-->

Being a Ward Corporator or Councillor in Karnataka - Roles , Powers and Benefits

A Corporator or a Councillor is a representative of the people of a ward in the municipal corporation. A municipal corporation is a local self-government body that administers the urban areas of a city or a town. Karnataka has 11 municipal corporations, namely Bengaluru, Hubballi-Dharwad, Mysuru, Mangaluru, Belagavi, Kalaburagi, Davanagere, Ballari, Tumakuru, Shivamogga and Vijayapura. Each municipal corporation is divided into wards, each electing one Corporator by the first-past-the-post electoral system. The number of wards varies from corporation to corporation depending on the population and area. For example, Bengaluru has 198 wards, Hubballi-Dharwad has 67 wards and Mysuru has 65 wards. The Corporators are elected for a term of five years, unless the corporation is dissolved sooner. The elections are conducted by the State Election Commission. The party or coalition that has the majority of Corporators forms the ruling party and elects the Mayor and Deputy Mayor among themselves. The Mayor is the ceremonial head of the corporation and presides over the meetings of the council. The Deputy Mayor assists the Mayor in his/her functions. The Commissioner is the administrative head of the corporation and is appointed by the state government. The Corporators play an important role in the governance and development of the city.

In Bengaluru , a ward Councillor or a Corporator is a representative of the people of a ward in the Bruhat Bengaluru Mahanagara Palike (BBMP), the municipal corporation that administers the city of Bengaluru. Bengaluru has 198 wards now which is expected to increase to 243 , each electing one Councillor by the first-past-the-post electoral system. 

Being a Ward Corporator or Councillor in Karnataka - Roles , Powers and Benefits

 

What are the job and powers of Corporator in an assembly ward in Karnataka?
 

The job and powers of a Corporator in an assembly ward in Karnataka are:

  • To serve the people: One may have a passion and commitment to serve the people of their ward and address their issues and problems. One may want to be a voice for their ward residents in the council and to the Commissioner. One may want to provide various services and assistance to their ward residents such as issuing certificates, recommending scholarships, facilitating pensions, etc.
  • To develop their ward: One may have a vision and plan to develop their ward and improve its infrastructure and amenities. One may want to allocate funds from various sources such as Local Area Development Fund (LADF), Chief Minister’s Relief Fund (CMRF), etc. for various development works in their ward such as roads, bridges, schools, hospitals, water supply, sanitation, parks, etc. One may also want to coordinate with various departments and agencies of the corporation and the state government to ensure timely completion and quality of these works.
  • To make bye-laws: One may have an interest and expertise in making bye-laws for various matters such as public health, sanitation, water supply, drainage, roads, markets, parks, etc. One may want to participate in the bye-law making process by introducing, debating and voting on bye-laws and amendments in the council.
  • To approve budget: One may have an understanding and knowledge of financial matters and budgeting. One may want to scrutinize and approve the annual budget and other financial matters of the corporation. The budget shows the estimated income and expenditure of the corporation for a financial year.
  • To oversee administration: One may have an experience and skill in administration and management. One may want to oversee and monitor the administration and functioning of various departments and agencies of the corporation such as engineering, health, revenue, education, etc. One may also want to appoint various committees to look into specific matters such as taxation, accounts, works, etc.

What are the benefits of being a ward Councillor
 

The benefits of being a ward Councillor are:

