-->

ರಾಮಾಯಣದ ಬಗ್ಗೆ ಪ್ರಶ್ನೋತ್ತರ , Ramayana Quiz

1) ರಾಮಾಯಣ ರಚಿಸಿದವರು ಯಾರು?
ಉತ್ತರ: ವಾಲ್ಮೀಕಿ ಮಹರ್ಷಿಗಳು
2) ವಾಲ್ಮಿಕಿ ಯಾವ ವಂಶಜರು?
ಉತ್ತರ: ಭೃಗುವಂಶ
3) ವಾಲ್ಮಿಕಿಯ ತಂದೆಯ ಹೆಸರೇನು?
ಉತ್ತರ: ಪುಚೇತನ ಮಹರ್ಷಿಗಳು
4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು?
ಉತ್ತರ: ಹುತ್ತ
5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು?
ಉತ್ತರ: ೦೮
6)ರಾಮಾಯಣದ ಕಾಂಡಗಳು ಯಾವುವು?
ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ, 
7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? 
ಉತ್ತರ : ರಾಷ್ಟ್ರಕವಿ ಕುವೆಂಪು
8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ?
ಉತ್ತರ : ಕಂಬನ್
9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು?
ಉತ್ತರ : ಯುದ್ದಕಾಂಡ
10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು? 
ಉತ್ತರ : ತ್ರೇತಾಯುಗ
11) ರಾಮನ ವಂಶ ಯಾವುದು ? 
ಉತ್ತರ : ಸೂರ್ಯವಂಶ 
12) ಸೂರ್ಯವಂಶದ ಮೊದಲ ರಾಜನ ಹೆಸರು ?
ಉತ್ತರ : ಇಕ್ಷ್ವಾಕು
13) ಇಕ್ಷ್ವಾಕುವಿನ ತಂದೆ ಯಾರು ? 
ಉತ್ತರ : ಸೂರ್ಯದೇವ
15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ?
ಉತ್ತರ : ರಘುವಂಶ
16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ?
ಉತ್ತರ : ಸತ್ಯ ಹರಿಶ್ಚಂದ್ರ
17) ದಶರಥನ ಮೂವರು ಪಟ್ಟ ಮಹಿಷಿಯರು 
ಯಾರು ? 
ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ
18) ದಶರಥ ಮಹಾರಜನ ತಂದೆ ಯಾರು ?
ಉತ್ತರ : ಅಜ ಮಹಾರಾಜ
19) ಕೌಶಲ್ಯೆಯ ತಂದೆ ಯಾರು ?
ಉತ್ತರ : ಭಾನುವಂತ
20) ಸುಮಿತ್ರೆಯ ತಂದೆ ಯಾರು ?
ಉತ್ತರ: ಶೂರರಾಜ
21) ಕೈಕೆಯ ತಂದೆ ಯಾರು?
ಉತ್ತರ : ಅಶ್ವಪತಿ ರಾಜ
22) ದಶರಥನು  ಪ್ರಾಣಿಯನ್ನು ಕೊಲ್ಲಲೆಂದು  ಹುಡಿದ್ದ ಬಾಣ ಯಾರಿಗೆ ನಾಟಿತು ?
ಉತ್ತರ : ಶ್ರವಣಕುಮಾರ
23) ದಶರಥನಿಗೆ ಪುತ್ರವಿರಹದಿಂದ ಸಾಯುವಂತೆ ಶಾಪ ನಿಡಿದ್ದು ಯಾರು ?
ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ
24) ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ?
ಉತ್ತರ : ಪುತ್ರಕಾಮೇಷ್ಟಿ ಯಾಗ
25) ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು?
ಉತ್ತರ : ಶೃಂಗಿ ಋಷಿಗಳು
26) ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು? 
ಉತ್ತರ : ಅಗ್ನಿದೇವ
27) ರಾಮನು ಜನಿಸಿದ್ದು ಯಾವಾಗ ?
ಉತ್ತರ: ಚೈತ್ರಮಾಸದ 9ನೇ ದಿನ
28) ಶ್ರೀರಾಮಚಂದ್ರನ ನಕ್ಷತ್ರ ಯಾವುದು?
ಉತ್ತರ : ಪುನರ್ವಸು
29) ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು? 
ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)
30) ದಶರಥ ಮಹಾರಾಜನ ರಾಜಗುರು ಯಾರು ?
ಉತ್ತರ : ವಶಿಷ್ಠ ಮಹರ್ಷಿಗಳು
31) ದಶರಥ ಮಹಾರಾಜನ ರಾಜ ಮಂತ್ರಿ ಯಾರು ?
ಉತ್ತರ : ಸುಮಂತ
32) ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು?
ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ
33) ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು?
ಉತ್ತರ : ಬಲ ಹಾಗೂ ಅತಿಬಲಾ
34) ತಾಟಕಿಯನ್ನು ಕೊಂದಿದ್ದು ಯಾರು?
ಉತ್ತರ : ಶ್ರೀರಾಮ
35) ಸುಬಾಹುವನ್ನು ಕೊಂದಿದ್ದು ಯಾರು?
ಉತ್ತರ : ಲಕ್ಷ್ಮಣ
36) ಸುಮಿತ್ರೆಯ ಅವಳಿ ಮಕ್ಕಳು ಯಾರು?
ಉತ್ತರ : ಲಕ್ಷ್ಮಣ, ಶತ್ರುಘ್ನ
37) ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ? 
ಉತ್ತರ : ಮಹರ್ಷಿ ವಸಿಷ್ಠರು
38) ಕೈಕೆಯಿ ಯಾರ ಮಗಳು?
ಉತ್ತರ : ಕೈಕಯ ರಾಜನ‌ ಮಗಳು
39) ಕೌಶಲ್ಯ ಯಾವ ದೇಶದವಳು ?
ಉತ್ತರ : ಕೋಸಲ ದೇಶ
40) ವಿದೇಹದ ರಾಜಧಾನಿ ಯಾವುದು? 
ಉತ್ತರ : ಮಿಥಿಲೆ
46) ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು? 
ಉತ್ತರ : ಶಿವ ಧನಸ್ಸು
47) ಭರತನ ಹೆಂಡತಿ ಯಾರು?
ಉತ್ತರ : ಮಾಂಡವಿ
48) ಶತ್ರುಘ್ನನ ಹೆಂಡತಿ ಯಾರು?
ಉತ್ತರ : ಶೃತಕಿರ್ತಿ
49) ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು?
ಉತ್ತರ : ಕ್ಕುಷದ್ವಜನ ಮಕ್ಕಳು
50) ಪರಶುರಾಮರು ಯಾವ ವಂಶದವರು? 
ಉತ್ತರ : ಭೃಗು ವಂಶ
41) ಜನಕ ಮಹಾರಾಜನ ಪತ್ನಿ ಯಾರು ?
ಉತ್ತರ : ಸುನಯನಾ ದೇವಿ
42) ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ? 
ಉತ್ತರ : ವಿದೇಹ
43) ವೈದೇಹಿ ಯಾರು ?
ಉತ್ತರ : ಸೀತಾಮಾತೆ 
44) ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ?
ಉತ್ತರ : ಊರ್ಮಿಳಾ
45) ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ?
ಉತ್ತರ : ಭೂಮಿಯಲ್ಲಿ
51)ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ?
ಉತ್ತರ : ಗೌತಮ ಮಹರ್ಷಿಗಳು
52) ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು?
ಉತ್ತರ: ಶ್ರೀರಾಮನಿಂದ
53) ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು?
ಉತ್ತರ : ಶತಾನಂದ
54) ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು?
ಉತ್ತರ : 21 ಬಾರಿ
55) ಚಿರಂಜೀವಿಗಳು ಎಷ್ಟು ಮಂದಿ? 
ಉತ್ತರ : 7 ಜನ 
56) ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ?
