-->

Basavanna Vachana ಬಸವಣ್ಣ ನವರ ವಚನಗಳು - With meanings

This post is dedicated to Sri Basavanna and his works , we share our vachana collections of Basavanna with meanings , one of the kannada philosopher and reformer of 12th century. These poems are so meaningful that it could change one's mind any day. We hope our readers too find it useful. If you like these good messages , do share it within your community.

"ನೆಲಗೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ , ಕುಲವೊಂದೆ ತನ್ನತಾನರಿದವಂಗೆ , ಫಲವೊಂದೆ ಷಡುದರುಶನ ಮುಕ್ತಿಗೆ , ನಿಲವೊಂದೆ ನಿಮ್ಮನರಿದವಂಗೆ ಕೂಡಲಸಂಗಮ ದೇವಾ"


Land is common to both a temple and outcasted
Water is common for both bathing and penance
Origin is one who has the knowledge of Brahman the one
Liberation is the final aim of all thoughts
Abode is same for one who knows you the lord



"ಜಾತಿವಿಡಿದು ಸೂತಕವನರಸುವೆ . ಜ್ಯೋತಿವಿಡಿದು ಕತ್ತಲೆಯನರಸುವೆ .
ಇದೇಕೋ ಮಣಿ ಎಂಬುದು ವಚನ , ನಮ್ಮ ಕೂಡಲಸಂಗನ ಶರಣರ ಪಾದ ಪುರುಷನ ನಂಬು ಕೆಡಬೇಡ ಮಾನವ"



How can one mingling with others of any religion become impure ?
Why does one having a lamp in hand , go in search of darkness ?
What a sad theory is this ? What a foolishness in saying one religion is ultimate & other is not , when the mind & soul showing bhakthi is same in everyone


"ಹಸಿರು ಎಕ್ಕೆಯ ಕಾಯ ಮೆಲಬಹುದೇ ? ನೀರಡಿಸಿ ವಿಷವ ನೀರೆಯಬಹುದೇ ? ಸುಣ್ಣದ ತುಯ್ಯಲ ಬಣ್ಣವೊಂದೆ ಎಂದರೆ ನೆಂಟತನಕ್ಕೆ ಉಣ್ಣಬಹುದೇ ? ಲಿಂಗ ಸಾರಾಯ ಸಜ್ಜನಗಲ್ಲದವರ ಕೂಡಲಸಂಗಮ ದೇವನೆಂತೊಲಿವನು ?"


Can one satisfy hunger by eating some leaves , instead it further causes side effects
Can limestone be used for eating just because it has the same color of soul spirit, instead it further causes side effects . Those who don't realize god's principles cannot win god's grace


Basavanna Vachana collections


"ಹಸಿದು ಬಂದ ಗಂಡನಿಗೆ ಉಣಲಿಕ್ಕದೆ ಬಡವಾದನೆಂದು ಮರಗುವ ಸತಿಯ ಸ್ನೇಹದಂತೆ ಬಂದುದನರಿಯಳು , ಇದ್ದುದ ಸವಿಯಳು , ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ ಕೂಡಲಸಂಗಮದೇವಾ"



"ಆಸೆಯಾಮಿಷ ತಾಮಸ , ಹುಸಿ , ವಿಷಯ , ಕುಟಿಲ , ಕುಹಕ ,ಕ್ರೋದಿ ,
ಕ್ಷುದ್ರ , ಮಿಥ್ಯೆ ಇವನೆಲ್ಲಾ ನಾಲಿಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ
ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲೀಯವು , ಇದು ಕಾರಣ ಇವೆಲ್ಲವ ಕಳೆದು ಎನ್ನ ಪಂಚಯ್ಯವರು ಭಕ್ತನ ಮಾಡು ಕೂಡಲಸಂಗಮದೇವ"


"ನೀನೊಲಿದರೆ ಕೊರಡು ಕೊನರುವುದಯ್ಯಾ , ನೀನೊಲಿದರೆ ಬರಡು ಹಯನಹುದಯ್ಯಾ , ನೀನೊಲಿದರೆ ವಿಷವೇ ಅಮೃತವುದಯ್ಯಾ , ನೀನೊಲಿದರೆ ಸಕಲ ಪಡಿಪದಾರ್ಥ ಇದರಲ್ಲಿರ್ಪು ಕೂಡಲಸಂಗಮದೇವ"



