-->

Hattilakkamma Temple , Yediyur - Weekend destinations

About Hattilakamma Temple

  • At Yediyur , Kunigal Taluk - Karnataka  about 100 kms from Bangalore
  • Believed to be consecrated about 1800 years ago
  • Main diety in form of goddess Lakshmi worshiped here. Also the village main temple known as Ammanahatti , meaning the Hut of the Mother.
  • Special poojas conducted every Friday which is considered as auspicious for Lakshmi
  • Many devotees who are known to have Evil-eye (Kan Drushti) related problems believe by performing a pooja here by offering a set of Saree , Bangle , Coconut praying for blessings  their problems get solved
  • Also there is a unique custom followed by devotees - there is a ox yard where devotees pray in front of a ox and direct in their mind for ox to move , if the ox moves in the direction they had prayed its believed to solve their problems , else it may take further time.
  • Free lunch is served by temple authority on Tuesday and Fridays.
  • Temple is open for darshan daily between 8.30 AM to 7 PM . Do visit this spot , share us your experience.
    Hattilakkamma Temple , Front view

 


Hattilakkamma temple Gopuram

   
Hattilakkamma Temple Sanctum
Seeking Ox blessings


Belaguru Veera Prathapa Anjaneya Temple , Weekend destinations

Belaguru Veera Prathapa Anjaneya Temple 1


About Belaguru temple

  • Belaguru is a small village in Hosadurga district , Karnataka about 200 kms from Bangalore
  • It is known for popular diety worshipped here - Veera Prathapa Anjaneya (Hanuman)
  • Temple Idol is believed to be installed by Sage Vyaasaraja about more than 750 years ago
  • Temple has 2 sanctums . Main sanctum has idol of about 3 to 4 feet.
  • Surronding the main temple  are newly constructed sanctums for Shiva , Devi , Shanmuga etc



Belaguru Veera Prathapa Anjaneya Temple 2


 

 About Sri Ramadhutha Bindhu  Madhava Sadhguru

Belaguru Veera Prathapa Anjaneya Temple 3

 

  • Popularly known as Avadhootaru , was a great devotee of Hanuman
  • He was known to have attained without any formal education Vedas and Upanishads through spiritual enlightment
  • He initiated the Akshaya Patra program at temple where free lunch is served for all devotees everyday
  • Many devotees used to met him to seek solution for their problems which he used to solve through his miracle spiritual knowledge. 
  • His preaching on  need for guru , life's purpose are popular
  • He used to sing bajans and songs on Hanuman. Some of his songs can be listened here
  • He recently took heavenly abode in 2020.

 Temple complex has a Mantapa where arrangements are made for devotees stay , conduct programs and special functions. On every poornima day , homas are conducted serving food for thousands.

Belaguru Veera Prathapa Anjaneya Temple 4 

Belaguru Veera Prathapa Anjaneya Temple 5

Behind the temple is a nice view lake . Temple is open on all days for darshan in the morning between 7 to 12 AM and evening between 5.30 to 7.30 PM. Do visit this spot with your family and friends , share us your experience.


Natural Care - Hip bath - Benefits and Precautions

 

Natural Care - Hip bath - Benefits and Precautions

Benefits

  • Mobilizes fat around abdomen thus decreases abdominal obesity
  • Improves abdominal organ function
  • Improves circulation to pelvic organs thus corrects hormonal imbalance
  • Very effective treatment for PCOS , Infertility & other gynecological ailments
  • Helps to relieve constipation , bloated abdomen , indigestion.

Precaution

  • Consult doctor if having knee pain , open wounds , giddiness
  • Drink 2 glasses of water before and after treatment
  • Take treatment on a empty stomach or 3 hours after meals for maximum benefits

Average cost of Hip bath treatment

  • Rs.400 to Rs.600
  • Duration 15 to 30 minutes 
Experience the healing power of nature at Nature Cure center at Jayanagar 3rd Block , Bangalore.

Natural care - Kidney pack - Benefits and Precautions

 

Natural care - Kidney pack - Benefits and Precautions

Benefits

  • Decreases hyper acidity , heart burn , nausea and vomiting
  • Stimulates function of kidneys thus reduces water retention
  • Very effective treatment for Hypertension, Acid peptic disease , Migraine
  • Relaxes the low back muscles thus relieving back pain

Precaution

  • Consult doctor if having Bronchial asthma , hypersensitive skin
  • Empty urinary bladder before treatment
  • Drink 2 glasses of water before and after treatment
  • Take treatment on a empty stomach or 3 hours after meals for maximum benefits

Average cost of Kidney Pack treatment

  • Rs.500 to Rs.1000
Experience the healing power of nature at Nature Cure center at Jayanagar 3rd Block , Bangalore.

Natural Care - Salt Glow Oil massage - Benefits and Precautions

 


Benefits

  • Improves skin health and complexion
  • Relieves stress and reduces anxiety
  • Promotes relaxation
  • Induces good sleep
  • Mobilizes subcutaneous fat and aids in weight loss
  • Reduces musculoskeletal pain and increase range of movements
  • Removes dead skin , tan thus increase its glow

Precaution

  • Consult doctor before taking treatment if you have skin problems , allergy , hyper sensitivity, open wounds
  • Get your BP checked before the treatment
  • Drink 2 glasses of water before and after treatment
  • Take treatment on a empty stomach for maximum benefits
  • Have a proper rest and very light meal after the massage

Average cost of Salt Glow Oil massage

  • Rs.700 to Rs.1200
  • Duration 45 to 60 minutes
Experience the healing power of nature at Nature Cure center at Jayanagar 3rd Block , Bangalore.

Natural care - Steam Bath - Benefits and Precautions

Steam Bath

One of the simple and natural treatments to relax body muscles. It involves about 15 to 20 minutes exposure to steam in a contained setup. 



Benefits

  • Improves skin circulation , opens up skin pores and helps to cleanse the outer skin
  • Reduces muscle soreness and restores muscle strength
  • Loosen stiff joints thus reduces skeletal pain
  • Burns calories thus promotes weight loss
  • Relieves congestion hence good for cold and sinus problems
  • Boosts immunity

Precaution

  • Drink 2 glasses of water , before and after treatment
  • Keep the cold compress over the head during the treatment
  • Take cold water bath or cold foot immersion immediately after the treatment
  • In case of giddiness , fatigue , headache , blurred vision - stop the treatment and come out of cabin

Average cost of steam bath

  •  Rs.500 to Rs.1000
Experience the healing power of nature at Nature Cure center at Jayanagar 3rd Block , Bangalore.

Stock Market Tips to minimize Loss and Pressure

Stock Market is an exciting platform to grow hard earned money through trading and investing in stocks. History and survey reports say - less than 10% make good profits on their investments while rest fail to do so , a surprising figure. 

 


We explore from our trading community experience what is it that results in loss , pressure , mental tension and how they did learn from those losses and overcome them to create profit strategies.  While we keep hearing news how the market turn the fortunes from some turning them richer , also wiping out for some. In this article we share all such experiences and tips shared by our community.

  1. Risk Management with Stop Loss
  2. Entry and Exit Discipline
  3. Do not time the market
  4. Stay away when unsure about direction
  5. Diversify investment in multiple stock sectors
  6. Be aware of market players game
  7. Be future ready with a checklist of decision points
  8. Study the fundamentals
  9. Exercise with Paper Trade or Virtual trade

 1. Risk Management with Stop Loss

The beauty of stock markets is one make profits when it moves in either direction . When the sentiments are high good profits are made with buy decisions , when its low , profits booked by selling. With lot of tools and information around , company events , technical analysis charts , advise and opinions one makes a buy / sell decision.

Stock Market Tips to minimize Loss and Pressure

Risk Management involves in answering below questions  

  • What happens if market moves in opposite direction to our decision
  • What percentage of our investment we are ready to risk in such cases
  • At what price level we decide to exit the trade
  • For how long are we ready to hold the trade

Before placing the the trade order , trader has to work on above questions and quantify the decision . For example , if trader has a medium risk appetite and can afford to risk 5% of the investment , if capital investment on a buy trade is $1000 , then a stop loss order should also be executed triggering at $950 which is 5% loss on investment.  Trader can cover this loss in next trade using the remaining $950 investment when the market is in good sentiment . In absence of stop loss , if market makes a adverse move resulting in say 10 to 15% loss of a trade , then to cover this loss - the time , energy spend may be more. Such repeated trades may ruin the capital investment and one may even quit the stock market thinking its not for them. Wise trader always understand loss and gains are common in a stock market , they know they have good chance to win 70% of their trades and always trades with a stop loss. This is the number one and most important must practice for a trader to grow capital and improve profits.  In April 2020 during COVID19 pandemic , Crude oil hit a steep negative closing value of -$37  from a opening price of $20 , imagine what may have happened for a future trade bought without stop loss. Traders who took such trades may have long stories.

2. Entry and Exit Discipline

Trader must decide on the discipline strategy for the day. For example - Trader A decides to take 2 trades of stock S1 with a profit target of 2% for the day . Once the target price is hit , irrespective of market further movements close the trade for the day.  Market movements may be luring to trade again , but if done without proper price action analysis in greed may result in a reverse trend resulting in  pressure and tension to the trader. Fixed trade irrespective of the market conditions once a price target is hit helps in reducing trading stress in the long term , consistent profits and capital growth.

3. Do not Time the Market

Market may either be in an uptrend or downtrend or at resisting any further upward movement  or finding Support at downward levels. Most successful traders respect the trend before entering into a trade . Sometimes market make good moves when news is supporting , It may not be wise to expect that market will fall in next few minutes without a solid price analysis and trade the reverse direction. For example in the recent COVID pandemic , NIFTY 50 touched record levels when each sector started improving in subsequent months and induction of new retail traders , expecting that it will fall blindly may result in wrong decisions. This may build pressure waiting for market to touch a figure while its moving away every moment .Respect the trend

4. Stay Away when Unsure about Direction

Securing your capital and profits is very important when trading in volatile markets. There may be situations such as emergency declaration , monetary policy changes etc where traders may be unsure which direction market may move and in ambiguity. A wrong decision in such situations may deplete the capital in no time. In such ambiguous moments , it is wise to protect your profits and capital , stay out of market till volatility settles down and enter the market when there is stability in price

5. Diversify Investments in multiple stock sectors

Unless a trader is good in tracking the industry trend very closely , it is wise to diversify the investments into multiple sectors. For example rather than investing 100% of the capital into Banking , a diversified portfolio with 60% in Banking , 20% in Auto and 20% in IT may help as probability of all sectors moving down is less compared to individual sectors. Rather than Investing all capital in one company , its wise to invest in similar companies of Industry to mitigate risks.

6. Beware of big market players game

Surprising movements in the stock prices even when there is no major corporate update or event indicate the presence of big market players . Action of such players may appear to a retail trader that there is a trend change and prompt to trade. Once the big players sufficiently reach their profit target they exit the their positions which causes a sharp reverse trend and the retail traders may be trapped . Experienced traders track this price action movement , think twice before taking a trade which has seen sharp movements in very small amount of time.

 7. Be Future Ready with a checklist of decision points

Nobody will be able to decide the future of the market direction. It takes its own twists and turns based on the traders sentiments. However when it comes to factor of time , some points help in guessing this movement by answering these questions on future events before taking a long trade

  • Is there any holiday or long weekend nearing in the country.
  • Is there any holiday nearing in US , because some markets closely follow US . Market movements will be less on those days.
  • is there any major climate nearing especially for commodities stocks
  • Is there any major economic decision in upcoming days like Reserve Bank Interest change , Reverse Interest rates , Budget decisions which may trigger volatility.
  • Is there any major political events such as country border issues , policy changes , election results 
  • For Options traders , how near is the option expiry date

By taking a trade after answering these questions , trader will not regret for their decisions as its not a naked trade but a wisely thought decision.

8. Study the fundamentals

This is specifically for beginners. Many beginners who are influenced by their trading friends enter the market , take some tips on where to invest and draw out profits when it hits the target price. Such trades which are done without any proper analysis and understanding of the market conditions are called Naked trades. While such trades may return profits , when hit with a loss - it may be difficult for the trader to understand the reason as they are unaware of the basics of markets. It is at this stage when they pour more money , thinking market trends will change but end up losing it , increased tensions and decisions to quit stock markets . Such loses can be avoided by understanding some fundamental concepts of trading . For example - 

  • Understanding basic concept of Stop Loss , Triggers , Cover Orders , Bracket orders etc
  • Understanding basic concept of Candle chart indicators - Hammers , Twizzers , Shooting star , morning star , evening star etc
  • Understanding the market trend and range analysis - Upward , Downward , Sideways , Resistance , Support etc
  • Understanding how the option premium value changes with time , volatility etc
  • Understanding how to use charts - RSI , Oscillators , Bollinger Bands etc
  • Understanding how to draw trend lines - Parallel lines, Downward Triangle etc
  • Understanding factors which affects margins , brokerage rates etc

Studying once such topics will help a trader to form a solid and wise decision . It will maximum take a week time to understand these concepts . There are lot of informative video content on Youtube.

9. Exercise with Paper Trade or Virtual trade

This is another tip for beginners , to use paper trade or virtual trade as part of their decision building exercise. Rather than directly investing the hard earned money to play , using virtual trading platforms help to exercise the decisions taken and gain confidence . After all traders are not going to lose any money with virtual or paper trades. At the end of each trade , introspect what went right and wrong and improve each day before entering live market.

Lastly out of Wisdom 

Few important tips and advise from market experts from their experience and wisdom worth following -

  • Money management is number one priority . It does not matter how good the trading strategy is , one loses if risk management is not proper
  • Market is always right . Never have over expectations timing it
  • Success is not measured on one single trade but a series of trades
  • Be carefree , risk only what you are ready to lose
  • Good decisions are from a optimal trading mindset which is calm and composed
  • Trading is a game of survival. One must make big profits while running hot, but you must avoid mounting huge losses when running cold
  • It is not whether one wins or loses. Its about how much one makes on a winning trade compared to one made on a losing trade
  • Focus and enjoy the process of trading , not the prize
  • Winning traders are humble and realistic

We believe above tips shared may be useful in your trading to reduce loses and pressure. Do share your comments and suggestions in the comments section. If you find this useful help your community by sharing this article.

ನಮ್ಮ ಜೀವನದಲ್ಲಿ ಗುರುಗಳ ಮಹತ್ವ - Importance of Guru in our life

 "ಭಾರತ ದೇಶದ ವೈಶಿಷ್ಟ್ಯ ಎಂದರೆ ಗುರು-ಶಿಷ್ಯ ಪರಂಪರೆ !"

೧. *ಗುರುಗಳ ಮಹತ್ವ ಮತ್ತು "ಗುರು" ಈ ಶಬ್ದದ ಅರ್ಥ*

ನಮ್ಮ ದೇಶದ ವೈಶಿಷ್ಟ್ಯ ಎಂದರೆ ಗುರು-ಶಿಷ್ಯ ಪರಂಪರೆ. ಗುರುಗಳೇ ನಮ್ಮನ್ನು ಅಜ್ಞಾನದಿಂದ ಹೊರಗೆ ತೆಗೆಯುತ್ತಾರೆ. ಶಿಕ್ಷಕರು ನಮ್ಮ ಗುರುಗಳೇ ಆಗಿದ್ದಾರೆ. ಅದಕ್ಕೆ ನಾವು ಗುರುಪೂರ್ಣಿಮೆಯ ದಿನದಂದು "ಗುರು ವಂದನೆ" ಯನ್ನು ಆಚರಿಸಿ ಅವರ ಚರಣಕ್ಕೆ ಕೃತಜ್ಞತೆಯನ್ನು ವ್ಯಕ್ತ ಮಾಡಬೇಕು. ಪ್ರಥಮವಾಗಿ "ಗುರು" ಈ ಶಬ್ದದ ಅರ್ಥವನ್ನು ತಿಳಿದುಕೊಳ್ಳೊಣ.




"ಗು" ಅಂದರೆ ಅಂಧಃಕಾರ ಮತ್ತು "ರು" ಅಂದರೆ ದೂರವಾಗಿಸುವುದು. ಗುರುಗಳು ನಮ್ಮ ಜೀವನದಲ್ಲಿನ ವಿಕಾರಗಳ ಅಜ್ಞಾನವನ್ನು ದೂರ ಮಾಡಿ, ಜೀವನವನ್ನು ಆನಂದದಿಂದ ಹೇಗೆ ಬದುಕಬೇಕು ಎಂದು ನಮಗೆ ಕಲಿಸುತ್ತಾರೆ.

೨. *ಮನುಷ್ಯನ ಜೀವನದಲ್ಲಿ ಬರುವ ಮೂರು ಗುರುಗಳು* !

೨ಅ. ನಮ್ಮ ಮೇಲೆ ವಿಧ ವಿಧವಾದ ಸಂಸ್ಕಾರ ಮಾಡಿ ನಮ್ಮನ್ನು ಸಮಾಜದೊಂದಿಗೆ ಏಕರೂಪವಾಗಲು ಕಲಿಸುವ *ತಾಯಿ-ತಂದೆ* ಇವರು ನಮ್ಮ *ಮೊದಲನೆಯ ಗುರು*! : ಬಾಲ್ಯದಲ್ಲಿ ತಾಯಿ-ತಂದೆಯರು ನಮಗೆ ಪ್ರತಿಯೊಂದು ವಿಷಯ ಕಲಿಸುತ್ತಾರೆ. ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ, ಇದರ ಅರಿವು ಮಾಡಿಸಿ ಕೊಡುತ್ತಾರೆ. ಹಾಗೆಯೇ ಒಳ್ಳೆಯ ಅಭ್ಯಾಸಗಳನ್ನು ಕಲಿಸಿಕೊಡುತ್ತಾರೆ, ಉದಾ.

೧. ಬೆಳಿಗ್ಗೆ ಬೇಗನೆ ಏಳಬೇಕು. ಭೂಮಾತೆಗೆ ವಂದನೆ ಮಾಡಬೇಕು. "ಕರಾಗ್ರೆ ವಸತೇ ಲಕ್ಷ್ಮಿ" ಈ ಶ್ಲೋಕವನ್ನು ಹೇಳಬೇಕು.

೨. ಹಿರಿಯರಿಗೆ ನಮಸ್ಕಾರ ಏಕೆ ಮತ್ತು ಹೇಗೆ ಮಾಡಬೇಕು..?

೩. ಸಾಯಂಕಾಲ "ಶುಭಂ ಕರೊತಿ" ಪಠಿಸಬೇಕು, ದೀಪ ಹಚ್ಚಬೇಕು; ಕಾರಣ ದೀಪವು ಅಂಧಃಕಾರವನ್ನು ನಷ್ಟ ಮಾಡುತ್ತದೆ.

೪. ನಾವು ನಮ್ಮ ಗೆಳೆಯರನ್ನು ಭೇಟಿ ಆದಾಗ ನಮಸ್ಕಾರ ಮಾಡಬೇಕು; ಕಾರಣ ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೇವರಿದ್ದಾನೆ.

೫. ಹಾಗೆಯೇ ನಮ್ಮ ಮನೆಗೆ ಯಾರಾದರು ನೆಂಟರು ಬಂದರೆ, ಅವರನ್ನು ದೇವರ ಸಮಾನ ಎಂದು ತಿಳಿದು ಸ್ವಾಗತ ಮಾಡಬೇಕು. ಹೀಗೆ ಎಲ್ಲ ವಿಷಯಗಳನ್ನು ತಾಯಿ-ತಂದೆಯರು ನಮಗೆ ಹೇಳುತ್ತಾರೆ, ಅಂದರೆ ನಮ್ಮ ಮೊದಲನೆಯ ಗುರು ತಾಯಿ-ತಂದೆಯರು ಇದ್ದಾರೆ; ಅದಕ್ಕೆ ನಾವು ಅವರ ಆದರ ಮಾಡಬೇಕು. ಈಗ ಹೇಳಿ, ನಿಮ್ಮಲ್ಲಿ ಎಷ್ಟು ಮಕ್ಕಳು ತಮ್ಮ ತಾಯಿ-ತಂದೆಯವರಿಗೆ ನಮಸ್ಕಾರ ಮಾಡುತ್ತೀರಿ? ಇಂದೇ ನಾವು ನಿಶ್ಚಯ ಮಾಡೋಣ, "ತಾಯಿ-ತಂದೆಯವರಿಗೆ" ನಮಸ್ಕಾರ ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಕೃತಜ್ಞತೆ.