ಉತ್ತರ : ಎರಡನೆಯ ಭಾಗ
57) ರಾಮಾಯಣದ ಮೊದಲ ಭಾಗದ ಹೆಸರೇನು ?
ಉತ್ತರ : ಬಾಲಕಾಂಡ
58) ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ?
ಉತ್ತರ : ರಾಜಗುರುಗಳಾದ ವಶಿಷ್ಠರಿಗೆ
59) ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ?
ಉತ್ತರ : ಶಂಬರಾಸುರ
60) ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು?
ಉತ್ತರ : ದಶರಥ ಮಹಾರಾಜ
61) ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ?
ಉತ್ತರ : ದೇವೇಂದ್ರ
62) ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ?
ಉತ್ತರ: 2
63) ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು?
 ಉತ್ತರ : ಸೌಮಿತ್ರಿ
64) ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು? 
ಉತ್ತರ : ಅಂದಿನ ಸೂರ್ಯಾಸ್ತ
65) ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ?
ಉತ್ತರ : ಶೃಂಗವೇರಪುರ
66) ಶೃಂಗವೆರಪುರ ಎಲ್ಲಿದೆ ?
ಉತ್ತರ: ಗಂಗಾನದಿಯ ತಟದಲ್ಲಿ
67) ನಿಷಾದದ ರಾಜನ ಹೆಸರೇನು ?
ಉತ್ತರ : ಗುಹ
68) ಗುಹನ ವೃತ್ತಿ ಏನು?
ಉತ್ತರ: ಅವನೊಬ್ಬ ಬೇಡ
69) ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು?
ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿವೃಕ್ಷದ ಕೆಳಗೆ ಕುಳಿತಿದ್ದಾಗ
70) ಗುಹನಲ್ಲಿ ರಾಮ ಕೇಳಿದ ಸಹಾಯವೇನು ?
ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು
76) ಬೃಹಸ್ಪತಿಯ ಮಗ ಯಾರು? 
ಉತ್ತರ : ಭಾರದ್ವಾಜ ಋಷಿಗಳು
77) ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು?
ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ
78) ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು? 
ಉತ್ತರ : ಚಿತ್ರಕೂಟ ಪರ್ವತದ ಬಳಿ
79) ದಶರಥನ ಅಂತ್ಯ ಹೇಗಾಯಿತು?
ಉತ್ತರ : ಪುತ್ರ ವಿರಹದಿಂದ
80) ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು?
ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು.
71) ದೋಣಿ ನಡೆಸುವ ಅಂಬಿಗನ ಹೆಸರೇನು ? 
ಉತ್ತರ : ಕೇವತ
72) ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ?
ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನ‌ಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ
73) ಕೇವತನ ಭಯ ನಿಜವಾದುದೇ?
ಉತ್ತರ : ಇಲ್ಲ
74) ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ?
ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ 
75) ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು
ಉತ್ತರ : ಪಾದಗಳನ್ನು ಯೊಳೆದದ್ದು
81) ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ?
ಉತ್ತರ : ಭಾರತ 
82) ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು?
ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ
83) ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ?
ಉತ್ತರ : ರಾಮನ ಪಾದುಕೆಗಳು
84) ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು?
ಉತ್ತರ : ರಾಜಗುರು ವಶಿಷ್ಠರು
85 ) ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ? 
ಉತ್ತರ: ನಂದಿಗ್ರಾಮ
101) ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು?
ಉತ್ತರ : ಗೋದಾವರಿ
 
ರಾಮಾಯಣದ ಬಗ್ಗೆ ಪ್ರಶ್ನೋತ್ತರ , Ramayana Quiz

