-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 19

ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಏನು ಮಾಡಬೇಕು  ಎನ್ನುವ ಪ್ರಶ್ನೆಗೆ, ಒಬ್ಬ ಜ್ಞಾನಿ ಹೇಳಿದ  ಸುಂದರವಾದ ನುಡಿ " ಕಾಲು ಎಳೆಯುವುದು ಬಿಟ್ಟು  ಕೈಯನ್ನು ಎಳೆಯಬೇಕು"ಎಂದು
ಒಮ್ಮೆ ಕ್ಷಮಿಸಿ ಒಳ್ಳೆಯವರಾಗಿ,ಆದರೆ  ಮತ್ತೆ ಪುನಃ ಅದೇ ವ್ಯಕ್ತಿಯನ್ನು ನಂಬಿ ಮೂರ್ಖರಾಗಬೇಡಿ. 

*********

ಕೊಂಬೆಯ ಮೇಲೆ ಕುಳಿತ ಹಕ್ಕಿಯು ಮರ ಜೋರಾಗಿ ಅಲುಗಾಡಿದರೆ ಹೆದರುವುದಿಲ್ಲ. ಏಕೆಂದರೆ ಆ ಹಕ್ಕಿಗೆ ಕೊಂಬೆಗಿಂತ ಹೆಚ್ಚಿನ ವಿಶ್ವಾಸ ತನ್ನ ರೆಕ್ಕೆಯ ಮೇಲೆ ಇರುತ್ತದೆ. ಯಾವತ್ತೂ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ

*********

ಕಣ್ಣು ಇಡೀ ಜಗತ್ತನ್ನೇ ನೋಡುತ್ತದೆ...ಆದರೆ, ತನ್ನೊಳಗೆ ಬಿದ್ದ ಸಣ್ಣ ಧೂಳಿನ ಕಣವನ್ನು ನೋಡಲಾರದು... ಹಾಗೆಯೇ ನಾವೆಲ್ಲರೂ ಕೂಡ ಬೇರೆಯವರ ತಪ್ಪುಗಳನ್ನೆಲ್ಲಾ ಗುರುತಿಸುತ್ತೇವೆ. ಆದರೆ, ನಮ್ಮ ತಪ್ಪುಗಳನ್ನು ಗುರುತಿಸಲಾರೆವು...

********* 

ಬೇರೆಯವರು ನಮ್ಮ ಮೇಲಿಟ್ಟಿರುವ ವಿಶ್ವಾಸ ಎಂದಿಗೂ  ತಾತ್ಕಾಲಿಕವಾಗಬಾರದು. ಅದು ನಮ್ಶ ಶ್ವಾಸವಿರುವವರೆಗೂ ನಮ್ಮ ಜೊತೆಯಲ್ಲೇ ಇರುವಂತೆ ನೋಡಿಕೊಂಡಾಗಲಷ್ಟೇ   ನಮ್ಮ ಬದುಕು ಸಾರ್ಥಕ. ಆದ್ದರಿಂದ ನಾವು ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಬೇಕು

*********

ಮೂರ್ಖರನ್ನು ಕಾಣಲು ಹೋಗಬಾರದು, ಹಾಗೆ ಕಂಡರೂ ಅವರೊಡನೆ ಇರಬಾರದು; ಹಾಗೆ ಇದ್ದರೂ ಅವರೊಡನೆ ಮಾತಾಡಬಾರದು; ಹಾಗೆ ಮಾತಾಡಿದರೆ ಮೂರ್ಖನಂತೆಯೇ ಮಾತಾಡಬೇಕು.

*********

ಕ್ಷಮೆ ಮತ್ತು ಧನ್ಯವಾದಗಳು ತುಂಬಾ ಚಿಕ್ಕ ಪದಗಳು ಎಂದೆನಿಸಿದರೂ.....ಎಷ್ಟೋ ಸಂಬಂಧಗಳು ಒಡೆಯದಂತೆ ನೋಡಿಕೊಳ್ಳುವಲ್ಲಿ ಅತಿ ದೊಡ್ಡ ಪಾತ್ರವಹಿಸಿದೆ

*********

Kannada subhashitha - ಕನ್ನಡ ಸುಭಾಷಿತ ಸಂಗ್ರಹ 19

 

ಎಲ್ಲರನ್ನೂ ಸಂತೋಷದಿಂದ ಇಟ್ಟುಕೊಳ್ಳುವ ಪ್ರಯತ್ನ ಜೀವಂತ ಕಪ್ಪೆಗಳನ್ನು ತಕ್ಕಡಿಯಲ್ಲಿ ಕೂರಿಸಿದಂತೆ... ಒಂದನ್ನು ಕೂರಿಸುವ ಹೊತ್ತಿಗೆ ಇನ್ನೊಂದು ಜಿಗಿದು ಹೋಗುತ್ತದೆ

*********

ಖುಷಿ ,ಸಂತೋಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ. ಅದು ಎಂದಿಗೂ ಬರಿದಾಗುವುದಿಲ್ಲ. ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ ಹಂಚುವ ಮೂಲಕ , ಇನ್ನೊಬ್ಬರ ಮೊಗದಲ್ಲೂ ಆ ಸಂತಸವನ್ನು ಕಾಣಬಹುದು

*********

ನಾಳೆ ಬರಲಿದೆ, ಅದು ನಿಶ್ಚಿತ.  ಆದರೆ ನೀವು ಅದನ್ನು ಯಾವ ರೂಪದಲ್ಲಿ ನೋಡಲು ಬಯಸುತ್ತೀರಿ ಎಂಬುದನ್ನು ಮಾತ್ರ   ಇಂದೇ ನಿರ್ಧರಿಸಬೇಕು.

*********

ಕಾಣಬಾರದೆಂದು ಕಣ್ಣು ಮುಚ್ಚಿಕೊಳ್ಳಬಹುದು ಆದರೆ ನೆನಪಾಗಬಾರದೆಂದು ಮನಸ್ಸು ಮುಚ್ಚಿ ಕೊಳ್ಳಲು ಸಾಧ್ಯವೆ.  ಮನಸ್ಸು ಕೊಟ್ಟವರು ಕನಸಲ್ಲೂ ಒಂದಾಗುತ್ತಾರೆ. ಅದರೆ ಹೃದಯ ಗೆದ್ದವರು ನೋವಲ್ಲೂ ನೆನಪಾಗುತ್ತಾರೆ.

*********

ಪ್ರಪಂಚದಲ್ಲಿ ಬಹಳ ಸುಲಭವಾದ ಕೆಲಸವೆಂದರೆ ಇನ್ನೊಬ್ಬರು ಮಾಡಿದ ಕೆಲಸವನ್ನು ಟೀಕಿಸುವುದು
ಹಾಗೆಯೇ "ಬಹಳ ಕಷ್ಟವಾದ ಕೆಲಸವೆಂದರೆ ಅದೇ ಕೆಲಸವನ್ನು  ಸ್ವತಃ ಮಾಡುವುದು...

*********

ನಮಗೆ ಕೋಪ ಬರುವುದಿಲ್ಲವೆಂದರೆ ನಾವು ಶಕ್ತಿವಂತರಲ್ಲ ಎಂದು ಕೆಲವರು ತಿಳಿದುಕೊಳ್ಳುತ್ತಾರೆ!

ಉತ್ತಮರಲ್ಲಿ ಕೋಪ ಕ್ಷಣಮಾತ್ರವಿರುತ್ತದೆ! ಮಧ್ಯಮರಲ್ಲಿ ಎರಡು ಘಳಿಗೆ ಇರುತ್ತದೆ!
ಅಧಮರಲ್ಲಿ ಅಹೋರಾತ್ರಿ ಕೋಪ ಇರುತ್ತದೆ!  ಆದರೆ...  ಪಾಪಿಷ್ಠರಲ್ಲಿ ಮಾತ್ರ ಸಾಯುವ ತನಕ ಕೋಪ ಇರುತ್ತದೆ! ನಾವ್ಯಾರು ಎಂದು ನಾವೇ ನಿರ್ಧರಿಸಿಕೊಳ್ಳೋಣ

*********

ನಮ್ಮಲ್ಲೇನಿದೆ, ಏನು ಪಡೆಯುತ್ತೇವೆ ಎನ್ನುವುದಕ್ಕಿಂತ, ಅವಶ್ಯಕತೆ ಇದ್ದವರಿಗೆ ನಾವೇನು ನೀಡಬಲ್ಲೆವು ಎಂಬುದು ನಮ್ಮ ವ್ಯಕ್ತಿತ್ವ ಎತ್ತರಿಸುವುದಕ್ಕೆ ಕಾರಣವಾಗಲಿ.....