  • Recognition and respect: Being a ward Councillor gives one recognition and respect from their ward residents and other stakeholders. One becomes a leader and an influence in their ward and beyond. One also gets access to various platforms and forums where they can interact with other Councillors, Ministers, Officials, Experts, Media, etc.
  • Salary and allowances: Being a ward Councillor entitles one to a salary and various allowances from the corporation and the state government. The basic salary of a Councillor in Karnataka is Rs. 7,500 per month. In addition, they also receive various allowances such as constituency allowance (Rs. 5,000 per month), telephone allowance (Rs. 2,000 per month), daily allowance (Rs. 500 per day for attending council meetings), travel allowance (Rs. 1 per km for road travel within or outside the city), medical allowance (Rs. 50,000 per annum), etc. The total monthly salary of a Councillor in Karnataka is around Rs. 15,000 to Rs. 20,000 depending on their attendance and travel expenses. For Mayo, receives a higher salary than a Councillor. The basic salary of a Mayor is Rs. 15,000 per month.
  • From Karnataka government: The Councillors in Bengaluru are entitled to various facilities from the state government such as free accommodation in Councillor quarters or house rent allowance (Rs. 10,000 per month), free electricity (up to 5,000 units per annum), free water supply (up to 20 kilolitres per month), free telephone calls (up to Rs. 25,000 per annum), free internet connection (up to Rs. 15,000 per annum), free furniture (up to Rs. 1 lakh per term), free vehicle (up to Rs. 10 lakh per term), free petrol (up to 200 litres per month), free driver (up to Rs. 10,000 per month), free security (up to one police constable), free health insurance (up to Rs. 2 lakh per annum), free railway pass (second class AC for self and spouse), free air travel (up to Rs. 1 lakh per annum), pension (Rs. 20,000 per month after retirement or death), etc
  • From central government: The Councillors in Bengaluru are also entitled to some facilities from the central government such as free entry to national parks and monuments, free access to central government libraries and museums, free membership of various clubs and associations, etc

Being a Karnataka MLA - Responsibilities , Salary and Facilities from government

A Member of Legislative Assembly (MLA) is a representative of the people of a constituency in the state legislature. Karnataka Legislative Assembly has 224 constituencies, each electing one MLA by the first-past-the-post electoral system. The MLAs are elected for a term of five years, unless the assembly is dissolved sooner. The elections are conducted by the Election Commission of India. The party or coalition that has the majority of MLAs forms the government and appoints the Chief Minister and other ministers. The MLAs play an important role in the governance and development of the state. An MLA is expected to uphold the dignity and integrity of the office and work for the welfare of the people and the state

What are the job and powers of MLA in an assembly constituency in Karnataka?
 

The job and powers of an MLA in an assembly constituency in Karnataka are:

  • To make laws: The MLAs participate in the law-making process by introducing, debating and voting on bills and amendments in the assembly. They also scrutinize and approve the state budget and other financial matters.
  • To hold the government accountable: The MLAs question and criticize the policies and actions of the government and its ministers in the assembly. They also raise issues of public interest and concern through various means such as adjournment motions, calling attention motions, zero hour, question hour, etc. They also participate in various committees that oversee the functioning of different departments and agencies of the government.
  • To represent the people: The MLAs act as a link between the people and the government. They voice the grievances, demands and aspirations of their constituents in the assembly and to the government. They also provide various services and assistance to their constituents such as issuing certificates, recommending scholarships, facilitating pensions, etc. They also monitor and facilitate the implementation of various schemes and projects of the government in their constituencies.
  • To develop their constituencies: The MLAs allocate funds from various sources such as Local Area Development Fund (LADF), Chief Minister’s Relief Fund (CMRF), etc. for various development works in their constituencies such as roads, bridges, schools, hospitals, water supply, sanitation, etc. They also coordinate with various departments and agencies of the government to ensure timely completion and quality of these works.
Being a Karnataka MLA - Responsibilities , Salary and Facilities from government

 

What is the government salary for MLA and ministry post in Karnataka?
 

The government salary for MLA and ministry post in Karnataka are:

  • For MLA: The basic salary of an MLA in Karnataka is Rs. 25,000 per month. In addition, they also receive various allowances such as constituency allowance (Rs. 15,000 per month), telephone allowance (Rs. 15,000 per month), daily allowance (Rs. 1,000 per day for attending assembly sessions or committee meetings), travel allowance (Rs. 2 per km for road travel within or outside the state), medical allowance (Rs. 2 lakh per annum), etc. The total monthly salary of an MLA in Karnataka is around Rs. 60,000 to Rs. 70,000 depending on their attendance and travel expenses
  • For ministry post: The ministers in Karnataka receive a higher salary than MLAs. The basic salary of a minister is Rs. 30,000 per month. In addition, they also receive various allowances such as constituency allowance (Rs. 25,000 per month), telephone allowance (Rs. 25,000 per month), daily allowance (Rs. 1,500 per day for attending assembly sessions or committee meetings), travel allowance (Rs. 3 per km for road travel within or outside the state), medical allowance (Rs. 3 lakh per annum), etc. The total monthly salary of a minister in Karnataka is around Rs. 90,000 to Rs. 1 lakh depending on their attendance and travel expenses

