-->

ಗೋದಾನದ ಮಹತ್ವ , ಬ್ರಹ್ಮಚರ್ಯದ ಮಹತ್ವ ಹೇಳಿದ ಬೀಷ್ಮ

ಯಾರು ಹುಟ್ಟಿದಾಗಿನಿಂದ ಸಾಯುವ ವರೆಗೂ ಬ್ರಹ್ಮಚಾರಿಯಾಗಿಯೇ ಇರುವರೋ ಅವರಿಗೆ ದೊರಕದೇ ಇರುವ ವಸ್ತುಗಳೇ ಯಾವುದೂ ಇಲ್ಲ ಎಂದು ಬೀಷ್ಮಾಚಾರ್ಯರು ಧರ್ಮರಾಜನಿಗೆ ಬ್ರಹ್ಮಚರ್ಯ ಪಾಲನೆ ಮಹತ್ವ ಕುರಿತು ಹೇಳುತ್ತಾರೆ.

ಈ ಲೋಕದಲ್ಲಿ ಸತ್ಯನಿಷ್ಠರಾಗಿದ್ದ, ಜಿತೇಂದ್ರಿಯರಾಗಿದ್ದ ಮತ್ತು ಊರ್ಧರೇತಸ್ಯರಾಗಿದ್ದ ಅನೇಕ ಕೋಟಿ ಕೋಟಿ ಋಷಿಗಳು ಈಗ ಬ್ರಹ್ಮ ಲೋಕದಲ್ಲಿ ವಾಸಮಾಡುತ್ತಿದ್ದಾರೆ.

ಯಾರಾದರೂ ವಿಶೇಷವಾದ ರೀತಿಯಲ್ಲಿ ಬ್ರಹ್ಮಚರ್ಯವ್ರತವನ್ನು ಪರಿಪಾಲಿಸಿದ್ದೇ ಆದರೆ ಅವರು ಆಬ್ರಹ್ಮಚರ್ಯ ದಿಂದಲೇ ತನ್ನಲ್ಲಿರುವ ಸಕಲ ಪಾಪಗಳನ್ನೂ ಭಸ್ಮಮಾಡಿಬಿಡುತ್ತಾನೆ. ಈ ನಿಯಮವು ಬ್ರಾಹ್ಮಣರಿಗೆ ವಿಶೇಷವಾಗಿ ಅನ್ವಯಿಸುತ್ತದೆ. ನೈಷ್ಟಿಕ ಬ್ರಹ್ಮಚರ್ಯವನ್ನು ಪಾಲಿಸುತ್ತಿರುವ ಬ್ರಾಹ್ಮಣರನ್ನು ಅಗ್ನಿಯೆಂದೇ ಹೇಳುತ್ತಾರೆ. ತಪಸ್ವಿಗಳಾದ ಬ್ರಾಹ್ಮಣರಲ್ಲಿ ಈ ಅಗ್ನಿತ್ವವು ಪ್ರತ್ಯಕ್ಷನಾಗಿಯೇ ಕಾಣುತ್ತದೆ, ಬ್ರಹ್ಮಚಾರಿಯ ಎದುರಾಗಿ ನಿಲ್ಲಲು ಇಂದ್ರನೂ ಹೆದರುತ್ತಾನೆ.  ಬ್ರಹ್ಮ ಚರ್ಯದ ಫಲವು ಋಷಿಗಳಲ್ಲಿಯೂ‌ ಕಂಡುಬರುತ್ತದೆ.ಯಾರು ತಂದೆ ತಾಯಿ, ಗುರುಗಳನ್ನು, ಆಚಾರ್ಯರನ್ನು, ಹಿರಿಯಣ್ಣನನ್ನುನಿರಂತರವಾಗಿ ಸೇವಿಸುವರೋ ಅವರ ಗುಣಗಳಲ್ಲಿ ದೇಹಗಳನ್ನೆಣಿಸುವುದಿಲ್ಲ. ಅಂತಹವರು ಸ್ವರ್ಗಲೋಕ ದಲ್ಲಿ ಸರ್ವಸಮ್ಮತವಾದ ಸ್ಥಾನವನ್ನು ಪಡೆಯುವತ್ತಾರೆ.  

ತಂದೆ-ತಾಯಿಗಳ, ಗುರುಗಳ, ಆಚಾರ್ಯರ ಸೇವೆಯಿಂದ ಸ್ವರ್ಗಲೋಕ ಪ್ರಾಪ್ತವಾಗುತ್ತದೆ ಗುರು ಶುಶ್ರೂಷೆಯಲ್ಲಿ ನಿರತರಾದ , ಜಿತೇಂದ್ರಿಯರಾದ ಮನುಷ್ಯರು ಯಾವ ಕಾರಣದಿಂದಲೂ ನರಕ ವನ್ನು ನೋಡಬೇಕಾಗುವುದಿಲ್ಲ ಎಂದು ಭೀಷ್ಮರು ಹೇಳಿದರು. ಗೋದಾನದ ಯಾವ ವಿಧಿಯಿಂದ ಶಾಶ್ವತವಾದ ಪುಣ್ಯ ಲೋಕ ಗಳು‌ ಸಿಗುತ್ತವೆ. ಅಂಥ ಗೋದಾನದ ಮಹಿಮೆ ಹೇಳು ಎಂದು ಧರ್ಮರಾಜನು ಕೇಳುತ್ತಾನೆ.
ಭೀಷ್ಮರು ಗೋದಾನದ ಬಗ್ಗೆ ಏನು ಹೇಳಿದರು ಎಂಬುದನ್ನು ತಿಳಿಯೋಣ.

