ಶಾಲೆಗೆ ಬಂದ ಮೊದಲ ದಿನವೇ ಕಂಡೆ ಭೂಲೋಕದ ಸ್ವರ್ಗ
ಕಪ್ಪು ಹಲಗೆಯಲ್ಲಿ ಕಂಡೆ ಭವಿಷ್ಯದ ಜ್ಞಾನದ ಸನ್ಮಾರ್ಗ.
ಮಾತಾಡಲಿಲ್ಲ ದೇವರು ಬಾರಿಸಿದರು ಗುಡಿಯ ಗಂಟೆ
ಗುರುವೇ ದೇವರಾದರೂ ಬಾರಿಸಿದಾಗ ಶಾಲೆಯ ಗಂಟೆ.
ಗುರುವಿನ ಆಯುಧ ಬಳಪ
ಕಂಡನು ವಿದ್ಯಾರ್ಥಿಯು ಕಲಿಕೆಯಲ್ಲಿ ಹೊಳಪ
ಗುರುತಾನೆ ಮಗುವಿನ ಕೈ ಹಿಡಿದು ನಡೆಸುವ ಗಣಪ.
ಬೆಳಗಿನ ಹಾಲು ಬಿಸಿ ಬಿಸಿ, ಗೆಳೆಯರೊಂದಿಗೆ ಕುಡಿದಾಗ ಖುಷಿಯೋ ಖುಷಿ
ಬೋರ್ಡನ್ನು ಸ್ವಚ್ಛಗೊಳಿಸಿ ತರಗತಿಗೆ ಸಿದ್ಧಗೊಳಿಸಿ ಪ್ರಾರ್ಥನೆಗೆ ನಿಂತೆವು ಗುರುಗಳಿಗೆ ವಂದಿಸಿ.
ನಾಡಗೀತೆಯ ಶ್ರೀಕಾರ ರಾಷ್ಟ್ರಗೀತೆಯ ಜೈಕಾರ
ಪಂಚಾಂಗ ಪಠಣದ ಓಂಕಾರ ಪತ್ರಿಕೆಯ ವಿಚಾರ ಸುದ್ದಿ ಸಮಾಚಾರ.
ಮಾತೃಭಾಷೆಯ ಕನ್ನಡ ಸಮಾಜ
ವಿಜ್ಞಾನದ ಸಂಗಡ ವಿಜ್ಞಾನಚಿತ್ರ- ಪ್ರಯೋಗಗಳ ಬತ್ತಡ.
ಆಂಗ್ಲಭಾಷೆ ಬಿಡಿಸಲಾಗದ ಗಂಟು ದೈನಂದಿನ ಜೀವನಕ್ಕೆ ಗಣಿತದ
ನಂಟು.
ರಾಷ್ಟ್ರಭಾಷೆ ಹಿಂದಿ ಇವೆಲ್ಲವನ್ನು ಕಲಿಸಲು ಗುರುಗಳು ಆರು ಮಂದಿ. ಅನ್ನ ಸಾಲಿನ ಬಿಸಿಯೂಟ
ಇದ್ದರೆ ಚಂದ ಗೆಳೆಯರ ಒಡನಾಟ.
ಕಾತುರದಿ ಕಾಯುವ ಕೊನೆಯ ಅವಧಿ
ಖುಷಿಯ ಕ್ಷಣ ಈ ಸಮಯದಿ. ಶಾಲೆಯ ಮುಂದೆ ಮೈದಾನ
ಗೆಳೆಯರೊಂದಿಗೆ ಆಡಿದಾ ಮನಸ್ಸಿಗೆ ಸಮಾಧಾನ.
ಕೊನೆಯ ಗಂಟೆ ಕೇಳಿ
ಹೊರಟೆವು ಮನೆಗೆ ಗುರುಗಳಿಗೆ ಟಾಟಾ ಹೇಳಿ.
ಶಾಲೆಯ ಪರಿಸರ ಸ್ವಚ್ಛಂದ ದಿನಾಲೂ ಶಾಲೆಗೆ ಬರಲು ಆನಂದ.
ಲೇಖಕರು - ಶ್ರೀ ಮುತ್ತು ಯ.ವಡ್ಡರ , ಶಿಕ್ಷಕರು , ಬಾಗಲಕೋಟ , 9845568484

Instagram
Subscribe , Follow on