What are the facilities from Karnataka and central government for an MLA?
 

The facilities from Karnataka and central government for an MLA are:

  • From Karnataka government: The MLAs in Karnataka are entitled to various facilities from the state government such as free accommodation in MLA quarters or house rent allowance (Rs. 20,000 per month), free electricity (up to 10,000 units per annum), free water supply (up to 40 kilolitres per month), free telephone calls (up to Rs. 50,000 per annum), free internet connection (up to Rs. 30,000 per annum), free furniture (up to Rs. 2 lakh per term), free vehicle (up to Rs. 20 lakh per term), free petrol (up to 400 litres per month), free driver (up to Rs. 15,000 per month), free security (up to two police constables), free health insurance (up to Rs. 5 lakh per annum), free railway pass (first class AC for self and spouse), free air travel (up to Rs. 2 lakh per annum), pension (Rs. 40,000 per month after retirement or death)
  • From central government: The MLAs in Karnataka are also entitled to some facilities from the central government such as free entry to national parks and monuments, free access to central government libraries and museums, free membership of various clubs and associations


ಗೃಹಸ್ಥ ಧರ್ಮ , Grihistha Dharma

ಒಬ್ಬ ಗೃಹಸ್ಥನಾದವ  ಮೂರು ರೀತಿಯಲ್ಲಿ ಇರಬೇಕಂತೆ...

  • ನೀರಿನಲ್ಲಿ ಇರುವ ದೋಣಿಯಂತೆ...
  • ನೀರಿನಲ್ಲಿರುವ ಮೀನಿನಂತೆ ...
  • ನೀರಿನಲ್ಲಿರುವ ಕಮಲದ ಪತ್ರದಂತೆ...

ದೋಣಿ ನೀರಲ್ಲಿ ತೇಲುತ್ತಾ ಸಾಗುತ್ತದೆ...  ತನ್ನ ಆಶ್ರಯಕ್ಕೆ ಬರುವವರನ್ನು ನೀರಿನಲ್ಲಿ ತೇಲಿಸುತ್ತದೆ... ಮತ್ತು ದಾಟಲು ಬಾರದ ಅವರೆಲ್ಲರನ್ನೂ ಆಚೆಯ ಬದಿ ತಲುಪಿಸುತ್ತದೆ. ಅಂದರೆ ಗೃಹಸ್ಥ ತನ್ನೊಡನೆ
ತನ್ನ ಆಶ್ರಯವನ್ನ ಬಯಸಿ ಬಂದವರಿಗೆ ಆಶ್ರಯ ಕೊಟ್ಟು ಸಂಸಾರ ಸಾಗರ ದಾಟಲು ಸಹಾಯ ಮಾಡಬೇಕು.ಸಂಸಾರದಲ್ಲಿ ಮುಳುಗದಂತೆ ನೋಡಿಕೊಳ್ಳಲೂಬೇಕು. 

ಇನ್ನೊಂದು ನೀರಿನೊಳಗಿನ ಮೀನಿನಂತೆ... ಮೀನು ನೀರೊಳಗೆ ಇದ್ದು ನೀರನ್ನು ಸ್ವಚ್ಛ ಮಾಡುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ... ಹಾಗೆಯೇ ಗೃಹಸ್ಥ ಸಮಾಜದಲ್ಲಿ ಇದ್ದು ಸಮಾಜದ ಕಶ್ಮಲವನ್ನು ತೊಳೆಯುತ್ತಾ ಸಮಾಜವನ್ನು ಶುದ್ಧವಾಗಿಸಬೇಕು.ತಾನೂ ಬದುಕಬೇಕು. 