*********

ನಿಮ್ಮ ಜೀವನದಲ್ಲಿ ನಿಮಗಾದ ನೋವನ್ನು ಶಕ್ತಿಯಾಗಿ ಪರಿವರ್ತಿಸಿಕೊಳ್ಳಿ
 ಅವಾಗ ನಿಮಗೆ ಇತರರು ನೋವನ್ನು ಉಂಟು ಮಾಡುವ    ಮುನ್ನ ನೂರು ಬಾರಿ ಯೋಚಿಸುತ್ತಾರೆ, ಇದೇ ಮನುಷ್ಯನ ಜೀವನ

*********

ನಮ್ಮ ಸ್ನೇಹಿತರ ಸಣ್ಣಪುಟ್ಟ ದೋಷಗಳಿಗಾಗಿ ಅವರ ಸ್ನೇಹವನ್ನು ಕಳೆದುಕೊಳ್ಳಬಾರದು.ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ.ಸ್ನೇಹಿತರ ಗುಣದೋಷವನ್ನು ಸ್ವೀಕರಿಸಿ ಸ್ನೇಹವನ್ನು ಕಾಪಾಡುವುದು ದೊಡ್ಡತನ.ಈ ದೊಡ್ಡತನವನ್ನು ಸದಾ ಮೆರೆಯುತ್ತಿರಬೇಕು

*********

ನಾವು ವಿನಮ್ರರಾಗಿದ್ದಾಗ ಗಟ್ಟಿಯಾಗಿ ಕಾಣುತ್ತೇವೆ, ಬೇರೆಯವರು ಹೇಳುವುದನ್ನು ಕೇಳುವಾಗ ಗೌರವಯುತ ಕಳೆ ಇರುತ್ತದೆ, ಧೈರ್ಯದಿಂದ ಇರುವಾಗ ಬುದ್ಧಿವಂತರಾಗಿ ಕಾಣುತ್ತೇವೆ, ಬೇರೆಯವರಿಗೆ ಸಹಾಯ ಮಾಡುವಾಗ ಮಹಾನ್ ವ್ಯಕ್ತಿಗಳಾಗುತ್ತೇವೆ

*********

ಹಲವಾರು ಬಾರಿ ವೈಮನಸ್ಸುಗಳನ್ನು ಕೇವಲ ಮಾತಿನಿಂದ ಪರಿಹರಿಸಿಕೊಳ್ಳಬಹುದು. ಮಾತನ್ನು ಆಡುವ ಆತುರಕ್ಕಿಂತಲೂ ಕೇಳುವ ವ್ಯವಧಾನವಿರಬೇಕು. ಮಾತು ಮನೆಯನ್ನು ಕೆಡಿಸುವುದಕ್ಕಿಂತಲೂ ಮನವನ್ನು ಕೂಡಿಸಲು ಹೆಚ್ಚು ಉಪಯೋಗವಾಗಬೇಕು.

*********

Keep pushing yourself forward. Do whatever it takes. You'll soon leap over the final hurdle and land right where you want to be.🌹

Pushing yourself a bit more every day for many years. That’s it. That’s growth.🌹

Many people succeed when others do not believe in them. But rarely does a person succeed when he does not believe in himself

*********

ಸಾಧನೆಗೆ ಮಹಾ ಬುದ್ಧಿವಂತಿಕೆ ಏನು ಬೇಕಾಗಿಲ್ಲ. ಹಿಡಿದ ಕೆಲಸ ಕೈಬಿಡದಿರುವ ಹಠವೊಂದಿದ್ದರೆ ಸಾಕು

*********

ಸಂಬಂಧಗಳು ಚೆನ್ನಾಗಿದ್ದಾಗ ನಾವು ಮಾಡಿದ್ದು ಮಾತಾಡಿದ್ದು ತಪ್ಪಾಗಿದ್ದರೂ ಸರಿಯಾಗಿ ಕಾಣುತ್ತದೆ,
 ಅದೇ ಆ ಸಂಬಂಧ ಹಳಸಿ ಹೋದಾಗ ನಾವು ಮಾಡ್ತಾ ಇರೋದು ಮಾತಾಡ್ತಾ ಇರೋದು ಸರಿಯಾಗಿದ್ದರೂ ಕೂಡ ತಪ್ಪಾಗಿ ಕಾಣುತ್ತದೆ,  ಈ ಜೀವನವೇ ಹೀಗೆ ಅವರವರಿಗೆ ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ

*********

When you start to believe in yourself there is no one that can stop you from achieving the goal

*********

ಯಾವುದೇ ಸಮಸ್ಯೆ ಇರಬಹುದು,ಅದು ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಆದರೆ,ಅದು ಬಂದಾಗ ಆಕಾಶ ಕಳಚಿ ಬಿದ್ದವರಂತೆ ಬಹುತೇಕರು ವರ್ತಿಸುತ್ತಾರೆ.ಅದು ಬಂದಾಗ ಹೇಗೆ ಕಳಿಸಿಕೊಡಬೇಕು ಎಂಬುದು ಗೊತ್ತಿರಬೇಕು. ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಹೆಚ್ಚು ಕಾಲ ಉಳಿಯಬಹುದಷ್ಟೇ

*********

ಸದಾ ನಮ್ಮ ಸಮಸ್ಯೆ, ಚಿಂತೆಗಳ ಬಗ್ಗೆಯೇ ಮಾತನಾಡುತ್ತಿದ್ದರೆ ಕೇಳುವವರಿಗೆ ಕಿರಿಕಿರಿಯಾಗಬಹುದು. ಅವರು ನಿಮ್ಮಿಂದ ದೂರವಾಗಬಹುದು. ಯಾವತ್ತೂ ಹೊಸವಿಚಾರ, ಆನಂದ, ಖುಷಿ ನೀಡುತ್ತದೆ. ಅಂತಹ ಸಂಗತಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ

*********

ಸೂರ್ಯನು ಮರೆಯಾದನೆಂದು ಕೊರಗುತ್ತಾ ಕೂರಬೇಡಿ.

ಈಗ ನಕ್ಷತ್ರಗಳನ್ನು ನೋಡುವ ಭಾಗ್ಯ ನಮ್ಮದೆಂದು ತಿಳಿಯಿರಿ.

ಒಳ್ಳೆಯ ಸಮಯ ಕಳೆದುಹೋಯಿತು ಎಂದು ಕೊರಗುತ್ತಾ ಕೂರಬೇಡಿ.

ಈಗ ಒಳ್ಳೆಯ ವಿಚಾರಗಳನ್ನು ಹುಡುಕುವ ಸರದಿ ನಮ್ಮದೆಂದು ತಿಳಿಯಿರಿ

*********

ಹುಳಿಯನ್ನು ಯಾವ ಅಡುಗೆಗೆ ಬಳಸಬೇಕು ಎಂದು ಗೊತ್ತಿರಲಿ... ಹಾಗೆಯೇ ಹುಳಿ ಹಿಂಡುವವರನ್ನು ಎಲ್ಲಿ ಇಡಬೇಕು ಎಂದು ಸಹ ಗೊತ್ತಿರಲಿ... ಏಕೆಂದರೆ ಹುಳಿಯ ಗುಣವೇ ಒಡೆಯುವುದು .. 

*********


 



Kannada subhashitha - ಕನ್ನಡ ಸುಭಾಷಿತ ಸಂಗ್ರಹ 18

ನನಗೋಸ್ಕರ ಕಾಯುವವರಿಗೆ ನಾನು ಸಿಗದೆ ಇರಬಹುದು ....
ಆದ್ರೆ ನನ್ನನ್ನು ನಂಬಿದವರಿಗೆ ನಾನು ಯಾವತ್ತು ಮೋಸ ಮಾಡಿಲ್ಲ.. ನಾನು ಬೇಕು ಅನ್ನುವವರಿಗಿಂತ ನಾನೇ ಬೇಕು ಅನ್ನುವವರು ಮಾತ್ರ ನನ್ನೆ ಮುಖ್ಯ ...

*******

ನಮ್ಮವರು ಅಂದು ಕೊಂಡವರೆಲ್ಲ ನಮ್ಮ ಜೊತೆ ಎಲ್ಲಾ ಸಮಯದಲ್ಲಿ ಒಂದೇ ತರ ಇರ್ತಾರೆ ಅಂದುಕೊಳ್ಳೊದು ನಮ್ಮ ತಪ್ಪು.
ಈ ಪ್ರಪಂಚದಲ್ಲಿ ಸಮಯಕ್ಕಿಂತ ವೇಗವಾಗಿ ಬದಲಾಗೋದು ಮನುಷ್ಯನ ಮನಸ್ಸು ಮತ್ತು ಆಲೋಚನೆಗಳು

*******

ನಿಮ್ಮೊಳಗಿನ ಕೆಡಕು ಹೊರಬರುವವರೆಗೆ ಜನ ನಿಮ್ಮನ್ನು ಪ್ರಚೋದಿಸುತ್ತಾರೆ. ಆಮೇಲೆ ಅದೇ ಕೆಡುಕನ್ನು ಬಳಸಿ ತಾವೆಷ್ಟು ಮುಗ್ಧರೆಂದು ಸಾಬೀತುಪಡಿಸುತ್ತಾರೆ

*******

ಒಂದು ಹಂತದವರೆಗೆ ನೋವು ಸಹಿಸಿದ ನಂತರ, ಮನುಷ್ಯ ಮೌನವಾಗುತ್ತಾನೆ. ನಂತರ ಯಾರನ್ನು ದೂಷಿಸುವುದೂ ಇಲ್ಲ, ಯಾರಿಂದ ನಿರೀಕ್ಷಿಸುವುದು ಇಲ್ಲ.