 102) ಸಂಪಾತಿ ಎಲ್ಲಿ ವಾಸಿಸುತ್ತಿತ್ತು? ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ 103) ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು? ಉತ್ತರ : ದಶರಥನ ಸ್ನೇಹಿತ ಎಂದು 104) ಪುಲಸ್ತ್ಯರು ಯಾರ ಮಗ? ಉತ್ತರ : ಬ್ರಹ್ಮದೇವರ ಮಾನಸಪುತ್ರರು 105) ಪುಲಸ್ತ್ಯರ ಮಗ ಯಾರು ? ಉತ್ತರ : ವಿಶ್ರವಸು 106) ವಿಶ್ರವಸುವಿನ ಪತ್ನಿ ಯಾರು? ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ 107) ವೀಶ್ರವಸುವಿನ ಮಗ ಯಾರು? ಉತ್ತರ : ವೈಶ್ರವನ 108) ವೈಶ್ರವಣ ಯಾವ ಹೆಸರಿನಿಂದ ಪರಿಚಿತ? ಉತ್ತರ : ಕುಭೇರ 109) ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು? ಉತ್ತರ : ಪುಷ್ಪಕ ವಿಮಾನ 110) ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು? ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ 111) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು? ಉತ್ತರ : ಕುಭೆರ 112) ವಿಶ್ರವಸು ಹಾಗು ಕೈಕಸಿಯ ಮಗ ಯಾರು? ಉತ್ತರ : ರಾವಣ 113) ಕೈಕಸಿ ಯಾರ ಮಗಳು? ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು 114) ಸುಮಾಲಿಯ ಸೋದರರು ಎಷ್ಟು ಮಂದಿ? ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ) 115) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು? ಉತ್ತರ: ಸುಖೇಶನೆಂಬ ರಾಕ್ಷಸ 116) ರಾವಣನ ಮೂಲ ಹೆಸರೇನು? ಉತ್ತರ : ದಶಕಂಠ/ ದಶಾನನ 117) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು? ಉತ್ತರ: ತನಗೆ ಸಾವು ಬರಬಾರದು ಎಂದು 118) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು? ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ 118) ರಾವಣ ಕೇಳಿದವರ ದೊರೆಯಿತೇ? ಉತ್ತರ : ಇಲ್ಲ 119) ರಾವಣನು ಬದಲಿಯಾಗಿ ಕೇಳಿದ ವರ ಯಾವುದು? ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ 120) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ? ಉತ್ತರ : ಮನುಷ್ಯ 121) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ? ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ 122) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು? ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು 123) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ? ಉತ್ತರ : ಸರಸ್ವತಿ ದೇವಿ 124) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು? ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ 125) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು? ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ 126) ರಾವಣನಿಗೆ ಕುಬೇರನು ಏನಾಗಬೇಕು? ಉತ್ತರ : ಅಣ್ಣ 127) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ? ಉತ್ತರ : ಕುಬೇರನ ಮೇಲೆ 128) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ? ಉತ್ತರ : ಕೈಕಸಿ 129) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ? ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ 130) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ 131) ಮಂಡೋದರಿ ಯಾರ ಮಗಳು ? ಉತ್ತರ : ಮಯ ಎಂಬ ರಾಕ್ಷಸನ ಮಗಳು 132) ಮಂಡೋದರಿಯ ತಾಯಿ ಯಾರು? ಉತ್ತರ : ಹೇಮಾ ಎಂಬ ಅಪ್ಸರೆ 133) ಕುಂಭಕರ್ಣನ ಹೆಂಡತಿ ಯಾರು? ಉತ್ತರ : ವಿದ್ಯುಜ್ಜಿಹ್ವೆ 134) ವಿಭೀಷಣನ ಪತ್ನಿ ಯಾರು? ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ 135) ವಿಭೀಷಣನ ಮಾವ ಯಾರು ? ಉತ್ತರ : ಶೈಲೂಷ 136) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು? ಉತ್ತರ : ತಂದೆ ವಿಶ್ರವಸುವಿನ ಮಾತಿಗೆ 137) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು? ಉತ್ತರ : ಅಲ್ಕ ನಗರಿಯಲ್ಲಿ 138) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ? ಉತ್ತರ : ಮಂದಾಕಿನಿ 139) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದರು ಯಾರು ? ಉತ್ತರ : ನಂದಿಕೇಶ್ವರ 140) ದಶಾನನಿಗೆ ರಾವಣ ಎಂಬ ಹೆಸರು ಬಂದಿದ್ದು ಯಾರಿಂದ ? ಉತ್ತರ : ಶಿವನಿಂದ 141) ಕುಬೇರನ ಮಗ ಯಾರು? ಉತ್ತರ : ನಳಕೂಬರ 142) ಹಿಮ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದ ಕುಶಧ್ವಜನ ಮಗಳು ಯಾರು? ಉತ್ತರ : ವೇದವತಿ 143) ವೇದವತಿ ಯಾರ ಅವತಾರ ? ಉತ್ತರ : ಲಕ್ಷ್ಮೀದೇವಿ 144) ವೇದವತಿಯು ಯಾವ ಅಪೇಕ್ಷೆಯಿಂದ ತಪಸ್ಸು ಮಾಡುತ್ತಿದ್ದಳು ? ಉತ್ತರ : ಶ್ರೀಹರಿಯನ್ನು ಮದುವೆಯಾಗುವ ಇಚ್ಛೆಯಿಂದ 145) ವೇದವತಿಯನ್ನು ಕಂಡು ಮೋಹಿತನಾದ ರಾಕ್ಷಸ ಯಾರು ? ಉತ್ತರ : ರಾವಣ 151) ಶೂರ್ಪಣಕಿಯ ದೊಡ್ಡಮ್ಮನ‌ ಮಕ್ಕಳು ಯಾರು? ಉತ್ತರ : ಖರ ದೂಷಣರೆಂಬ ರಾಕ್ಷಸರು 152) ಖರ ದೂಷಣರ ಸಂಹರಿಸಿದ್ದು ಯಾರು ? ಉತ್ತರ‌: ಶ್ರೀರಾಮ‌ 153) ಖರ ದೂಷಣರು ರಾಮ ಲಕ್ಷ್ಮಣರ ಮೇಲೆ ಯುದ್ದಕ್ಕೆ ಬಂದಾಗ ಅವರ ಸಂತತಿ ಎಷ್ಟಿತ್ತು? ಉತ್ತರ : 14,000 154) 14,000 ರಕ್ಕಸರನ್ನು ಸಂಹರಿಸಿದ್ದು ಯಾರು ? ಉತ್ತರ : ಶ್ರೀರಾಮ ಒಬ್ಬನೆ 155) ಖರ ದೂಷಣರ ಸಂಹಾರದ ವಿಷಯವನ್ನು ರಾವಣನಿಗೆ ಮೊದಲು ಹೆಳಿದ್ದು ಯಾರು ? ಉತ್ತರ : ಅಕಂಪನ ಎಂಬ ರಾಕ್ಷಸ 146) ವೇದವತಿ ರಾವಣನಿಗೆ ಕೊಟ್ಟ ಶಾಪವೇನು? ಉತ್ತರ : ಬಲತ್ಕಾರದಿಂದ ಯಾವುದಾದರೂ ಹೆಣ್ಣನ್ನು ಪಡೆಯಲು ಪರ್ಯತ್ನಿಸಿದ ಮರುಕ್ಷಣವೇ ನಿನಗೆ ಸಾವು ಬರಲಿ ಎಂದು ಶಪಿಸಿದ್ದಳು 147) ವೇದವತಿಯು ಮುಂದಿನ ಜನ್ಮದಲ್ಲಿ ಯಾರಾಗಿ ಹುಟ್ಟಿದ್ದಳು ? ಉತ್ತರ : ಸೀತೆಯಾಗಿ 148) ಶೂರ್ಪನಕಿಯ ಪತಿ ಯಾರು? ಉತ್ತರ : ಕಾಲಕೇಯನೆಂಬ ರಾಕ್ಷಸ‌ 149) ಕಾಲಕೇಯನನ್ನು ಕೊಂದಿದ್ದು ಯಾರು ? ಉತ್ತರ : ರಾವಣ 150) ರಾವಣ ಕಾಲಕೇಯನನ್ನು ಕೊಂದಿದ್ದು ಏಕೆ? ಉತ್ತರ : ಯುದ್ದ ಮಾಡುವಾಗ ತಪ್ಪಿ ಕಾಲಕೇಯನ‌ ಮೇಲೆ ಅಸ್ತ್ರ ಪ್ರಯೋಗಿಸಿಬಿಟ್ಟಿದ್ದ 156) ಮಾರಿಚ ಯಾರು ? ಉತ್ತರ : ರಾವಣನ ಸೋದರ ಮಾವ 157) ಮಾರಿಚನಿಗೆ ಯಾವ ರೂಪ ಧರಿಸಿ ಸೀತೆಯ ಮುಂದೆ ಸುಳಿದಾಡಲು ರಾವಣ ಹೆಳಿದ? ಉತ್ತರ : ಮಾಯಾಮೃಗದ ರೂಪ 158) ಸೀತೆ ಮಾಯಾಮೃಗವನ್ನು ನೋಡಿ ಏನು ಹೇಳಿದಳು ? ಉತ್ತರ : ತನಗೆ ಈಗಿಂದೀಗಲೇ ಮಾಯಾಮೃಗ ಬೇಕೆಂದು ಕೆಳಿದಳು 159) ಮಾರಿಚ ಸಾಯುವ ಮೊದಲು ಏನೆಂದು ಉದ್ಗರಿಸಿದ ? ಉತ್ತರ : ಹಾ ಲಕ್ಷ್ಮಣ ಹಾ ಸಿತಾ 160) ಸಿತೆಯನ್ನು ರಾವಣ ಅಪಹರಿಸಿಕೊಂಡು ಹೊಗುವಾಗ ಋಷ್ಯಮೂಕ ಪರ್ವತದ ಮೇಲೆ ಕಂಡದ್ದು ಯಾರನ್ನ? ಉತ್ತರ : ವಾನರ‌ ಸೈನ್ಯ 161) ಸೀತೆ ತನ್ನ ಆಭರಣಗಳ ಪುಟ್ಟ ಗಂಟನ್ನು ಎಲ್ಲಿ ಎಸೆದಳು? ಉತ್ತರ : ಋಷ್ಯಮೂಕ ಪರ್ವತದಲ್ಲಿ ಇದ್ದ ವಾನರರ ಕಡೆಗೆ 162) ಯೋಜನಗಳಷ್ಟು ದೂರದವರೆಗೆ ಕೈಗಿಳಿದ್ದ ರಾಕ್ಷಸ ಯಾರು ? ಉತ್ತರ: ಕಬಂಧ ೧೬೩) ಕಬಂಧನ ತಲೆಯು ಎಲ್ಲಿತ್ತು? ಉತ್ತರ : ಹೊಟ್ಟೆಯಲ್ಲಿ ೧೬೪) ಕಬಂಧನ ತಲೆಯು ಹೊಟ್ಟೆಯಲ್ಲಿ ಹೋಗಿ ಸಿಕ್ಕಿಕೊಂಡಿದ್ದಕ್ಕೆ ಕಾರಣವೇನ? ಉತ್ತರ : ಇಂದ್ರನ ವಜ್ರಾಯುಧದಿಂದ ಹೊಡೆದ ಕಾರಣ ೧೬೫) ಕಬಂಧನನ್ನು ಸಂಹರಿಸಿದ್ದು ಯಾರು? ಉತ್ತರ : ಶ್ರೀರಾಮ ೧೬೬) ಪಂಪಾ ಸರೋವರದಲ್ಲಿ ಆಶ್ರಮದಲ್ಲಿ ರಾಮನಿಗಾಗಿ ಕಾಯುತ್ತಿದ್ದ ವೃದ್ಧ ಭಕ್ತೆ ಯಾರು ? ಉತ್ತರ : ಶಬರಿ ೧೬೭) ಶಬರಿ ಯಾವ ಆಶ್ರಮದಲ್ಲಿ ರಾಮನಿಗಾಗಿ ಎದಿರು ನೋಡುತ್ತಿದ್ದಳು ? ಉತ್ತರ : ಮತಂಗ ಮುನಿಯ ಆಶ್ರಮದಲ್ಲಿ ೧೬೮) ಶಬರಿ ರಾಮನಿಗೆ ಏನನ್ನು ತಿನ್ನಲು ನೀಡಿದಳು? ಉತ್ತರ : ಬಾರಿ ಅಥವಾ ಬೋರೆಹಣ್ಣು ೧೬೯) ಶಬರಿ ಆ ಹಣ್ಣನ್ನು ಕಚ್ಚಿ ತಿಂದು ರುಚಿ ನೋಡಿ ರಾಮನಿಗೆ ಕೊಟ್ಟಿದ್ದು ಏಕೆ ? ಉತ್ತರ : ಸಿಹಿಯಾದ ಹಣ್ಣುಗಳನ್ನು ಮಾತ್ರವೇ ಅರ್ಪಿಸಬೇಕು ಎಂದು ೧೭೦) ಸೀತೆಯನ್ನು ಹುಡುಕಲು ಶಬರಿ ಹೇಳಿದ ಉಪಾಯವೇನು? ಉತ್ತರ : ಸುಗ್ರೀವನನ್ನು ಬೇಟಿಯಾಗುವ ಸಲಹೆ ನೀಡಿದಳು ೧೭೧) ಸುಗ್ರಿವ ಎಲ್ಲಿದ್ದ? ಉತ್ತರ : ಋಷ್ಯಮೂಕ ಪರ್ವತದಲ್ಲಿ. ೧೭೨) ಸುಗ್ರೀವನ ಬಳಿ‌ ಇದ್ದ ರಾಮನ ಪರಮ ಭಕ್ತ ಯಾರು? ಉತ್ತರ : ಹನುಮಂತ ೧೭೩) ಹನುಮಂತನ ಇನ್ನಿತರ ಹೆಸರುಗಳೇನು ? ಉತ್ತರ : ರಾಮಬಂಟ, ಆಂಜನೆಯ, ಮಾರುತಿ, ವಾಯುಪುತ್ರ, ಅಂಜನಿಪುತ್ರ, ಹನುಮಾನ, ಪವನಪುತ್ರ, ಬಜರಂಗಿ, ಕೆಸರಿ ನಂದನ ೧೭೪) ರಾಮನ ದರ್ಶನ ಆದನಂತರ ಶಬರಿಯು ದೇಹತ್ಯಾಗ ಮಾಡಿದ್ದು ಹೇಗೆ? ಉತ್ತರ : ಅಗ್ನಿ ಪ್ರವೇಶದ ಮೂಲಕ ೧೭೫) ಕಿಸ್ಕಿಂಧಾ ಕಂಡದ ಹಿಂದಿನ ಬಾಗ ಯಾವುದು? ಉತ್ತರ : ಅರಣ್ಯಕಾಂಡ ೧೭೬) ಹನುಮಂತನ ತಂದೆ ಯಾರು? ಉತ್ತರ : ಕೆಸರಿ ೧೭೭) ಆಂಜನೆಯ ಯಾರ ವರದಿಂದ ಜನ್ಮತಾಳಿದನು? ಉತ್ತರ : ವಾಯುದೇವನ ವರದಿಂದ ೧೭೮) ಹಸಿವೆಯಿಂದ ಹನುಮಂತ ತಿನ್ನಲು ಹೊದ ಹಣ್ಣು‌ ಯಾವುದು? ಉತ್ತರ : ಕೆಂಪಗಿರುವ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೊಗಿದ್ದ ೧೭೯) ಹನುಮಂತನಿಗೆ ವಜ್ರಾಯುಧದಲ್ಲಿ ಪೆಟ್ಟು ಕೊಟ್ಟಿದ್ದು ಯಾರು? ಉತ್ತರ: ಇಂದ್ರ ೧೮೦) ಹನು ಎಂದರೆ ಅರ್ಥ ಏನು? ಉತ್ತರ : ದವಡೆ ೧೮೧) ರಾಮ ಲಕ್ಷ್ಮಣರು ಸುಗ್ರೀವನನ್ನು ಕಾಣಲು ಎಲ್ಲಿಗೆ ಬಂದರು? ಉತ್ತರ : ಋಷ್ಯಮೂಕ ಪರ್ವತ ೧೮೨) ಸುಗ್ರೀವನ ಅಣ್ಣ ಯಾರು? ಉತ್ತರ : ವಾಲಿ ೧೮೩) ರಾಮಲಕ್ಷ್ಮಣರನ್ನು ಋಷ್ಯಮೂಕ ಪರ್ವತದಲ್ಲಿ ಬರ ಮಾಡಿಕೊಂಡಿದ್ದು ಯಾರು ? ಉತ್ತರ: ಬ್ರಾಹ್ಮಣ ರೂಪದಲ್ಲಿದ್ದ ಹನುಮಂತ ೧೮೪) ವಾಲಿ-ಸುಗ್ರೀವರ ತಂದೆ ಯಾರು? ಉತ್ತರ: ವೃಕ್ಷ ಶಿರಸು ೧೮೫) ವಾಲಿಗೆ ಋಷ್ಯಮೂಕ ಪರ್ವತಕ್ಕೆ ಕಾಲಿಟ್ಟೊಡನೆ ಮೃತ್ಯು ಬರಲಿ ಎಂದು ಶಪಿಸಿದ್ದು ಯಾರ ಉತ್ತರ : ಮಾತಂಗ ಮುನಿಗಳು ೧೮೬) ಸುಗ್ರೀವನ ಪತ್ನಿ ಯಾರು? ಉತ್ತರ: ರುಮೆ ೧೮೭) ವಾಲಿಯ ಪತ್ನಿ ಯಾರು? ಉತ್ತರ : ತಾರಾ ೧೮೮) ತಾರಾಳನ್ನು ಯಾರು? ಉತ್ತರವ: ತಾರ ೧೮೯) ತಾರಾ ಹಾಗೂ ತಾರ, ಯಾರ ಮಕ್ಕಳು? ಉತ್ತರ : ಸುಷೇಣನೆಂಬ ವಾನರನ ಮಕ್ಕಳು ೧೯೦) ಸುಗ್ರೀವನು ಸೀತೆಯನ್ನು ಗುರುತಿಸುವುದಕ್ಕಾಗಿ ಏನನ್ನು ರಾಮಚಂದ್ರನಿಗೆ ನೀಡಿದನು? ಉತ್ತರ : ಆಭರಣದ ಪುಟ್ಟ ಗಂಟನ್ನು ನೀಡಿದ ೧೯೬) ಮಾಯಾವಿಯ ಕಳೆಬರವು ಎಲ್ಲಿತ್ತು? ಉತ್ತರ: ಋಷ್ಯಮೂಕ ಪರ್ವತದ ಎತ್ತರದ ಒಂದು ಮರದ ಮೇಲೆ ಎಷ್ಟು ೧೯೭) ಮಾಯಾವಿಯ ಕಳೇಬರವನ್ನು ಕಾಲಿನಿಂದ ಒದ್ದು ಯೋಜನೆಗಳಷ್ಟು ದೂರ ಎಸೆದದ್ದು ಯಾರು? ಉತ್ತರ: ರಾಮ ೧೯೮) ವಾಲಿ-ಸುಗ್ರೀವರ ಯುದ್ಧದಲ್ಲಿ ಮೊದಲ ದಿನ ಗೆದ್ದದ್ದು ಯಾರು? ಉತ್ತರ : ವಾಲಿ ೧೯೯) ರಾಮನಿಗೆ ವಾಲಿಯನ್ನು ಮೊದಲ ಯುದ್ಧದಲ್ಲಿ ಕೊಲ್ಲಲು ಏಕೆ ಸಾಧ್ಯವಾಗಲಿಲ್ಲ? ಉತ್ತರ : ವಾಲಿ ಹಾಗೂ ಸುಗ್ರೀವರು ನೋಡಲು ಒಂದೇ ರೀತಿ ಇದ್ದರು ಎಂಬ ಕಾರಣಕ್ಕೆ! ೨೦೦) ಸುಗ್ರೀವನಿಗೆ ರಾಮನು ಯುದ್ಧದ ಸಮಯದಲ್ಲಿ ಏನನ್ನು ಧರಿಸಲು ಕೊಟ್ಟ ? ಉತ್ತರ: ತನ್ನ ಕುರರ ಹಾರವನ್ನು ಧರಿಸಲು ಕೊಟ್ಟ ೧೯೧) ಲಕ್ಷ್ಮಣನು ಗುರುತಿಸಿದ ಸೀತೆಯ ಆಭರಣ ಯಾವುದು? ಉತ್ತರ : ಸೀತಾಮಾತೆಯ ಕಾಲುಂಗುರದಿಂದ ೧೯೨) ಸುಗ್ರೀವನು ವಾಲಿಯನ್ನು ಯಾವ ಸ್ಥಳದಲ್ಲಿ ಯುದ್ಧ ಮಾಡು ಬಾ ಎಂದು ಕರೆದ ? ಉತ್ತರ : ಋಷಿ ಮುಖ ಪರ್ವತದ ದಟ್ಟ ಕಾನನದಲ್ಲಿ ೧೯೩) ಕಾಡಿನಲ್ಲಿ ಯುದ್ಧಮಾಡಲು ಕರೆದಿದ್ದು ಏಕೆ? ಉತ್ತರ : ರಾಮನು ವನವಾಸದಲ್ಲಿ ಇರುವುದರಿಂದ ಅವನು ನಗರ ಪ್ರವೇಶ ಮಾಡುವಂತಿರಲಿಲ್ಲ ಹೀಗಾಗಿ ವಾಲಿಯನ್ನು ಕಾಡಿಗೆ ತರಬೇಕಿತ್ತು ೧೯೪) ವಾಲಿಯು ಯಾವ ರಾಕ್ಷಸ ನಂದಿಗೆ ಒಂದಿಡೀ ವರ್ಷ ಗುಹೆಯಲ್ಲಿ ಕಾದಾಡಿದ್ದ ? ಉತ್ತರ: ಮಾಯಾವಿ ೧೯೫) ವಾಲಿ ಹಾಗೂ ಮಾಯಾವಿ ಯುದ್ದದ್ದಲ್ಲಿ ಗೆದ್ದದ್ದು ಯಾರು? ಉತ್ತರ : ವಾಲಿ ೨೦೧) ರಾಮನ ಹಾರವನ್ನು ಸುಗ್ರೀವನು ಧರಿಸುವುದರಿಂದ ಆಗುತ್ತಿದ್ದ ಪ್ರಯೋಜನವೇನು? ಉತ್ತರ: ಹಾರ ದರಿಸಿದವನು ಸುಗ್ರೀವನೆಂದೂ. ಹಾರವಿಲ್ಲದವನು ವಾಲಿ ಎಂದು ರಾಮನಿಗೆ ತಿಳಿಯುತ್ತಿತ್ತು. ೨೦೨) ವಾಲಿಯ ಮಗ ಯಾರು? ಉತ್ತರ: ಅಂಗದ ೨೦೩? ಶ್ರವಣದಿಂದ ಕಾರ್ತಿಕ ಮಾಸದ ವರೆಗೂ ರಾಮಲಕ್ಷ್ಮಣರು ಯಾವ ಪರ್ವತದಲ್ಲಿ ವಾಸವಿದ್ದರು? ಉತ್ತರ : ಮಾಲ್ಯವಂತ ಪರ್ವತದಲ್ಲಿ ( ಈಗಿನ ಆನೆಗುಂದಿ ಹತ್ತಿರ ಬರುತ್ತದೆ ಅಂದರೆ ಹಂಪಿಯ ಕ್ಷೇತ್ರ) ೨೦೪) ವಾಲಿ ಹತನಾದ ನಂತರ ಕಿಷ್ಕಿಂದೆಯ ರಾಜನಾಗಿದ್ದು ಯಾರು? ಉತ್ತರ: ಸುಗ್ರೀವ ೨೦೫) ಅಂಗದ ನಿಗೆ ಯಾವ ಪಟ್ಟ ಸಿಕ್ಕಿತು? ಉತ್ತರ: ಯುವರಾಜನ ಪಟ್ಟ ೨೧೧) ರಾಮನು ಹನುಮಂತನಿಗೆ, ಸೀತೆಗೆ ತಲುಪಿಸಲು ಕೊಟ್ಟ ವಸ್ತು ಯಾವುದು? ಉತ್ತರ : ತನ್ನ ಉಂಗುರ ೨೧೨) ರಾಮನಿಗೆ ಯಾವ ವಾನರ ಮೇಲೆ ಅಪಾರವಾದ ನಂಬಿಕೆ ಇತ್ತು ? ಉತ್ತರ : ಆಂಜನೆಯ ೨೧೩) ಜಾಂಬವಂತ ಯಾರ ತಂಡದಲ್ಲಿ ಇದ್ದ? ಉತ್ತರ : ಆಂಜನೆಯ ೨೧೪) ವಾಲಿಯ ಮಗ ಯಾವ ತಂಡದಲ್ಲಿದ್ದ? ಉತ್ತರ : ಆಂಜನೆಯ ೨೧೫) ವಿಂದ್ಯ ಪರ್ವತದ ತಪ್ಪಲಿನ ಗುಹೆಯಲ್ಲಿದ್ದ ಅಪರೂಪದ ಸರೋವರ ಯಾರಿಗೆ ಸೇರಿತ್ತು? ಉತ್ತರ : ಮಯನೆಂಬ ರಾಕ್ಷಕನಿಗೆ ಸೇರಿತ್ತು. ೨೦೬) ಸೀತೆಯನ್ನು ಹುಡುಕಲು ಎಷ್ಟು ದಿಕ್ಕುಗಳಿಗೆ ವಾನರರನ್ನು ಸುಗ್ರೀವನು ಕಳುಹಿಸಿದನು? ಉತ್ತರ : ನಾಲ್ಕು ದಿಕ್ಕುಗಳಿಗೆ ೨೦೭) ಪೂರ್ವದಿಕ್ಕಿಗೆ ಹೋದದ್ದು ಯಾರು? ಉತ್ತರ : ವಾನರರ ಮುಖ್ಯಸ್ಥ ವಿನತ ೨೦೮) ಪಶ್ಚಿಮ ದಿಕ್ಕಿಗೆ ಹೋದದ್ದು ಯಾರು? ಉತ್ತರ : ತಾರಾಳ ತಂದೆ ಸುಷೇಣ ೨೦೯) ಉತ್ತರ ದಿಕ್ಕಿಗೆ ಹೋದದ್ದು ಯಾರು? ಉತ್ತರ : ಶತಬಲಿ ಎಂಬ ವಾನರ ಮುಖ್ಯಸ್ಥ ೨೧೦) ದಕ್ಷಿಣ ದಿಕ್ಕೆಗೆ ಹೋದದ್ದು ಯಾರು? ಉತ್ತರ : ಆಂಜನೆಯ ೨೧೬) ಮಯನು ಅತ್ಯಂತ ರಮಣೀಯ ಸರೋವರವನ್ನು ಹಾಗು ಉದ್ಯಾನವನ್ನು ಯಾರಿಗಾಗಿ ನಿರ್ಮಿಸಿದ್ದ? ಉತ್ತರ: ಹೇಮಾ ಎಂಬ ಅಪ್ಸರೆ ಗಾಗಿ ( ಮಂಡೋದರಿಯ ತಾಯಿ) ೨೧೭) ಇದೀಗ ಮಯನ ಸರೋವರನ್ನು ನೋಡಿಕೊಳ್ಳುತ್ತದ್ದ ಯೋಗಿನ ಯಾರು? ಉತ್ತರ : ಅಪ್ಸರೆ ಹೇಮಾಳ ಸಖಿಯಾದ ಸ್ವಯಂಪ್ರಭೆ ೨೧೮) ಮಾಹೇಂದ್ರ ಪರ್ವತದ ಗುಹೆಯಲ್ಲಿ ವಾನರರು ಸಂಧಿಸಿದ ವೃದ್ದ ಹದ್ದುಗಳ ರಾಜ ಯರು? ಉತ್ತರ: ಸಂಪಾತಿ ೨೧೯) ಸಂಪಾತಿ ಯಾರ ಅಣ್ಣ ? ಉತ್ತರ : ಜಟಾಯು ೨೨೦) ಜಟಾಯು ಹಾಗು ಸಂಪಾತಿಯು ಯಾರ ಮಕ್ಕಳು ? ಉತ್ತರ : ಅರುಣನ ಮಕ್ಕಳು ೨೨೭) ಸುಂದರಕಾಂಡ ಅವಧಿ ಎಷ್ಟು? ಉತ್ತರ: ಒಂದು ರಾತ್ರಿಯ ಕಥೆಯಾಗಿದೆ ೨೨೮) ಆಂಜನೇಯನಿಗೆ ಸಿದ್ದಸಿದ್ದ ಅಷ್ಟ ಮಹಾವಿದ್ಯೆಗಳು ಯಾವುವು? ಉತ್ತರ: ಅನಿಮಾ, ಗರಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶತ್ವ, ಮತ್ತು ವಶತ್ವ ೨೨೯) ಮೈನಾಕನು ಯಾರ ಮಗ? ಉತ್ತರ: ಹಿಮವಂತನ ಮಗ ೨೨೧) ಅರುಣ ಯಾರು? ಉತ್ತರ : ಸೂರ್ಯನ ಸಾರಥಿ ೨೨೨) ವೃದ್ಧ ಸಂಪಾತಿಯ ಮಗ ಯಾರು? ಉತ್ತರ: ಸುಪಾರ್ಶ್ವ ೨೨೩) ಸೂಪರ್ಶ್ವನು ತಂದೆಗೆ ಹೇಳಿದ್ದ ರಹಸ್ಯ ವಿಷಯವೇನು? ಉತ್ತರ : ಸೀತೆಯನ್ನು ರಾವಣನು ಅಶೋಕವನದಲ್ಲಿ ಕೂಡಿಟ್ಟಿದ್ದನಂಬ ವಿಷಯ ಹೇಳಿದ. ೨೨೪) ಸೀತೆಯ ವಿಷಯ ಸುಪಾರ್ಶ್ವವನಿಗೆ ತಿಳಿದುದ್ದು ಹೇಗೆ ? ಉತ್ತರ : ಆಹಾರ ತರಲು ರಾವಣನ ನಗರಿಗೆ ಹೋದಾಗ, ಬಲು ದೂರದಿಂದಲೇ ಅವನ ತೀಕ್ಷ್ಣ ದೃಷ್ಟಿಗೆ ಸೀತೆ ಕಂಡಿದ್ದಳು. ೨೨೬) ಮಾಹೇಂದ್ರ ಪರ್ವತದಿಂದ ಲಂಕೆಗೆ ಎಷ್ಟು ದೂರವಿತ್ತು ? ಉತ್ತರ : 100 ಯೋಜನೆಗಳಷ್ಟು ೨೩೦) ಹಿಮವಂತನ ಮಗಳಾಗಿ ಜನಿಸಿದ್ದು ಯಾರು? ಉತ್ತರ : ಪಾರ್ವತಿದೇವಿಯು ಹೈಮವತಿ ಎಂಬ ಹೆಸರಿನಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದ್ದಳು ೨೩೧) ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಯಾರು? ಉತ್ತರ : ಸಾಗರದೊಳಗೆ ಹುದುಗಿದ್ದ ಮೈನಾಕ ( ಪರ್ವತ) ೨೩೨) ಸರ್ಪಗಳ ತಾಯಿ ಯಾರು? ಉತ್ತರ : ಸುರಸೆ ೨೩೩) ದೇವತೆಗಳು ರಾಮಭಕ್ತ ಹನುಮನನ್ನು ಪರೀಕ್ಷಿಸಲು ಕೇಳಿಕೊಂಡಿದ್ದು ಯಾರನ್ನು? ಉತ್ತರ : ಸುರಸೆ ೨೩೪) ಸುರೇಸೆಯು ಹನುಮಂತನ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷಳಾದಳು? ಉತ್ತರ : ರಾಕ್ಷಸಿಯ ರೂಪದಲ್ಲಿ ೨೩೫) ಸುರೆಸೆಯು ಹನುಮನಿಗೆ ಏನು ಹೇಳಿದಳು? ಉತ್ತರ :ನನ್ನ ಬಾಯಿಯೊಳಗೆ ನೀನು ಬಂದು ಬಿಳಬೇಕು ಎಂದಳು. ೨೩೬) ಸುರಸೆಯಿಂದ ತಪ್ಪಿಸಿಕೊಳ್ಳಲು ಹನುಮ ಮಾಡಿದ ಉಪಾಯವೇನು? ಉತ್ತರ : ನನ್ನ ಬಾಯಿಯೊಳಗೆ ನೀನು ಬಂದು ಬೀಳಬೇಕು ಎಂದಳು ೨೩೭) ರಾಹುವಿನ ತಾಯಿ ಯಾರು? ಉತ್ತರ : ಸಿಂಹಿಕೆ ೨೩೮) ರಾವಣನು ಸಮುದ್ರದಲ್ಲಿ ಯಾರನ್ನು ಕಾವಲು ನಿಲ್ಲಿಸಿದ್ದನು? ಉತ್ತರ ‌: ಸಿಂಹಕ್ಕೆಯನ್ನು ೨೩೯)ಸಿಂಹಿಕೆಯ ಕೆಲಸವೇನು? ಉತ್ತರ ; ಸಮುದ್ರದ ಮೇಲೆ ಹಾರುವ ಯಾವ ವಸ್ತುವಿನ ನೆರಳನ್ನೇ ಆಗಲಿ ತಿಂದು ಬಿಡುವುದು! ೨೪೦) ನೆರಳನ್ನು ತಿಂದಾಗ ಏನಾಗುತ್ತದೆ? ಉತ್ತರ: ನೆರಳಿನೊಂದಿಗೆ ಆ ವ್ಯಕ್ತಿಯೂ/ ವಸ್ತುವೂ ಸಿಂಹಿಕೆಯ ಬಾಯಿಯೊಳಗೆ ಬಂದು ಬೀಳುತ್ತದೆ. ೨೪೧) ಸಿಂಹಿಕೆ ಹನುಮಾನ ನೆರಳನ್ನು ನುಂಗಿದಳೇ? ಉತ್ತರ : ಹೌದು. ನೆರಳಿನ ಜೊತೆಗೆ ಹನುಮನು ಅವಳ ಬಾಯಿಗೆ ಬಿದ್ದ ೨೪೨) ಹನುಮನ ನುಂಗಿದ ಸಿಂಹಿಕೆಯ ಗತಿ ಏನಾಯಿತು? ಉತ್ತರ : ಸಿಂಹಿಕೆಯ ಬಾಯಿಗೆ ಬಿದ್ದ ಹನುಮ ತೋಳ ಹೊಟ್ಟೆಯನ್ನು ಸೇರಿ ಬಲು ದೊಡ್ಡದಾಗಿ ಬೆಳೆದು ಹೊಟ್ಟೆಯನ್ನು ಸೀಳಿ ಹೊರಬಂದ ೨೪೩) ಲಂಕೆಗೆ ಬಂದ ಹನುಮ ತನ್ನ ಪಾದಗಳನ್ನು ಮೊದಲ ಬಾರಿಗೆ ಎಲ್ಲಿ ಉರಿದ? ಉತ್ತರ : ತ್ರೀಕೂಟದ ಗಿರಿಶಿಖರದಲ್ಲಿ ೨೪೪) ಲಂಕೆಯ ಪುರ ದೇವತೆ ಯಾರು ? ಉತ್ತರ : ಲಂಕಿಣಿ ೨೪೫) ಹನುಮನನ್ನು ಕಂಡ ಲಂಕಿಣಿ ಯಾವ ಪ್ರಶ್ನೆ ಕೇಳಿದಳು? ಉತ್ತರ: ಅಪ್ಪಣೆಯಿಲ್ಲದೆ ರಾತ್ರಿಯ ವೇಳೆ ಲಂಕೆಗೆ ನುಸುಳುತ್ತಿರುವ ನೀನು ಯಾರು ಎಂದಳು ೨೪೬) ಹನುಮಾನ್ ಲಂಕಿಣಿಯನ್ನು ಹೇಗೆ ಶಿಕ್ಷಿಸಿದ? ಉತ್ತರ : ಅವಳನ್ನು ಸ್ಪರ್ಶಿಸಿದನಷ್ಟೇ ಅಷ್ಟಕ್ಕೇ ಲಂಕಿಣಿಯ ಬೆನ್ನು ಮೂಳೆ ಮುರಿದಂತಾಯಿತು. ೨೪೭) ಲಂಕಿಣಿಗೆ ಬ್ರಹ್ಮದೇವನು ಏನೆಂದು ಎಚ್ಚರಿಸಿದ್ದ? ಉತ್ತರ: ಲಂಕೆಗೆ ವಾನರನೊಬ್ಬ ಕಾಲಿಟ್ಟ ಕ್ಷಣದಿಂದ ಲಂಕೆಯ ಅವನತಿ ಆರಂಭವಾಗುತ್ತದೆ ಎಂದು. ೨೪೮) ಲಂಕೆಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಯಾರು? ಉತ್ತರ : ವಿಭಿಷಣ ೨೪೯) ರಾವಣನ ಅರಮನೆಯಲ್ಲಿ ಯಾರನ್ನು ಕಂಡ ಹನುಮಂತನು ಸೀತಾದೇವಿಯನ್ನು ತಪ್ಪಾಗಿ ತಿಳಿದು? ಉತ್ತರ : ಮಂಡೋದರಿ ೨೫೦) ಸೀತೆಯು ರಾವಣನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಿದ್ದಳು? ಉತ್ತರ : ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಅದರೊಂದಿಗೆ ಮಾತನಾಡುತ್ತಿದ್ದಳು. ೨೫೧) ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉದ್ಯಾನವನ ಯಾವುದಾಗಿತ್ತು? ಉತ್ತರ : ರಾವಣನ ಅಶೋಕವನ ೨೫೨) ದೇವಲೋಕದ ಅತ್ಯಂತ ಸುಂದರವಾದ ಯಾವುದು? ಉತ್ತರ : ನಂದನವನ ೨೫೩) ನಂದನವನ ಯಾರಿಗೆ ಸೇರಿದ್ದು? ಉತ್ತರ : ದೇವೇಂದ್ರನಿಗೆ ೨೫೪) ಅಶೋಕವನದಲ್ಲಿ ಯಾವೆಲ್ಲ ಮರಗಳು ಇದ್ದವು? ಉತ್ತರ : ಭೂಮಿಯ ಮೇಲಿನ ಅತ್ಯಂತ ರಮಣೀಯ ಮರಾಗಿಡಗಳೆಲ್ಲವೂ ಅಶೋಕವನದಲ್ಲಿತ್ತು ೨೫೫) ಆಂಜನೇಯನ ಅಶೋಕವನಕ್ಕೆ ಕಾಲಿಟ್ಟಾಗ ಆ ಪರಿಸರದ ತುಂಬೆಲ್ಲ ಯಾವ ಬಣ್ಣದ ಹೂವುಗಳು ಅರಳಿದ್ಧವು? ಉತ್ತರ :ಬಿಳಿಯ ಬಣ್ಣದ ಹೂಗಳು ೨೫೬) ಆಂಜನೇಯನಿಗೆ ಬಿಳಿಯ ಬಣ್ಣದ ಹೂಗಳು ಹೇಗೆ ಕಂಡವು? ಉತ್ತರ : ಬಿಳಿಯ ಬಣ್ಣದ ಹೂಗಳು ೨೫೭) ಬಿಳಿಯ ಹೂಗಳು ಕೆಂಪಗೆ ಕಂಡುದು ಹೇಗೆ? ಉತ್ತರ : ರಾವಣನ ಮೇಲೆ ಕೆಂಡದಂಥಾ ಕೋಪದಿಂದ ಆಂಜನೆಯನಿಗೆ ಬಿಳಿಯ ಹೂಗಳೆಲ್ಲವೂ ಕೆಂಪಗೆ ಕಂಡಿದ್ದವು. ೨೫೮) ಸೀತಾಮಾತೆ ಅಶೋಕವನದಲ್ಲಿ ಏನನ್ನು ಸೇವಿಸುತ್ತಿದ್ದಳು ? ಉತ್ತರ : ಕೇವಲ ಹಾಲನ್ನವನ್ನು ೨೫೯) ಹಾಲನ್ನವನ್ನು ಯಾರು ಕಳಿಸುತ್ತಿದ್ದರು? ಉತ್ತರ‌: ಸ್ವತಃ ದೇವೆಂದ್ರ ೨೬೦) ಸೀತೆಯು ಹಾಲನ್ನವನ್ನು ಎಷ್ಟು ಭಾಗಮಾಡಿ ಸೇವಿಸುತ್ತಿದ್ದಳು? ಉತ್ತರ : ರಾಮ ಹಾಗೂ ಲಕ್ಷ್ಮಣರಿಗೆ ಎರಡು ಭಾಗ ಮಾಡಿ, ಅದರಲ್ಲಿ ರಾಮನ ಪಾಲಿನ ಅರ್ಧ ಹಾಲನ್ನವನ್ನು ಮಾತ್ರ ಸೇವಿಸುತ್ತಿದ್ದಳು. ೨೬೧) ಸೀತೆಯ ಹಾಲನ್ನವನ್ನು ಭಾಗ ಮಾಡಿ ಸೇವಿಸುವುದನ್ನು ಕಂಡ ಪಕ್ಷಿ ಯಾವುದು ? ಉತ್ತರ: ಹದ್ದುಗಳ ರಾಜ ಸಂಪಾತಿಯ ಮಗ ಸುಪಾರ್ಶ್ವ ೨೬೨) ದುಃಖತಪ್ತ ಸೀತೆ ಇದ್ದದ್ದು ಎಲ್ಲಿ ? ಉತ್ತರ: ಅಶೋಕವನದಲ್ಲಿ ೨೬೩) ಅಶೋಕವನ ಎಂದರೇನು? ಉತ್ತರ: ಶೋಕವೇ ಇಲ್ಲದ ಅತ್ಯಂತ ಸುಂದರ ಉಧ್ಯಾನವನವೇ ಅಶೋಕವನ ೨೬೪) ಅಶೋಕವೃಕ್ಷಕ್ಕಿರುವ ಇಮ್ನೊಂದು ಹೆಸರೇನು? ಉತ್ತರ : ಶಿಂಶಪಾವೃಕ್ಷ ೨೬೫) ಸೀತಾಮಾತೇಯ ಸುತ್ತಲಿದ್ದ ರಾಕ್ಷಸಿಯರು ಯಾರು ಯಾರು? ಉತ್ತರ : ತ್ರಿಜಟೆ,ಭೂರಿಜಟೆ, ಜಟೆ,ವಿಘಸೆ,ಅಯೋಮುಖಿ, ವಿಕಟೆ, ಚಂಡೊದರಿ,ವಿನತೆ, ಅಶ್ವಮುಖಿ. ೨೬೬) ರಕ್ಕಸಿಯರಲೆಲ್ಲಾ ಸಾಧು ಸ್ವಭಾವದ ರಕ್ಕಸಿ ಯಾರು? ಉತ್ತರ : ತ್ರಿಜಟೆ ಎಂಬ ವೃದ್ದೆ. ೨೬೭) ಆಂಜನೇಯನು ಅಶೋಕ ವನವನ್ನು ಪ್ರವೇಶಿಸಿದ ಕೂಡಲೇ ಸೀತೆಯೊಂದಿಗೆ ಯಾಕೆ ಮಾತನಾಡಲಿಲ್ಲ? ಉತ್ತರ : ಅವನಿಗೆ ಯಾರೋ ಬರುತ್ತಿರುವ ಸುಳಿವು ಸಿಕ್ಕಿತು. ೨೬೮) ಅಶೋಕವನಕ್ಕೆ ಆವೇಳೆ ಹೊತ್ತಿನಲ್ಲಿ ಪ್ರವೇಶಿಸಿದ್ದು ಯಾರು? ? ಉತ್ತರ : ರಾವಣನು ಪತ್ನಿ ಸಮೇತ ಪ್ರವೇಶಿಸಿದ್ದ. ೨೬೯) ರಾವಣನನ್ನು ಕಂಡ ಆಂಜನೇಯ ಮಾಡಿದ್ದೇನು? ಉತ್ತರ : ಅಶೋಕ ವೃಕ್ಷದ ಮೇಲೆ ಸದ್ದಿಲ್ಲದೇ ಕುಳಿತುಕೊಂಡ. ೨೭೦) ರಾವಣನು ಸಿತೆಯನ್ನು ಕಂಡು ಹೇಳಿದ್ದೆನು? ಉತ್ತರ : ಇನ್ನೊಂದು ತಿಂಗಳೊಳಗೆ ನನ್ನವಳಾಗದಿದ್ದರೆ ನಿನ್ನನ್ನು ಕೊಲ್ಲುವೆ ಎಂದ. ೨೭೬) ಅಚ್ಚರಿಯಿಂದ ಮರದ ಮೇಲೆ ನೋಡಿದ ಸೀತಾಮಾತೆಯ ಕಣ್ಣಿಗೆ ಕಂಡದ್ದು ಯಾರು? ಉತ್ತರ : ಕೈಜೋಡಿಸಿ ಕುಳಿತಿದ್ದ ಗೇಣುದ್ದದ ಆಂಜನೇಯ ೨೭೭) ಸೀತಾಮಾತೆಯು ಆಂಜನೆಯನನ್ನು ಯಾರೆಂದು ತಿಳಿದಳು? ಉತ್ತರ : ಮಾಯಾವಿ ರಾವಣನೇ ಈ ರೂಪದಲ್ಲಿ ಬಂದಿದ್ದಾನೆ ಎಂದು ತಿಳಿದಳು ೨೭೮) ಹನುಮನು ತನ್ನೊಂದಿಗೆ ಸೀತಾಮತೆಯನ್ನು ಕರೆದೊಯ್ಯುವೆ ಎಂದಾಗ ಸೀತೆ ಏನು ಹೇಳಿದಳು ? ಉತ್ತರ : ಶ್ರೀರಾಮನು ಲಂಕಾಧೀಶ ನನ್ನು ಸದೆಬಡಿದೇ ನನ್ನನ್ನು ಕೊಂಡೊಯ್ಯುವುದು ಧರ್ಮ ಎಂದಳು. ೨೭೯) ಸೀತಾಮಾತೆಗೆ ಹನುಮನು ಕೊಟ್ಟ ಆಭರಣ ಯಾವುದು? ಉತ್ತರ : ಶ್ರೀರಾಮಚಂದ್ರನ ಮುದ್ರಾ ಉಂಗುರ ೨೮೦) ಸೀತಾಮಾತೆ ರಾಮಚಂದ್ರನಿಗೆ ಕೊಡು ಎಂದು ಹೇಳಿ ಕೊಟ್ಟ ಆಭರಣ ಯಾವುದು ? ಉತ್ತರ : ತನ್ನ ನೆತ್ತಿಯ ಮೆಲಿದ್ದ ಚೂಡಾಮಣಿ. ೨೭೧) ರಾವಣನಿಗೆ ಸೀತೆಯ ಯಾವ ಉತ್ತರವನ್ನು ಕೊಟ್ಟಳು? ಉತ್ತರ : ನನ್ನ ರಾಮಪ್ರಭು ಬಂದೇ ಬರುತ್ತಾನೆ. ನಿನ್ನನ್ನು ಕೊಂದು ನನ್ನನ್ನು ಕರೆದೊಯ್ಯುತ್ತಾನೆ ಎಂದಳು ೨೭೨) ಕುಪಿತ ರಾವಣನು ನಿರ್ಗಮಿಸಿದ ನಂತರ ರಕ್ಕಸಿಯರೆಲ್ಲ ನಿದ್ರೆಗೆ ಶರಣಾದದ್ದು ಹೇಗೆ ? ಉತ್ತರ: ನಿದ್ರಾದೇವಿಯ ಉಪಕಾರದಿಂದ ರಕ್ಕಸಿಯರಿಗೆಲ್ಲಾ ನಿದ್ರೆ ಆವರಿಸಿತು ೨೭೪) ಆಂಜನೆಯನು ಅಶೋಕವನಕ್ಕೆ ಬಂದಾಗ ಅವನ ಗಾತ್ರ ಎಷ್ಟಿತ್ತು? ಉತ್ತರ : ಗೇಣುದ್ದ ಮಾತ್ರ ೨೭೫) ಸೀತಾಮಾತೆಯ ಕಿವಿಗೆ ಆಂಜನೆಯನ ಯಾವ ನುಡಿಗಳು ಬಿದ್ದವು? ಉತ್ತರ : ರಾಮನ ಬಗ್ಗೆ ಭಕ್ತಿಯಿಂದ ಯಾರೋ ಗುನುಗುತ್ತಿರುವುದು ಸೀತಾಮಾತೆಯ ಕಿವಿಗೆ ಬಿದ್ದವು. ೨೮೧) ಹೊರಡುತ್ತೆನೆಂದು ಹೊರಟ ಹನುಮ ಅಶೋಕವನವನ್ನು ದ್ವಂಸ ಏಕೆ ಮಾಡಿದ ? ಉತ್ತರ: ತನ್ನ ಪರಾಕ್ರಮ ರಾವಣನಿಗೆ ತಿಳಿಯಲಿ ಎಂದು! ೨೮೨) ರಾವಣನು ಅಂಕೆಯಿಲ್ಲದ ಕಪಿಯನ್ನು ಸೆರೆಹಿಡಿದು ತಾ ಎಂದು ಯಾರನ್ನು ಕಳುಹಿಸಿದ? ಉತ್ತರ : ತನ್ನ ಕಿರಿಯ ಪುತ್ರ ಅಕ್ಷಕುಮಾರನನ್ನು ಕಳಿಸಿದ ೨೮೩) ಅಕ್ಷಕುಮಾರನ ಸ್ಥಿತಿ ಏನಾಯಿತು? ಉತ್ತರ: ಆಂಜನೆಯನ ಕೈಯಲ್ಲಿ ಸಂಹಾರವಾದ ೨೮೪) ರಾವಣನ ಮತ್ತೊಬ್ಬ ಮಗನ ಹೆಸರೇನು? ಉತ್ತರ: ಇಂದ್ರಜಿತ್ ೨೮೫) ಇಂದ್ರಜೀತ್ ಎಂಬ ಹೆಸರು ಅವನಿಗೆ ಏಕೆ ಬಂತು? ಉತ್ತರ : ಇಂದ್ರನನ್ನೇ ಸೋಲಿಸಿದ ಕೀರ್ತಿಯಿಂದ ಅವನಿಗೆ ಆ ಹೆಸರು ಬಂತು
–>