ಕೊನೆಯದಾಗಿ ಗೃಹಸ್ಥನು ಕಮಲದ ಪತ್ರದಂತಿರಬೇಕು... ಅಂದರೆ ನೀರಲ್ಲಿ ಇದ್ದೂ ನೀರನ್ನು ಅಂಟಿಸಿಕೊಳ್ಳದಂತಿರಬೇಕು. ಗೃಹಸ್ಥ ಸಂಬಂಧಗಳನ್ನು ನಿಭಾಯಿಸುತ್ತಾ ಇದ್ದರೂ ಸಂಬಂಧಗಳಿಗೆ ಅತಿಯಾಗಿ ಅಂಟಿಕೊಳ್ಳದಂತೆ ಬಾಳಿ ಬದುಕಬೇಕಂತೆ.

ಗೃಹಸ್ಥ ಧರ್ಮ , Grihistha Dharma

ಈ ರೀತಿಯಾಗಿ ಬಾಳಿ ಬದುಕಲು ಕಲಿಯೋಣ.  ಧನ್ಯೋ ಗೃಹಸ್ಥಾಶ್ರಮಃ ಅಲ್ಲವೇ?!?. 


ಮೂರು ಸಂದರ್ಭಗಳಲ್ಲಿ ನಾವು ಮಾತನಾಡಬಾರದಂತೆ...
೧. ಸ್ನಾನ ಮಾಡುವಾಗ
೨. ಊಟ ಮಾಡುವಾಗ
೩. ಯಜ್ಞ ಯಾಗ ಮಾಡುವಾಗ
ಸ್ನಾನ ಮಾಡುವಾಗ ಮಾತನಾಡಿದರೆ ವರುಣದೇವ ನಮ್ಮ ಕಾಂತಿಯನ್ನು ಅಪಹರಿಸುತ್ತಾನಂತೆ...
ಊಟ ಮಾಡುವಾಗ ಮಾತನಾಡಿದರೆ ಯಮದೇವ ನಮ್ಮ ಆಯುಸ್ಸು ಅಪಹರಿಸುತ್ತಾನಂತೆ....
ಯಾಗ ಯಜ್ಞ ಮಾಡುವಾಗ ಮಾತನಾಡಿದರೆ ಅಗ್ನಿದೇವ ನಮ್ಮ ಸಂಪತ್ತನ್ನು ಅಪಹರಿಸುತ್ತಾನಂತೆ..
ಇಲ್ಲಿ ಯಾಕೆ ಇಂತಹಾ ನಿಯಮ ಹಾಕಿದ್ದಾರೆ.. ಈ ಮೂರು ಕ್ರಿಯೆಗಳೂ ಕೇವಲ ಕ್ರಿಯೆ ಮಾತ್ರವಲ್ಲ...
 ಸ್ನಾನ ಅನ್ನೋದು ನಮ್ಮೊಳಗಿನ ದೇವನ ಅಭಿಷೇಕ.. ಹಾಗಾಗಿ ಅಲ್ಲಿ ತಾದಾತ್ಮ್ಯತೆ ಬೇಕು...
ಊಟ ಅನ್ನೋದು ಒಂದು ಯಾಗ
 ಹಾಗಾಗಿ ಅಲ್ಲಿಯೂ ತಾದಾತ್ಮ್ಯತೆ ಬೇಕು .
ಇನ್ನು ಯಾಗ ಅನ್ನೋದರಲ್ಲಿ ಹಲವಾರು ಅನುಷ್ಠಾನಗಳಿವೆ.. ಅಲ್ಲೂ ತಾದಾತ್ಮ್ಯತೆ ಬೇಕು. ಮಾತುಗಳು ನಮ್ಮ ಈ ಏಕಾಗ್ರತೆಯನ್ನ ಭಂಗ ಗೊಳಿಸುವ ಕಾರಣ ಇಲ್ಲಿ ಮಾತಿಗೆ ನಿರ್ಬಂಧ ಹಾಕಲಾಗಿರಬೇಕು.