*******

ಒಂದು ಎಲೆ ಕೆಳಗೆ ಬೀಳುತ್ತಾ ಹೇಳಿತು ಈ ಜೀವನ ಶಾಶ್ವತವಲ್ಲ ಅಂತ ಒಂದು ಹೂವು ಅರಳುತ್ತಾ ಹೇಳಿತು ಬದುಕುವ ಒಂದು ದಿನವಾದ್ರೂ ಗೌರವವಾಗಿ ಜೀವಿಸು ಅಂತ ಒಂದು ಮರ ತಣ್ಣಗೆ ಹೇಳಿತು ತಾನು ಕಷ್ಟದಲ್ಲಿದ್ದು ಇತರರಿಗೆ ಸುಖವನ್ನ ಕೊಡು ಅಂತ ಒಂದು ಹೃದಯ ನಗುತ್ತಾ ಹೇಳಿತು ಎಲ್ಲರ ಮನಸಲ್ಲಿ ಒಳ್ಳೆಯ ಸ್ಥಾನವನ್ನ ಸಂಪಾದಿಸು ಅಂತ...

*******

Kannada subhashitha - ಕನ್ನಡ ಸುಭಾಷಿತ ಸಂಗ್ರಹ 18

 

ನಿಮಗೆ ಕಷ್ಟ ತಂದ ಸಂದರ್ಭಗಳನ್ನ ಮರೆತುಬಿಡಿ,
ಆದರೆ ಅದರಿಂದ ಕಲಿತ ಪಾಠವನ್ನ ಎಂದಿಗೂ ಮರೆಯದಿರಿ.
ಎಲ್ಲಾ ಕಷ್ಟಗಳಿಗೂ ಸಮಸ್ಯೆಗಳಿಗೂ ಎರಡು ಔಷದಿಗಳಿವೆ..
ಒಂದು ದುಡಿಮೆ , ಇನ್ನೊಂದು ತಾಳ್ಮೆ..!!

*******

ದುರ್ಬಲರಾದವರು ಮುಯ್ಯಿ ತೀರಿಸಿಕೊಳ್ಳಲು ಯೋಚಿಸುತ್ತಾರೆ. ಗಟ್ಟಿ ಮನಸ್ಸಿನವರು ಕ್ಷಮಿಸುತ್ತಾರೆ. ಬುದ್ಧಿವಂತರಾದವರು ಘಟನೆಮತ್ತು ಅದಕ್ಕೆ ಕಾರಣರಾದವರನ್ನು ನಿರ್ಲಕ್ಷಿಸುತ್ತಾರೆ. ಈ ಮೂವರಲ್ಲಿ ನೀವೇನಾಗಬೇಕುಎಂಬುದನ್ನು ನೀವೇ ನಿರ್ಧರಿಸಬೇಕು

*******

ನಿಮ್ಮ ಗುರಿ ಏನೆಂದು  ಪ್ರತಿ ಒಬ್ಬರಿಗೂ ಹೇಳುವ ಅವಶ್ಯಕತೆಯಿಲ್ಲ , ನೀವು  ಸೇರಿದಮೇಲೆ ಅವರೇ ನಿಮ್ಮ ಬಳಿ  ಬರುವರು

*******

ಜೀವನವೆಂದರೆ ಬಗೆಹರಿಸಬೇಕಾದ ಸಮಸ್ಯೆಯಲ್ಲ,  ಅನುಭವವಿಸಬೇಕಾದ ವಾಸ್ತವ.

*******

ಚಿನ್ನದ ಬಿಲ್ಲೆಯ ಮೇಲೆ “ಇದು ಚಿನ್ನ” ಎಂದು ನಮೂದಿಸಬೇಕೆಂದೇನಿಲ್ಲ. ಅದು ಚಿನ್ನವೇ ಆಗಿದ್ದರೆ ಅಕ್ಕಸಾಲಿಗ ಒಡ್ಡುವ ಪರೀಕ್ಷೆಗಳಲ್ಲಿ ಅದು ಜಯಿಸಿಯೇ ಜಯಿಸುತ್ತದೆ. ಕಾಗೆ ಬಂಗಾರವಾಗಿದ್ದರೆ ಬೆಂಕಿಯಲ್ಲಿ ಹಾಕಿದಾಗಲೇ ಸುಟ್ಟು ಕರಕಲಾಗುತ್ತದೆ. ಗುಣಗಳೂ ಅಷ್ಟೇ... 

*******

ಜಗತ್ತಿನ ಬಹುತೇಕ ಸಮಸ್ಯೆಗಳು ಪರಿಹಾರವಾಗುವುದು ಮಾತಿನಿಂದ.
ಯಾಕೆಂದರೆ ಬಹುತೇಕ ಸಮಸ್ಯೆ ಉದ್ಭವವಾಗಿರುವುದೇ ಮಾತಿನಿಂದ.
ಸಮಸ್ಯೆಯ ಮೂಲ ಮತ್ತು ಅಂತ್ಯ ಮಾತೇ ಆಗಿರುವುದರಿಂದ ಮಾತನ್ನು ಹೇಗೆ ನಾವು ಬಳಸಿಕೊಳ್ಳುತ್ತೇವೆ ಅನ್ನುವುದು ಮುಖ್ಯ

*******

ನಾವು ನಡೆಯುವ ದಾರಿ ನ್ಯಾಯ,ನೀತಿ,ಧರ್ಮಗಳೆಂಬ ರಾಜಮಾರ್ಗವಾಗಿದ್ದರೆ ಯಾರಿಗೂ ತಲೆ ಬಾಗಿಸುವ ಪ್ರಮೇಯ ಜೀವನದಲ್ಲಿ ಬಾರದು. ಅಹಂಕಾರದಲ್ಲಿ ತಾನು ನಡೆದಿದ್ದೆ ದಾರಿ ಎಂದು ಭಾವಿಸಿದರೆ ಮುಂದೆ ಎಲ್ಲರೆದುರು ತಲೆ ಬಾಗಿಸುವ ಕಾಲ ಬರಬಹುದು

*******

ಜೀವನದಲ್ಲಿ ಗಟ್ಟಿಯಾಗಿ ನಿಲ್ಲಲು ಹೃದಯವನ್ನು ಕಲ್ಲಾಗಿಸಬೇಕು. ಮೃದು ಮನದ ಮೇಲೆ ಆಗಾಗ ಮೃಗದ ದಾಳಿಯಾಗುತ್ತಲಿರುತ್ತದೆ. ಗಟ್ಟಿತನವೇ ಗೆಲುವು. ಅಲ್ಲವೇ

*******

ನಮ್ಮ ಸಾಧನೆಯ ನಂತರ ನಮ್ಮ ಜೊತೆ ನಿಂತವರೆಲ್ಲಾ ನಮ್ಮ ಹಿತೈಷಿಗಳಲ್ಲ.
ಅದರಲ್ಲಿ ಅವಕಾಶವಾದಿಗಳೂ ಇರುತ್ತಾರೆ.

ನಮ್ಮ ಸೋಲಿನ ನಂತರ ನಮ್ಮ ಜೊತೆ ನಿಂತವರು ಮಾತ್ರ ಹಿತೈಷಿಗಳೇ ಆಗಿರುತ್ತಾರೆ.
ಅವರಲ್ಲಿ ಸಾಧನೆ,ಸೋಲಿಗಿಂತಲೂ ನಮ್ಮಲ್ಲಿನ ಪ್ರೀತಿ ಹೆಚ್ಚಿರುತ್ತದೆ.

*******

ಬರೆದಿದ್ದನ್ನು ಅಳಿಸಬಹುದು. ಆದರೆ ಆಡಿದ ಮಾತನ್ನು ಅಳಿಸಿ ಹಾಕಲು ಆಗುವುದಿಲ್ಲ. ಆದ್ದರಿಂದ ಮಾತನ್ನು ಆಡುವಾಗ ಎಚ್ಚರವಿರಲಿ. ಅದರಲ್ಲೂ ಸಿಟ್ಟು ಬಂದಾಗ ಮಾತಾಡಲೇ ಬಾರದು. ಏನು ಮಾತಾಡುತ್ತೇವೆಂಬುದೇ ಗೊತ್ತಿರುವುದಿಲ್ಲ

*******

ಖುಷಿಯಾಗಿದ್ದೀನಿ ಅನ್ನುವದು ಭ್ರಮೆ, ಖುಷಿಯಾಗಿರುತ್ತೇನೆ ಅನ್ನುವದು ಕಲ್ಪನೆ,
ಹೇಗಿದ್ದರೂ ಬದುಕುತ್ತಿರುವೆನು ಅನ್ನುವದು ವಾಸ್ತವ 

*******

Root cause of all problem is, we have doubts in our faith and faith in our doubts.

*******

ನಮಗೆ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ನಲ್ಲಿ ತುಂಬಾ ಜನ ಸ್ನೇಹಿತರಿರಬಹುದು, ಆದರೆ ನಮಗೆ ಯಾವ ರೀತಿಯ ಸ್ನೇಹಿತರು ಬೇಕು ಅಂದ್ರೆ ನಮ್ಮ ಫೇಸ್ ನ ಬುಕ್ ನ ರೀತಿ ಓದುವವರು ನಮ್ಮ ನೋವು ನಲಿವುಗಳನ್ನು ತಿಳಿಯುವವರು ಮತ್ತು ನಾವು ಬೇಸರದಲ್ಲಿದ್ದಾಗ ವಾಟ್ಸ್ ಅಪ್ ಎಂದು ಕೇಳಿ ಸಮಧಾನ ಮಾಡುವಂತಹ ಸ್ನೇಹಿತರು ಬೇಕು. 

*******

ಜೀವನದಲ್ಲಿ ನೀನು ನಿನಗೆ ಏನು     ಮಾಡುತಿಯೋ,ಅಂತ್ಯದಲ್ಲಿ ಅದು ನಿನ್ನೊಂದಿಗೆ ಕಳೆದುಹೋಗುತ್ತದೆ...!

