-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn Follow ThinkBangalore WhatsApp ChannelWhatsApp

Kaala gnana general knowledge about time calculation

ಪ್ರಾಚೀನ ಹಿಂದೂ ಪುರಾಣದ ಪ್ರಕಾರ

* ಒಂದು ದಿನ = 24 ಘಂಟೆ.
* ಒಂದು ಘಂಟೆ = 60 ನಿಮಿಷ.
* ಒಂದು ನಿಮಿಷ = 60 ಸೆಕುಂಡ್.
* ಒಂದು ಘಂಟೆ = 2 ವರೆ ಘಟಿ.
* ಒಂದು ನಿಮಿಷ = 2 ವರೆ ವಿಘಟಿ.  
* ಒಂದು ದಿನ = 60 ಘಟಿ
* ಒಂದು ಘಟಿ = 60 ವಿಘಟಿ
* ಒಂದು ಘಟಿ = 24 ನಿಮಿಷ.
* ಒಂದು ವಿಘಟಿ =24 ಸೆಕುಂಡ್.
* 1 ಮುಹೂರ್ತ= 48 ನಿಮಿಷಗಳು

* 15 ನಿಮೇಷ (ಒಂದು ಸಲ ಕಣ್ಣು ರೆಪ್ಪೆ ಬಡಿಯುವಷ್ಟು ಕ್ಷಣ ಕಾಲ. ಇದಕ್ಕೆ ನಿಮೇಷ ಅನ್ನುತ್ತಾರೆ.) = 1 ಕಾಷ್ಠಾ
* 30 ಕಾಷ್ಠಾ =  1ಕಲ
* 30 ಕಲ = 1 ಕ್ಷಣ
* 12 ಕ್ಷಣ. =  1 ಮುಹೂರ್ತ (48 ನಿಮಿಷಗಳು).

* 30 ಮುಹೂರ್ತ =  1ದಿನ = 1 ತಿಥಿ.
* 15 ದಿನ = 1 ಪಕ್ಷ.
* 2 ಪಕ್ಷ,  = 1 ಮಾಸ ( ತಿಂಗಳು)
* 2 ಮಾಸ =  1ಋತು.
* 6 ಋತು =  12 ಮಾಸ = 1ಸಂವತ್ಸರ
* 1 ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು,  ದಕ್ಷಿಣಾಯನ = ರಾತ್ರಿ) .
* 360 ಮನುಷ್ಯ ವರ್ಷ = 1 ದೇವ ವರ್ಷ.

* 4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ.
* 8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
* 12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
* 17,28,000 ಮನುಷ್ಯ ವರ್ಷ = ಕೃತಯುಗ ಅವಧಿ.

* 43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ

* 71 ಚತುರ್ಯುಗ = 1 ಮನ್ವಂತರ
* 14 ಮನ್ವಂತರ = ಬ್ರಹ್ಮನ 1 ಹಗಲು
* 14 ಮನ್ವಂತರ = ಬ್ರಹ್ಮನ 1 ರಾತ್ರಿ.
* 28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ
* 360 ಬ್ರಹ್ಮದಿನ = 1 ಬ್ರಹ್ಮ ವರ್ಷ
* 100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.
* 100ವರ್ಷ(864 ಕೋಟಿ×360×100) ಬ್ರಹ್ಮನ ಆಯುಷ್ಯ. ಇದಕ್ಕೆ ಪರ ಕಾಲ ಅನ್ನುವರು.
ಹೀಗೆ ಈ ಬ್ರಹ್ಮದೇವರ 100 ವರ್ಷ ಆಯುಷ್ಯ ' ಪರ' ಕಾಲ  *ಪರಮಾತ್ಮನಿಗೆ* ಒಂದು ಸಲ ಕಣ್ಣು ರೆಪ್ಪೆ ಬಡಿಯುವಷ್ಟು ಕ್ಷಣ ಕಾಲ. ಇದಕ್ಕೆ ನಿಮೇಷ ಅನ್ನುತ್ತಾರೆ.
* ಚತುರ್ಮುಖ ಬ್ರಹ್ಮನ ಆಯಸ್ಸು ಅಥವಾ ಸತ್ಯಲೋಕದ ಆಯಸ್ಸು 100 ವರ್ಷ. ಅಂದರೆ 864 ಕೋಟಿ X 360 X 100=31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ.  ಇದು ಬ್ರಹ್ಮದೇವರ ಸೃಷ್ಟಿ ಕಾಲ.

Kaala gnana general knowledge about time calculation


ನಂತರ  ರಾತ್ರಿ ಅಂದರೆ ಮಹಾಪ್ರಳಯ. ಈ ಮಹಾಪ್ರಳಯದ ಕಾಲ 31,104 ಸಾವಿರ ಕೋಟಿ ವರ್ಷ(ರಾತ್ರಿ).

ಪ್ರಳಯಗಳಲ್ಲಿ ಮೂರು ವಿಧ.
1. ಮನ್ವಂತರ ಪ್ರಳಯ;
2. ದಿನಪ್ರಳಯ;
3.ಮಹಾಪ್ರಳಯ. [ಈ ಮೂರು ಪ್ರಳಯಗಳಲ್ಲದೆ ಇನ್ನೂ ಅನೇಕ ಚಿಕ್ಕ ಪ್ರಳಯಗಳಾಗುತ್ತವೆ. ಯುಗ ಗಳಿಗೊಮ್ಮೆ ಚತುರ್ಯುಗಗಳಿಗೆ ಒಮ್ಮೆ, ಮನ್ವಂತರ ಗಳಿಗೆ ಒಮ್ಮೆ.....

ಮನ್ವಂತರ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುವುದಿಲ್ಲ-ಆದರೆ ನಾಗರೀಕತೆ ನಾಶವಾಗುತ್ತದೆ.

ದಿನಪ್ರಳಯ ಚತುರ್ಮುಖ ಬ್ರಹ್ಮನ ರಾತ್ರಿ. ಅಂದರೆ ಪ್ರತೀ 432 ಕೋಟಿ ವರ್ಷಕ್ಕೊಮ್ಮೆ ದಿನಪ್ರಳಯ. ಈ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುತ್ತದೆ.

ನಂತರ ಮಹಾಪ್ರಳಯ ಪ್ರತೀ 31,104 ಸಾವಿರ ಕೋಟಿ ವರ್ಷಕ್ಕೊಮ್ಮೆ ಹಾಗು ಈ ಪ್ರಳಯದಲ್ಲಿ ಸತ್ಯ ಲೋಕದಿಂದ ಹಿಡಿದು ಸರ್ವ ಲೋಕಗಳೂ ಸರ್ವ ಸ್ಥಾವರ; ಜಂಗಮ ಗಳು ಜೀವ ಜಲ ಚೈತನ್ಯಗಳು ಸೂಕ್ಷ್ಮಾತಿ ಸೂಕ್ಷ್ಮ ಪರಮಾಣುವಿನ ರೂಪದಲ್ಲಿ  ಲೀನವಾಗುತ್ತವೆ. 

- ನಮ್ಮ ಓದುಗರು ನೀಡಿದ ಲೇಖನ

–>