-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 3

*ನಮ್ಮ ಆಸೆ ಸಿಟ್ಟು ಅತಿಯಾದ ಪ್ರೀತಿಯೇ ನಮ್ಮ ಜೀವನದ ಶತ್ರುಗಳು. ಇವು ನಮ್ಮನ್ನು ಸ್ವಾರ್ಥಿಗಳಾಗಿಸಿ ಶಾಂತಿಯನ್ನು ಕಸಿದುಕೊಳ್ಳುತ್ತದೆ*

Excellence is a more powerful influence in the world than discontent. So everything is fine out there. No one said it's perfect. But it is exactly the way it should be ...at this moment. So here is the paradox of effective change - if you want to influence change for the better, then the most effective way to begin is with contentment with the way things are. The way things are, are the way things are meant to be !


 

 ತಿಳಿದುಕೊಳ್ಳಲು ಯಾವ ವಿಷಯವೂ ಸಣ್ಣದಲ್ಲ. ಮಾಡುವ ಮನಸ್ಸಿದ್ದರೆ ಯಾವ ಕೆಲಸವೂ ದೊಡ್ಡದಲ್ಲ. ಗೆಲುವು ಬೀಗುವುದನ್ನು ಕಲಿಸಿದರೆ, ಸೋಲು ಬಾಗುವುದನ್ನು ಕಲಿಸುತ್ತದೆ.

If the path is beautiful first confirm where it leads
But if the destination if beautiful don't bother how the path is

ಅಜ್ಙಾನಿಗಳನ್ನು ಮಣ್ಣಿನ ಮನೆಯ ಒಳಗೆ ವಾಸಿಸುವವರಿಗೆ ಹೋಲಿಸಬಹುದು. ಮನೆಯ ಒಳಗೂ ಸಾಕಾದಷ್ಟು ಬೆಳಕು ಇರುವುದಿಲ್ಲ. ಹೊರಗಿರುವ ಯಾವ ವಸ್ತುವನ್ನೂ ನೊಡಲು ಆಗುವುದಿಲ್ಲ. ಆದರೆ ಯಾರು ಜ್ಙಾನವನ್ನು ಪಡೆದುಕೊಂಡು ಸಂಸಾರದಲ್ಲಿ ಇರುತ್ತಾರೋ, ಅವರನ್ನು ಗಾಜಿನ ಮನೆಯಲ್ಲಿ ವಾಸಿಸುವವರಿಗೆ ಹೊಲಿಸಬಹುದು. ಅವರು ಒಳಗಿರುದನ್ನು ನೋಡಬಲ್ಲರು, ಹೊರಗಿರುದನ್ನೂ ನೋಡಬಲ್ಲರು.
 

ಸತ್ಯವನ್ನು ತಿಳಿಯುವ, ಜೀವನದಲ್ಲಿ ಸತ್ಯವನ್ನು ಪ್ರದರ್ಶಿಸುವ, ಮರಣಕ್ಕೆ ಅಂಜದ ಮಾತ್ರವಲ್ಲ ಅದನ್ನು ಸ್ವಾಗತಿಸುವ, ಮನುಷ್ಯನಿಗೆ ಆತ್ಮದ ಅರಿವನ್ನುಂಟುಮಾಡುವ, ಪ್ರಪಂಚದಲ್ಲಿ ಯಾವುದೂ ನಮ್ಮನ್ನು ನಾಶಮಾಡಲಾರದು ಎಂಬ ವಿಶ್ವಾಸವನ್ನು ನೀಡುವ, ಎದೆಗಾರಿಕೆ ತೋರುವ ಧೈರ್ಯವನ್ನು ಅನುಷ್ಠಾನಕ್ಕೆ ತನ್ನಿ. ಆಗ ನೀವು ಸ್ವತಂತ್ರರಾಗುವಿರಿ. ಆಗ ನೀವು ನಿಮ್ಮ ನೈಜಸ್ವರೂಪವನ್ನು ತಿಳಿಯುವಿರಿ.

 ಬಿರುಗಾಳಿ ದೊಡ್ಡ ದೊಡ್ಡ ಮರವನ್ನೂ ಬಗ್ಗಿಸಬಹುದು,ಆದರೆ ಬಲವಿಲ್ಲದ ಸಣ್ಣ ಸಣ್ಣ ಸಸಿಗಳನ್ನು ಎನೂ ಮಾಡದು,ಹಾಗೆ ಶಕ್ತಿ ಶಾಲಿಗಳು ಬಲವಂತರು ತಮ್ಮ ಶಕ್ತಿಯನ್ನು ತಮ್ಮಂತೆ ಬಲವಂತರ ಬಳಿ ಮಾತ್ರ ತೋರಿಸಬೇಕು,

*Immature* People always want to *Win an Argument,* even at the cost of a relationship.
*Mature* People understand that it’s always better to lose an argument & *Win a Relationship.*

ಸಣ್ಣ ಕಲ್ಲು ದೊಡ್ಡ ಬಂಡೆ ಸಿಕ್ಕಿದರೂ
ನದಿ ಕೊಂಚ ಬದಿಗೆ ಸರಿದು ಸಾಗುತ್ತದೆ.
ಅದು ಅದರ ದೌರ್ಬಲ್ಯವಲ್ಲ;
ಬದುಕಿನ ನಿರಂತತೆಯ ಸಂಕೇತ...!!

*ಮರೆಯಲಾಗದ ಕಲ್ಪನೆ 'ಪ್ರೀತಿ',*
*ಬರೆಯಲಾಗದ ಭಾವನೆ 'ನಗು',*
*ಅಳಿಸಲಾಗದ ಚಿತ್ರ 'ನೆನಪು',*
*'ತ್ಯಾಗ' ಪ್ರೀತಿಗಿಂತ ದೊಡ್ಡದು*
*'ನಡತೆ' ಸೌಂದರ್ಯಕ್ಕಿಂತ ದೊಡ್ಡದು,*
*'ಮಾನವೀಯತೆ' ಸಂಪತ್ತಿಗಿಂತ ದೊಡ್ಡದು,*  
*'ನಂಬಿಕೆ' ಇವೆಲ್ಲಾವುದಕಿಂತ ದೊಡ್ಡದು಼*

Never search a person whom you want..
Search a person who wants you..
Dont care for those who ignore you..
CARE for those who are ignoring others for you.!

ನಮ್ಮ ಆಸೆ, ಸಿಟ್ಟು, ಅತಿಯಾದ ಪ್ರೀತಿಯೇ ನಮ್ಮ ಜೀವನದ ಶತ್ರುಗಳು. ಇವು ನಮ್ಮನ್ನು ಸ್ವಾರ್ಥಿಗಳಾಗಿಸಿ ಶಾಂತಿಯನ್ನು ಕಸಿದುಕೊ

ಹಸಿದವರಿಗೆ ನೀಡಿದ ಅನ್ನ...
ಬಯಸಿದವರಿಗೆ ನೀಡಿದ ದಾನ
ಅವಶ್ಯವಿದ್ದವರಿಗೆ ಮಾಡಿದ ಸಹಾಯವು,
ಸಾವಿನ ನಂತರವೂ,ನಮ್ಮನ್ನು ಬದುಕಿಸಬಲ್ಲ ಸಂಜೀವಿನಿಯಾಗಿದೆ

–>