ಅದೇ ನೀನು ಬೇರೆಯಾವರಿಗಾಗಿ ಕೆಲಸ ಮಾಡುತಿಯೋ ಆದು ನಿನ್ನ ನೆನಪಾಗಿ ಈ ಜಗತ್ತಿನಲ್ಲಿಯೇ ಉಳಿಯುತ್ತದೆ.

*******

ಸಮುದ್ರ ಎಂದಿಗೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗಿಯೇ ನೀರು ಅಲ್ಲಿಗೆ ನೀರು ಅಲ್ಲಿಗೆ ಹರಿದು ಬರುತ್ತದೆ. ಅದೇ ರೀತಿ ಯಶಸ್ಸು ಮತ್ತು ಕೀರ್ತಿಗಳು ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದೆ ಆದಲ್ಲಿ ಅವು ನಮ್ಮನ್ನು ಹಿಂಬಾಲಿಸಿ ಬರುತ್ತವೆ.

*******

ಸಮಯಕ್ಕೆ ದುಡ್ಡಿಗಿಂತ ಹೆಚ್ಚು ಮೌಲ್ಯವಿದೆ,  ದುಡ್ಡು ಎಷ್ಟು ಬೇಕಾದರೂ ಸಂಪಾದಿಸಬಹುದು, ಆದರೆ ಸಮಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.  

*******

ಜೀವನವೆಂದರೆ ಕೇವಲ ಒಂದು ಕತೆಯಲ್ಲ.ಅದು ಅನೇಕ ಕತೆ, ಉಪಕತೆ ಹಾಗೂ ತಿರುವುಗಳನ್ನು ಹೊಂದಿರುವ ಕತೆಗಳ ಸಮೂಹ ಎಂದು ಹೇಳಬಹುದು.

*******

ನಾವೆಲ್ಲಾ ಸದಾ ಆಸ್ತಿ ಮಾಡುವ ಚಿ0ತೆ ಮಾಡುತ್ತೇವೆ ಆದರೆ ಆ ಆಸ್ತಿ ಹೇಗಿರಬೇಕು ಎ0ಬುದನ್ನು ಯೋಚನೆ ಮಾಡುವುದಿಲ್ಲಾ. ಹಾಗಾದರೆ ಈ ಕೆಳಗೆ ಬರೆದಿರುವುದನ್ನು ಓದಿ ಆಳವಡಿಸಿ ಆನ0ದಮಯವಾಗಿಸಿ ಜೀವನವನ್ನು. "ಅಮೂಲ್ಯ ಆಸ್ತಿ"

1 ಒಳ್ಳೆಯ ನಡತೆ ಮನುಷ್ಯನ ಆಸ್ತಿ.

2 ಒಳ್ಳೆಯ ಮಕ್ಕಳು ತಂದೆ ತಾಯಿಯ ಆಸ್ತಿ.

3 ಒಳ್ಳೆಯ ಗುಣ ಮನಸ್ಸಿನ ಆಸ್ತಿ.

4 ಒಳ್ಳೆಯ ಸಂಭಂದ ಜೀವನದ ಆಸ್ತಿ.

5 ಒಳ್ಳೆಯ ಹವ್ಯಾಸ ಪರಿಸರದ ಆಸ್ತಿ.

6 ಒಳ್ಳೆಯ ಪ್ರೀತಿ ಹೃದಯದ ಆಸ್ತಿ.

7 ಒಳ್ಳೆಯ ಆಹಾರ ದೇಹದ ಆಸ್ತಿ.

8 ಒಳ್ಳೆಯ ಪುಸ್ತಕ ಜ್ಞಾನದ ಆಸ್ತಿ.

9 ಒಳ್ಳೆಯ ಗುರು ವಿಶ್ವದ ಆಸ್ತಿ.

10 ಒಳ್ಳೆಯ ನಗು ಆರೋಗ್ಯದ ಆಸ್ತಿ.

11 ಒಳ್ಳೆಯ ಮಾನವೀಯತೆ ಸಮಾಜದ ಆಸ್ತಿ.

ಇವೇ ನಮ್ಮ ನಿಮ್ಮೆಲ್ಲರ ಆಸ್ತಿಯಾಗಿರಲಿ ಎಂದು ಪ್ರಾರ್ಥಿಸೋಣ.

*******

ಪ್ರತಿಯೊಂದು ಕಷ್ಟವೂ ಅನುಭವ ನೀಡುತ್ತದೆ
ಪ್ರತಿಯೊಂದು ಅನುಭವವೂ ವ್ಯಕ್ತಿಯನ್ನು ಬದಲಾಯಿಸುತ್ತದೆ. 

*******

ಅನುಮಾನ ಮತ್ತು ಅಹಂಕಾರ ಇವೆರಡು ಭಯಂಕರವಾದ ಮಾನಸಿಕ ರೋಗಗಳು. ಈ ರೋಗ ಬಂದವರು ತಾವೂ ಸುಖಪಡುವುದಿಲ್ಲ ಹಾಗೂ ಇತರರನ್ನು ಸಹ ಸುಖಪಡಲು ಬಿಡುವುದಿಲ್ಲ.

*******

ನೀರಿನಿಂದ  ಕಲಿಯಬೇಕಾದ  ಎರಡು ಅಂಶಗಳು ಏನೆಂದರೆ, ಸಂದರ್ಭಕ್ಕೆ  ಅನುಗುಣವಾಗಿ  ಒಗ್ಗಿಕೊಳ್ಳುವುದು,ಇನ್ನೊಂದು ನಮ್ಮ ದಾರಿ ನಾವೇ ಕಂಡುಕೊಳ್ಳುವುದು.

*******


Kannada subhashitha - ಕನ್ನಡ ಸುಭಾಷಿತ ಸಂಗ್ರಹ 17

 ಎಲ್ಲ ದಿನಗಳೂ ನಿಮ್ಮ ಪಾಲಿಗೆ ಒಳ್ಳೆಯದೇ ಆಗಿರಲಿಕ್ಕಿಲ್ಲ. ಆದರೆ ಪ್ರತಿ ದಿನದಲ್ಲೂ ಒಂದಾದರೂ  ಒಳ್ಳೆಯ ಘಟನೆ., ಅಂಶ ಇದ್ದೇ ಇರುತ್ತದೆ. ಆ ಮೂಲಕವೇ ಪ್ರತಿ ದಿನವನ್ನು ಸಾರ್ಥಕ ಗೊಳಿಸಬೇಕು.
ಮೇಲಿನ ವಾಕ್ಯದಿಂದ ನಾವು ತಿಳಿಯುವದೇನೆಂದರೆ ದಿನದಲ್ಲಿ ನಡೆಯುವ ಎಷ್ಟೋ ಘಟನೆಗಳಲ್ಲಿ ಶುಭ ಸಂದರ್ಭವನ್ನೇ ಸದುಪಯೋಗ ಮಾಡಿಕೊಳ್ಳಬೇಕು.

ನಮಗೆ ಕೆಲವು ದಿನ ಶುಭವಾದರೆ ಇನ್ನು ಕೆಲದಿನ ಅಶುಭ ಆಗುತ್ತವೆ. ಏಕೆಂದರೆ ಆಯಾದಿನ ಸಂಭಾವಿಸಿದ ಘಟನೆಯನ್ನು ಅವಲಂಬಿಸಿದೆ.ದಿನದ ಪ್ರತಿಯೊಂದು ಕ್ಷಣ ಒಳ್ಳೆಯದು ಇರುವದಿಲ್ಲ. ಅದು ನಮ್ಮ ಕೈಯಲ್ಲಿ ಇಲ್ಲ. ಎಲ್ಲವೂ ಪರಮಾತ್ಮನ ಸಂಕಲ್ಪದಂತೆ ನಡೆಯುತ್ತವೆ.
ಮೇಲಿನ ವಾಕ್ಯದಂತೆ ನಮ್ಮ ಜೀವನದ ದಿನಗಳಲ್ಲಿ. ದಿನಕ್ಕೆ ಒಂದಿಲ್ಲ ಒಂದು ಸಂತೋಷದ ಘಟನೆ ಇದ್ದೇ ಇರುತ್ತದೆ. ಅದನ್ನು ನಾವು ತಿಳಿದು ನಮ್ಮ ಇಡೀ ದಿನವನ್ನು ಸಂತೋಷದ ದಿನವನ್ನಾಗಿ ಮಾಡಿ., ಸಾರ್ಥಕ ಮಾಡಿಕೊಳ್ಳಬೇಕು. ಈ ಘಟನೆಯು ಬರುವದು ನಮಗೇತಿಳಿಯುವದು. ಕೆಟ್ಟ ಘಟನೆಗೆ, ದುಃಖಕ್ಕೆ ದಾರಿ. ಮಾಡಿಕೊಡದೆ ಸಂತೋಷವನ್ನೇ ತಂದುಕೊಳ್ಳ ಬೇಕು. ಸಂತೋಷದಿಂದ ನಮ್ಮ ಮನಸ್ಸು ಉಲ್ಹಸಿತ ಇದ್ದು ಉತ್ತಮ ಆರೋಗ್ಯಕ್ಕೆ ದಾರಿಯಗುವದು

 *********

ಯಾವತ್ತೂ ನೇರವಾಗಿ ಮಾತನಾಡುವ ವ್ಯಕ್ತಿಗಳ ಬಳಿಯಲ್ಲಿ ಜನರ ಸಮೂಹ ಕಡಿಮೆ ಇರುತ್ತದೆ.ಅದೇ ಡಂಬಚಾರದ ಮಾತುಗಳನ್ನು ಆಡುವವರ ಬಳಿ ಜನರ ಸಮೂಹ ದೊಡ್ಡದಿರುತ್ತದೆ. ಆದರೆ ನೇರ ಮಾತನಾಡುವವರು ಆದರ್ಶಪ್ರಾಯರಾದರೆ -ಡಂಬಚಾರಿಗಳು ಹಾಸ್ಯದ ವಸ್ತುಗಳಾಗಿರುತ್ತಾರೆ.