ವಿಷ್ಣು ಅವತಾರ , ಒಂದು ಪರಿಚಯ - Vishnu avatars, a short brief

ಅದು ಬರೇ ದೇವರ ಹತ್ತು ಅವತಾರ ಕಥೆ ಮಾತ್ರವಲ್ಲ. ಜೀವ ಜಗತ್ತಿನ ವಿಕಾಸದ ಕಥೆಯೂ ಹೌದು. ಹಿಂದೂ ಮಾನ್ಯತೆಯ ಪ್ರಕಾರ ಸೃಷ್ಟಿಯ ಆದಿಯಲ್ಲಿ ಪ್ರಪಂಚವೆಲ್ಲಾ ಜಲಮಯವಾಗಿತ್ತು. 


1. ಮತ್ಸ್ಯಾವತಾರ: ವೇದಗಳನ್ನು ಅಪಹರಿಸಿದ ತಮಾಸುರನನ್ನು ಕೊಲ್ಲಲು ಶ್ರೀಹರಿ ಮೀನಿನ ಅವತಾರವನ್ನು ತಾಳಿದನು. ಪ್ರಪಂಚದಲ್ಲಿ ಮೊದಲು ಸೃಷ್ಟಿಯಾದುವು ಜಲಚರಗಳು ಅಂತ ವಿಜ್ಙಾನಿಗಳೂ ಒಪ್ಪಿದ ಸತ್ಯ.
 

2. ಕೂರ್ಮಾವತಾರ: ಜೀವ ವಿಕಾಸದ ಮುಂದಿನ ಮೈಲುಗಲ್ಲು. ಇದು ನೆಲದಲ್ಲೂ ನೀರಿನಲ್ಲೂ ಜೀವಿಸಬಲ್ಲ ಉಭಯಚರ ಪ್ರಾಣಿ. ಸತ್ಯಯುಗದಲ್ಲಿ ಭೂಮಿಯು ಕುಸಿಯುತ್ತಾ ಹೋಗುವಾಗ ಶ್ರೀಹರಿಯು ಕೂರ್ಮನಾಗಿ ತನ್ನ ಚಿಪ್ಪಿನಿಂದ ಭೂಮಿಯನ್ನು ಎತ್ತಿ ಹಿಡಿಯಲು ಈ ಅವತಾರ. (ಸಮುದ್ರಮಥನದ ಸಮಯದಲ್ಲಿ ಮಂದರ ಪರ್ವತ ಮುಳುಗದಂತೆ ರಕ್ಷಿಸಲು ಎತ್ತಿದ ಕೂರ್ಮಾವತಾರವೇ ನಿಜ ಕೂರ್ಮಾವತಾರ ಎಂಬ ತಪ್ಪು ಕಲ್ಪನೆಯಿದೆ)

3.ವರಾಹಾವತಾರ: ಇದು ಆಮೆಯ ನಂತರ ಸೃಷ್ಡಿಸಲ್ಪಟ್ಟ ಜೀವ ಪ್ರಭೇಧ. ಜಲಚರಗಳ ನಂತರ  ಸೃಷ್ಟಿಯಾದವುಗಳು ಭೂಮಿಯ ಮೇಲಿನ ಪ್ರಾಣಿಗಳು. ಹಿರಣ್ಯಾಕ್ಷನನ್ನು ಕೊಲ್ಲಲು ಈ ಅವತಾರ.

4.ನರಸಿಂಹಾವತಾರ: ಇದು ಅತ್ತ ಪ್ರಾಣಿಯೂ ಅಲ್ಲದ ಇತ್ತ ಮನುಷ್ಯನೂ ಅಲ್ಲದ ಒಂದು ಜೀವಿ. ಜೀವ ವಿಕಾಸದ ಹಾದಿಯಲ್ಲಿ ಇದು ಮುಂದಿನ ಜೀವಿ. ಹಿರಣ್ಯ ಕಶಿಪುವಿನ ವಧೆಗೆ ಈ ಅವತಾರ.