"ಎನಗೆ ನಿಮ್ಮ ನೆನಹಾದಾದಲೇ ಉದಯ , ಎನಗೆ ನಿಮ್ಮ ಮರಹಾದಾಗಲೇ ಅಸ್ತಮಾನ , ಎನಗೆ ನಿಮ್ಮ ನೆನಹವೇ ಜೇವನ , ಎನಗೆ ನಿಮ್ಮ ನೆನಹವೇ ಪ್ರಾಣ ತಂದೆ , ಸ್ವಾಮಿ ! ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆ ಒತ್ತಯ್ಯಾ , ಮನದಲ್ಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ"




"ಮನವೇ ಸರ್ಪ , ತನುವೆ ಹೇಳಿಗೆ , ಹಾವಿನೊಡತನ ಹುದುವಾಳಿಗೆ . ಇನಾವಾಗ ಕೊಂದಹುದೆಂದರಿಯೆ , ಇನಾವಾಗ ತಿಂದಿಹುದೆಂದರಿಯೆ ! ನಿಮ್ಮ ಪೂಜಿಸಬಲ್ಲೊಡೆ ಅದೇ ಗರುಡ ಕೂಡಲಸಂಗಮದೇವಾ"




"ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ , ತಂದೆ ; ಸುತ್ತಿಸುಳಿದು ನೋಡದಂತೆ ಕುರುಡನ ಮಾಡಯ್ಯಾ , ತಂದೆ ; ಮತ್ತೊಂದ ಕೇಳದಂತೆ ಮಾಡಯ್ಯಾ , ತಂದೆ ; ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೇಳಸದಂತೆ ಇರಿಸು ಕೂಡಲಸಂಗಮದೇವ"





"ಬಚ್ಚಲ ನೀರು ತಿಳಿದರೇನು ? ಸಲ್ಲದ ಹೊನ್ನು ಮತ್ತೆಲ್ಲಿದ್ದರೇನು ? ಆಕಾಶದ ಮಾವಿನ ಫಲವೆಂದರೇನು ? ಕೊಯ್ಯಲ್ಲಿಲ್ಲ, ಮೆಲ್ಲಲಿಲ್ಲಾ! ಕೂಡಲಸಂಗನ ಶರಣರ ಅನುಭವವಿಲ್ಲದವರು ಎಲ್ಲಿದ್ದರೇನು ? ಎಂತಾದರೇನು ?"



"ಕರಿಫನ ಅಂಕುಶ ಕಿರಿದೆನ್ನಬಹುದೇ ? ಬಾರದಯ್ಯಾ ,
ಗಿರಿಫನವಜ್ರ ಕಿರಿದೆನ್ನಬಹುದೇ ? ಬಾರದಯ್ಯಾ ,
ತಮಂದ ಘನಜ್ಯೋತಿ ಕಿರಿದೆನ್ನಬಹುದೇ ? ಬಾರದಯ್ಯಾ ,
ಮರಹುಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೇ ? ಬಾರದಯ್ಯಾ ,
ಕೂಡಲ ಸಂಗಮದೇವಾ"



"ಇಂದಿಗೆಂತು ನಾಲೆಗೆಂದು ಎಂದು ಬೆಂದೊಡಲ ಹೊರೆಯ ಹೋಯಿತೆನ್ನ ಸಂಸಾರ !
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲಾ , ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿ ಇಲ್ಲಾ , ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೇ ಕೊಂದುದಯ್ಯಾ ಈ ಮಾಯೆ ಕೂಡಲ ಸಂಗಮದೇವಾ"





"ಗೀತವ ಹಾಡಿದರೇನು ? ಶಾಸ್ತ್ರ ಪುರಾಣವ ಕೇಳಿದೊಡೇನು ?
ವೇದವೇದಾಂತವನೋದಿದೊಡೇನು ? ಮನವೊಲಿದು ಲಿಂಗ-ಜಂಗಮ
ಪುಜಿಸಲರಿಯದವರು ಎಲ್ಲ ಬಲ್ಲ ಅನುಭವಿಯಾದೊಡೇನು ?
ಭಕ್ತಿ ಇಲ್ಲದವರನೋಲ್ಲ ಕೂಡಲಸಂಗಮದೇವ !!
ದಯವಿಲ್ಲದ ಧರ್ಮ ಅದಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ"



–>