ಆಂತರ್ಯವನ್ನು ಶುದ್ಧವಾಗಿಟ್ಟುಕೊಂಡರೆ ಎಂಥದ್ದೇ ಬಾಹ್ಯ ಸಮಸ್ಯೆಗಳು ಬಂದರೂ ದಿಟ್ಟತನದಿಂದ ಎದುರಿಸಿ ಗೆಲ್ಲಬಹುದು.
 
ಬದುಕೊಂದು ಯುದ್ಧಭೂಮಿ ಇದ್ದಹಾಗೆ ಧೈರ್ಯವಾಗಿ ಹೋರಾಡಿ,ಕಾಲ ಕೆಳಗಿನ ನೆಲ ಕುಸಿದು ಬಿದ್ದರೂ ಯಾರಿಂದಲೂ ಏನನ್ನೂ ಬಯಸದೆ ಯಾರಿಗೂ ಹೆದರದೇ ಮುನ್ನುಗ್ಗಿ 
 
ವಯಸ್ಸಿನ ಪಕ್ವತೆಗಿಂತ ಅನುಭವದ ಪಕ್ವತೆ ಹೆಚ್ಚು ಪರಿಣಾಮಕಾರಿ.
ಯಾಕೆಂದರೆ ಅನುಭವಿ ಅನ್ನಿಸಿಕೊಳ್ಳಲು ಹಲವಾರು ಏಳುಬೀಳುಗಳನ್ನು ದಾಟಬೇಕಾಗುತ್ತದೆ.
ವಯಸ್ಕ ಅನ್ನಿಸಿಕೊಳ್ಳಲು ವರ್ಷಕ್ಕೊಮ್ಮೆ ಬರುವ ಜನ್ಮದಿನದ ದಿನಾಂಕ ದಾಟಿದರೆ ಸಾಕು
 
ಇಂದಿನ ಕಷ್ಟದ ದಿನಗಳೇ ನಾಳೆಯ ಖುಷಿಗೆ ಕಾರಣ.
ನಮ್ಮನ್ನು ಸಮಯ ಎಷ್ಟು ಕಾಯಿಸುತ್ತದೆಯೋ ಅಷ್ಟು ಉತ್ತಮ ಫಲ ಸಿಗುತ್ತದೆ 
 
ಜೀವನ ನಿತ್ಯ ಕಲಿಯುವ ಪಾಠಶಾಲೆ. ಸಜ್ಜನರಿಂದ ಸಂತೋಷದ ಪಾಠ , ದುರ್ಜನರಿಂದ ನೋವಿನ ಪಾಠ . ಕಲಿತ ಪಾಠ ಅರಗಿಸಿಕೊಳ್ಳುವದೇ ಜೀವನದ ಶ್ರೇಷ್ಠ ಕಲಿಕೆ
 
ಪ್ರಾಮಾಣಿಕ ಸ್ನೇಹಿತರು ಯಾರು, ಸಮಯಸಾಧಕರು ಯಾರು ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಸಂಪೂರ್ಣ ಸೋತಂತೆ ನಟಿಸಿಬಿಡಿ.
ಪ್ರಾಮಾಣಿಕ ಸ್ನೇಹಿತರು ಬೆಟ್ಟದ ತುದಿಯಲ್ಲಿದ್ದರೂ ಭೇಟಿಯಾಗುತ್ತಾರೆ.
ಸಮಯಸಾಧಕರು ಕಣ್ಣೆದುರು ಇದ್ದರೂ ಕಡೆಗಣಿಸುತ್ತಾರೆ.
 
ಸಂಪತ್ತಿಗಿಂತ ಸದ್ಗುಣಗಳನ್ನು ಶೇಖರಿಸಿಟ್ಟುಕೊಳ್ಳುವುದು ತುಂಬಾ ಸುಲಭಕಾರ್ಯ.
ನಮ್ಮ ಸಂಪತ್ತನ್ನು ನಾವೇ ಕಾಯಬೇಕಾಗುತ್ತದೆ.
ನಮ್ಮ ಸದ್ಗುಣಗಳು ನಮ್ಮನ್ನೇ ಕಾಯುತ್ತವೆ.
 
ಮಿತ್ರರನ್ನು ಪ್ರೀತಿಸಿರಿ, ಅವರು ಬಲ ತುಂಬುತ್ತಾರೆ.
ಅದೇರೀತಿ, ಶತ್ರುಗಳನ್ನು ಗೌರವಿಸಿರಿ, ಅವರು ಛಲ ತುಂಬುತ್ತಾರೆ.
 
*ಬೀಗವನ್ನು ಬೀಗದ ಕೈಯಿಂದ ಮತ್ತು ಸುತ್ತಿಗೆಯಿಂದಲೂ ತೆರೆಯಬಹುದು.*
*ಆದರೆ ಕೈಯಿಂದ ತೆಗೆದ ಬೀಗವು ಮತ್ತೆ ಮತ್ತೆ ಉಪಯೋಗಕ್ಕೆ ಬರುತ್ತದೆ.*
*ಮತ್ತು ಸುತ್ತಿಗೆಯಿಂದ ತೆಗೆದ ಬೀಗವು ಮತ್ತೆ ಉಪಯೋಗಿಸಲು ಬಾರದು.*
*ಸಂಬಂಧಗಳ ಬೀಗವನ್ನು ಕೋಪದ ಸುತ್ತಿಗೆಯಿಂದಲ್ಲ ಬದಲಾಗಿ ಪ್ರೀತಿಯ ಬೀಗದ ಕೈಯಿಂದ ತೆರೆಯೋಣ*

Kannada subhashitha - ಕನ್ನಡ ಸುಭಾಷಿತ ಸಂಗ್ರಹ 17


*ಯಾರು ಎಲ್ಲ ವಿಷಯಗಳಲ್ಲೂ ಅನಾಸಕ್ತರಾಗಿ, ಶುಭವನ್ನು ಪಡೆದಾಗ ಸಂತೋಷಿಸುವುದಿಲ್ಲವೋ ಮತ್ತು ಅಶುಭ ಉಂಟಾದಾಗ ದ್ವೇಷಿಸುವುದಿಲ್ಲವೋ, ಅವರ ಬುದ್ಧಿಯು ಸ್ಥಿರವಾಗಿರುತ್ತದೆ. ಶುಭಾಶುಭಗಳನ್ನು ಸಮನಾಗಿ ಸ್ವೀಕರಿಸುವವರು ಯಶಸ್ವೀ ಜೀವನ ನಡೆಸುತ್ತಾರೆ.*
 
ಬ್ರಹ್ಮಾನಂದವೇನೆಂಬುದನ್ನು ತಿಳಿಯದ ಜನ ವಿಷಯಾನಂದವೇ ರಮಣೀಯವೆನ್ನುತ್ತಾರೆ. ತುಪ್ಪವನ್ನೇ ಎಂದೂ ಕಾಣದವನು ಎಳ್ಳೆಣ್ಣಿಯನ್ನೇ ಶ್ರೇಷ್ಠವೆಂದು ತಿಳಿಯುತ್ತಾನೆ.
 
*ವಿರೋಧ ಅನ್ನುವುದು , ಇಲ್ಲದೇ ಹೋದರೆ ,ವ್ಯಕ್ತಿ , ಪರಿಪೂರ್ಣನಾಗಲಾರ.
*ಗಾಳಿಪಟ  ಆಕಾಶಕ್ಕೆ ಹಾರಬೇಕಿದ್ದರೆ, ಗಾಳಿಯ ವಿರುದ್ಧವೇ ಸಾಗಬೇಕು.*
*ಜೀವನದ ಯಶಸ್ಸಿನಲ್ಲಿ , ಮಿತ್ರರಗಿಂತ ಶತ್ರುಗಳ ಪಾತ್ರ ಜಾಸ್ತಿ ಇರುತ್ತದೆ.*

 ದುರ್ಬಲನಿಗೆ ರಾಜನೇ ಬಲ. ಬಾಲಕನಿಗೆ ಅಳುವದೇ ಬಲ. ಮೂರ್ಖನಿಗೆ ಮಾತನಾಡದಿರುವದೇ ಬಲ. ಕಳ್ಳನಿಗೆ ಸುಳ್ಳೇ ಬಲ.