5.ವಾಮಾನಾವತಾರ: ಇದು ಒಬ್ಬ ಕುಬ್ಜ ಮಾನವನಂತಹ ಅವತಾರ. ಬಲಿಗೆ ಮೋಕ್ಷಕರುಣಿಸಿದ ಅವತಾರ. ಆತ ಧರಿಸಿದ್ದು ಬರೇ ಕೌಪೀನ. ಬಹುಷಃ ಪ್ರಪಂಚದಲ್ಲಿ ಹುಟ್ಟಿದ, ಬಟ್ಟೆಯ ಉಪಯೋಗ ವ್ಯಾಪಕವಾಗಿಲ್ಲದ ಕಾಲದ ಮೊದಲ ಮಾನವ ಹೀಗೆಯೇ ಇದ್ದಿರಬೇಕು.

 ವಿಷ್ಣು ಅವತಾರ , ಒಂದು ಪರಿಚಯ - Dashavatara , a short brief


6.ಪರಶುರಾಮಾವತಾರ: ಇದು ಪೂರ್ಣ ಪ್ರಮಾಣದ ಮಾನವನಂತಹ ಅವತಾರ. ಆತನ ಆಯುಧ ಕೊಡಲಿ. ಬಹುಷಃ ಲೋಹಯುಗದ ಮನುಷ್ಯ ಈ ರೀತಿಯಲ್ಲೇ ಇದ್ದಿರಬೇಕು. ಆ ಕಾಲದಲ್ಲಿ ಲೋಹಗಳ ಬಳಕೆ, ಕಾಡನ್ನು ಕಡಿದು ನಾಡಾಗಿಸುವ ವಿಚಾರ ಮಾನವನಿಗೆ ತಿಳಿದಿತ್ತು. ಕೊಡಲಿಯಂತಹ ಆಯುಧಗಳ ಬಳಕೆ ಪ್ರಾರಂಭವಾಗಿತ್ತು.

7.ರಾಮಾವತಾರ: ಇದು ಪೂರ್ಣ ರೂಪದ ಸುಸಂಸ್ಕೃತ ಮಾನವನ ರೂಪ. ಜೀವ ವಿಕಾಸದ ಕೊನೆಯ ಹಂತ.

8.ಕೃಷ್ಣಾವತಾರ: ಇದು ಇಂದಿನ ಬುದ್ಧಿವಂತ, ಮುತ್ಸದ್ಧಿ ಮಾನವನ ರೂಪ. ಈ ರೂಪದಲ್ಲಿ ಅನ್ಯಾಯವನ್ನು, ಅಧರ್ಮವನ್ನು ತಡೆಯಲು ಕೆಲವೊಮ್ಮೆ ಅನ್ಯಾಯ, ಮೋಸಗಳ ಹಾದಿ ಹಿಡಿದುದೂ ಇದೆ.

ಆಧುನಿಕ ವಿಜ್ಙಾನದ ಪ್ರಕಾರ ಯಾವುದೇ ಧಾತುವಿನ ಅತೀ ಸಣ್ಣ ರೂಪವೇ ಅಣು. ಇದರ ಕೇಂದ್ರದ ಸುತ್ತ ನ್ಯೂಟ್ರಾನ್, ಪ್ರೊಟಾನ್ ಹಾಗೂ ಇಲೆಕ್ಟ್ರಾನ್ ಗಳೆಂಬ ಅಣುಗಳು ಸುತ್ತುತ್ತಿರುತ್ತವೆ. ಇವುಗಳಲ್ಲಿ ಅಪರಿಮಿತ ಶಕ್ತಿ ಅಡಗಿದೆ. ಇದರಿಂದಲೇ atom bomb ತಯಾರಾಗುತ್ತದೆ.