೨ಆ. ನಮಗೆ ಅನೇಕ ವಿಷಯಗಳನ್ನು ಕಲಿಸಿ ಸರ್ವಾಂಗೀಣ ಪ್ರಗತಿ ಮಾಡುವ *ಶಿಕ್ಷಕರು*, ಇವರೇ ನಮ್ಮ *ಎರಡನೆಯ ಗುರು*! : ನಿಜವಾಗಿ ನಾವು ಶಿಕ್ಷಕರ ದಿನಾಚರಣೆಯನ್ನು ಗುರುಪೂರ್ಣಿಮೆಯಂದು ಆಚರಿಸಿ ಆ ದಿವಸ ಅವರಿಗೆ ಭಾವಪೂರ್ಣ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು. ಗುರು ಅಂದರೆ ನಮ್ಮ ಶಿಕ್ಷಕರು ಮತ್ತು ಶಿಷ್ಯ ಅಂದರೆ ನಾವಿರುತ್ತೇವೆ; ಅದಕ್ಕೆ ನಾವು ಶಿಕ್ಷಕರ ದಿನವನ್ನು ಇದೇ ದಿನ ಆಚರಣೆ ಮಾಡಬೇಕು.

ಶಿಕ್ಷಕರು ನಮಗೆ ಅನೇಕ ವಿಷಯಗಳ ಬಗ್ಗೆ ಜ್ಞಾನ ನಿಡುತ್ತಾರೆ. ಅವರು ಇತಿಹಾಸ ಕಲಿಸುತ್ತಾರೆ, ಅದರಿಂದ ಅವರು ನಮ್ಮಲ್ಲಿನ ರಾಷ್ಟ್ರಾಭಿಮಾನವನ್ನು ಜಾಗೃತ ಮಾಡುತ್ತಾರೆ. ನಾವು ಸ್ವಂತಕ್ಕೋಸ್ಕರ ಬದುಕುವುದಕ್ಕಿಂತ, ರಾಷ್ಟ್ರಕ್ಕಾಗಿ ಬದುಕಬೇಕು ಎಂಬ ವ್ಯಾಪಕ ವಿಚಾರ ನಮಗೆ ಕೊಡುತ್ತಾರೆ. ಭಗತಸಿಂಗ, ರಾಜಗುರು, ಸುಖದೇವ ಇತ್ಯಾದಿ ಕ್ರಾಂತಿಕಾರರುರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದರು, ಆ ಪ್ರಕಾರ ನಾವು ತ್ಯಾಗಿಗಳು ಆಗಬೇಕು. "ತ್ಯಾಗ, ಇದು ನಮ್ಮ ಜೀವನದ ತಳಹದಿ", ಇದನ್ನು ನಮಗೆ ಶಿಕ್ಷಕರು ಹೇಳುತ್ತಾರೆ. ತ್ಯಾಗಿ ಮಕ್ಕಳೇ ರಾಷ್ಟ್ರದ ರಕ್ಷಣೆ ಮಾಡುತ್ತಾರೆ. ಇತಿಹಾಸದಿಂದ ನಮ್ಮ ಆದರ್ಶ ನಿರ್ಧಾರ ಆಗುತ್ತದೆ, ಉದಾ: ಛತ್ರಪತಿ ಶಿವಾಜಿ ಮಹಾರಾಜ, ಸ್ವಾ. ಸಾವರಕರ ಇವರೇ ನಮ್ಮ ನಿಜವಾದ ಆದರ್ಶ ಇದ್ದಾರೆ. ಅವರಂತೆ ನಾವು ತ್ಯಾಗಿಗಳು ಆಗಬೇಕು.

ಅ.ವಿವಿಧ ವಿಷಯಗಳನ್ನು ನಿಸ್ವಾರ್ಥಿತನದಿಂದ ಕಲಿಸಿ ನಮ್ಮನ್ನು ಪ್ರಗತಿ ಪಥದಲ್ಲಿಕರೆದುಕೊಂಡು ಹೋಗುವ ನಮ್ಮ ಶಿಕ್ಷಕರು! : ಶಿಕ್ಷಕರು ನಮಗೆ ಕನ್ನಡ ಭಾಷೆಯನ್ನು ಕಲಿಸುತ್ತಾರೆ, ಅದರಿಂದ ಅವರು ನಮ್ಮಲ್ಲಿ ಮಾತೃಭಾಷೆಯ ಅಭಿಮಾನ ಜಾಗೃತ ಮಾಡುತ್ತಾರೆ ಮತ್ತು ರಾಮಾಯಣ, ಮಹಾಭಾರತ ಇಂತಹ ಗ್ರಂಥಗಳ ಅಭ್ಯಾಸ ಮಾಡುವ ಆಸಕ್ತಿಯನ್ನು ನಿರ್ಮಾಣ ಮಾಡುತ್ತಾರೆ. ಅದರಿಂದ ಅವರು ನಮಗೆ ನಮ್ಮ ಸಂತರ ಪರಿಚಯ ಮಾಡಿಕೊಡುತ್ತಾರೆ ಮತ್ತು "ಅವರಂತೆ ನಾವು ನಿರ್ಮಾಣ ಆಗಬೇಕು", ಇದಕ್ಕೋಸ್ಕರ ಪ್ರಯತ್ನ ಮಾಡುತ್ತಾರೆ. ಹಾಗೆಯೆ ಅವರು ನಮಗೆ ಸಮಾಜ ಶಾಸ್ತ್ರ,ಅರ್ಥಶಾಸ್ತ್ರ, ಈ ತರಹದ ವಿಷಯಗಳನ್ನು ಕಲಿಸುತ್ತಾರೆ. ನಾವು ಯಾವ ಸಮಾಜದಲ್ಲಿ ಇರುತ್ತೇವೆಯೋ, ಆ ಸಮಾಜದ ಋಣ ನಮ್ಮ ಮೇಲೆ ಇರುತ್ತದೆ, ಇದರ ಅರಿವು ಶಿಕ್ಷಕರು ನಮಗೆ ಮಾಡಿಕೊಡುತ್ತಾರೆ. ಅರ್ಥಶಾಸ್ತ್ರದ ಯೋಗ್ಯಮಾರ್ಗದಿಂದ (ಧರ್ಮದಿಂದ ) ಹಣ ಗಳಿಸಬೇಕು ಮತ್ತು ಅಯೋಗ್ಯ ಮಾರ್ಗದಿಂದ (ಅಧರ್ಮದಿಂದ) ಹಣ ಗಳಿಸಬಾರದು, ಇದನ್ನು ಕಲಿಸುತ್ತಾರೆ. ಇಂದು, ಭ್ರಷ್ಟಾಚಾರವು ಸಂಪೂರ್ಣ ದೇಶವನ್ನು ವ್ಯಾಪಿಸಿದೆ. ಇದೆಲ್ಲವನ್ನು ನಾವು ಬದಲಿಸಬೇಕು ಎಂದು ಶಿಕ್ಷಕರಿಗೆ ಅನಿಸುತ್ತದೆ.

ಆ. ಮಹಾನ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ದಿನ ಅಂದರೆ ಗುರುಪೂರ್ಣಿಮೆ! :ವಿದ್ಯಾರ್ಥಿ ಮಿತ್ರರೇ, ‘ಶಿಕ್ಷಕರು ನಮಗೆ ಜೀವನದಲ್ಲಿ ಅನೇಕ ಮೌಲ್ಯಗಳನ್ನು ಕಲಿಸುತ್ತಾರೆ, ಮತ್ತು ಅವುಗಳು ಕೃತಿಯಲ್ಲಿ ತರಬೇಕು ಎಂದು ಸಹಾಯ ಕೂಡ ಮಾಡುತ್ತಾರೆ. ಅದರ ಹಿಂದೆ, ನಾವೆಲ್ಲರು ಆದರ್ಶ ಜೀವನ ನಡೆಸಬೇಕು ಎಂಬ ಶುದ್ಧ ವಿಚಾರ ಇರುತ್ತದೆ’ ಎಂಬುದುನಿಮ್ಮೆಲ್ಲರಮನಸ್ಸಿಗೆಬಂದಿರಬಹುದು. ಕೆಲವು ಮಕ್ಕಳು ಶಿಕ್ಷಕರ ಚೇಷ್ಟೆ ಮಾಡುತ್ತಾರೆ, ಇದು ಪಾಪ ಇದೆ. ನಾವು ಈ ದಿನ ಅವರ ಕ್ಷಮೆ ಯಾಚಿಸಿ, ಅವರಿಗೆ ಇಂದು ಕೃತಜ್ಞತೆ ವ್ಯಕ್ತ ಮಾಡಬೇಕು.

೨ಇ.ಅಧ್ಯಾತ್ಮಿಕ ಗುರು

೨ಇಅ. ಅಧ್ಯಾತ್ಮಿಕ ಗುರುಗಳು ನಮಗೆ ಜೀವನದ ನಿಜವಾದ ಅರ್ಥವನ್ನು ತಿಳಿಸಿಕೊಡುತ್ತಾರೆ : ಇಲ್ಲಿಯ ತನಕ ಈ ಭೌತಿಕ ಜಗತ್ತಿನ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವ ಗುರುಗಳನ್ನು ನೋಡಿದೆವು. ಈಗ ನಾವು ಅಧ್ಯಾತ್ಮಿಕ ಗುರುಗಳು ಹೇಗೆ ಇರುತ್ತಾರೆ ಎಂಬುದನ್ನು ನೊಡೋಣ. *ಮೂರನೆಯ ಗುರು* ಅಂದರೆ *ಅಧ್ಯಾತ್ಮಿಕ ಗುರು*! ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಗುರುಗಳು ಬರುತ್ತಾರೆ. ಭಗವಾನ ಶ್ರೀ ಕೃಷ್ಣ-ಅರ್ಜುನ , ಶ್ರೀ ರಾಮಕೃಷ್ಣ ಪರಮಹಂಸ- ಸ್ವಾಮಿ ವಿವೇಕಾನಂದ, ಸಮರ್ಥ ರಾಮದಾಸ ಸ್ವಾಮಿ-ಶಿವಾಜಿ ಮಹಾರಾಜ ಹೀಗೆ ಗುರು-ಶಿಷ್ಯ ಪರಂಪರೆ ಇದು ನಮ್ಮ ದೇಶದ ವೈಶಿಷ್ಟ್ಯವಾಗಿದೆ.

ಅಧ್ಯಾತ್ಮಿಕ ಗುರುಗಳು ನಮಗೆ ನಮ್ಮ ನಿಜವಾದ ಪರಿಚಯ ಮಾಡಿ ಕೊಡುತ್ತಾರೆ. ನಮಗೆ ಅಜ್ಞಾನದಿಂದ ನಾನು ಒಬ್ಬ ವ್ಯಕ್ತಿ ಆಗಿದ್ದೇನೆ ಎಂದು ಅನಿಸುತ್ತದೆ; ಆದರೆ ನಿಜವಾಗಿ ನೋಡಿದರೆ ನಾವು ವ್ಯಕ್ತಿ ಆಗಿರದೆ ಆತ್ಮ ಆಗಿದ್ದೇವೆ, ಅಂದರೆ ದೇವರೇ ನಮ್ಮಲ್ಲಿ ಇದ್ದು ಪ್ರತಿಯೊಂದು ಕೃತಿ ಮಾಡುತ್ತಾರೆ; ಆದರೆ ಅಹಂಕಾರರೂಪಿ ಅಜ್ಞಾನದಿಂದ ನಮಗೆ ಪ್ರತಿಯೊಂದು ಕೃತಿಯನ್ನು ನಾವೇ ಮಾಡುತ್ತೇವೆ, ಎಂದು ಅನಿಸುತ್ತದೆ. ತಿಳಿದುಕೊಳ್ಳಿ, ಆತ್ಮವನ್ನು ನಮ್ಮಿಂದ ಬೇರೆ ಮಾಡಿದರೆ , ಆಗ ನಾವು ಏನಾದರು ಕೃತಿ ಮಾಡಬಹುದೇ? ಆಗ ದೇವರೇ ಎಲ್ಲ ಮಾಡುತ್ತಾರೆ, ಅವರು ಅನ್ನವನ್ನು ಜೀರ್ಣ ಮಾಡುತ್ತಾರೆ, ಅವರೇ ರಕ್ತ ನಿರ್ಮಾಣ ಮಾಡುತ್ತಾರೆ, ತೀವ್ರವಾಗಿ ಇದರ ಅರಿವನ್ನು ಗುರುಗಳು ನಮಗೆ ಮಾಡಿ ಕೊಡುತ್ತಾರೆ.

೨ಇಆ. ಆನಂದದಿಂದ ಇರಲು ಒಂದು ಸರಳ ಮಾರ್ಗ : ಅಂದರೆ ನಮ್ಮಿಂದ ಆಗುವ ತಪ್ಪುಗಳ ಆಳಕ್ಕೆ ಹೋಗಿ ಅದರ ಹಿಂದಿರುವ ದೋಷಗಳನ್ನು ಹುಡುಕಿಅದನ್ನು ಹೋಗಲಾಡಿಸಲು ಪ್ರಯತ್ನ ಮಾಡುವುದು. ಅಹಂಕಾರದಿಂದ ವ್ಯಕ್ತಿ ತನ್ನನ್ನು ದೇವರಿಂದ ಬೇರೆ ತಿಳಿದುಕೊಳ್ಳುತ್ತಾನೆ ಮತ್ತು ಜೀವನದಲ್ಲಿ ಸತತವಾಗಿ ದುಃಖಿ ಆಗಿರುತ್ತಾನೆ. ಆಗ ನಮ್ಮ ಜೀವನದಲ್ಲಿ ಒಬ್ಬರು ಅಧ್ಯಾತ್ಮಿಕ ಗುರುಗಳು ಬರಬೇಕು, ಅಂದರೆ ನಾವು ನಮ್ಮ ಜೀವನಕ್ಕೆ ಪ್ರಾರ್ಥನೆ, ಕೃತಜ್ಞತೆ ಮತ್ತು ನಾಮಜಪ ಇವುಗಳ ಸಾಂಗತ್ಯ ಕೊಡಬೇಕು. ನಾವು ಯಾವುದೇ ಕೆಲಸ ಕೈಯಲ್ಲಿ ತೆಗೆದುಕೊಂಡರೆ, ಪ್ರಥಮವಾಗಿ ಕೃತಜ್ಞತೆ ವ್ಯಕ್ತ ಮಾಡಬೇಕು . ಹಾಗೆಯೇ ಆ ಕೃತಿ ಒಳ್ಳೆಯದಾಗಬೇಕು ಎಂದು ಪ್ರಾರ್ಥನೆ ಮಾಡಬೇಕು. ನಮ್ಮ ಮೇಲೆ ಗುರುಗಳ ಕೃಪೆಯಾಗಬೇಕು; ಎಂದು ಪ್ರತಿದಿನ ನಮ್ಮ ಕಡೆಯಿಂದ ಆಗುವ ತಪ್ಪುಗಳನ್ನು ನೋಂದಾಯಿಸಬೇಕು ಮತ್ತು ಅದರ ಹಿಂದಿರುವ ದೋಷಗಳನ್ನು ಹುಡುಕಬೇಕು. ಇದರಿಂದ ನಮ್ಮ ದೋಷಗಳು ಬೇಗನೆ ಹೋಗುತ್ತವೆ ಮತ್ತು ನಮ್ಮಲ್ಲಿ ದೇವರ ಗುಣಗಳು ಬರುತ್ತವೆ ಹಾಗು ನಾವು ಆನಂದದಿಂದ ಬದುಕುವುವೆವು.

ಈಗ ನಾವು ದೇವರ ಚರಣಗಳಿಗೆ ಕೃತಜ್ಞತೆ ವ್ಯಕ್ತ ಮಾಡೋಣ ಮತ್ತು ನಮಗೆ ತಿಳಿದ ಎಲ್ಲಾ ಅಂಶಗಳು ನಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಆಗಲಿ, ಎಂದು ಪ್ರಾರ್ಥನೆ ಮಾಡೋಣ.                                          - 

- ಆಧಾರ ಸನಾತನ ಸಂಸ್ಥೆ

ಮದುವೆ ವ್ಯಾಪಾರವಲ್ಲ - Marriage is not a bussiness

ಮದುವೆ ವ್ಯಾಪಾರವಲ್ಲ - Marriage is not a bussiness 
💟ಯಾರೇ ಆಗಿರಲಿ ಮಗಳು ಮದುವೆಯಾಗಿ ಹೋದ ಮನೆಯಲ್ಲಿ ಚೆನ್ನಾಗಿರಬೇಕೆಂಬುದು ಪ್ರತಿ ಯೊಬ್ಬ ಹೆತ್ತವರ ಆಸೆ.  ಆದರೆ ಅತಿಯಾಸೆ ಎಷ್ಟು ಸರಿ?   ಬರೋ ಅಳಿಯ ಇಂಜನೀಯರ್ರೇ ಆಗಿರಬೇಕಾ?   ಡಾಕ್ಟರೇ ಆಗಬೇಕಾ?  ಅವರನವನ ಬಿಟ್ಟು ಉಳಿದ ಹುಡುಗರು ಮನುಷ್ಯರಲ್ಲವಾ?   ಅವರಿಗೂ ಒಂದು ಮನಸು ಅನ್ನೊದಿಲ್ವಾ?  ನಮಗಿಂತ ಹೆಚ್ಚು ಶ್ರೀ ಮಂತರನ್ನ ನೋಡಿ ಮಗಳನ್ನ ಮದುವೆ ಮಾಡಿಕೊಟ್ಟರೆ ಒಂದಲ್ಲ ಒಂದು ದಿನ ನಮ್ಮ ಹೆತ್ತವರಿಗೋ,ಸ್ವತಃ ಮಗಳಿಗೋ ಹೇಳಲಾಗದ ಅವಮಾನವನ್ನು ಅನುಭವಿಸುವ ಪರಿಸ್ಥಿತಿ ಬಂದರೂ ಆಶ್ಚರ್ಯವೇನಿಲ್ಲ.

💟ಯಾಕೆಂದರೆ ಎಲ್ಲರೂ ಒಳ್ಳೆಯವರು ಇರುತ್ತಾರೆ ಎನ್ನುಂತಿಲ್ಲ.  ಇಂಜನಿಯರ್,ಡಾಕ್ಟರ್ , ಅವರನ್ನು ಬಿಟ್ಟು ಉಳಿದ ಹುಡುಗರು ಮನುಷ್ಯರಲ್ಲವಾ? ಅವರಿಗೂ ಒಂದು ಮನಸು ಅನ್ನೊದಿಲ್ವಾ? ತಿಂಗಳಿಗೆ ಲಕ್ಷಗಟ್ಟಲೇ ದುಡ್ಡು ಬರಬೇಕಾ? ಹುಡುಗಿ ಕಡೆಯವರ ಇತ್ತೀಚಿನ ಅಪೇಕ್ಷೆಗಳು,ಬೆಂಗಳುರಲ್ಲಿ ಸ್ವಂತ ಮನೆ ಇರಬೆಕು.ಲಕ್ಷಗಟ್ಟಲೆ ದುಡ್ಡಿರಬೇಕು.ಮನೆಲಿ ಅತ್ತೆ ಮಾವ ನಾದಿನಿ ಇವರ್ಯಾರೂ ಇರಬಾರದು.ಇದ್ದರೂ ಬೇರೇನೇ ಇರಬೇಕು.  ಈ ಥರ ವಿಚಾರಗಳು ಹುಡುಗೀರ ತಲೇಲಿ ತುಂಬ್ತಿರೋರು ಹೆತ್ತವರೇ ಅಲ್ವಾ?   ಯಾಕೆ ಹೀಗಾದ್ರು ಅಂತ ಅರ್ಥವೇ ಆಕ್ತಿಲ್ಲ.  ಮಾತಿಗೆ ಬಂದಾಗ ಯಾರಿಗೇ ಕೇಳಿ ನೋಡಿ ನಮ್ಮ ಮನೆಲಿ ವರ ಇದ್ದಾನೆ ,ಒಂದು ಹುಡುಗಿ ಇದ್ದರೆ ತಿಳಿಸಿ ಎಂದು ಸಹಜವಾಗಿ ಹೇಳಿದರೆ ಸಾಕು.