ಕಷ್ಟಗಳ ಮೂಲ ಆಸೆ.ಆದರೂ ಆಸೆ ಅಗಣಿತವಾದುದು. ಆಸೆಯನ್ನು ಬಿಟ್ಟು ಲೋಕವಿಲ್ಲ. ಆಸೆಯೆಂಬ ಸುಮಗಳ ಸುತ್ತ ಮನವೆಂಬ ಭ್ರಮರವು ಸುತ್ತುತ್ತಲೇ ಇರುತ್ತದೆ. ಪಂಚೇಂದ್ರಿಯಗಳ ಮೂಲಕ ಅನುಭವಿಸುವ      ಎಲ್ಲವೂ ಆಸೆಯ ಮೂಲವೇ ಆಗಿದೆ ಎನ್ನಬಹುದು. ಆದ್ದರಿಂದ ಆಸೆಯ ಕೈಗೆ ‍ಮನಸ್ಸನ್ನು ಕೊಡದೆ ನಮ್ಮ ಬದುಕು ಬವಣೆಯಾಗದಂತೆ ಸಮರಸದ ಬಾಳನ್ನು ಬಾಳೋಣ.
 
*ಗುಲಾಬಿ ತರಹ ವಿಕಸಿತ ಆಗಲು ಬಯಸಿದರೆ*,*ನಾವು ಮುಳ್ಳುಗಳ ಜೊತೆಗೆ ಹೊಂದಾಣಿಕೆ ಗೊಳ್ಳುವ ಕಲೆ ಕರಗತ ಮಾಡಿಕೊಳ್ಳಬೇಕು. ಯಾರನ್ನು ಸಂಧಿಸುತ್ತೇವೆ ಎಂಬುದನ್ನು ಕಾಲ ನಿರ್ಧರಿಸಿದರೆ, ನಮ್ಮ ಜೀವನದಲ್ಲಿ* *ಯಾರು ಉಳಿದು ಕೊಳ್ಳುತ್ತಾರೆ ಎಂಬುದನ್ನು* *ನಮ್ಮ ವರ್ತನೆ ನಿರ್ಧರಿಸುತ್ತದೆ*
 
*ನಿಮ್ಮದೇ ಕೆಲಸಕ್ಕಾಗಿ ಇನ್ನೊಬ್ಬರ ಬಳಿ ಅಭಿಪ್ರಾಯಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.*
*ಆದರೇ ಅನುಷ್ಠಾನದಲ್ಲಿ ಮಾತ್ರ ನಿಮ್ಮದೇ ಸ್ವತಂತ್ರ ಆಲೋಚನೆಯಿರಲಿ.*
*ನಿಮ್ಮ ಬಗ್ಗೆ ನಿಮಗೆ ಅರಿವಿಲ್ಲದಿದ್ದಾಗ ಮಾತ್ರ ಬೇರೆಯವರ ಅಭಿಪ್ರಾಯಗಳಿಗೆ ನೀವು ಅವಲಂಬಿತರಾಗಿರುತ್ತೀರಿ.* 
ನಮ್ಮ ಕಷ್ಟ ಸಮಯದಲ್ಲಿ ದೇವರು ಮೌನವಾಗಿದ್ದಾರೆ, ಎಂದು ದುಃಖಿಸಬಾರದು. ಏಕೆಂದರೆ, ಪರೀಕ್ಷಾ ಕೊಠಡಿಯಲ್ಲಿ ನಮಗೆ ಪಾಠ ಕಲಿಸಿದ ಶಿಕ್ಷಕರೂ ಕೂಡ,ಮೌನವಾಗಿರುತ್ತಾರೆ
 
ಬದುಕಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವಂತೆ ಬದುಕೋದು ಸ್ವಾಭಿಮಾನದ ಜೀವನ. ನಮ್ಮನ್ನ ಮತ್ತೊಬ್ಬರು ಗುರುತಿಸುವಂತೆ ಬದುಕುವುದು ಅಭಿಮಾನದ ಸನ್ಮಾನ

Kannada subhashitha - ಕನ್ನಡ ಸುಭಾಷಿತ ಸಂಗ್ರಹ 16

ಪುಸ್ತಕದ ಅಂಗಡಿಗಳಿಗೆ ಬಾಗಿಲುಗಳನ್ನು ಹಚ್ಚಬೇಕಾಗಿಲ್ಲ. ಕಾರಣ , ಕಳ್ಳರು  ಎಂದಿಗೂ ಪುಸ್ತಕ  ಓದುವುದಿಲ್ಲ. ಪುಸ್ತಕ ಓದಿದವರು ಎಂದಿಗೂ ಕಳ್ಳರಾಗುವುದಿಲ್ಲ.

ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ.. ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...
ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...ಆದರೆ "ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ ಎಚ್ಚರ ಗೆದ್ದರೆ ಕಾಲು ಹಿಡಿಯುತ್ತಾರೆ, ಬಿದ್ದರೆ ಕಾಲು ಎಳೆಯುತ್ತಾರೆ 

ಮಾಣಿಕ್ಯವು ( ರತ್ನವು ) ಎಷ್ಟೇ ಅಮೂಲ್ಯವೇ ಆದರೂ ಅದಕ್ಕೆ ಚಿನ್ನದ ಆಶ್ರಯ ಬೇಕೇ ಬೇಕು. ಹಾಗೆಯೇ ಪಂಡಿತರು , ವನಿತೆಯರು ಮತ್ತು ಲತೆಗಳು ಆಶ್ರೆಯವಿಲ್ಲದಿದ್ದರೇ ಶೋಭಿಸುವದಿಲ್ಲ.

ಬಡತನ ಮನುಷ್ಯನಿಗಿರಬೇಕೆ ಹೊರತು ಮನಸ್ಸಿಗೆ ಇರಬಾರದು, ಶ್ರೀಮಂತಿಕೆ ಮನಸ್ಸಿಗೆ ಇರಬೇಕೆ ಹೊರತು ಮನುಷ್ಯನಿಗಿರಬಾರದು...

ಪರಿಪೂರ್ಣ ಸಮಯಕ್ಕಾಗಿ ಕಾಯುವ  ಅವಶ್ಯಕತೆ ಇಲ್ಲ.ಆದರೆ, ಸ್ವಲ್ಪ  ಸಮಯ ತೆಗೆದುಕೊಂಡು ಅದನ್ನು ಪರಿಪೂರ್ಣಗೊಳಿಸಬೇಕು.

ನಮ್ಮ  ಶರೀರದಲ್ಲಿ ರಕ್ತಕ್ಕಿಂತ ನೀರಿನ ಅಂಶವೇ ಹೆಚ್ಚಾಗಿದ್ದರೂ ನಮಗೆ ಗಾಯವಾದಾಗ ಬರೋದು ರಕ್ತ ಮಾತ್ರ. ಆದರೆ ನಮ್ಮ ಹೃದಯದಲ್ಲಿ ಹೆಚ್ಚಿನ ಅಂಶ ರಕ್ತವಿದ್ದರೂ ನಮಗೆ ನೋವು ಆದಾಗ ಬರುವುದು ಕಣ್ಣೀರು ಮಾತ್ರ.

ಬಯಕೆಗಳು ಹೆಚ್ಚಾದಂತೆ ಬದುಕು ಬಂಡೆಗಲ್ಲಿನಂತೆ ಭಾರವಾಗುತ್ತದೆ... ಬಯಕೆಗಳು ಕಡಿಮೆಯಾದಂತೆ ಬದುಕು ಹೂವಿನಂತೆ ಹಗುರವಾಗುತ್ತದೆ

Kannada subhashitha - ಕನ್ನಡ ಸುಭಾಷಿತ ಸಂಗ್ರಹ 16


ಎಷ್ಟೋ ಬಾರಿ ನಾವು ಸೋತಾಗ,

"ನನ್ನ ಸೋಲಿಗೆ ಅವರೇ ಕಾರಣ","ಆ ಘಟನೆ ನಡೆಯದಿದ್ದರೆ,ನಾನು ಗೆದ್ದು ಬಿಡುತ್ತಿದ್ದೆ.""ನಾನಂದುಕೊಂಡಂತೆ ನಡೆದಿದ್ದರೆ,ನಾನು ಗೆದ್ದೇ ಗೆಲ್ಲುತ್ತಿದ್ದೆ.""ನನಗೆ ಯಾರೂ ಸಹಾಯ ಮಾಡುತ್ತಿಲ್ಲ" "ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ" ಎಂದು ಸಾವಿರ ಕಾರಣ ಹೇಳಿ,*ನನ್ನ ಸೋಲಿಗೆ ಬೇರೆಯವರು ಕಾರಣ* ಎಂದು ಸಮರ್ಥಿಸಿಕೊಳ್ಳುತ್ತೇವೆ  *ಅದರ ಬದಲು* ಗೆಲ್ಲಲೇಬೇಕೆಂಬ ನನ್ನ ತೀರ್ಮಾನ ದೃಢವಾಗಿರಲಿಲ್ಲ.ನನ್ನ ಪ್ರಯತ್ನ ಸಾಕಾಗಲಿಲ್ಲ.ನನ್ನ ಪ್ರಯತ್ನ ನಿರಂತರವಾಗಿರಲಿಲ್ಲ.ನನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿತ್ತು.ನನ್ನಲ್ಲೇ ಏನೋ ಸಮಸ್ಯೆ ಇದೆ ಎಂದು ಆತ್ಮಾವಲೋಕನ‌ ಮಾಡಿಕೊಂಡರೆ, ನನ್ನಲ್ಲಿನ ಒಂದೊಂದೇ ಕೊರತೆಯನ್ನು ಸರಿಪಡಿಸಿಕೊಳ್ಳುತ್ತಾ ಹೋದರೆ, ಮುಂದಾದರೂ ಗೆಲುವು ಸಾಧಿಸುವ ಧ್ಯತೆ ಹೆಚ್ಚುತ್ತದೆ‌. ಸೋಲುಗಳು ಜೀವನದ ಪಾಠಗಳಾಗಲಿ.