ಗೋದಾನಕ್ಕಿಂತಲೂ ಶ್ರೇಷ್ಠವಾದ ಬೇರೆ ಯಾವ ದಾನವೂ ಇಲ್ಲ. ನ್ಯಾಯವಾದ ಮಾರ್ಗಗಳಿಂದ ಪ್ರಾಪ್ತವಾಗಿ ಸಾಕಲ್ಪಟ್ಟ ಗೋವು ಒಡನೆಯ ದಾತೃವಿನ ಕುಲವನ್ನು ಪಾವನಗೊಳಿಸುತ್ತದೆ. ಸತ್ಪುರುಷರಿಗೋಸ್ಕರ ಗೋದಾನದ ವಿಧಿಯನ್ನು ಉತ್ತಮ ವಾಗಿ ರಚಿಸಿ ಅದನ್ನು ಈ ಪ್ರಜೆಗಳಿಗೆ ವಿಶೇಷವಾಗಿ ಅನುಗ್ರಹಿಸಿಕೊಟ್ಡಿ ದ್ದಾರೆ ನಮ್ಮ ಋಷಿಗಳು. 

ಗೋದಾನದ ಮಹತ್ವ , ಬ್ರಹ್ಮಚರ್ಯದ ಮಹತ್ವ ಹೇಳಿದ ಬೀಷ್ಮ , ಮಹಾಭಾರತ ಸಾರ

ಬಹಳ ಹಿಂದಿನಿಂದಲೂ ಪ್ರಚಲಿತವಾಗಿರುವ ಶ್ರೇಷ್ಠವಾದ, ಗೋದಾನದ ಸಲುವಾಗಿ ರಚಿತವಾಗಿರುವ ಆ ವಿಧಿಯನ್ನು ಭೀಷ್ಮರು ಯುಧಿಷ್ಠಿರನಿಗೆ ಹೇಳುತ್ತಾರೆ. ಹಿಂದೊಮ್ಮೆ ಗೋದಾನದ ಸಲುವಾಗಿ ಮಾಂಧಾತೃ ಚಕ್ರವರ್ತಿಯು ಅನೇಕ ಹಸುಗಳು ಸಾಕಿದ್ದನು. ಆ ಸಮಯದಲ್ಲಿ ಮಾಂಧಾತೃ ವಿಗೆ ಆ ಗೋವುಗಳನ್ನು ಹೇಗೆ ದಾನಕೊಡಬೇಕು ಎಂಬ ಜಿಜ್ಞಾಸೆಯುಂಟಾಯಿತು.


ಆಗ  ಮಾಂಧಾತೃವೂ ಬೃಹಸ್ಪತಿ ಯನ್ನು ಗೋದಾನದ ಬಗ್ಗೆ ಕೇಳುತ್ತಾನೆ. ಗೋದಾನವನ್ನು ಮಾಡಲು ಇಚ್ಛಿಸಿರುವ ಮನುಷ್ಯನು ನಿಯಮ ಪೂರ್ವಕವಾಗಿ ವ್ರತಾನುಷ್ಠಾನ ಮಾಡಬೇಕು. ಸತ್ಪಾತ್ರನಾದ ಬ್ರಾಹ್ಮಣನನ್ನು ಆಹ್ವಾನಿಸಿ ಅವನನ್ನು ಯಥಾಯೋಗ್ಯವಾಗಿ ಸತ್ಕ ರಿಸಬೇಕು. ನಾಳೆ ಈ ಹಸುವನ್ನು ತಮಗೆ ದಾನ ಕೊಡುವೆ ಎಂದು ಸಂಕಲ್ಪ ಮಾಡಬೇಕು. ಅನಂತರ ರೋಹಿಣೀ ( ಕೆಂಪು ಬಣ್ಣದ ) ಹಸುವನ್ನು ತಂದು ಅದನ್ನು ಮುಟ್ಟಿ ನಮಸ್ಕರಿಸನೇಕು. ಅನಂತರ ಗೋವುಗಳ ಮಧ್ಯದಲ್ಲಿ ನಿಂತುಕೊಂಡು ಹಸುವು ನನ್ನ ತಾಯಿಯಾಗಿದೆ. ಗೂಳಿಯು ನನ್ನ ತಂದೆಯಾಗಿದೆ, ಗೋ - ವೃಷಭಗಳೆರಡೂ ನನಗೆ ಸ್ವರ್ಗವನ್ನು, ಐಹಿಕ ಸುಖವನ್ನೂ ದಯಪಾಸಲಿ, ಹಸುವೇ ನನ್ನ ಜೀವಿಕೆಗೆ ಆಧಾರಭೂತವಾಗಿದೆ.‌ಹೀಗೆ ಹೇಳಿ ಗೋವನ್ನು ಶರಣುಹೊಂದಿ ಆ ಗೋವುಗಳ ಮಧ್ಯದಲ್ಲಿಯೇ ಆ ರಾತ್ರಿಯನ್ನು ಕಳೆದರೆ  ಸಕಲಶಾಪಗಳಿಂದಲೂ ವಿಮುಕ್ತನಾಗುತ್ತಾನೆ.

ಮರು ದಿನ ಸೂರ್ಯೋದಯದ ಸಮಯದಲ್ಲಿ ಗಂಡು ಕರುವಿನೊಡನೆ ಗೋವನ್ನುಬ್ರಾಹ್ಮಣನಿಗೆ ದಾನ ಮಾಡಿ ಸ್ವರ್ಗವನ್ನು ಹೊಂದಬೇಕು ಎಂದು ಬೀಷ್ಮರು ಗೋ ದಾನ ಮಾಡುವ ವಿಧಾನದ ಬಗ್ಗೆ ಧರ್ಮರಾಜನಿಗೆ ವಿವರಿಸಿದರು.


- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)

–>