💟ನಮ್ಮ ಹುಡುಗ ಮಾಸ್ತರ್ ನೌಕ್ರಿ ಮಾಡ್ತಿದಾನೆ ಅಂತಲೋ,ಕ್ಲರ್ಕ ಆಗಿದಾನೆ ಅಂತಲೋ,ದೇವಸ್ಥಾನ ದ ಮ್ಯಾನೇಜರ್ ಆಗಿದಾನೆ ಅಂತಲೋ,ಹೇಳಿದರೆ ಸಾಕು ,  ಅಯ್ಯೋ ಎಲ್ಲಿ ಕನ್ಯ ರೀ? ಎಂತೆಂಥ ಇಂಜನೀಯರು ಡಾಕ್ಟರುಗಳಿಗೇ ಸಿಕ್ತಿಲ್ಲ ಇನ್ನು ಇವರಿಗೇನು ಸಿಗುತ್ತೆ ಕನ್ಯ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳ್ತಾರೆ.ಹೀಗೆ ಹೇಳಬೇಕಾದರೆ ಬೇರೆಯವರ ಮನಸ್ಸಿಗೆ ನೋವಾಗುತ್ತದೆ ಅನ್ನುವ ಪರಿಜ್ಞಾನವೂ ಇಲ್ಲದವರಿಗೆ ಇತರರ ಮನಸ್ಸಿನ ಸಂಕಟ,ನೋವು,ಎಲ್ಲಿ ಅರ್ಥವಾಗುತ್ತದೆ.  ಮಕ್ಕಳನ್ನು ಸಾಲಸೋಲ ಮಾಡಿ ,ವಿಪರೀತ ಓದಿಸಿಬಿಡುವುದು.ಅವರು ಹೆತ್ತವರ ಜೊತೆ ಇರಬೇಕಾದ ಸಮಯದಲ್ಲಿ ವಿದೆಶಕ್ಕೆ ಹಾರಿಬಿಡುವುದು.ಹೆತ್ತವರು ಮಕ್ಕಳಿದ್ದರೂ ಅನಾಥರಂತೆ ದೊಡ್ಡ ಮನೆಯಲ್ಲಿ ಬಿಕೋ ಎನ್ನುವಂತೆ ಒಂಟಿ ಪಿಶಾಚಿಗಳಂತೆ,ಯಾಂತ್ರಿಕ ವಾಗಿ ಬದುಕುವುದು.ಈ ಸಂಭ್ರಮ ಕ್ಕೆ ಯಾಕೆ ಬೇಕು ಹೆಚ್ಚಿನ ಓದು ಬರಹ  ಓದಲಿ.ಓದುವುದಕ್ಕೆ ಬೇಡ ಅನ್ನುತ್ತಿಲ್ಲ.ಹೆಣ್ಣು ಹೆತ್ತವರು ಕಷ್ಟ ಸುಖ ಗೊತ್ತಿದ್ದು ,ಒಳ್ಳೆಯ ಪರಿಸರದಲ್ಲಿ ಬೆಳೆದು,ಉತ್ತಮ ಸಂಸ್ಕಾರ ಹೊಂದಿದವರಿಗೆ ಈ ಮಾತು ಅನ್ವಯವಾಗುವುದಿಲ್ಲ.  ಶ್ರಿಮಂತಿಕೆಯ ಭ್ರಮೆಯಲ್ಲಿರುವವರಿಗೆ ಮಾತ್ರ ಈ ಮಾತು.

💟ಇದೆಲ್ಲದರ ಆಚೆಗೆ ನಿಂತು ಬರೀ ದುಡ್ಡಿನ ಸುರಿಮಳೆಯಲ್ಲೇ ಮಗಳು ತೇಲಾಡಬೇಕು.ಮೈಮುರಿದು ಮನೆಗೆಲಸ ಮಾಡಬಾರದು.ಅರಾಮಾಗಿ ಕುಳಿ ತಲ್ಲೇ ಮೂರು ಹೊತ್ತು ತಿಂದು ತೇಗಿ ಬರದೇ ಇರುವ ಜಡ್ಡುಗಳನ್ನೆಲ್ಲ ಬರಿಸಿಕೊಂಡು,ಮತ್ತೆ ಡಾಕ್ಟರ್ ಹೇಳಿದ ಹಾಗೆ  ಅನ್ನ ಬಿಟ್ಟು, ಎಣ್ಣೆ ಹಚ್ಚದ ಒಣ ಚಪಾತಿ ತಿನ್ನಿ ,ಅಂತ ಸಾವಿರಾರುಗಟ್ಟಲೇ ಫೀಸು ತಗೊಂಡು ಐಷಾರಾಮಿ ಕಾರ ಲ್ಲಿ ಓಡಾಡುತ್ತಾ ಇದ್ದರೆ ಅದೇ ಸುಖ ಇವರಿಗೆ. ಈ ಸುಖ ಬಯಸುವ ಹೆತ್ತವರು ಮಕ್ಕಳನ್ನು  ಇಂಜನೀಯರ್ರು,ಡಾಕ್ಟರು,ಅಂತ ಮಕ್ಕಳ ತಲೇಲಿ ತುಂಬುತ್ತಿರುವುದಕ್ಕೆ ಮದುವೆ ಮುಗಿದ ಸ್ವಲ್ಪ ದಿನಗಳಿಗೇ ಡೈವೋರ್ಸಗಳಾಗುತ್ತಿರೋದು.ಹೊಂದಿಕೊಂಡು ಬಾಳುವುದನ್ನು ಕಲಿಸುವ ತಂದೆತಾಯಿ ಯಾವತ್ತೂ ಈ ರೀತಿ ವಿಚಾರ ಮಾಡಲು ಸಾಧ್ಯವಿಲ್ಲ. ಕೆಲಸಕ್ಕೆ ಹೋಗುವಳಾಗಿದ್ದರೆ ಅವಳೂ ಇಡೀ ದಿನ ದುಡಿದು ಮನೆಗೆ ಪರಕೀಯರಂತಾಗಿ ಬಂದು ಬ್ರೆಡ್ಡು ಜಾಮು ತಿಂದು ಮಲಗಬೇಕು.
ಇನ್ನು ಹಬ್ಬವೆಲ್ಲಿ? ಹರಿದಿನವೆಲ್ಲಿ?

💟ಮನೆಯವರೊಡನೆ ಬೆರೆತಾಗಲೇ ಕಷ್ಟ ಸುಖ,ಪ್ರೀತಿ ಕಾಳಜಿಯ ಅರಿವಾಗುವುದು. ಅದಕ್ಕೇ ಆಸ್ಪದವಿಲ್ಲದಿದ್ದರೆ? ಇಲ್ಲ ಬಡವರ ಮನೆ ಹುಡುಗಿಯೋ,ಮಧ್ಯಮ ವರ್ಗದ ಮನೆಯ ಹುಡುಗಿಯೋ ಆಗಿದ್ದು ಕೆಲಸಕ್ಕೆ ಹೋಗದಿದ್ದರೆ ಇಡೀ ದಿನ ಅವಳು ಒಬ್ಬಂಟಿಯಾಗೇ ಕಾಲ ಕಳಿಬೇಕು.ಟಿ.ವಿ.ಫ್ರಿಜ್ಜು.ಐಷಾರಾಮಿ ವಸ್ತುಗಳೊಂದಿಗೆ ಸಂಸಾರ ಮಾಡಲು ಆಗುತ್ತದಾ? ನೆಮ್ಮದಿಯಿಂದ ಬದುಕಲು ಆಗುತ್ತದಾ? ಶ್ರೀಮಂತಿಕೆ ಇದ್ದರೆ ಮಾತ್ರ ಸುಖವಾಗಿರುತ್ತಾಳೆ ಎನ್ನುವುದು ನಿಜವಾಗಿಯೂ ಮೂರ್ಖತನದ ಪರಮಾವಧಿ.   ಎಲ್ರಿಗೂ ಇಂಜನೀಯರೇ ಬೇಕು ಅಂದ್ರೆ ಉಳಿದವರೆಲ್ಲ ಮನುಷ್ಯರಲ್ವಾ? ಹಳ್ಳಿಯಲ್ಲಿ ಕಷ್ಟಪಟ್ಟು ಬೆಳೆದಿರುವ ಹುಡುಗರು,ಹೊಲ ಮನೆ ನೋಡಿಕೊಂಡು ಹೋಕ್ತಿರುವ ಹುಡುಗರು,ವಿದ್ಯಾಪೀಠ ದಂತಹ ಗುರುಕುಲ ಪದ್ಧತಿಯಲ್ಲಿ ಓದಿ ಬೆಳೆದ ಹುಡುಗರು ,ಅಡಿಗೆ ಗುತ್ತಿಗೆದಾರರು,ಮೆಡಿಕಲ್ ರೆಪ್ರೆಸೆಂಟೇಟಿವ್ಸ್, ಈ ಎಲ್ಲ ಕೆಲಸ ಮಾಡೊರಿಗೆ ಬೆಲೇನೇ ಇಲ್ವಾ?    ಹೆತ್ತವರನ್ನ,ಒಡಹುಟ್ಟಿದವರನ್ನ ಚೆನ್ನಾಗಿ ನೋಡಿಕೊಂಡು ಹೋಗುವ ಹುಡುಗರು, ಸಂಸ್ಕ್ರತಿ, ಸಂಪ್ರದಾಯದೊಂದಿಗೆ ಕಿರಿಕಿರಿಯಾಗದಂತೆ ಸಂಸಾರವನ್ನು ತೂಗಿಸಿಕೊಂಡು ಹೋಗುವ ಷ್ಟು ಸಮರ್ಥರಿರುತ್ತಾರೆ. ಹೆಂಡತಿ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ.

💟ದುಡ್ಡಿರುವ ಇಂಜನೀಯರ್ ಮಾತ್ರ ಹೆಂಡತಿ ಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬುದು ನಿಜಕ್ಕೂ ಮೂರ್ಖತನ.  ಇತ್ತೀಚಿನ ದಿನಗಳಲ್ಲಿ ಕಂಡಂತೆ ಹುಡುಗಿಯರೇ ಬೇರೆ ಜಾತಿಯವರ ಹುಡುಗರೊಂದಿಗೆ ಶೋಕಿಗಾಗಿ ತಿರುಗಾಡಿ.ಪ್ರೀತಿ ಎನ್ನುವ ಹೆಸರು ಕೊಟ್ಟು ಐಷಾರಾಮಿ ಬದುಕಿನ ಆಸೆಗಾಗಿ ಓಡಿಹೋದವರಿದ್ದಾರೆ.ಜೀವನ ಹಾಳು ಮಾಡಿಕೊಂಡು ಬಂದವರಿದ್ದಾರೆ.ಹೆತ್ತವರ ಮನಸ್ಸಿಗೆ ನೋವು ಕೊಟ್ಟು ಮದುವೆ ಆದ ಎಷ್ಟೋ ಉದಾಹರಣೆಗಳಿವೆ.  ಇನ್ನು ಕೆಲ ಹುಡುಗಿಯರು ಸುಖಾಸುಮ್ಮನೆ ಹುಡುಗರನ್ನು ಕೆಣಕುವುದು.ಅಥವಾ ಅವರ ಮನಸ್ಸು ಕೆಡಿಸುವುದು.

💟ಸಲಿಗೆಯಿಂದ ತಾವಾಗೇ ಮಾತಾಡಿ ಹುಡುಗರಲ್ಲಿ ಇಲ್ಲ ಸಲ್ಲದ ಆಸೆಗಳನ್ನು ತುಂಬಿ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ ಈ ಹುಡುಗಿಯರಿಗೆ ಹೆತ್ತವರ ನೆನಪಾಗುತ್ತದೆ.ಅಷ್ಟೊತ್ತಿಗೆ ಹುಡುಗರ ಮನಸ ಹ್ಸು ಮದುವೆಯ ಆಶಾಗೋಪುರ ಕಟ್ಟಿಕೊಂಡಾಗಿರುತ್ತದೆ.  ಈ ವಿಷಯದಲ್ಲಿ ಲೆಕ್ಕ ಹಾಕಿದರೆ ಹುಡುಗಿಯರಿಗಿಂತ ಹುಡುಗರೇ ಹೆಚ್ಚು ಜವಾಬ್ದಾರಿ ಯಿಂದ ನಡೆದುಕೊಳ್ಳುವುದು. ಅದಕೆ ಕಾರಣವೂ ಇದೆ.  ಹುಡುಗರು ವಾಸ್ತವದ ಸತ್ಯ ಅರಿತವರಾಗಿರುತ್ತಾರೆ.ಮದುವೆ,ಬಯಕೆ,  ಬಾಣಂತನ,ಮಕ್ಕಳು,ಅವರ ಲಾಲನೆ ಪಾಲನೆ ಎಲ್ಲ ವಿಷಯಗಳ ಜವಾಬ್ದಾರಿ ಸಾಮಾನ್ಯವಲ್ಲ ಅದಕ್ಕೆ ಮನೆ,ತಂದೆ ತಾಯಿ ಎಲ್ಲರ ಸಹಾಯ ಸಹಕಾರ ಬೇಕಾಗುತ್ತದೆ,ಅದೇ ಸಂಸಾರ ಎನ್ನುವ ಸರ್ವಸಾಮಾನ್ಯವಾದ ತಿಳುವಳಿಕೆಯನ್ನು ಹೊಂದಿದವರಾಗಿರುತ್ತಾರೆ.  

💟ಹುಡುಗರನ್ನು ಹುಚ್ಚು ಮಾಡುವಾಗ,ಅವರ ಹಿಂದೆ ಬಿದ್ದು ಅವರ ತಲೆ ಕೆಡಿಸಿ.ಅವರಿಂದ ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುವಾಗ ಈ ಹುಡುಗಿಯರಿಗೆ ಹೆತ್ತವರ ಭಯ.ಚಿಂತೆ ಇರುವುದಿಲ್ಲ.ಮದುವೆ ವಿಷಯ ಬಂದಾಕ್ಷಣ ಹೆತ್ತವರ ಮನಸಿಗೆ ನೋವು ಕೊಡಲು ನಾವು ತಯಾರಿಲ್ಲ.ಅವರು ತೋರಿಸಿದ ಕಡೆಯೇ ಮದುವೆಯಾಗುತ್ತೇವೆ.

💟ಎಂದು ಹೇಳಿ ಜಾರಿಕೊಂಡರೆ ಅದು ಪ್ರೀತಿ ಎನಿಸುತ್ತದೆಯಾ? ಸುಮ್ಮನೆ ಹುಡುಗರ ಮನಸ್ಸು ಹಾಳು ಮಾಡಿದರೆ .ಮಗನನ್ನೇ ನಂಬಿರುವ ಮನೆಯವರ ಗತಿ ಏನಾಗಬಹುದು?

💟ವರ ಕನ್ಯ ಅನ್ವೇಷಣೆಯ ವಿಷಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಈ ಘಟನೆ ಗಳು ಬಹಳ ಜನರಿಗೆ,ನೋವುಂಟು ಮಾಡುತ್ತಿವೆ.  ಇರಲಿ ನಮ್ಮ ಮಕ್ಕಳು.ನಮ್ಮಿಷ್ಟ.ಯಾರು ಬೇಡ ಎನ್ನುತ್ತಾರೆ? ನಾಳೆ ಏನಾದರೂ ಹೆಚ್ಚು ಕಮ್ಮಿಯಾದರೆ ನಮ್ಮ ಮಕ್ಕಳಿಗೆ ನಾವೇ ಜವಾಬ್ದಾರಿ ಹೊರುತ್ತೇವೆ.

💟ಸಾಮಾನ್ಯ ಹುಡುಗರೂ ಸಹ ,ಜೀವನ ಮಾಡಲು ಅವಶ್ಯಕತೆ ಗೆ ತಕ್ಕಷ್ಟು ದುಡ್ಡು ಬೇಕು.ಇನ್ನೂ ಸ್ವಲ್ಪ ಐಷಾರಾಮಿ ಬಯಸಿದರೆ ಅದೂ ತಪ್ಪಲ್ಲ .ಮನೆಗೆ ಬೇಕಾದ ಅವಶ್ಯಕತೆ ಇರುವ ಎಲ್ಲ ವಸ್ತುಗಳನ್ನು ಬಹಳ ಸಂತೋಷ ದಿಂದಲೇ ತಂದುಕೊಡುತ್ತಾರೆ.

💟ಇಂಜನೀಯರು ಡಾಕ್ಟರುಗಳಿಗಿಂತ ಜೀವನವನ್ನು ಅತಿ ಹತ್ತಿರದಿಂ ದ,ಅನುಭವಿಸಿ,ಹೆಂಡತಿ ಯ ಪ್ರತಿ ಹೆಜ್ಜೆಯಲ್ಲೂ ತಾವಿದ್ದು ಅವಳ ಸಂತೋಷ ದಲ್ಲಿ ತಾವು ಸಂಭ್ರಮ ಕಾಣುತ್ತಾ ಸಂಸಾರದ ನೊಗವನ್ನು ಹೊತ್ತು ನೋವು ಮರೆತು ನಗುನಗುತ್ತಾ,ನಗಿಸುತ್ತಾ ಬದುಕುವುದು ಮಧ್ಯಮ ವರ್ಗದ ಹುಡುಗರೇ.ಅವರಿಂದಲೇ ಸುಖಸಂಸಾರ ಸಾಧ್ಯ. ಹೆಂಡತಿ ಯ ಪ್ರತೀ ಕಷ್ಟ ಸುಖಗಳಲ್ಲಿ,ಸಣ್ಣಪುಟ್ಟ ಕೆಲಸಗಳಲ್ಲಿ ಭಾಗಿಯಾಗುವ ಪ್ರೀತಿ,ಮನಸ್ಸು, ಮಾನವೀಯತೆ,ಇರುವುದು ಇಂತಹ ಹುಡುಗರಲ್ಲಿಯೇ ಹೆಚ್ಚಾಗಿರುವುದು.ಇದರಲ್ಲಿ ಯಾವ ಸಂಶಯವೂ ಇಲ್ಲ.
ಅದೇ ತನ್ನ ಮನೆಗಾಗಿ ಹಗಲೂ ರಾತ್ರಿ ದುಡಿಯುವ ಹೆಂಡತಿ ಗೆ ನೆಗಡಿಯೋ,ಕೆಮ್ಮೋ ಆದಾಗ ಗಂಡನಾದವನು ಹತ್ತಿರ ಬಂದು ಕಾಳಜಿ ತೋರಿಸಿ ,ಒಂದು ಕಪ್ಪು ಕಶಾಯ ಮಾಡಿ ಕುಡಿಸುವ ,ಆರೈಕೆ ಮಾಡುವ,ಪ್ರೀತಿ ತೋರಿಸುವ ಕೆಲಸ ದುಡ್ಡು ಕೊಡುವುದಿಲ್ಲ.ಅದು ಮಾನವೀಯತೆ ಇರುವ  ಒಬ್ಬ ಸಾಮಾನ್ಯ ಮನುಷ್ಯ ಮಾಡುವ ಕೆಲಸ.ಅದು ನಮ್ಮ ಸುಸಂಸ್ಕಾರವಂತ ಹುಡುಗರು ಮಾಡಿಯೇ  ಮಾಡುತ್ತಾರೆ.