ಸಮಯ ಕೆಲವರನ್ನ ಕಾಯಿಸುತ್ತಂತೆ ಮತ್ತೆ ಕೆಲವರನ್ನ ಪರೀಕ್ಷಿಸುತ್ತಂತೆ ಹಾಗೆ ಕೆಲವರನ್ನ ಮೆರೆಸುತ್ತಂತೆ ಇನ್ನು ಕೆಲವರನ್ನ ಸಮಾಧಾನಿಸುತ್ತಂತೆ ಆದರೆ ಕೆಲವೇ ಕೆಲವರನ್ನ ಮಾತ್ರ ನಗಿಸುತ್ತಂತೆಇಷ್ಟೇ ಜೀವನ.

ಇಷ್ಟಪಟ್ಟಿದ್ದೆಲ್ಲಾ ಸಿಗಬೇಕಾದರೆ ಪ್ರಯತ್ನ ಮಾತ್ರವಲ್ಲ, ಯೋಗವೂ ಬೇಕು. ಆ ಯೋಗ ಪಡೆಯುವುದು ನಮ್ಮಲ್ಲಿಲ್ಲ. ಆದರೇ ಇಷ್ಟಪಟ್ಟಿದ್ದು ಸಿಕ್ಕಾಗ ಉಳಿಸಿಕೊಳ್ಳುವುದಕ್ಕೆ ಯೋಗ್ಯತೆ ಬೇಕು. ಅದು ನಮ್ಮಲ್ಲಿ ಇರುತ್ತದೆ. ಉಪಯೋಗಿಸಬೇಕು ಅಷ್ಟೇ.

ಸ್ಪರ್ಧೆಗಳನ್ನು ಸವಾಲಾಗಿ ತೆಗೆದುಕೊಂಡರೆ ನಿರಾಳತೆ ಹೆಚ್ಚು.ಸ್ಪರ್ಧೆಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರೆ ಆತಂಕ ಹೆಚ್ಚು. ಸವಾಲು ಗೆದ್ದವನ ಬಳಿ ಪ್ರತಿಷ್ಠೆ ತಾನಾಗೇ ಬರುವುದು.

ಹುಟ್ಟಿನಿಂದ ಯಾರೂ ಶ್ರೇಷ್ಠ ವ್ಯಕ್ತಿ ಆಗಿರುವುದಿಲ್ಲ, ನಮ್ಮ ನಡೆ-ನುಡಿ, ನಾವು ಇನ್ನೊಬ್ಬರ ಜೊತೆ  ನಡೆದುಕೊಳ್ಳುವ ರೀತಿ , ನಮ್ಮನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ಬದಲಾಯಿಸುತ್ತವೆ.

ಸಂಬಂಧಗಳು ರಕ್ತದಿಂದಲ್ಲ ವಿಶ್ವಾಸದಿಂದ ಹುಟ್ಪುತ್ತವೆ. ವಿಶ್ವಾಸವಿದ್ದಲ್ಲಿ ಹೊರಗಿನವರೂ ನಮ್ಮವರಾಗುತ್ತಾರೆ, ಇಲ್ಲವಾದರೆ ನಮ್ಮವರೇ ಹೊರಗಿನವರಾಗುತ್ತಾರೆ. ದೂರಾದವರಿಗಾಗಿ ಪ್ರಾರ್ಥಿಸಿ, ಜೊತೆಗಿರುವವರನ್ನು ಪ್ರೀತಿಸಿ.

ಪ್ರಭಾವ ನೋಡಿ ಹತ್ತಿರ ಬರುವ ಜನರಿಗಿಂತ ಸ್ವಭಾವ ನೋಡಿ ಹತ್ತಿರ ಬರುವವರೇ…. ನಿಜವಾದ ನಮ್ಮ ಹಿತೈಶಿಗಳು.

ಒಂದು ಬಾರಿಯ ಗೆಲುವು ನಮ್ಮ ಸಾಮರ್ಥ್ಯಕ್ಕೆ ಕೈಗನ್ನಡಿಯಲ್ಲ.  ಒಮ್ಮೆ ಗೆದ್ದು ಇನ್ನೊಮ್ಮೆ ಸೋತರೆ ಅದನ್ನು ಅದೃಷ್ಟವೆಂದೇ ಪರಿಗಣಿಸಲಾಗುತ್ತದೆ.  ಬಾರಿ ಬಾರಿಯ ಸತತ ಗೆಲುವು ಮಾತ್ರ ನಮ್ಮ ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತದೆ.

 ಜ್ಞಾನಿಗಳ ನುಡಿಗಳನ್ನು ಅರ್ಥೈಸಿಕೊಂಡರೆ ಸಾಲದು. ನಡೆಯನ್ನೂ ಅನುಸರಿಸಬೇಕುಸಾಧಕರ ಸಾಧನೆಯ ಶ್ರಮವನ್ನು ಅರಿತುಕೊಂಡರೆ ಸಾಲದು. ಸಾಧ್ಯವಾದಷ್ಟು ಅನುಕರಣೆ ಮಾಡಬೇಕು.ಜ್ಞಾನ-ಸಾಧನೆ ಎರಡೂ ನಮ್ಮದಾಗಲು ಸಾಧ್ಯ.

ನೀವು ಯಾರನ್ನೂ ದ್ವೇಷಿಸಬೇಡಿ. ಏಕೆಂದರೆ ಯಾವ ದ್ವೇಷ  ನಿಮ್ಮಿಂದ ಬರುತ್ತದಯೋ ಅದು ಕೊನೆಗೆ ನಿಮಗೇ ಹಿಂತಿರುಗುತ್ತದೆ. ನೀವು ಪ್ರೀತಿಸಿದರೆ, ಆ ಪ್ರೀತಿಯೇ ಮರಳಿ ನಿಮಗೇ ಬಂದು ಸೇರುತ್ತದೆ.

DVG Mankuthimmana Kagga with meaning

ಕಾಡುಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ?- ।
ನೋಡುವರ ಕಣ್ಣೊಲವ ಬೇಡುವಳೆ ಸೃಷ್ಟಿ? ॥
ಮಾಡುವಾ ಮಾಟಗಳನಾದನಿತು ಬೆಳಗಿಪುದು ।
ರೂಢಿಯಾ ಪ್ರಕೃತಿಯದು  - ಮಂಕುತಿಮ್ಮ


ಕಾಡಿನ ಹಕ್ಕಿ ಹುಳ ಹುಪ್ಪಟೆಗಳಿಗೆ ಚಿತ್ರ ವಿಚಿತ್ರವಾದ ಬಣ್ಣಗಳು ಏಕೆ ಇವೆ? ನೋಡುವವರು ಅವುಗಳನ್ನು ನೋಡಿ ಒಲವನ್ನು ತೋರಲಿ ಎಂದೇ? ಖಂಡಿತ ಅಲ್ಲ. ಕೋಟ್ಯಾಂತರ ರೂಪ ಮತ್ತು ಬಣ್ಣಗಳಲ್ಲಿ, ಚಿತ್ರ ವಿಚಿತ್ರವಾದ ವಿನ್ಯಾಸಗಳಲ್ಲಿ ಪ್ರಕಟಗೊಳ್ಳುವುದು ಪ್ರಕೃತಿಯ ಸ್ವಧರ್ಮ ಅಥವಾ ರೂಢಿ ಎಂದು ಪ್ರಕೃತಿಯ ಸ್ವಾಭಾವಿಕ ವೈವಿಧ್ಯತೆಯನ್ನು ಎತ್ತಿ ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Why does nature create wonderful scenic in the forest for birds and insects to see? Does she ask for appreciation from those who see it? It is her practice to exhibit her creations as much as she can - not caring much if there is an audience or not. That is her style. - Mankutimma

*******

ಪುರುಷಯೋಚನೆಯೆಲ್ಲ ಮುರಿದು ಮಣ್ಣಹುದೆಂದು ।
ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು ॥
ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? ।
ಪರವೆಯೇನಿಲ್ಲವೆಲೊ - ಮಂಕುತಿಮ್ಮ


ಅಯ್ಯೋ ನಾವು ಮಾಡುವ ಯೋಚನೆಯೆಲ್ಲಾ ಯಾವುದೂ ಫಲಿಸುವುದಿಲ್ಲ ನಮ್ಮ ಪ್ರಯತ್ನವೆಲ್ಲಾ ಮಣ್ಣಾಗುವುದು ಎಂದು ಕೊರಗದೆ ಇರು. ‘ನಾ ಕೆಟ್ಟೆ’ ಎನ್ನದಿರು. ಕಡಲಿನಲ್ಲಿ ಮೀನು ಒಂದು ಹುಟ್ಟಿದರೇನು ಸತ್ತರೇನು ಕಡಲಿಗೇನೂ ವ್ಯತ್ಯಾಸವಾಗುವುದಿಲ್ಲವಲ್ಲ. ಹಾಗೆಯೇ ನಿನ್ನ ಯೋಚನೆಗೆಲ್ಲ ಒಂದು ರೂಪ ಸಿಗಲೇಬೇಕೆಂದು ನೀ ಯೋಚಿಸಬೇಡ ಎಂದು ನಮ್ಮ ಯೋಚನೆಗಳನ್ನು ಪರಿಪಕ್ವತೆಯೆಡೆಗೆ ಕೊಂಡೊಯ್ಯಲು ಒದಗುವ ವಿಚಾರ ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

