮ ದುಃಖವನ್ನು ತಿಳಿಸಲಾರವು!*

*ಹಾಗಾದರೆ ಈ ಕಾರಣಕ್ಕೆ ನಾವು ಅವುಗಳು ಜೀವಿಸುವ ಅಧಿಕಾರವನ್ನು ಕಸಿಯಬಹುದೇ?*

*ಶುದ್ಧ ಆಹಾರ, ಸಸ್ಯಾಹಾರ!*

- ಓದುಗರ ಲೇಖನ
–>