💟ಆದರೆ ಇಷ್ಟೆಲ್ಲದರ ತಾತ್ಪರ್ಯ ಒಂದೇ .
ಬರೀ ಇಂಜನೀಯರ್ರು,ಡಾಕ್ಟರು,
ಆಸ್ತಿವಂತರಿಗೆ ಮಾತ್ರ ಕನ್ಯ ಕೊಡಲು ಯೋಗ್ಯರಲ್ಲ.

💟ಅವರ ಹೊರತಾಗಿ ಒಂದು ಜವಾಬ್ದಾರಿ ಇರುವ ಮಗನಾಗಿ ಇರುವ ಎಲ್ಲ ಯೋಗ್ಯ ವರಗಳೂ ನಮ್ಮ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಕಷ್ಟವಿದ್ದಾಗಲೇ ಸುಖದ ಅರಿವಾಗುವುದು.ಸುಖದ ಸುಪ್ಪತ್ತಿಗೆಯಲ್ಲೇ ಮಗಳು ಇರಬೇಕೆಂದು ಬಯಸುವುದು ಖಂಡಿತ ತಪ್ಪು.ದುಡ್ಡು ಜೀವನಕ್ಕೆ ಅವಶ್ಯಕತೆ ಅಷ್ಟೇ. ದುಡ್ಡೇ ಜೀವನವಲ್ಲ.

💟ಇಲ್ಲಿ ಯಾರ ಮನಸ್ಸಿಗೂ ನೋವುಂಟು ಮಾಎಉವ ಉದ್ದೇಶವಿಲ್ಲ.ಆದರೆ ಹೆಣ್ಣು ಹೆತ್ತವರು ಒಂದು ಘಳಿಗೆ ಯೋಚನೆ ಮಾಡಿದರೆ ಒಳ್ಳೆಯ ಗುಣವಿರುವ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಅವಳು ಖಂಡಿತ ಸುಖವಾಗಿರುತ್ತಾಳೆ.  ಮಧ್ಯಮ ವರ್ಗದ ಮನೆಗಳಲ್ಲಿ ಇಂದಿಗೂ ಸಣ್ಣ ಪುಟ್ಟ ಸಾಲಸೋಲಗಳು ಇರುವುದು ನಿಜ. ಅಂತಹ ಸಂಸಾರ ವೇ ಒಂದು ಹಬ್ಬದಂತೆ.   ಸದಾ ಸುಖ,ಸಂತೋಷ, ಸಂಭ್ರಮ, ನೆಮ್ಮದಿ ತುಂಬಿರುತ್ತದೆ.ತುಂಬಿದ ಮನೆಯಲ್ಲಿ ಮಗಳು ನಿಜಕ್ಕೂ ಸುಖವಾಗಿರುತ್ತಾಳೆ. ಯಾವತ್ತೂ ಅವಳಿಗೆ ಒಂಟಿತನ ಕಾಡುವುದಿಲ್ಲ.ಮಧ್ಯಮ ವರ್ಗದ ಹುಡುಗರೂ ಜವಾಬ್ದಾರಿ ಉಳ್ಳವರೇ ಆಗಿರುತ್ತಾರೆ.  ದುಡ್ಡಿನ ಮುಂದೆ ಒಳ್ಳೆಯ ಗುಣಕ್ಕೆ ,ಒಳ್ಳೆಯ ಹುಡುಗರ ವ್ಯಕ್ತಿತ್ವಕ್ಕೆ ಬೆಲೆ ಇಲ್ಲದಂತಾಗಿದೆ.ಅದು ಮನಸಿಗೆ ತುಂಬಾ ನೋವಾಗುವ ವಿಚಾರ.
ಹಾಗಂತ ಇಂಜನೀಯರುಗಳು,ಡಾಕ್ಟರ್ ಗಳು,ಶ್ರೀ ಮಂತರು ಮನುಷ್ಯತ್ವ ಇಲ್ಲದವರು ಅಂತಲ್ಲ.ಅವರಿಗೆ ಒಳ್ಳೆಯದು ಕೆಟ್ಟದರ ಅರಿವೂ ಕೂಡಾ ಇರದಷ್ಡು ಒಳ್ಳೆಯವರಾಗಿರುತ್ತಾರೆ.  ಆದರೆ ಹೆಣ್ಣು ಹೆತ್ತವರು ಸ್ವಲ್ಪ ವಿಚಾರ ಮಾಡಬೇಕಲ್ಲವಾ? ತಮಗೆ ಗೊತ್ತಿರುವ ಹುಡುಗನನ್ನೇ ಆರಿಸುವುದು ಸೂಕ್ತವಲ್ಲ ವೇ?

💟ಇನ್ನು ಸ್ನೆಹಿತರಿಗೆ,ತಮ್ಮ ಸ್ನೇಹಿತರಲ್ಲಿ ಯಾರು ಹೇಗೆ ಎನ್ನುವ ವಿಚಾರ ತಿಳಿದೇ ಇರುತ್ತದೆ.ಅಂತಹ ಸಮಯದಲ್ಲಿ ತಮ್ಮ ಅಕ್ಕ ತಂಗಿಯರನ್ನ ಗೊತ್ತಿರುವವರಿಗೇ ಕೊಟ್ಟು ಮದುವೆ ಮಾಡಿದರೆ ನಮ್ಮ ಹುಡುಗಿ ನಮ್ಮ ಕಣ್ಣೇದುರೇ ಇದ್ದ ಹಾಗಾಗುತ್ತದೆ,ಸ್ನೇಹಸಂಬಂಧ ಇನ್ನೂ ಗಟ್ಡಿಯಾಗುತ್ತದೆ.ಇದು ನನ್ನ ಅಭಿಪ್ರಾಯ. ನಿಮ್ಮ ಅಭಿಪ್ರಾಯ ಖಂಡಿತ ತಿಳಿಸಿ.  ಇಷ್ಟು ರೀತಿಯಾಗಿ ಈ ವಿಚಾರದಿಂದ ಮನಸು ವಿಚಲಿತವಾಗಲು ಕಾರಣ ಕಣ್ಣೆದುರು ನಡೆದಿರುವ,ನಡೆಯುತ್ತಿರುವ ಘಟನೆಗಳು.ಹೆತ್ತವರ ನುಂಗಲಾರದ ನೋವು.  ಪ್ರೀತಿ, ಪ್ರೇಮ, ವಿಶ್ವಾಸ,ನಂಬಿಕೆಗಳಿಗೆ ಬೆಲೆ ಕೊಡುವವರು ಯಾವತ್ತೂ ವಣಪ್ರತಿಷ್ಠೆ ಹಾಗೂ ಶಾಶ್ವತವಲ್ಲದ ಶ್ರೀಮಂತಿಕೆಯ ಹಿಂದೆ ಬಿದ್ದು ತಮ್ಮತನವನ್ನು ಕಳೆದುಕೊಳ್ಳುವುದಿಲ್ಲ.  ಬೇರೆ ಕೆಲಸ ಮಾಡೊರಿಗೆ ಬೆಲೇನೇ ಇಲ್ವಾ?
ಯಾವ ವಧುವರರ ಜಾಹಿರಾತು ಮಾಹಿತಿಗಳನ್ನು ನೋಡಿದರೂ ಹೆಚ್ಚು ಬಿ.ಈ.ಬೀಟೆಕ್ ,ಎಮ್ಟೆಕ್,ಇಂಜನೀಯರ್,ಡಾಕ್ಟರ್, ಅಪೆಕ್ಷೆಯೇ
ಇರುತ್ತವೆ.

💟 ಮಗಳು ಡಾಕ್ಟರ್, ಇಂಜನೀಯರ್,ಸಿ.ಎ.ಇದ್ದಾಳೆ ಸರಿ ಅವಳಿಗೆ ತಕ್ಕ ಹುಡುಗನನ್ನ,ಅದೇ ಪ್ರೊಫೇಶನ್ನಲ್ಲಿ ಇರೋರನ್ನ ನೋಡಿ ಮದುವೆ ಮಾಡಿದರೆ ಇಬ್ಬರೂ ಚೆನ್ನಾಗಿರುತ್ತಾರೆ ಎಂದುಕೊಂಡರೆ ಅದೂ ತಪ್ಪೇ.ಎಷ್ಟೋ ಕೇಸುಗಳು ಮಗು ಹುಟ್ಟುವ ಮುಂಚೆಯೇ ವಿಚ್ಛೇದನಕ್ಕೆ ಬಂದು ನಿಂತಿರುತ್ತದೆ.ಯಾಕೆಂದರೆ ಇಬ್ಬರಿಗೂ ಮಗು ಬೇಕಿಲ್ಲ.ಮಗು ಹುಟ್ಟಿದ್ದೇ ಆದರೆ ಆ ಮಗುವಿನ ಜೀವನವಿಡೀ ಆಯಾ ಳ ಕೈಯ್ಯಲ್ಲೇ.ತಾಯಿ ಕೈತುತ್ತು ಇಲ್ಲ.ತಂದೆಯ ಮಮತೆ ಕಾಣಲ್ಲ.

💟ಇಬ್ಬರೂ ದುಡಿಯುವವರು.ಇಬ್ಬರಿಗೂ ಸರಿಸಮ ದುಡ್ಡು.ದೊಡ್ಡ  ಫ್ಲಾಟ್ ನಲ್ಲಿ ಐಷಾರಾಮಿ ಜೀವನ. ಬ್ರೆಡ್ಡು.ಜಾಮು.ಪೀಜಾ.ಬರ್ಗರು,ಇದೇ ಹೊಟ್ಟೆಗೆ.ಇರೋ ಒಂದು ಸಂಡೇ ,ವೀಕೆಂಡು ಹೋಟೆಲು. ಮಾಲ್ ಗಳಲ್ಲಿ ಓಡಾಟ.ಮುಗಿತು ಮತ್ತೆ ಸೋಮವಾರದಿಂದ ಅದೇ ಯಾಂತ್ರಿಕ ಜೀವನ. ಎಲ್ಲದಕಿಂತ ಹೆಚ್ಚಾಗಿ ಇಬ್ಬರ ನಡುವೆ ಈಗೋ ಪ್ರಾಬ್ಲಂ.ಒಬ್ಬರ ಬಗ್ಗೆ ಒಬ್ಬರು ಮಾತಾನಾಡುವ ಸ್ವಾತಂತ್ರವನ್ನೇ ಕಳೆದುಕೊಂಡಿರುವಾಗ ಪ್ರೀತಿಗೆ ಜಾಗವೆಲ್ಲಿ?

💟ಸರಿಸಮ ಓದಿದವರಿಗೆ ಕೊಟ್ಟು ಮದುವೆ ಮಾಡುವುದು ಒಂದು ಕಡೆ ಸರಿ.ಆದರೆ  ಇನ್ನು ನಮ್ಮಂತಹ ಮಧ್ಯಮ ವರ್ಗದ ಹುಡುಗಿಗೂ,ತೀರಾ ಬಡತನದಲ್ಲಿ ಬೆಳೆದ ಮಗಳಿಗೂ ನಾವು ಇಂಜನೀಯರುಗಳಿಗೆ ಕೊಟ್ಟು ಮದುವೆ ಮಾಡುತ್ತ ಹೋದರೆ ಏನು ಕತೆ?  ಮಗಳು ವಿದೆಶದಲ್ಲಿದಾಳೆ.ಅಳಿಯ ವಿದೇಶದಲ್ಲಿದಾನೆ ಅಂತ ಹೇಳಿಕೊಳ್ಳುವುದೇ ಒಂದು ಪ್ರತಿಷ್ಠೆ ಆಗಿ ಹೊಗಿದೆ.ಹಾಗಿದ್ದರೆ ನಮ್ಮ ದೇಶ,ನಮ್ಮ ಸಂಸ್ಕ್ರತಿ, ಸಂಪ್ರದಾಯಗಳಿಗೆ ನಾವೆಷ್ಟು ಮಹತ್ವ ಕೊಡುತ್ತಿದ್ದೇವೆ?  
ಫೇಸ್ಬುಕ್ ನಿಂದ ಗಂಡುಹುಡುಗರು ಕೆಡುತ್ತಾರೆ ಎನ್ನುವ ಮಾತು ಹಿರಿಯರೊಬ್ಬರು ಹೇಳಿದಾಗ ನಿಜಕ್ಕೂ ಬೇಸರವಾಯಿತು. ಆ ಹಿರಿಯರಿಗೆ ಯುವ ಪೀಳಿಗೆಯ  ನಡತೆ ಇನ್ನೆಷ್ಡು ನೋವಾಗಿರಲಿಕ್ಕಿಲ್ಲ.

💟ಕೆಡಬೇಕಾದರೆ ಫೇಸ್ಬುಕ್ಕೇ ಬೇಕಾಗಿಲ್ಲ.ಕುಳಿತಲ್ಲಿಯೇ ಕೆಡಬಹುದು.ಅದು ಮನಸ್ಸಿಗೆ ಬಿಟ್ಟ ವಿಚಾರ.
ಈ ವಿಷಯದಲ್ಲಿ ಲೆಕ್ಕ ಹಾಕಿದರೆ ಹುಡುಗಿಯರಿಗಿಂತ ಹುಡುಗರೇ ಹೆಚ್ಚು ಜವಾಬ್ದಾರಿ ಯಿಂದ ನಡೆದುಕೊಳ್ಳುವುದು.

💟ಆದರೆ ಕೆಲವು ಹುಡುಗಿಯರ ಹುಚ್ಚಾಟದಿಂದಾಗಿ ಹುಡುಗರ ಮನಸ್ಸು ಎಲ್ಲೋ ಒಂದುಕಡೆ ಮಂಕಾಗುತ್ತದೆ.ಆದರೆ ಹುಡುಗರು ಯಾವತ್ತೂ ಜೀವನ ಪರ್ಯಂತ ಬ್ರಹ್ಮಚಾರಿಗಳಾಗೇ ಕಾಲ ಕಳೆಯುವರೇ ಹೊರತು ಯಾವ ಹೆಣ್ಣಿನೊಂದಿಗೂ ಹುಚ್ಚಾಟವಾಡುಷ್ಟು ಕೆಟ್ಟುಹೋಗಿಲ್ಲ ನಮ್ಮ ಬ್ರಾಹ್ಮಣ ಹುಡುಗರು.
ಅವರಿಗೆ ತಮ್ಮದೇ ಆದ ಕನಸುಗಳಿವೆ.ಹೆತ್ತವರ ಬಗೆಗೆ ಕಾಳಜಿ ಇದೆ.ಸಂಸಾರದ ಬಗ್ಗೆ ಗಂಭೀರತೆ ಇದೆ.ಜೀವನದ ಬಗ್ಗೆ ಉತ್ಸಾಹವಿದೆ.ತಮ್ಮವರನ್ನೂ ಸಂತೋಷವಾಗಿಟ್ಟುಕೊಂಡು ತಾವೂ ಅದರಲ್ಲೇ ಸಂತೋಷ ಕಾಣುವ ಒಳ್ಳೆಯ ಮನಸ್ಸು ಇದೆ.  ಮಗಳು ಸಂತೋಷವಾಗಿರಲು ಇಂತಹ ಒಳ್ಳೆಯ ಯೋಗ್ಯ ವರ ಸಾಕಲ್ಲವಾ? ಯಾರನ್ನೋ ಮೇಲೆತ್ತಿ ಇಂತಹ ಹುಡುಗರನ್ನು ತೀರಾ ಕೀಳಾಗಿ ಕಾಣಬೇಡಿ.   ಹುಡುಗಿ ಕೊಡದಿದ್ದರೆ ಬೇಡ .ಆದರೆ ಇಂತಹವರಿಗೆ ಕನ್ಯ ಯಾರು ಕೊಡುತ್ತಾರೆ ಎನ್ನುವ ತಾತ್ಸಾರದ ಮಾತು ಬೇಡವಷ್ಟೆ.

💟ಇನ್ನು ಬ್ರಾಹ್ಮಣ ಹುಡುಗರು ಬೇರೆ ಜಾತಿಯ ಹುಡುಗಿಯರನ್ನು ಕಣ್ಣೆತ್ತಿ ನೋಡಲೂ ಹೆದರುತ್ತಾರೆ.ಯಾಕೆಂದರೆ ಅವರಿಗೆ ಪ್ರೀತಿ, ಮದುವೆ,ಹುಚ್ಚಾಟವಲ್ಲ.ಅವರಿಗೇ ಅವರದೇ ಆದ ಜವಾಬ್ದಾರಿಗಳಿವೆ.ತಾವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಅವರಿಗೇ ಅವರದೇ ಆದ ಸ್ಥಾನಮಾನವಿದೆ.ಎಲ್ಲದಕ್ಕೂ ಹೆಚ್ಚಾಗಿ ಸ್ವಾಭಿಮಾನ ದಿಂದ ಒಬ್ಬರಿಗೆ ಕೈಚಾಚದಂತೆ ಬದುಕುತ್ತಾರೆ.  ಎಲ್ಲರಿಗೂ ಅವರದೇ ಆದ ಜೀವನವಿದೆ.ಮನಸಿದೆ,ಕನಸಿದೆ.ಯಾರಿಗೂ ನೋವು ಮಾಡುವ ಅಧಿಕಾರ ಯಾರಿಗೂ ಇಲ್ಲ.ಅವರವರ ಮನೆಗೆ ಅವರೇ ರಾಜಕುಮಾರರು.
ಅವರಿಗಾಗಿಯೆ ಹಗಲಿರುಳು ಪರಿತಪಿಸುವ ಕುಟುಂಬವಿದೆ.ಅಂತಹ ಕುಟುಂಬದವರ ಪ್ರೀತಿಯ ಮುಂದೆ ಕೋಟಿಗಟ್ಟಲೆ ಆಸ್ತಿ ನಮ್ಮ ಹುಡುಗರಿಗೆ ಲೆಕ್ಕ ಬರುವುದಿಲ್ಲ.   ಒಂದು ಹುಡುಗಿ ಶ್ರೀಮಂತ ಮನೆಯ ಹುಡುಗನನ್ನು ಬಯಸಿದರೆ,ಒಂದು ಹುಡುಗ ಮಾತ್ರ ತಾನು ಮಾಡಿಕೊಳ್ಳುವ ಹುಡುಗಿ ಒಳ್ಳೆಯವಳಾಗಿದ್ದರೆ ಸಾಕು ಎನ್ನುತ್ತಾನೆ.   ಶ್ರಿಮಂತಿಕೆ ಯಾವತ್ತೂ ಬಯಸುವುದಿಲ್ಲ.  

💟ಯಾವುದೋ ಒಂದು ಘಳಿಗೆಯಲ್ಲಿ ದೇಹ,ಮನಸ್ಸು ಕುಸಿದು ನೆಲಕ್ಕೆ ಬಿದ್ದಾಗ ಬೇಕಾಗುವುದು ಹಣವಲ್ಲ.ಒಂದು ಹಿಡಿ ಪ್ರೀತಿ.ಒಂದು ಭರವಸೆಯ ಸಾಂತ್ವನ ನೀಡುವ ಕೈ.ಅದು ಮಧ್ಯಮವರ್ಗದ ನಮ್ಮ ಹುಡುಗರಲ್ಲೇ ಜಾಸ್ತಿ ಇದೆ.ಅದನ್ನು ಗುರುತಿಸಿದರೆ ಸಾಕು.  ವರ ಕನ್ಯ ವಿಷಯವಾಗಿ, ‌ಇಂದಿನ ಪ್ರಸ್ತುತ ವಿದ್ಯಾಮಾನದ ಬಗ್ಗೆ ನನಗೆ ಅನಿಸಿದ್ದನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿ.