When your efforts don't materialize - don't worry too much. Never give up. Never say never again. In the big ocean, if a single fish is born or dies, does it really matter? Individual success or failure are thus insignificant. - Mankutimma

DVG Mankuthimmana Kagga with meaning


*******

ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ ।
ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ॥
ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು।
ಒಲ್ಲನವನ್ ಅರೆನಚ್ಚ - ಮಂಕುತಿಮ್ಮ
 

ಜಗತ್ತಿನ ಎಲ್ಲ ಕೆಲಸದ ಹೊರೆಯನ್ನು ಹೊರುವ ಅಧಿಕಾರ ನಿನಗಿಲ್ಲ. ಆದರೆ ನಿನಗೆ ಹೊರೆಯೇ ಇಲ್ಲವೆಂದಲ್ಲ!!!! ನೀನು ಮಾಡಲೇ ಬೇಕಾದ ಕರ್ತವ್ಯದ ಹೊರೆ ನಿನಗಿದೆ. ನಿನ್ನ ಕೈಲಾದಷ್ಟನ್ನು ನಿಷ್ಠೆಯಿಂದ ಮಾಡು ಮತ್ತು ಮಿಕ್ಕದ್ದನ್ನು ನಿನ್ನನ್ನು ಪಾಲಿಸುವ ಆ ದೈವದಲ್ಲಿ ದೃಢ ನಂಬಿಕೆ ಇಟ್ಟು ಬಿಟ್ಟುಬಿಡು. ನಂಬಿಕೆ ಪೂರ್ಣವಾಗಿರಲಿ. ಏಕೆಂದರೆ ಅವನು ಅರೆಬರೆ ನಂಬಿಕೆಯನ್ನು ಒಪ್ಪುವುದಿಲ್ಲ.

The creator has not given you the responsibility to run the entire world. He has however given you your set of duties. There is no escaping from that. Perform as many duties as possible and let the rest to be dealt by Him. He will not like a person who believes in Him partially (conditionally). - Mankutimma

*******

ಜಗದ ಸೊಗದರಸಿಕೆಯ ಫಲ, ನೋಡು, ಬರಿ ಕಲಹ ।
ಮೃಗಗಳಾವೇಶಗೊಳಲಿಪ್ಪುದಿನ್ನೇನು? ॥
ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು ।
ಹಗೆತನವುಮಂತು ಬಿಡು - ಮಂಕುತಿಮ್ಮ

ಜಗತ್ತಿನಲ್ಲಿನ ಜೀವನದಲ್ಲಿ, ಸುಖ, ಸಂತೋಷ, ಆನಂದ ಮುಂತಾದವುಗಳ ಹುಡುಕುವಿಕೆಯಿಂದ ಕೇವಲ ಕಲಹ, ಜಗಳಗಳು ಉಂಟಾಗಿವೆ. ಪಾಶವೀ ಪ್ರವೃತ್ತಿಯಿಂದ ಮತ್ತೇನನ್ನು ತಾನೇ ಸಾಧಿಸಲು ಸಾಧ್ಯ? ಕಾಡಿನಲ್ಲಿನ ಬೆಂಕಿ ಕಾಡನ್ನು ಸಂಪೂರ್ಣ ಸುಟ್ಟು ಬೂದಿಯಾಗಿಸದ ಹೊರತು ತಣ್ಣಗಾಗುವುದಿಲ್ಲ. ಹಾಗಾಗಿ ಆನಂದದಿಂದ ಇರಬೇಕಾದರೆ ಹಗೆತನವನ್ನು ಬಿಡು ಎಂದು ಆದೇಶಮಾಡಿದ್ದಾರೆ ಗುಂಡಪ್ಪನವರು ಮುಕ್ತಕದಲ್ಲಿ.

"What is the result of everyone in this world being in pursuit of happiness? See, It's just conflict. Man has engaged in conflict much like the animals every where. What else can be expected to happen then? The forest fire will cease only after turning the entire forest into ashes. Hatred is also thus." -
Mankutimma.

*******

ಮಡಕೆಯನು ಬಡಿದು ಹೊನ್ ಕೊಡವ ತೋರುವ ಸಖನೆ ।
ಪಡೆದಿಹೆಯ ರಹದಾರಿಯನು ಹೊನ್ನ ಗಣಿಗೆ? ॥
ಒಡಲಿಗೊಗ್ಗಿದ ನೀರ ಚೆಲ್ಲಿದೊಡದೇಂ ಪಾಲ ।
ಕುಡಿವ ಸಂತಸಕೆಣೆಯೆ? - ಮಂಕುತಿಮ್ಮ


ಮಣ್ಣಿನ ಮಡಿಕೆಯನ್ನು ಒಡೆದುಹಾಕಿ,’ ಓ!! ನಿನಗೆ ಬಂಗಾರದ ಮಡಿಕೆಯನ್ನು ಕೊಡುವೆ ‘ ಎಂದು ಹೇಳಲು ಬಂಗಾರದ ಗಣಿ ನಿನ್ನ ಬಳಿ ಇದೆಯೇನು? ದೇಹಕ್ಕೆ ಒಗ್ಗಿದ ನೀರನ್ನು ಚೆಲ್ಲಿ ಹಾಲನ್ನು ಕೊಟ್ಟರೂ ನೀರನ್ನು ಕುಡಿವ ಸಂತಸಕ್ಕೆ ಅದು ಸಮವೇನು? ಎಂದು ಸಂತಸದ ಮತ್ತು ತೃಪ್ತಿಯ ಸ್ವರೂಪದ ವಿಚಾರವನ್ನು ನಮ್ಮಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.

"Friend, you cannot break the mud pot with the promise to show a golden one. Have you got the license to mine gold so that you can show these dreams to people? If people are comfortable drinking water (which suits well to their body) then you should not ask them throw water away and get used to milk. Will they be happy doing so?" - Mankutimma

*********

ಸರ್ವಾರ್ಥ ಸಹಭಾಗಿತೆಗೆ ರಾಷ್ಟ್ರ ಕುಲ ವರ್ಗ ।
ಸರ್ವದಣು ತಾನೆನುತ್ತೋರೊರ್ವ ಮನುಜನ್ ॥
ಸರ್ವಜೀವ ಸಮೃದ್ಧಿಗನುಗೂಡಿ ದುಡಿಯುತಿರೆ ।
ಪರ್ವವಂದಿಳೆಗೆಲವೊ - ಮಂಕುತಿಮ್ಮ


ರಾಷ್ಟ್ರ, ಕುಲ,ವರ್ಗ ಇತ್ಯಾದಿ ವಿಭಾಗಗಳು, ಮಾನವರು ಸಹಜೀವನವನ್ನು ಮಾಡಲು ಅನುಕೂಲವಾಗುವಂತೆ ಇವೆ. ಪ್ರತಿಯೊಬ್ಬ ಮನುಷ್ಯನೂ, ತಾನು ಸರ್ವದಲ್ಲಿ ‘ಅಣು’ಮಾತ್ರ ಎಂದು ಬಗೆದು, ಸರ್ವರ ಜೀವನದ ಸಂವೃದ್ಧಿಗೆ ಕೃಷಿಮಾಡಿದ ದಿನ, ಈ ಜಗತ್ತಿಗೆ ‘ಪರ್ವ’ದಿನ ಅಥವಾ ಸಂಭ್ರಮದ ದಿನ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"The goal of making nations, races and sects is to aid sharing and caring for each other. Each man must realize that he is just an atom (cell) of the whole. He must work towards the overall well being of the whole. Only then, the world will look beautiful - like a festival day." - Mankutimma

*********

ಕಾಯಕಿಂತಾತ್ಮ ಪಿರಿತೆಂದು ಜನವರಿತಂದು ।
ಸ್ವೀಯೇಚ್ಛೆಯಿಂ ಸಮಾಧಾನ ಕೆಡದಂದು ॥
ದಾಯ ಸಮ ಸಂಸೃಷ್ಟಿ  ಭೂಭಾಗ್ಯವಾದಂದು ।
ಶ್ರೇಯ ನೆರೆವುದು ಜಗಕೆ - ಮಂಕುತಿಮ್ಮ

ದೇಹಕ್ಕಿಂತ, ಆತ್ಮ ದೊಡ್ಡದೆಂದು ಜನರು ಅರಿತಂದು, ತಮ್ಮ ‘ಸ್ವ-ಇಚ್ಚೆ’ ಯಿಂದಲೇ ನಮ್ಮ ಮಾನಸಿಕ ಸಮಾಧಾನ ಹಾಳಾಗದೆ ಇರುವಂದು, ಈ ಜಗತ್ತಿನಲ್ಲಿ ದೊರೆಯುವ ಸಕಲ ಸೌಭಾಗ್ಯಗಳನ್ನು ಸಮುದಾಯದಲ್ಲಿ ಸಮನಾಗಿ ವಿತರಣೆಯಾದರೆ, ಆಗ ಈ ಜಗತ್ತಿನಲ್ಲಿ ಶ್ರೇಯಸ್ಸು ಉಂಟಾಗುತ್ತದೆ ಎಂದು, ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

"There will be prosperity in abundance in this world when people realize that the soul is to be cared for more than the body, when people find peace within themselves and find ways to do so by themselves, when people learn to share with others equally what they have." - Mankutimma

Terms | Privacy | 2024 🇮🇳
–>