ಲೇಖನ: ವಿದ್ಯಾಶ್ರೀ ಕಟ್ಟಿ.


ಗುರು ಮಹಿಮೆ - Significance of Guru and Guru Poornima

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ, ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ. ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ.ಆಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”.ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವು ಗುರುವಿನ ಮುಖಾಂತರವೇ ಪರಮಾತ್ಮನ ಅರಿವು ಅರಿಯಬೇಕಾಗಿರುವುದರಿಂದ, ನಾವು ಆಷಾಡದ ಪೌರ್ಣಮಿಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ಅಂತರಂಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲವೆಂಬ ಭಾವ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು, ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ.

ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ.ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ಗುರು ಎಂದು ಅರ್ಥೈಸಬಹುದೇನೋ.

ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಿಲಾಗಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ |

ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ |

ಆದಿಗುರು ಶ್ರೀ ಶಂಕರಾಚಾರ್ಯರು ಗುರು ಸ್ತೋತ್ರವನ್ನು ಹೀಗೆ ಹೇಳುತ್ತಾರೆ :

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |

ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ
||

ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||


ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ, ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.

ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ
ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ |
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ ||

ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಬೇರೆ ಯಾವುದೂ ಇಲ್ಲ. ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ.

ಶಾಶ್ವತವಾದ ಆನಂದವನ್ನು ಹೊಂದುವುದು ಸದ್ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವೆಂದು ಶ್ರೀ ಶಂಕರಾಚಾರ್ಯರು ತಮ್ಮ ಗುರ್ವಷ್ಟಕಮ್ ನಲ್ಲಿ ಕೂಡ ಹೀಗೆ ಹೇಳಿದ್ದಾರೆ :

ಶರೀರಂ ಸುರೂಪಂ ತಥಾ ವಾ ಕಲತ್ರಂ

ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ||೧||

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ

ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ ||೨||

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ.

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ

ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ||೩||


ವೇದ, ಶಾಸ್ತ್ರ ಪಾರಂಗತನಾಗಿ ಅನೇಕ ವಿದ್ಯೆಗಳನ್ನು ತಿಳಿದವನಾಗಿದ್ದರೂ ಕೂಡ ಸದ್ಗುರುವಿನ ಚರಣಗಳಲ್ಲಿ ನಿಷ್ಠೆ ಇಡದಿದ್ದರೆ ಮುಕ್ತಿಯಿಲ್ಲ.

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ

ಸದಾಚಾರವೃತ್ತೇಷು ಮತ್ತೋ ನಾ ಚಾನ್ಯಃ ||೪||

ವಿದೇಶಗಳಲ್ಲಿ ತುಂಬಾ ಹೆಸರು ಮಾಡಿ, ಸ್ವದೇಶದಲ್ಲಿ ಆಚಾರ ಪಾಲಿಸಿ, ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿ ಎಂಬ ಹೆಸರು ಪಡೆದಿದ್ದರೂ ಸಹ ಗುರುಚರಣಗಳಲ್ಲಿ ಭಕ್ತಿ ಇಲ್ಲದವನ ಜೀವನ ನಿರರ್ಥಕ.

ಕ್ಷಮಾಮಂಡಲೇ ಭೂಪಭೂಪಾಲಬೃಂದೈ:

ಸದಾ ಸೇವಿತಂ ಯಸ್ಯ ಪಾದಾರವಿಂದಮ್ ||೫||


ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ವ್ಯರ್ಥವೇ.

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್

ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ||೬||


ಅನೇಕ ದಾನ ಧರ್ಮಗಳನ್ನು ಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡಾಗಲೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ.

ನ ಭೋಗೇ ನ ಯೋಗೇ ನ ವಾ ವಾಜಿರಾಜೌ

ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ ||೭||


ಲೌಕಿಕದ ಎಲ್ಲಾ ವ್ಯಾಪಾರಗಳಲ್ಲಿ ಆಸಕ್ತಿ ತೊರೆದಿದ್ದರೂ ಕೂಡ ಆ ವ್ಯಕ್ತಿಯ ಮನಸ್ಸು ಅಚಲವಾಗಿ ಗುರು ಚರಣಗಳಲ್ಲಿ ಶ್ರದ್ಧೆ ಹೊಂದಿರದಿದ್ದರೆ ಅವನ ವೈರಾಗ್ಯ ಉಪಯೋಗವಿಲ್ಲದ್ದು, ಮೋಕ್ಷವನ್ನು ಹೊಂದಲಾರ.

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ

ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ||೮||


ಸಮಸ್ತವನ್ನೂ ತ್ಯಜಿಸಿ, ಅರಣ್ಯದಲ್ಲಿ ವಾಸಿಸಿದರೂ ಕೂಡ, ಗುರುಚರಣಗಳಿಗೆ ಶರಣಾಗತನಾಗದಿದ್ದರೆ ಆತ ಸಂಸಾರ ಬಂಧನದಿಂದ ಮುಕ್ತನಾಗುವುದು ಸುಳ್ಳು.

ಹೀಗೆ ಮೇಲಿನ ಶ್ಲೋಕಗಳಲ್ಲಿ ನಾವು ಬದುಕಿನಲ್ಲಿ ಏನೆಲ್ಲಾ ಸಾಧಿಸಿದ್ದರೂ, ತ್ಯಜಿಸಿದ್ದರೂ, ಗುರುವಿನ ಕರುಣೆ ಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಸುತ್ತಾಪ್ರತಿಯೊಂದು ಶ್ಲೋಕದ ಕೊನೆಗೂ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ | ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ಎಂಬ ಮಾತನ್ನು ಪದೇ ಪದೇ ಪುನಶ್ಚರಣ ಮಾಡುತ್ತಾ ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾಧ್ಯ ಎನ್ನುತ್ತಾ ಗುರುವಿನ ಮಹತ್ವವನ್ನು ವಿವರಿಸುತ್ತಾರೆ.

ಆದಿ ಗುರು ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದಪುನರ್ಸ್ಥಾಪನೆ ಮತ್ತು ಪ್ರಚಾರ ಕಾರ್ಯಕ್ಕಾಗಿಯೇ ಬಂದವರು. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ನಂತರ ಬಂದವರು ಶ್ರೀ ರಾಮಾನುಜಾಚಾರ್ಯರು ಮತ್ತು ಇವರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಬ್ಬರ ನಂತರ ಬಂದವರು ಶ್ರೀ ಮಧ್ವಾಚಾರ್ಯರು. ಆಚಾರ್ಯ ತ್ರಯರೆಂದೇ ಗುರುತಿಸಲ್ಪಡುವರು ನಮ್ಮ ಈ ಮೂವರು ಶ್ರೇಷ್ಠ ಗುರುಗಳು. ಅದ್ವೈತ, ವಿಶಿಷ್ಟಾದ್ವೈತ ಹಾಗೂ ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರು ಪರಂಪರೆಯೇ ಬೆಳೆಯಿತು ಮತ್ತು ಈಗಲೂ ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ, ಪರಂಪರೆ ಮುಂದುವರೆದಿದೆ. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು ಎಂದೂ, ಪರಮ ಗುರುವಿನ ಗುರುವನ್ನು ಪರಾಪರ ಗುರು ಎಂದೂ, ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ ಯಂದುಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ.

ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನು ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜೊತೆಗೇ “ಗುರು ಪೂರ್ಣಿಮೆ” ಯಂದು ಪೂಜಿಸುತ್ತೇವೆ.ಲೋಕಗುರು ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜೊತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು.ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ.

“ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆ ಯಾವಾಗಲೂ ಶಿಷ್ಯನ

ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ.ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ.

ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ :

ಬ್ರಹ್ಮರುದ್ರುಲಕೈನ - ಭಾವಿಂಪ ಶಕ್ಯಮಾ

ಆಧ್ಯಾತ್ಮವಿದ್ಯ ಗುರುಕೀಲು ಮಹಿಮ

ಆಧ್ಯಾತ್ಮ ವಿದ್ಯೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು ; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಆಧ್ಯಾತ್ಮವಿದ್ಯ "ಗುರುಕೀಲು ಮಹಿಮೆ" - ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. ಭ್ರಮೆಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. "ಗುರುಕೀಲು" ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥವಾಗುತ್ತದೆ. ತಾತಯ್ಯನವರು ಗುರುವಿಗೆ 'ಮಾತೃಸ್ಥಾನ' ಕೊಟ್ಟಿದ್ದಾರೆ. ಯೋಗ್ಯ ಹಾಗೂ ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಕುರಿಮರಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು. ಮನಸ್ಸನ್ನು ನಿಲ್ಲಿಸಲು ಜ್ಞಾನಬೋಧೆ ಮಾಡಿ ಗುರುವು ಸಾಧನಮಾರ್ಗ ತೋರಿಸುತ್ತಾನೆ.

ಗುರು ಪರಂಪರೆ ಹಾಗೂ ಗುರು-ಶಿಷ್ಯರ ಅತ್ಯಂತ ನಿಕಟ ಸಂಬಂಧವು ಮುಂದುವರೆದು ನಮ್ಮ ದಾಸಸಾಹಿತ್ಯದಲ್ಲೂ ಗಾಢವಾಗಿ ಕಾಣಬಹುದಾಗಿದೆ......


- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ

 

ಆರೋಗ್ಯ ಕಾಪಾಡುವ ಅರಶಿನ - Turmeric Health Benefits

 ಆರೋಗ್ಯ ಕಾಪಾಡುವ ಅರಶಿನ(ತುಳುವಿನಲ್ಲಿ ಮಂಜಲ್): ಎರಡು ಮೂರು ದಿವಸದಿಂದ ತಡೆಯಲಾಗದ ತಲೆನೋವು. ನನ್ನನ್ನು ನಾನು ಮನೆ ಮದ್ದುಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಂಡು ಏನಾದರೂ ಸಾದಿಸಬೇಕೆಂಬ ಛಲ.ಮಾತ್ರೆ,ಕಷಾಯ,ಗುಳಿಗೆ ಯಾವುದರಿಂದಲೂ ಪ್ರಯೋಜನ ಕಾಣದಿದ್ದಾಗ ಸೀದಾ  ಅಡುಗೆ ಕೋಣೆಗೆ ಬಂದೆ.ಅರಶಿಣದ ಪ್ಲಾಸ್ಟಿಕ್ ಡಬ್ಬಿಯಿಂದ ಒಂದು ಟೀ ಸ್ಪೂನ್ ಅರಸಿಣ 5 ಸ್ಪೂನು ನೀರಿಗೆ ಹಾಕಿ ಕಲಡಿಸಿ ಕುಡಿದೆ. ಹೊಟ್ಟೆಯಲ್ಲಿ ಏನೋ ತಳಮಳವಾಗತೊಡಗಿತು. 2 ನಿಮಿಷ ಬಿಟ್ಟು ಒಂದು ಸಣ್ಣ ತಂಬಿಗೆ ನೀರು ಕುಡಿದೆ. ಪವಾಡವೋ ಎಂಬಂತೆ 2 ದಿವಸದಿಂದ ಕಾಡುತ್ತಿದ್ದ ತಲೆನೋವು 2 ಘಂಟೆಯಲ್ಲಿ ಗುಣಮುಖ ವಾಗಿ ಇದೀಗ ಆರಾಮವಾಗಿ ತಮಗೆಲ್ಲರಿಗೂ ತಿಳಿಸುವ ಮನಸಾಯಿತು,ತಿಳಿಸುತ್ತಿದ್ದೇನೆ! ಅರಶಿನದ ಮಹತ್ವದ ನಿಜವಾದ ಸ್ವತಃ  ಅನುಭವ.
 
ಮೊದಲೆಲ್ಲ ನಮ್ಮ ಮನೆಯ ಸುತ್ತಲೂ ಸಿಗುವ ಸೊಪ್ಪು, ತರಕಾರಿಗಳು, ಗಿಡ ಮೂಲಿಕೆಗಳನ್ನೇ ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೆವು. ಉದಾಹರಣೆಗೆ ನಮ್ಮ ಮನೆಯಲ್ಲಿರುತ್ತಿದ್ದ ಅರಶಿನ ಕೂಡ ಹಲವು ಸಂದರ್ಭಗಳಲ್ಲಿ ಔಷಧಿಯಾಗಿ ಬಳಕೆಯಾಗುತ್ತಿತ್ತು. ಇದರಲ್ಲಿರುವ ರೋಗ ನಿರೋಧಕ ಶಕ್ತಿಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತಿತ್ತು. ಆದ್ದರಿಂದ ಇದನ್ನು ಮನೆ ಮದ್ದಾಗಿ ಉಪಯೋಗಿಸುತ್ತಿದ್ದರು. ಇವತ್ತು ಹೆಚ್ಚಿನವರಿಗೆ ಅರಶಿನದಲ್ಲಿ ಏನೇನು ಗುಣಗಳಿವೆ ಎಂಬುದೇ ಗೊತ್ತಿಲ್ಲ.



ಹಾಗೆ ನೋಡಿದರೆ ಅರಶಿನದಲ್ಲಿ ಬಹಳಷ್ಟು ಔಷಧೀಯ ಗುಣಗಳಿರುವುದನ್ನು ನಾವು ಕಾಣಬಹುದು.

1. ಮೇಲೆ ತಿಳಿಸಿದ ಸ್ವಂತ ಅನ್ವೇಷಣೆಯಂತೆ ಕಫ,ಶೀತ,ಬಾಯಿಹುಣ್ಣು,ತಲೆನೋವಿಗೆ  ರಾಮ ಬಾಣ.

2. ಅರಶಿನದಪುಡಿಯನ್ನು ಸಮಭಾಗ ಸುಣ್ಣದೊಂದಿಗೆ ಕೂಡಿಸಿ ಮಿಶ್ರಣವನ್ನು ಚೆನ್ನಾಗಿ ಅರೆದು ದಪ್ಪವಾಗಿ ಲೇಪಿಸಿ ಉಗುರಿಗೆ ಕಟ್ಟಿದರೆ ಉಗುರು ಸುತ್ತು ಗುಣಮುಖವಾಗುತ್ತದೆ.

3. ಚಳಿಗಾಲದಲ್ಲಿ ತುಟಿ, ಅಂಗೈ, ಅಂಗಾಲು ಸಾಮಾನ್ಯವಾಗಿ ಬಿರುಕು ಬಿಡುತ್ತದೆ. ಈ ಸಂದರ್ಭ ಅರಶಿನ ಗಂಧವನ್ನು ಹಾಲಿನ ಕೆನೆಯಲ್ಲಿ ಚೆನ್ನಾಗಿ ಮಿಶ್ರಮಾಡಿ ಬಿರುಕುಗಳಿಗೆ ಲೇಪಿಸಿದರೆ ಬಿರುಕುಗಳು ಮಾಯವಾಗುತ್ತವೆ.

4. ಅರಶಿನದ ಚೂರ್ಣವನ್ನು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯಲ್ಲಿ ಮಿಶ್ರಮಾಡಿ ಅಂಗಾಂಗಳಿಗೆ ಹಚ್ಚಿ ಚೆನ್ನಾಗಿ ಸ್ನಾನ ಮಾಡಿದ್ದೇ ಆದರೆ  ಅಂಗಾಂಗಳ ನೋವು ನಿವಾರಣೆಯಾಗಿ ದೇಹಕ್ಕೆ ವಿಶ್ರಾಂತಿ ದೊರಕುವುದರೊಂದಿಗೆ ನಿದ್ದೆಯೂ ಚೆನ್ನಾಗಿ ಬರುತ್ತದೆ.

5. ಎಲೆಅಡಿಕೆ ತಿನ್ನುವಾಗ ಒಮ್ಮೊಮ್ಮೆ ಸುಣ್ಣ ಜಾಸ್ತಿಯಾಗಿ ನಾಲಿಗೆ ಬೆಂದು ಹೋದರೆ ಹಸಿ ಅರಶಿನದ ಕೊಂಬನ್ನು ನೀರಿನಲ್ಲಿ ತೇದು ನಾಲಿಗೆ ಮೇಲೆ ಬೆಂದ ಭಾಗಕ್ಕೆ ಲೇಪಿಸಬಹುದು.

6. ಕೆಮ್ಮು, ನೆಗಡಿ, ಗಂಟಲು ನೋವು, ಕಾಣಿಸಿಕೊಂಡಾಗ ಬೆಳ್ಳುಳ್ಳಿ ಶುಂಠಿಯೊಂದಿಗೆ ಅರಶಿನದ ಪುಡಿಯನ್ನು ಸೇರಿಸಿ ಕುದಿಸಿದ ಹಾಲಿನೊಂದಿಗೆ ಮಲಗುವ ಮುನ್ನ ಸೇವಿಸಿದರೆ ನಿವಾರಣೆಯಾಗುತ್ತದೆ.

7. ಸ್ತ್ರೀಯರ ಮೈಯ್ಯಲ್ಲಿ ಅನಾವಶ್ಯಕ ಕೂದಲುಗಳಿದ್ದರೆ ಸ್ನಾನಕ್ಕೆ ಮುನ್ನ ಕೆನ್ನೆ, ಕೈಕಾಲುಗಳಿಗೆ ಅರಶಿನವನ್ನು ಹಚ್ಚಿ ಬಳಿಕ ಸ್ನಾನ ಮಾಡಿದರೆ ಕೂದಲು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಜತೆಗೆ ಮೊಡವೆಗಳು ಕೂಡ ಮಾಯವಾಗುತ್ತವೆ.

8. ಅರಶಿನದ ಬೇರಿನಲ್ಲಿ ಶೇ.5ರಷ್ಟು ವಿರ್ಮೆರಾಲ್ ಎಣ್ಣೆಯ ಅಂಶಗಳಿದ್ದು ಆಹಾರ ಪದಾರ್ಥಗಳಿಗೆ ರಂಗು ನೀಡುತ್ತದೆ.

ಹುಡಿ ಮಾಡಿದ ಅರಶಿನ ಅಥವಾ ಹಳದಿ ಸರ್ವರೋಗಕ್ಕೂ ಪರಿಹಾರಕವಾಗಿದೆ. ಬರೀ ಅಡುಗೆಮನೆಯಲ್ಲಿ ಮಾತ್ರ ಇದರ ಬಳಕೆಯಲ್ಲ ನಮ್ಮ ಪ್ರತೀ ಚಟುವಟಿಕೆಯಲ್ಲೂ ಇದು ಕಾರ್ಯವ್ಯಾಪಿಯಾಗಿದೆ. ಸುಟ್ಟ ಗಾಯಗಳಿಂದ ನಮ್ಮ ದೇಹವನ್ನು ಅರಶಿನ ಕಾಪಾಡುತ್ತದೆ. ಮುಖದ ಸೌಂದರ್ಯಕ್ಕೂ ಇದರ ಕೊಡುಗೆ ಅಪಾರ.

 9.ಗಾಯ ಮತ್ತು ಸುಟ್ಟ ನೋವುಗಳಿಂದ ನಮ್ಮನ್ನು ರಕ್ಷಿಸುವ ಅರಶಿನ ನೈಸರ್ಗಿಕ ಆಂಟಿಸೆಪ್ಟಿಕ್ ಮತ್ತು ಬ್ಯಾಕ್ಟಿರಿಯಾ ವಿರೋಧಿ ಅಂಶವಾಗಿದೆ.

10.ಜಠರವನ್ನು ನೈಸರ್ಗಿವಾಗಿ ಶುದ್ಧ ಮಾಡುವಲ್ಲಿ ಅರಶಿನದ ಪಾತ್ರ ಹಿರಿದು.

 11.ಮೆದುಳಿನಲ್ಲಿ ರಚಿತವಾದ ಅಮ್ಲೋಯ್ಡ್ ಲೋಳೆಯನ್ನು ತೆಗೆದುಹಾಕಿ ಅಲ್ಙೀಮೀರ್ ರೋಗದ ಪ್ರಕ್ರಿಯೆಯನ್ನು ನಿರ್ಬಂಧಿಸಿ ಮೆದುಳನ್ನು ಆರೋಗ್ಯವಾಗಿರಿಸುತ್ತದೆ.

12. ಕ್ಯಾನ್ಸರ್‌ನ ಹಲವು ಬಗೆಗಳಲ್ಲಿ ಸಂಭವಿಸುವ ಸ್ಥಾನಾಂತರಗಳನ್ನು (ದ್ವಿತೀಯ ಹಾನಿಕಾರಕ ಟ್ಯೂಮರ್) ಅರಶಿನ ತೊಡೆದುಹಾಕುತ್ತದೆ.

13.ಇದೊಂದು ನೈಸರ್ಗಿಕ ಉರಿಯೂತ ವಿರೋಧಿ ಶಕ್ತಿಯಾಗಿದ್ದು ಹಲವಾರು ರೋಗಕ್ಕೆ ಉರಿಯೂತ ವಿರೋಧಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ.

 14..ಅರಶಿನ ನೈಸರ್ಗಿಕ ನೋವು ನಿವಾರಕವಾಗಿದ್ದು ಸಿಒಎಕ್ಸ್-2 ಇದರಲ್ಲಿದೆ (ಉರಿಯೂತ ವಿರೋಧಿ).

15.ಇದು ಕೊಬ್ಬನ್ನು ಕರಗಿಸುವ ಗುಣವನ್ನು ಹೊಂದಿದ್ದು ತೂಕ ನಿಯಂತ್ರಣಕ್ಕೆ ಸಹಕಾರಿ.

 16.ಖಿನ್ನತೆಯ ಚಿಕಿತ್ಸೆಗಾಗಿ ಚೀನಾದಲ್ಲಿ ಅರಶಿನವನ್ನು ಬಳಸಲಾಗುತ್ತದೆ.

 17.ಅರಶಿನ ನೈಸರ್ಗಿಕ ಉರಿಯೂತ ನಿವಾರಕವಾಗಿರುವುದರಿಂದ ಸಂಧಿವಾತಕ್ಕೆ ಇದನ್ನು ಬಳಸಲಾಗುತ್ತದೆ.

 18.ಅರಶಿನವು ಪಾಕ್ಲಿಟೇಕ್ಸಲ್‌ನೊಂದಿಗೆ ಕೀಮೋಥೆರಪಿಯ ಪರಿಣಾಮಗಳನ್ನು ಹೆಚ್ಚಿಸುತ್ತದೆ ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

 19.ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಉತ್ತಮ ಔಷಧಿ ಅರಶಿನವಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

 20.ಮಲ್ಟಿಮಲ್ ಮೈಲೋಮಾ (ಕ್ಯಾನ್ಸರ್ ಪ್ಲಾಸ್ಮಾ ಕೋಶಗಳು) ವನ್ನು ತೊಡೆದುಹಾಕುವಲ್ಲಿ ಅರಶಿನದ ಮಹತ್ವದ ಕುರಿತು ಸಂಶೋಧನೆಗಳು ಜಾರಿಯಲ್ಲಿದೆ.

 21.ಟ್ಯೂಮರ್‌ನಲ್ಲಿ ಉಂಟಾಗುವ ಹೊಸ ರಕ್ತ ಕಣಗಳ ಬೆಳವಣಿಗೆಯನ್ನು ಅರಶಿನವು ನಿಲ್ಲಿಸುತ್ತದೆ.

22.ಗಾಯ ಒಣಗುವುದರಲ್ಲಿ ಮತ್ತು ಹೊಸ ಚರ್ಮ ಬರುವಂತೆ ಮಾಡುವಲ್ಲಿ ಅರಶಿನದ ಪಾತ್ರ ಹಿರಿದಾದುದು.

23.ಸೋರಿಯಾಸಿಸ್ ಹಾಗೂ ಇತರ ಚರ್ಮ ರೋಗಗಳನ್ನು ಉಪಚರಿಸುವಲ್ಲಿ ಅರಶಿನ ಸಹಾಯ ಮಾಡುತ್ತದೆ. ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು

24.ಎದೆ ನೋವಿಗಾಗಿ ಮತ್ತು ಹೊಟ್ಟೆ ನೋವು ನಿವಾರಣೆಗಾಗಿ ಚೀನಾದಲ್ಲಿ ಅರಶಿನವನ್ನು ಬಳಸುತ್ತಾರೆ.

25.ಸಾಮಾನ್ಯ ಉರಿಯೂತ ಪರಿಸ್ಥಿತಿಗಳನ್ನು ಉಪಚರಿಸಲು ಭಾರತದಲ್ಲಿ ಅರಶಿನ ಉಪಯೋಗಕಾರಿಯಾಗಿದೆ.

26. ಹೊಟ್ಟೆಯ ಅಲ್ಸರ್ ಅನ್ನು ನಿವಾರಣೆ ಮಾಡಲು ಅರಶಿನ ಸಹಕಾರಿಯಾಗಿದೆ.

 27.ಇಲಿಗಳಲ್ಲಿರುವ ಬಹು ಸ್ಕೆಲೋರಿಸೀಸ್ (ರೋಗವನ್ನು ಹರಡಬಲ್ಲ ಗುಣ) ಬೆಳವಣಿಗೆಯನ್ನು ನಿಧಾನವಾಗಿಸುವ ಗುಣ ಅರಶಿನಕ್ಕಿದೆ ಎಂಬುದನ್ನು ಕಂಡುಹಿಡಿಯಲಾಗಿದೆ.

28.

 1) ಹಾಲು ಹಾಗೂ ಅರಶಿನಗಳಲ್ಲಿ ಪ್ರಕೃತಿ ಸಹಜವಾದ ಅನೇಕ ಔಷಧೀಯ ಗುಣಗಳಿವೆ. ಹಾಲು ನಮ್ಮ ದೇಹಕ್ಕೆ ಸಂಪೂರ್ಣ ಪೋಷಕಾಂಶಗಳನ್ನು ಒದಗಿಸಿದರೆ ಅರಶಿನ ಅನಾರೋಗ್ಯಗಳು ಬರದಂತೆ ತಡೆಯುತ್ತದೆ. ಇದನ್ನು ಎರಡನ್ನೂ ಬೆರೆಸಿ ಕುಡಿಯುವುದರಿಂದ ನಮಗೆ ಅನೇಕ ಪ್ರಯೋಜನಗಳು ಆಗುತ್ತವೆ. ಈ ನಿಟ್ಟಿನಲ್ಲಿ ರಾತ್ರಿ ಮಲಗುವುದಕ್ಕೂ ಮುನ್ನ ಒಂದು ಲೋಟ ಹಾಲಿಗೆ ಕಾಲು ಚಮಚ ಅರಶಿನ ಬೆರೆಸಿ ಕುಡಿದರೆ ಆಗುವ ಲಾಭಗಳು:-

2) ರಾತ್ರಿ ಹಾಲಿಗೆ ಅರಶಿನ ಬೆರೆಸಿ ಕುಡಿದರೆ…ಶ್ವಾಸಕೋಶ ಸಮಸ್ಯೆಗಳಿಗೆ ಉಪಶಮನ ದೊರೆಯುತ್ತದೆ.

3) ಕೆಮ್ಮು,ನೆಗಡಿ ಕಡಿಮೆಯಾಗುತ್ತವೆ. ಶ್ವಾಸಕೋಶಗಳಲ್ಲಿ ಸೇರಿಕೊಂಡಿರುವ ಕಫ ಕರಗುತ್ತದೆ. ಈ ಋತುವಿನಲ್ಲಿ ಬರುವ ಶ್ವಾಸಕೋಶ ಸಮಸ್ಯೆಗಳಿಂದ ಉಪಶಮನ ಲಭಿಸುತ್ತದೆ.

4) ತಲೆ ನೋವಿನಿಂದ ನರಳುತ್ತಿರುವವರು, ನಿದ್ರಾ ಹೀನತೆ ಉಳ್ಳವರು ರಾತ್ರಿ ಮಲಗುವುದಕ್ಕೆ ಮುನ್ನ ಹಾಲಿಗೆ ಅರಶಿನ ಬೆರೆಸಿ ಕುಡಿದರೆ ಒಳ್ಳೆಯ ಫಲಿತಾಂಶ ಲಭಿಸುತ್ತದೆ. ಬೆಳಗಾಗುವಷ್ಟರಲ್ಲಿ ತಲೆ ನೋವು ಮಾಯವಾಗಿರುತ್ತದೆ. ನಿದ್ದೆ ಚೆನ್ನಾಗಿ ಬಂದಿರುತ್ತದೆ.

5) ಅರಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಪದಾರ್ಥವು ನಮ್ಮ ಶರೀರದಲ್ಲಿರುವ ಲಿವರ್, ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹಗೊಳ್ಳದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಶರೀರದ ಅಧಿಕ ಭಾರ ಕಡಿಮೆಯಾಗುತ್ತದೆ.

6) ಸ್ತ್ರೀಯರಿಗೆ ಋತು ಸಮಯದಲ್ಲಿ ಬರುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.

7) ಸಕ್ಕರೆ ಖಾಯಿಲೆ ಹತೋಟಿಯಲ್ಲಿರುತ್ತದೆ. ಫಾಸ್ಟಿಂಗ್ ಬ್ಲಡ್ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ.

8) ಕಾಮಾಲೆ ರೋಗದಿಂದ ಬಳಲುತ್ತಿರುವವರು ಈ ಮಿಶ್ರಣವನ್ನು ಸೇವಿಸಿದಲ್ಲಿ ಈ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.
 

9) ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸೋಂಕು ಹತ್ತಿರ ಸುಳಿಯುವುದಿಲ್ಲ. ನೋವುಗಳು ನಿವಾರಣೆ ಯಾಗುತ್ತವೆ. ಅರಶಿನ ದಲ್ಲಿರುವ ಸಹಜ ಸಿದ್ಧವಾದ ಆಂಟೀ ಇನ್ ಫ್ಲಮೇಟರಿ ಗುಣದಿಂದ ನೋವು,ಬಾವು ಕಡಿಮೆಯಾಗುತ್ತದೆ.

10)  ಕೀಲು ನೋವುಗಳೂ ಕಡಿಮೆಯಾಗುತ್ತವೆ.
ರಕ್ತ ಶುದ್ಧಿಯಾಗುತ್ತದೆ. ಚರ್ಮ ರೋಗಗಳು ನಿವಾರಣೆಯಾಗುತ್ತವೆ.

11) ಜೀರ್ಣಾಶಯ ಸಮಸ್ಯೆಗಳಾದ ಗ್ಯಾಸ್,ಅಸಿಡಿಟೀ,ಅಜೀರ್ಣ, ಮಲಬದ್ಧತೆ ಹತ್ತಿರ ಸುಳಿಯುವುದಿಲ್ಲ. ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

12)  ಅರಶಿನ ಬಳ್ಳಿ :- ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಳೆಯುವ ಸಸ್ಯ ಸಂಪನ್ಮೂಲ. ದ್ವಿದಳ ಸಸ್ಯವಾದ ಇದರ ಎಲೆ ಮೇಲ್ನೋಟಕ್ಕೆ ವೀಳ್ಯದೆಲೆಯಂತೆ ಗೋಚರಿಸಿದರೂ, ಇದರ ಮೇಲೈ ವೀಳ್ಯದೆಲೆಯಷ್ಟು ನುಣುಪಾಗಿಲ್ಲ, ಅಲ್ಲದೇ ಗಾತ್ರದಲ್ಲಿಯೂ ದೊಡ್ಡದು. ಎಲೆಯ ಹಿಂಭಾಗ ಬೆಳ್ಳಿಯ ಹೊಳಪು. ಚಿಗುರಿನ ಬಣ್ಣವೂ ಬೆಳ್ಳಿಯದ್ದೇ. ಸಂತಾನಾಭಿವೃದ್ಧಿ ಬೀಜದಿಂದ. ಗಾಢ ಅರಶಿನ ಬಣ್ಣದ ಇದರ ಕಾಂಡದ ರುಚಿ ಕಹಿ. ಈ ಬಳ್ಳಿಯ ಬೆಳವಣಿಗೆ ನಿಧಾನ.

ಅರಿಶಿನ ಹಾಲು  CONTENTS  ಅಮೃತದಂತಹ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ! ನಂಬುತ್ತೀರಾ?  ಅರಿಶಿನ ಹಾಲಿನ ಉಪಯೋಗಗಳು
ಉಸಿರಾಟದ ತೊಂದರೆ
ಕ್ಯಾನ್ಸರ್
ನಿದ್ರಾಹೀನತೆ
ಶೀತ ಮತ್ತು ಕೆಮ್ಮು
ಸಂಧಿವಾತ
ನೋವು ಮತ್ತು ವೇದನೆ
ಉತ್ಕರ್ಷಣ ನಿರೋಧಕ
ರಕ್ತ ಶುದ್ಧೀಕರಣ
ಲಿವರ್ ಕ್ರಿಯೆಗೆ ಸಹಾಯ
ಮೂಳೆಗಳ ಆರೋಗ್ಯ
ಜೀರ್ಣಕ್ರಿಯೆ
ಮುಟ್ಟಿನ ಸೆಳೆತ
ಗುಳ್ಳೆಗಳು ಮತ್ತು ಚರ್ಮ ಕೆಂಪಾಗುವುದು
ತೂಕ ನಷ್ಟ (ತೂಕ ಕಡಿಮೆಯಾಗುವುದು)


ಅಮೃತದಂತಹ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ! ನಂಬುತ್ತೀರಾ?
ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತಸಮಾನವಾದ ದ್ರವ ಎಂದಿದ್ದರೆ ಅದು ಹಾಲು. ಪ್ರತಿದಿನ ಹಾಲು ಕುಡಿದು ಆರೋಗ್ಯವಂತರಾಗಿರು ಎಂದೇ ಹಿರಿಯರು ಆಶೀರ್ವಾದಿಸುವುದೂ ಹಾಲಿನ ಗುಣವನ್ನು ಎತ್ತಿಹಿಡಿಯುತ್ತದೆ. ಮಗುವಿನ ಜನನವಾದ ಬಳಿಕ ಮೊತ್ತಮೊದಲಾಗಿ ಕುಡಿಯುವುದೇ ಹಾಲನ್ನು. ಆದರೆ ವಯಸ್ಕರಾದ ಬಳಿಕ ಹಾಲು ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುವುವಂತೆಯೇ ಕೊಂಚ ಕೆಟ್ಟದನ್ನೂ ಮಾಡುತ್ತದೆ ಎಂದರೆ ನಂಬುತ್ತೀರಾ? ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ !

ಅಡುಗೆ ಮನೆಯಲ್ಲಿರುವ ಅರಿಶಿನ ಮತ್ತು ಹಾಲು ಸೂಕ್ಷ್ಮ ಜೀವ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ನಿಮ್ಮ ನಿತ್ಯದ ಇತರ ಆಹಾರಗಳೊಂದಿಗೆ ಈ ಎರಡು ವಸ್ತುಗಳನ್ನು ಬಳಸುವುದರಿಂದ ನೀವು ಸಾಮಾನ್ಯವಾಗಿ ಕಂಡುಬರುವ ಹಲವು ಅನಾರೋಗ್ಯ ತೊಂದರೆಗಳಿಂದ ದೂರವಿರಬಹುದು. ಅರಿಶಿನಕ್ಕೆ ಹಾಲನ್ನು ಸೇರಿಸಿ ಬಳಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಇವು ಪರಿಸರದ ಅಪಾಯಕಾರಿ ಜೀವಾಣುಗಳ ವಿರುದ್ಧ ಹೋರಾಡಲು ಅತ್ಯಂತ ಸಹಾಯಕಾರಿ.

ಅರಿಶಿನ ಮತ್ತು ಹಾಲಿನ ರೆಸಿಪಿ / ಉಪಯೋಗ ಒಂದು ಇಂಚಿನ ಅರಿಶಿನ ಬೇರು/ಅರಿಶಿನ ಕೊಂಬನ್ನು ತೆಗೆದುಕೊಳ್ಳಿ. ಇದನ್ನು ಹಾಲಿನಲ್ಲಿ 15 ನಿಮಿಷಗಳ ಕಾಲ ಕುದಿಸಿ. ನಂತರ ಅರಿಶಿನ ತುಂಡನ್ನು ತೆಗೆದು ಹಾಲನ್ನು ತಣಿಸಿ ಕುಡಿಯಿರಿ. ಈ ಅದ್ಭುತ ನೈಸರ್ಗಿಕ ಕೊಡುಗೆಯಿಂದ ಉಂಟಾಗುವ 15 ಕ್ಕೂ ಹೆಚ್ಚಿನ ಉಪಯೋಗಗಳನ್ನು ನೋಡೋಣ:

ಅರಿಶಿನ ಹಾಲಿನ ಉಪಯೋಗಗಳುಉಸಿರಾಟದ ತೊಂದರೆ
ಅರಿಶಿನ ಹಾಲು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ವೈರಸ್ ಸೋಂಕುಗಳು ಆಕ್ರಮಿಸುವುದನ್ನು ವಿರೋಧಿಸುತ್ತದೆ. ಇದು ಉಸಿರಾಟದ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ದೇಹ ಉಷ್ಣವಾಗಿದ್ದರೆ ಮತ್ತು ಉಸಿರಾಟ ಹಾಗೂ ಸೈನೆನ್ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಅಲ್ಲದೇ ಅಸ್ತಮಾ ಹಾಗೂ ಗಂಟಲೂತದಿಂದ ಕೂಡ ನಿವಾರಣೆ ಹೊಂದಬಹುದು.

ಕ್ಯಾನ್ಸರ್
ಈ ಅರಿಶಿನ ಹಾಲು, ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸ್ತನ, ಚರ್ಮ, ಶ್ವಾಸಕೋಶ, ಪ್ರಾಸ್ಟೇಟ್ ಮತ್ತು ಗುದನಾಳದ ಕ್ಯಾನ್ಸರ್ ನಂತಹ ಬೆಳವಣಿಯನ್ನು ತಡೆಯುತ್ತದೆ. ಇದು ಹಾನಿಕಾರಕ ಡಿಎನ್ಎಯ ಕ್ಯಾನ್ಸರ್ ಜೀವಕೋಶಗಳನ್ನು ತಡೆಯುತ್ತದೆ ಮತ್ತು ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ನಿದ್ರಾಹೀನತೆ
ಬಿಸಿ ಅರಿಶಿನ ಹಾಲು ಅಮೈನೊ ಆಮ್ಲ, ಟ್ರಿಪ್ಟೊಫಾನ್ ನ್ನು ಉತ್ಪಾದಿಸುತ್ತದೆ ಇದು ಶಾಂತಿಯುತ ಮತ್ತು ಸುಖ ನಿದ್ರೆಗೆ ಕಾರಣವಾಗುತ್ತದೆ.

ಶೀತ ಮತ್ತು ಕೆಮ್ಮು
ಅರಿಶಿನ ಹಾಲು ವೈರಸ್ ವಿರೋದಿ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ, ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಇದು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ತ್ವರಿತ ಪರಿಹಾರ ನೀಡುತ್ತದೆ.

ಸಂಧಿವಾತ
ಅರಿಶಿನ ಹಾಲು, ಸಂಧಿವಾತವನ್ನು ಹೋಗಲಾಡಿಸಲು ಮತ್ತು ಸಂಧಿವಾತಕ್ಕೆ ಕಾರಣವಾದ ಊತವನ್ನು ನಿವಾರಿಸಲು ಸಹಾಯಮಾಡುತ್ತದೆ. ಕೀಲು ಮತ್ತು ಸ್ನಾಯುಗಳಲ್ಲಿನ ನೋವುಗಳನ್ನೂ ಸಹ ನಿವಾರಿಸುವಲ್ಲಿ ಸಹಕಾರಿಯಾಗಿದೆ.

ನೋವು ಮತ್ತು ವೇದನೆ
ಅರಿಶಿನ ಹಾಲಿನಲ್ಲಿ ಸಕಲ ನೋವುಗಳನ್ನು ನಿವಾರಿಸಬಲ್ಲ ಶಕ್ತಿಯಿದೆ. ಇದು ದೇಹದಲ್ಲಿ ಬೆನ್ನುಮೂಳೆಯ ಮತ್ತು ಕೀಲುಗಳ ಬಲಪಡಿಸಲು ಮಾಡಬಹುದು .

ಉತ್ಕರ್ಷಣ ನಿರೋಧಕ
ಅರಿಶಿನ ಹಾಲು ಫ್ರೀ ರಾಡಿಕಲ್ ವಿರುದ್ಧ ಹೋರಾಡುವ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು.

ರಕ್ತ ಶುದ್ಧೀಕರಣ
ಅರಿಶಿನ ಹಾಲು, ಆಯುರ್ವೇದ ಸಂಪ್ರದಾಯದಲ್ಲಿ ಅತ್ಯುತ್ತಮ ರಕ್ತ ಶುದ್ದೀಕರಣ/ ಕ್ಲಿನ್ಸರ್ ಎಂದು ಪರಿಗಣಿಸಲಾಗುತ್ತದೆ . ಇದು ದೇಹದಲ್ಲಿ ರಕ್ತ ಪರಿಚಲನೆಯ ಪುನಶ್ಚೇತನಗೊಳಿಸಲು ಮತ್ತು ವರ್ಧಿಸಲು ಸಹಾಯ ಮಾಡಬಹುದು. ಇದು ದುಗ್ಧನಾಳ ವ್ಯವಸ್ಥೆ ಮತ್ತು ಎಲ್ಲಾ ರಕ್ತನಾಳಗಳು ಶುದ್ಧೀಕರಿಸಲು ಕೂಡ ಅತ್ಯವಶ್ಯಕ.

ಲಿವರ್ ಕ್ರಿಯೆಗೆ ಸಹಾಯ
ಅರಿಶಿನ ಹಾಲು ಪಿತ್ತಜನಕಾಂಗದ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಶುದ್ಧೀಕರಣ ಮಾಡುವ ಲಿವರ್ ನ್ನು ಬೆಂಬಲಿಸುತ್ತದೆ ಮತ್ತು ದುಗ್ಧನಾಳ ವ್ಯವಸ್ಥೆ ಶುದ್ಧೀಕರಿಸುತ್ತದೆ.

ಮೂಳೆಗಳ ಆರೋಗ್ಯ
ಅರಿಶಿನ ಹಾಲು, ಮೂಳೆಗಳು ಆರೋಗ್ಯಕರ ಮತ್ತು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಒಂದು ಉತ್ತಮ ಮೂಲವಾಗಿದೆ. ಭಾರತದ ಕ್ರಿಕೆಟ್ ದಂತಕಥೆಯಾದ ಸಚಿನ್ ತೆಂಡೂಲ್ಕರ್, ಉತ್ತಮ ಮೂಳೆ ಆರೋಗ್ಯಕ್ಕೆ ಅರಿಶಿನ ಹಾಲನ್ನೇ ದಿನವೂ ಕುಡಿಯುತ್ತಾನೆ. ಅರಿಶಿನ ಹಾಲು ಮೂಳೆ ಸವೆತ ಮತ್ತು ಸಂಧಿವಾತ ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆ
ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೊಟ್ಟೆಯ ಹುಣ್ಣುಗಳು ಮತ್ತು ಕೊಲೈಟಿಸ್ ನ್ನು ಕಡಿಮೆಗೊಳಿಸುತ್ತದೆ. ಇದು ಒಂದು ಪ್ರಬಲ ನಂಜುನಿರೋಧಕವೂ ಆಗಿದೆ . ಇದು ಉತ್ತಮ ಜೀರ್ಣಕಾರಿ ಶಕ್ತಿ ಹೊಂದಿದ್ದು, ಹುಣ್ಣುಗಳು, ಅತಿಸಾರ ಮತ್ತು ಅಜೀರ್ಣವನ್ನು ತಡೆಯುತ್ತದೆ.

ಮುಟ್ಟಿನ ಸೆಳೆತ
ಇದು ಮುಟ್ಟಿನ ಸೆಳೆತ ಮತ್ತು ನೋವು ಸರಾಗಗೊಳಿಸುವ ಆಂಟಿಸ್ಪಾಸ್ಮೊಡಿಕ್ ನ್ನು ಹೊಂದಿರುವ ಅರಿಶಿನ ಹಾಲು ಅದ್ಭುತ ಶಕ್ತಿಯನ್ನು ಹೊಂದಿದೆ. ಗರ್ಭಿಣಿ ಮಹಿಳೆಯರ ಸುಲಭ ಹೆರಿಗೆಗೆ ಅರಿಶಿನ ಹಾಲು ಸೇವಿಸುವುದು ಅತ್ಯಂತ ಒಳ್ಳೆಯದು. ಅಂಡಾಶಯದ ವೇಗವಾದ ಸಂಕೋಚನಕ್ಕೆ ಅರಿಶಿನ ಹಾಲನ್ನು ಸೇವಿಸಬಹುದು.

ಗುಳ್ಳೆಗಳು ಮತ್ತು ಚರ್ಮ ಕೆಂಪಾಗುವುದು
ಕ್ಲಿಯೋಪಾತ್ರ, ಮೃದು ಮತ್ತು ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲಿನ ಸ್ನಾನವನ್ನೇ ಮಾಡುತ್ತಿದ್ದರು ಎನ್ನಲಾಗುತ್ತದೆ.

 ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲನ್ನು ಕುಡಿಯುವುದು ಒಳಿತು. ಹತ್ತಿಯಲ್ಲಿ ಅರಿಶಿನ ಹಾಲನ್ನು ನೆನೆಸಿ ಚರ್ಮ ಕೆಂಪಾಗಿರುವ ಜಾಗದಲ್ಲಿ ಅದ್ದಿ 15 ನಿಮಿಷಗಳ ಕಾಲ ಬಿಟ್ಟರೆ ಪೀಡಿತ ಪ್ರದೇಶವು ಬಹಳ ಬೇಗ ಗುಣವಾಗುತ್ತದೆ. ಇದು ಮೊದಲಿಗಿಂತ, ಚರ್ಮ ಹೆಚ್ಚು ಹೊಳೆಯುವಂತೆ ಮಾಡುತ್ತದೆ.

ತೂಕ ನಷ್ಟ (ತೂಕ ಕಡಿಮೆಯಾಗುವುದು)
ಅರಿಶಿನ ಹಾಲು ಆಹಾರದಲ್ಲಿರುವ ಕೊಬ್ಬಿನ ಅಂಶವನ್ನು ಸ್ಥಗಿತಗೊಳಿಸುತ್ತದೆ. ಈ ತೂಕವನ್ನು ನಿಯಂತ್ರಿಸಲು ಉಪಯೋಗಕಾರಿಯಾಗಿದೆ.

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ



ಹಿರಿಯರ ಕಿವಿ ಮಾತು - Elders advise


ಹಿರಿಯರು ಏನೋ ಹೇಳುತ್ತಾರೆ ಎಂದು ಮೂಗು ಮುರಿಯ ಬೇಡಿ ಸ್ನೇಹಿತರೆ. ಕೆಲವನ್ನಾದರು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ,



1) ಸೋಮವಾರ ತಲೆಗೆಣ್ಣೆ     ಹಾಕಬೇಡ.
2) ಒಂಟಿ ಕಾಲಲ್ಲಿ ನಿಲಬೇಡ.
3) ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ  ಹೋಗುದು ಬೇಡ.
4) ಶುಕ್ರವಾರ ಸೊಸೆನ ತವರಿಗೆ ಕಳಿಸುದು ಬೇಡ.
5) ಇಡೀ ಕುಂಬಳಕಾಯಿ  ಮನೆಗೆ ತರಬೇಡ.
6) ಮನೆಯಲ್ಲಿ ಉಗುರು ತೆಗಿಬೇಡ.
7) ಮಧ್ಯಾಹ್ನ ತುಳಸಿ ಕೊಯ್ಯಬೇಡ.
8) ಹೊತ್ತು ಮುಳುಗಿದ ಮೇಲೆ ಗುಡಿಸಬೇಡ.
9) ಹೊತ್ತು ಮುಳುಗಿದ ಮೇಲೆ ತಲೆ ಬಾಚ ಬೇಡ.
10) ಉಪ್ಪು ಮೊಸರು  ಸಾಲ ಕೊಡುವುದು ಬೇಡ.
11) ಬಿಸಿ ಅನ್ನಕ್ಕೆ ಮೊಸರು  ಬೇಡ
12) ಊಟ ಮಾಡುವಾಗ ಮೇಲೆ ಏಳ್ಬೇಡ.
13) ತಲೆ ಕೂದಲು ಒಲೆಗೆ  ಹಾಕಬೇಡ.
14) ಹೊಸಿಲನ್ನು ತುಳಿದು ದಾಟಬೇಡ
15)ಮನೆಯಿಂದಹೊರಡುವಾಗ ಕಸ ಗುಡಿಸುವುದು ಬೇಡ.
16) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ.
17) ರಾತ್ರಿ ಹೊತ್ತಲ್ಲಿ ಬಟ್ಟೆ   ಒಗಿಯಬೇಡ
18) ಒಡೆದ ಬಳೆ ದರಿಸಬೇಡ.
19) ಮಲಗೆದ್ದ ಚಾಪೆ ಮಡಿಸದೆ ಬಿಡಬೇಡ.
20) ಉಗುರು ಕಚ್ಚಲು ಬೇಡ.
21) ಅಣ್ಣ ತಮ್ಮ ಒಟ್ಟಿಗೆ ಚೌರ ಮಾಡಿಸಬೇಡ.
22) ಒಂಟಿ ಬಾಳೆಲೆ  ತರಬೇಡ.
23) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ.
24)ಮುಸಂಜೆ ಹೊತ್ತಲ್ಲಿ ಮಲಗಬೇಡ.
25) ಕಾಲು ತೊಳಿವಾಗ ಹಿಮ್ಮಡಿ ತೊಳಿಯೋದು ಮರೀಬೇಡ.
26) ಹೊಸಿಲ ಮೇಲೆ  ಕೂರಬೇಡ.
27) ತಿಂದ ತಕ್ಷಣ ಮಲಗಬೇಡ.
28) ಹಿರಿಯರ ಮುಂದೆ ಕಾಲು  ಚಾಚಿ / ಕಾಲ ಮೇಲೆ ಕಾಲು  ಹಾಕಿ ಕೂರಬೇಡ.
29) ಕೈ ತೊಳೆದು ನೀರನ್ನು  ಒದರಬೇಡಿ.
30) ರಾತ್ರಿ ಊಟದ ತಟ್ಟೆ ತೊಳೆಯದೇ ಬಿಡಬೇಡ.
31) ಎಂಜಲ ಕೈಯಲ್ಲಿ ಊಟ ಬಡಿಸಬೇಡ
32) ಪಾತ್ರೆಗಳ ಮೇಲೆ ಎಂಜಲು ಕೈ ತೊಳಿಯಬೇಡ.

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ

ವಿಶ್ವಾಸ - Trust

 ವಿಶ್ವಾಸ ಕಳೆದುಕೊಳ್ಳಲು ಒಂದು ಕ್ಷಣ ಸಾಕು, ಆದರೆ ಕಳೆದುಕೊಂಡ ವಿಶ್ವಾಸ ಮತ್ತೆ ಗಳಿಸಲು ಜೀವನವಿಡಿ ಬೇಕಾಗುತ್ತದೆ. ವಿಶ್ವಾಸ ಕಳೆದುಕೊಂಡು ಬದುಕಬಾರದು. ವಿಶ್ವಾಸ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ. ಕೆಲಸ ಮಾಡುವ ಕಚೇರಿಯಲ್ಲಾಗಲಿ, ಬಂಧು ಬಳಗದವರಲ್ಲಾಗಲಿ, ಹೆಂಡತಿ ಮಕ್ಕಳ ಜತೆ ವಿಶ್ವಾಸ ಕಳೆದುಕೊಳ್ಳಬಾರದು. ವಿಶ್ವಾಸ ಕಳೆದುಕೊಂಡರೆ ಯಾರೂ ಗೌರವ ನೀಡುವುದಿಲ್ಲ. ನಂಬಿಕಸ್ಥನಲ್ಲ ಅವರ ಹತ್ತಿರ ವ್ಯವಹಾರ ಮಾಡವುದು ಬೇಡ ಎಂದು ಎಲ್ಲರೂ ನಮ್ಮಿಂದ ದೂರಾಗುತ್ತಾರೆ. 

 

ವಿಶ್ವಾಸ - Trust

ನಂಬಿಕೆ ಉಳಿಸಿಕೊಂಡು ಬದುಕಿದರೆ ಜೀವನ ಪೂರ್ತಿಗೌರವ ಸಿಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಮರ್ಯಾದೆ ಇರುತ್ತದೆ. ಗೌರಯುತ ಬದುಕು ಸಾಗಿಸಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಆದರೆ ವಿಶ್ವಾಸ ಕಳೆದುಕೊಂಡರೆ ಆ ಕನಸು ನನಸಾಗುವುದೇ ಇಲ್ಲ ಜೀವನ ಪೂರ್ತಿ ನನಸಾಗಿಯೇ ಉಳಿಯುತ್ತಿದೆ. ಒಂದು ಸುಳ್ಳನ್ನು ಮುಚ್ಚಿಕೊಳ್ಳಲು ನೂರು ಸುಳ್ಳು ಹೇಳಬೇಕಾಗುತ್ತದೆ. ಇಷ್ಟಾದರೂ ಸತ್ಯ ಗೊತ್ತಾದಾಗ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಸತ್ಯ ಹೇಳಿದರೆ ಆ ಕ್ಷಣದಲ್ಲಿ ಬೇಜಾರವಾಗಬಹುದು ಆದರೆ ವಿಶ್ವಾಸ ಉಳಿಯುತ್ತದೆ. ವಿಶ್ವಾಸ ಮತ್ತು ಶ್ವಾಸ ಗಳ ನಡುವೆ ಒಂದಕ್ಷರ ವ್ಯತ್ಯಾಸವಿದೆ. ಶ್ವಾಸ ಕಳೆದುಕೊಂಡ ವ್ಯಕ್ತಿ ಬದುಕಲಾರ. ವಿಶ್ವಾಸ ಕಳೆದುಕೊಂಡ ವ್ಯಕ್ತಿ ಬದುಕಿ ಸತ್ತಂತೆ. ಮೋಸ, ಅಪನಂಬಿಕೆ, ದ್ರೋಹ ಇವೆಲ್ಲವು ಇಂದು ಮೆರೆಯುತ್ತಿವೆ. ಇಂತ ಸಂದರ್ಭದಲ್ಲಿ ಪ್ರಾಮಾಣಿಕತೆ ನಡೆಯುವುದಿಲ್ಲ ಎಂದು ನಾವು ಅಂದುಕೊಳ್ಳಬಹುದು. ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೆ ಸಿಗುತ್ತದೆ. ಸುಳ್ಳು ಹೇಳಿ, ವಿಶ್ವಾಸ ಕಳೆದುಕೊಂದು ಕ್ಷಣಿಕ ಸುಖ ಅನುಭವಿಸುವ ಬದಲು ಸತ್ಯ ಹೇಳಿ ವಿಶ್ವಾಸಿಕರಾಗಿ ನೂರ್ಕಾಲ ಸುಖವಾಗಿ ಬಾಳುವುದನ್ನು ರೂಢಿಸಿಕೊಳ್ಳಬೇಕು.


ವಿಶ್ವಾಸ ಎಂಬುವುದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ವಲ್ಲ. ನಮ್ಮಲ್ಲೆ ಇರುತ್ತದೆ. ಅದನ್ನು ಹೊರಹಾಕಲು ಪ್ರಯತ್ನಿಸಬೇಕು. ವಿಶ್ವಾಸದಿಂದ ಬದುಕು ಸಾಗಿಸಿ ಉತ್ತಮ ವ್ಯಕ್ತಿ ಎನಿಸಿಕೊಳ್ಳಬೇಕು. ಮನುಷ್ಯರಿಗೆ ಮರ್ಯಾದೇ ಸಿಗುವುದೇ ವಿಶ್ವಾಸದಿಂದ ಅದನ್ನೇ ಕಳೆದುಕೊಂಡು ಬದುಕು ಸಾಗಿಸುವುದು ಕಷ್ಟ. ವಿಶ್ವಾಸ ಮತ್ತು ಆತ್ಮ ವಿಶ್ವಾಸ ಎರಡು ಅಗತ್ಯ. ಯಾರೂ ಏನೆ ಹೇಳಲಿ ನನ್ನ ಬಗ್ಗೆ ನನಗೆ ಗೊತ್ತು ಎಂಬುದು ಆತ್ಮ ವಿಶ್ವಾಸ. ಇಂದಿನ ಸಮಾಜದಲ್ಲಿ ಆತ್ಮ ವಿಶ್ವಾಸ ಅತಿ ಮುಖ್ಯವಾಗಿದೆ. ಶ್ವಾಸ ಇರುವ ವರೆಗೂ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂಬ ಆತ್ಮ ವಿಶ್ವಾಸ ಹೊಂದಿರಬೇಕು. ವಿಶ್ವಾಸ ವೇ ನಮಗೆ ಶ್ವಾಸವಾಗಬೇಕು ಅಂದಾಗ ಮಾತ್ರ ವಿಶ್ವ ಮೆಚ್ಚುವ ಬದುಕು ನಮ್ಮದಾಗುತ್ತದೆ. ಸ್ವಾರ್ಥಕ್ಕಾಗಿ ವಿಶ್ವಾಸ ಕಳೆದುಕೊಂಡರೆ ಶ್ವಾನದಂತೆ ನಮ್ಮ ಬದುಕಾಗುತ್ತದೆ. ಮನುಷ್ಯರಾಗಿ ವಿಶ್ವಾಸದಿಂದ ಜೀವನ ನಡೆಸುವ ಮೂಲಕ ಉಜ್ಜೀವನ ನಡೆಸಬೇಕು. ಜೀವನ ಎಂದರೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಷ್ಟೇ ಅಲ್ಲ. ನಂಬಿಕೆಯಿಂದ ಜೀವಿಸುವುದೇ ನಿಜವಾದ ಜೀವನ. ವಿಶ್ವಾಸಕ್ಕೆ ಇಡಿ ಜಗತ್ತೇ ಗೌರ ಸಲ್ಲಿಸುತ್ತದೆ. ಸಂಪತ್ತು ಗಳಿಸಿ ವಿಶ್ವಾಸ ಕಳೆದುಕೊಂಡರೆ ಯಾರೂ ನಂಬುವುದಿಲ್ಲ. ಬಡವನಾಗಿದ್ದರೂ ವಿಶ್ವಾಸಿಕನಾಗಿದ್ದರೆ ಜನರು ನಂಬುತ್ತಾರೆ. ನಾವು ಸಂಪಾದಿಸುವುದು ಹಣವಲ್ಲ ವಿಶ್ವಾಸ ಎಂಬ ಸತ್ಯವನ್ನು ಅರಿಯಬೇಕು. ಹಣ ಸಂಪಾದಿಸಿ ವಿಶ್ವಾಸ ವಿಲ್ಲದೆ ನಮ್ಮವರನ್ನೆಲ್ಲ ಕಳೆದುಕೊಳ್ಳುವ ಬದಲು ವಿಶ್ವಾಸ ಗಳಿಸಿ ನಮ್ಮವರನ್ನು ಉಳಿಸಿಕೊಂಡರೆ ಸಂಪತ್ತು ತಾನಾಗಿಯೇ ಸಿಗುತ್ತದೆ. ನಮ್ಮವರು ಎಂಬ ಭಾವನೆ ಇದ್ದಾಗ ಯಾರೂ ವಿಶ್ವಾಸ ಕಳೆದುಕೊಳ್ಳಲು ಬಯಸುವುದಿಲ್ಲ. ಅಧುನಿಕ ಭರಾಟೆಯಲ್ಲಿ ವಿಶ್ವಾಸಕ್ಕೆ ಬೆಲೆ ಕಡಿಮೆಯಾಗುತ್ತಿದೆ. ವಿಶ್ವಾಸ ವಿಶ್ವ ವ್ಯಾಪಿಯಾಗಿ ಬೆಳೆಯಬೇಕು. ನಾವೆಲ್ಲರೂ ವಿಶ್ವಾಸಿಕ ಜೀವನ ನಡೆಸಲು ಸಂಪಕಲ್ಪ ಮಾಡೋಣ.


| ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ

Significance of Gaya - ಗಯಾ ಕ್ಷೇತ್ರ ಕಥೆ

 ಗಯಾ ಕ್ಷೇತ್ರವು ಬಿಹಾರ ರಾಜ್ಯದಲ್ಲಿದೆ. #ಫಲ್ಗು ನದಿಯ ತೀರದಲ್ಲಿ ಇರುವ #ವಿಷ್ಣುಪಾದ_ಮಂದಿರ ಆಸ್ಥಿಕ ಹಿಂದೂ ಯಾತ್ರಿಕರ ಶ್ರದ್ದಾ ಕೇಂದ್ರವಾಗಿದೆ.

ಗಯಾ ನಗರದ ಇತಿಹಾಸ ತ್ರೇತಾಯುಗದಲ್ಲೂ ಇದರ ಉಲ್ಲೇಖವಿದೆಯೆಂದರೇ , ಎಷ್ಟು ಪುರಾತನವಾದದ್ದೂ ಎಂಬ ಅರಿವುಂಟಾಗುತ್ತದೆ. 
 

 
 
  ಶ್ರೀರಾಮರು ಪತ್ನಿ ಸೀತಾಮಾತೆ ಮತ್ತು ಅನುಜ ಲಕ್ಷ್ಮಣ ನೊಡನೆ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸದಲ್ಲಿರುವಾಗ , ಪುತ್ರಶೋಕದಿಂದ ದಶರಥ ಮಾಹಾರಾಜನು ಮರಣ ಹೊಂದುತ್ತಾನೆ. ಈ ಸುದ್ದಿ ತಿಳಿದಾಗ ತಂದೆಯ ಶ್ರಾದ್ಧ ಕಾರ್ಯವನ್ನು ಶ್ರೀರಾಮ , ಗಯಾ ಕ್ಷೇತ್ರದಲ್ಲಿ ನಡೆಸುತ್ತಾನೆಂಬ ಉಲ್ಲೇಖವಿದೆ.
ಗಯಾ ಕ್ಷೇತ್ರ ಪಿತೃ ಕಾರ್ಯ ಮಾಡುವುದಕ್ಕೆ ಅಂದಿನಂದಲೂ ಮುಖ್ಯ ಕೇಂದ್ರವಾಗಿದೆ.. 
ಯಾಕೆ ಇದು , ಪಿತೃಕಾರ್ಯ ಗಳಿಗೆ ಪ್ರಮುಖವಾಯಿತು ಎಂಬುದರ ಹಿಂದೆ ಒಂದು ಪದ್ಮಪುರಾಣದಲ್ಲಿ ಬರುವ ಕಥೆಯೊಂದಿದೆ.
 
 ಈ ನಗರಕ್ಕೆ ಹೆಸರು ಬರಲು ಕಾರಣ , ಈ ಪ್ರದೇಶವನ್ನು #ಗಯಾಸುರ ನೆಂಬ ರಾಕ್ಷಸನ ಆಡಳಿತದಲ್ಲಿದ್ದಿತು. ಗಯಾಸುರನು ರಾಕ್ಷಸನಾದರೂ ಮಹಾದೈವ ಭಕ್ತ. ಇವನು ಒಮ್ಮೆ ವಿಷ್ಣುವನ್ನು ಒಲಿಸಿಕೊಳ್ಳಲು ಭೀಕರವಾದ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಇವನು ಇನ್ನೇನು ವರ ಕೇಳಿ ಬಿಡುವನೋ , ಅದರಿಂದ ತಮಗೇನು ಸಂಚಕಾರ ಬರುವುದೋ ಎಂದು ಚಿಂತಿತರಾದ ಇಂದ್ರಾದಿ ದೇವತೆಗಳು ಪರಶಿವನ ಮೊರೆ ಹೋಗುತ್ತಾರೆ.. ಆಗ ಪರಶಿವನು , ಇದಕ್ಕೆ ನೀವು ವಿಷ್ಣುವಿನ ಬಳಿಯೇ ಹೋಗುವುದು ಸೂಕ್ತವೆಂದು ಕಳಿಸುತ್ತಾನೆ. ಅದರಂತೆ ಇಂದ್ರಾದಿ ದೇವತೆಗಳು ವಿಷ್ಣುವಿನ ಬಳಿ ಹೋಗಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.  ದೇವತೆಗಳನ್ನು ಸಮಾಧಾನ ಗೊಳಿಸಿ ನಾರಾಯಣನು , ತಪಸ್ಸು ಮಾಡುತ್ತಿದ್ದ ಗಯಾ ಸುರನ ಬಳಿಗೆ ಬಂದು ನೋಡಲಾಗಿ , ಗಯಾಸುರ ಒಬ್ಬ ಉತ್ತಮ ಗುಣವುಳ್ಳ ಭಕ್ತ ಎಂದರಿತು , ಗಯಾಸುರನಿಗೆ ವಿಶೇಷ ವರವೊಂದನ್ನು ನೀಡುತ್ತಾನೆ. ಅದರಂತೆ ಯಾವ ಮಾನವ ,ತನ್ನ ಅಂತ್ಯಕಾಲದಲ್ಲಿ ಗಯಾಸುರನನ್ನು ಸ್ಪರ್ಷಿಸುತ್ತಾರೋ ಅವರಿಗೆ ಸ್ವರ್ಗ ಪ್ರಾಪ್ತಿಯಾಗಲಿ ಎಂದು.!! 
 
ಇದರಿಂದ ಗಯಾಸುರನ ಸ್ಪರ್ಷ ಮಾತ್ರದಿಂದಲೇ ಮಾನವರೆಲ್ಲಾ ಸ್ವರ್ಗ ಪ್ರವೇಶ ಮಾಡುವುದನ್ನು ಕಂಡ ಯಮಲೋಕದಲ್ಲಿ ಯಾರಿಗೂ ಕೆಲಸವಿಲ್ಲದಂತಾಗಿ , ದೇವತೆಗಳು ಬ್ರಹ್ಮನ ಬಳಿ ಹೋಗಿ , ವಿಷ್ಣುವಿನ ವರದಿಂದ ಜನರೆಲ್ಲರೂ ಸ್ವರ್ಗಕ್ಕೆ ಹೋಗುತ್ತಿದ್ದು ನರಕಲೋಕದ ಅವಶ್ಯಕತೆ ಇಲ್ಲ , ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಿದೆಯೆಂದು ಪ್ರಾರ್ಥಿಸುತ್ತಾರೆ. ಆಗ ಬ್ರಹ್ಮದೇವನು  ಇದು  ವಿಷ್ಣುವು ವರ ದಯಪಾಲಿಸಿರುವುದರಿಂದ , ವಿಷ್ಣುವೇ ಇದಕ್ಕೆ ಪರಿಹಾರ ಕೊಡಲು ಸಾಧ್ಯ , ಎಂದು ದೇವತೆಗಳನ್ನು ವಿಷ್ಣುವಿನ ಬಳಿಗೆ ಕಳಿಸುತ್ತಾರೆ. ಅದರಂತೆ ದೇವತೆಗಳು ವಿಷ್ಣುವಿನ ಬಳಿಯಲ್ಲಿ ನಿವೇದಿಸಿಕೊಳ್ಳುತ್ತಾರೆ.. ಆಗ ವಿಷ್ಣುವು ಅವರನ್ನು ಸಮಾಧಾನಿಸಿ ಕಳಿಸಿ , ಒಬ್ಬ ಬ್ರಾಹ್ಮಣನ ವೇಷದಲ್ಲಿ ಗಯಾಸುರನ ಬಳಿಬಂದು  , ಲೋಕ ಕಲ್ಯಾಣಾರ್ಥವಾಗಿ ಯಾಗ ಮಾಡಬೇಕೆಂದು ಅದಕ್ಕೆ ಪರಿಶುದ್ದವಾದ ಸ್ಥಳ ತೋರಿಸಬೇಕು ಎಂದಾಗ ಗಯಾಸುರನು ಬ್ರಾಹ್ಮಣನಿಗೆ ಅನೇಕ ಜಾಗಗಳನ್ನು ತೋರಿಸುತ್ತಾನೆ.. ಇದಾವುದೂ ಪರಿಶುದ್ದವಲ್ಲವೆಂದು ಬ್ರಾಹ್ಮಣನು ಹೇಳುತ್ತಾರೆ.  ಆಗ ಗಯಾಸುರನು ಇನ್ನೇನು ನನ್ನ ಎದೆಯ ಮೇಲೆ ಯಾಗ ಮಡಬೇಕೇನು ಎಂದು ಕೇಳುತ್ತಾನೆ. ಆಗ ಬ್ರಾಹ್ಮಣ ರೂಪಿ ವಿಷ್ಣುವು , ಹೌದು ನೀನು ರಾಕ್ಷಸನಾಗಿದ್ದರೂ ಪರಿಶುದ್ದ. ನಿನ್ನ ಎದೆಯ ಮೇಲೆಯೇ ಹೋಮಕುಂಡವನ್ನಿಟ್ಟು ಯಾಗ ಮಾಡಲು‌ ಅನುಮತಿ ಕೇಳಿದಾಗ,   ಇದು ತನ್ನ ವಧೆಗಾಗಿ ಎಂಬ ಅರಿವು ಮೂಡುತ್ತದೆ , ಆದರೂ ವಿಷ್ಣುವಿನ ಮಾತಿಗೆ ಎದುರು ಹೇಳದೇ ಸಮ್ಮತಿಸುತ್ತಾನೆ.
 ಆಗ ವಿಷ್ಣುವು ಯಜ್ಞ ಕಾರ್ಯ ನೆರವೇರಿಸಿ ಕೊಡುವಂತೆ ಬ್ರಹ್ಮದೇವನನ್ನು ಆಹ್ವಾನಿಸುತ್ತಾರೆ.  ಬ್ರಹ್ಮದೇವರು ತನ್ನ ಮಾನಸಪುತ್ರರನ್ನು ಋತ್ವಿಜರನ್ನಾಗಿ ಕೂರಿಸುತ್ತಾನೆ. ಆಗ ಬ್ರಹ್ಮ ಮಾನಸಪುತ್ರರು ಗಯಾಸುರನನ್ನು ಉತ್ತರಾಭಿಮುಖವಾಗಿ ಮಲಗಿಸಿ ಯಜ್ಞಕಾರ್ಯ ಆರಂಭಿಸುತ್ತಾರೆ. ಯಜ್ಞ ಆರಂಭವಾಗುವ ಮುನ್ನವೇ  ಗಯಾಸುರನ ಉಸಿರಾಟದಿಂದ ಹೋಮಕುಂಡವು ಅಲುಗಾಡುತ್ತಿರುತ್ತದೆ.  ಆಗ ಬ್ರಹ್ಮನು ಯಮನಿಗೆ ದರ್ಮಶಿಲೆಯೊಂದು ತಂದು ಗಯಾಸುರನ ತಲೆಯ ಮೇಲಿಡುವಂತೆ ಯಮನಿಗೆ ಹೇಳುತ್ತಾರೆ. ಹಾಗೆಯೇ ಯಮನು ಧರ್ಮಶಿಲೆಯೊಂದನು ಗಯಾಸುರನ ತಲೆಯ ಮೇಲಿಟ್ಟರೂ ತಲೆಯ ಕುಲುಕಾಟವನ್ನು ತಪ್ಪಿಸಲು ಆಗುವುದಿಲ್ಲ.. ಕಡೆಗೆ ಸಾಕ್ಷಾತ್ ವಿಷ್ಣುವೇ ಗಯಾಸುರನ ಎದೆಯ ಮೇಲಿದ್ದ ಯಜ್ಞಕುಂಡದ ಮೇಲೆ ತನ್ನ ಬಲಪಾದವನ್ನು ಇಟ್ಟು ನಿಲ್ಲುತ್ತಾನೆ ಮತ್ತು ಗಯಾಸುರನ ಅಂತ್ಯವು ಸಮೀಪಿಸುತ್ತದೆ.. ಸಾಕ್ಷಾತ್ ವಿಷ್ಣುವಿನ ದರ್ಶನದಿಂದ ಮತ್ತು ಸ್ಪರ್ಶದಿಂದ ಗಯಾಸುರನು , ವಿಷ್ಣುವಿಗೆ ಸ್ವಾಮಿ ನನ್ನ ಇಷ್ಟು ದಿನದ ತಪಸ್ಸಿನ ಪರಿಶ್ರಮಕ್ಕೆ ಇಂದು ನಿನ್ನ ದರ್ಶನ ಮತ್ತು ಸ್ಪರ್ಷದಿಂದ ಫಲ ಸಿಕ್ಕಂತಾಯಿತು. ನಿಮ್ಮ ಪಾದ ಸ್ಪರ್ಶವಾಗುರುವ ಈ ಸ್ಥಳವು ಗಯಾ ಕ್ಷೇತ್ರವೆಂದು ಪ್ರಸಿದ್ದಿಗೆ ಬರಲಿ ಎಂದು ಬೇಡುತ್ತಾನೆ. ಇಲ್ಲಿ ವಾಸವಾಗಿರುವ ತನ್ನ ವಂಶಜರನ್ನು ಯಾರೂ ರಾಕ್ಷಸರೆಂದು ಗುರುತಿಸದೇ , ಅವರನ್ನೇ ಪಿತೃಕಾರ್ಯ ಗಳಿಗೆ ನಿಮಂತ್ರಿಸುವಂತಾಗಬೇಕೆಂದು ಮತ್ತು ಶ್ರಾದ್ದಭೋಜನ ಮಾಡಿದ ಪಾಪವೂ ಅವರಿಗೆ ತಟ್ಟದಿರಲೆಂದೂ  ಪ್ರಾರ್ಥಿಸುತ್ತಾನೆ. ತನ್ನ ಅಂತ್ಯಕಾಲದಲ್ಲಿ ಕೂಡ ತನ್ನ ಬಗ್ಗೆ ಯೋಚಿಸದೇ , ತನ್ನ ಜನರ ಹಿತ ಬಯಸಿದ ಗಯಾಸುರನನ್ನು , ಮಹಾವಿಷ್ಣುವು ಗಯಾಸುರನ ಕೋರಿಕೆಗಳನ್ನು ಮನ್ನಿಸಿ ,   ಬ್ರಹ್ಮ ಆದಿಯಾಗಿ ತಾನೂ ಸೇರಿದಂತೆ ನಿಂತಿರುವ ಸ್ಥಳಕ್ಕೆ ಗಯಾಸುರನ ಹೆಸರಿನಿಂದಲೇ , ಗಯಾ ಕ್ಷೇತ್ರ ಎಂದು ನಾಮಕರಣ ಮಾಡಿ ,ಯಾರು ಈ ಸ್ಥಳದಲ್ಲಿ ಪಿತೃಕಾರ್ಯ ನೆರವೇರಿಸುತ್ತಾರೆಯೋ ಅವರ ಪೂರ್ವಿಕರೆಲ್ಲರಿಗೂ ಮತ್ತು ಕಾರ್ಯ ಮಾಡಿದವನಿಗೂ ಸದ್ಗತಿ ದೊರಕುವುದೆಂದು  ವರ ನೀಡುತ್ತಾನೆ.
ಗಯಾ ಕ್ಷೇತ್ರವು ದೇವಾದಿದೇವತೆಗಳು ಅನುಗ್ರಹಿಸಿದ ಕ್ಷೇತ್ರವಾಗಿದೆ. ಆ ಕಾರಣದಿಂದಲೇ , ತಾವು ಮಾಡಿರುವ ಕೆಟ್ಟ ಕರ್ಮಗಳಿಂದ , ತಮಗೆ ಸಂಭವಿಸಬಹುದಾದ ನರಕಲೋಕದ ಭಯಕ್ಕೆ , ಮೃತ ಹೊಂದಿದ ದೇಹಗಳು , ತಮ್ಮ ವಂಶಜರಲ್ಲಿ ಒಬ್ಬನಾದರೂ ಗಯಾ ಕ್ಷೇತ್ರದಲ್ಲಿ ಶ್ರಾದ್ದಕಾರ್ಯ ಮಾಡಿ ಪಿಂಡ ಪ್ರಧಾನ ಮಾಡಲೆಂದು ಅಪೇಕ್ಷಿಸುತ್ತಿರುತ್ತಾರೆ.. 
ಗಯಾ ಕ್ಷೇತ್ರದಲ್ಲಿ ಯಾವ ಮಗನು ಪಿಂಡ ಪ್ರಧಾನ ಮಾಡುವನೋ ಅವನೇ ನಮಗೆ ರಕ್ಷಕನಾಗುತ್ತಾನೆ ಎಂದು ಪಿತೃಗಳು , ಗಯೆಗೆ  ಹೋಗುವ ಮಗನನ್ನು ಕಂಡು ಹರ್ಷಚಿತ್ತರಾಗಿ ಸಂತುಷ್ಟಗೊಂಡು ಆಶೀರ್ವದಿಸುತ್ತಾರೆ. 
 
 ಸ್ವಂತ ಮಗನೇ ಆಗಲೀ ಅಥವಾ ಬೇರಾರೇ ಆಗಲೀ ಮೃತಪಟ್ಟಿರುವ ಯಾವುದೇ ವ್ಯಕ್ತಿಯ ಗೋತ್ರ, ಹೆಸರನ್ನು ಹೇಳಿ ಯಾವಾಗ ಗಯಾ ಕ್ಷೇತ್ರದಲ್ಲಿ ಪಿಂಡ ದಾನ ಮಾಡುತ್ತಾನೆಯೋ ಆ ಕ್ಷಣದಲ್ಲಿಯೇ ಅವನು ಕೊಟ್ಟ ಪಿಂಡಕ್ಕೆ ಪಾತ್ರನಾದ ಚೇತನನು ಬ್ರಹ್ಮ ಸಾಯುಜ್ಯವನ್ನು ಪಡೆಯುತ್ತಾನೆ ಎಂದು ಪದ್ಮಪುರಾಣದಲ್ಲಿ ಹೇಳಲಾಗಿದೆ.

ಗಯಾಕ್ಷೇತ್ರದಿಂದ ಕೇವಲ 15 km ದೂರದಲ್ಲಿಯೇ ಸ್ಥಳವಿದೆ. ಭಗವಾನ್ ಬುದ್ದನಿಗೆ ಸಾಕ್ಷಾತ್ಕಾರ ದೊರಕಿದ ಬೋಧಿ ವೃಕ್ಷವೂ ಇಲ್ಲಿದೆ. 
ಇಲ್ಲಿ  ಧ್ಯಾನ ಭಂಗಿಯಲ್ಲಿರುವ ಭಗವಾನ್ ಬುದ್ದನ ಬೃಹತ್ ಮೂರ್ತಿಯನ್ನೂ ನೋಡಬಹುದು.
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ  
Terms | Privacy | 2024 🇮🇳
–>