ನಮ್ಮ ಪುರಾಣಗಳ ಪ್ರಕಾರ ಆದಿಶಕ್ತಿಯಿಂದ ಮೂರುಮೂರ್ತಿಗಳು ಸೃಜಿಸಲ್ಪಟ್ಟರು. ಇದಕ್ಕೂ ಇಂದಿನ ಅಣು ವಿಜ್ಙಾನಕ್ಕೂ ಇರುವ ಹೋಲಿಕೆ ಕಾಕತಾಳೀಯವೇ?  ಅಂದರೆ ನಮ್ಮ ಋಷಿ ಮುನಿ ಗಳಿಗೂ ಅಣು ವಿಜ್ಞಾನದ ಬಗ್ಗೆ ಜ್ಞಾನ ಇದ್ದಿರಬೇಕು.

- ದಾಮೋದರ ಶೆಟ್ಟಿ, ಇರುವೈಲು

ದುರ್ವಿಚಾರ, avoid abuse and bad thoughts

ಮನುಷ್ಯ ಸುಖಮಯ ಜೀವನ ಸಾಗಿಸಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಇನ್ನೊಬ್ಬರಿಗೆ ಕೆಡಕು ಮಾಡಿ ತಾನು ಸುಖವಾಗಿ ಜೀವಿಸಬೇಕು ಎಂಬುವುದು ತಪ್ಪು.
ಜೀವನದಲ್ಲಿ ಸದಾ ಸದ್ವಿಚಾರ ಮಾಡಬೇಕು. ಸಂತರ, ಗುರುಗಳ  ಸಂಪರ್ಕದಿಂದ ಉತ್ತಮ ವಿಚಾರ ಮಾಡಲು ಕಲಿಯಬಹುದು.


ದುರ್ವಿಚಾರದಿಂದ ಲಾಭಕ್ಕಿಂತ ಹಾನಿ ಹೆಚ್ಚು. ಇನ್ನ್ನೊಬ್ಬರ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುತ್ತ ನಮ್ಮ ಆರೋಗ್ಯ ನಾವೇಕೆ ಹಾಳು ಮಾಡಿಕೊಳ್ಳಬೇಕು ಎಂಬ ಪರಿಜ್ಞಾನ ನಮಗಿಲ್ಲದಿರುವುದು ವಿಪರ್ಯಾಸ. ಸದಾ ಕೆಟ್ಟ ವಿಚಾರ ಮಾಡುತ್ತಿದ್ದರೆ ನಮ್ಮ ದೇಹದಲ್ಲಿನ ರಕ್ತ ಸುಡುತ್ತದೆ. ಮನಸ್ಸು ವಿಕಾರವಾಗುತ್ತದೆ. ವಿಕಾರಗೊಂಡ ಮನಸ್ಸಿನಿಂದ ಅಪರಾಧದಂತ ಕೃತ್ಯಗಳು ನಡೆಯುತ್ತವೆ. ಕೆಟ್ಟ ವಿಚಾರದಿಂದ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೆ. ಸಮಾಜದಲ್ಲಿ ಕೆಟ್ಟ ಹೆಸರು ಪಡೆಯುವಂತಾಗುತ್ತದೆ. ಇನ್ನೊಬ್ಬರಿಗೆ ಕೆಡಕು ಬಯಸುವುದು ಯಾಕೆ. ಎಲ್ಲರಿಗೂ ಒಳಿತನ್ನೆ ಬಯಸಬೇಕು. ಮನಸ್ಸು ಪ್ರಸನ್ನತೆಯಿಂದ ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಮನಸ್ಸೆ ಸರಿಯಿಲ್ಲವಾದರೆ ಕಾರ್ಯದಲ್ಲಿ ಸಿದ್ಧಿಸುವುದಿಲ್ಲ. ನಾವು ಮಾಡುವ ಕಾರ್ಯ ಮನಸಾಪೂರ್ವಕ ಮಾಡಬೇಕು. ಮನಸ್ಸು ಸರಿಯಾಗಿಟ್ಟುಕೊಳ್ಳಬೇಕಾದರೆ ಮನಸ್ಸಿಗೂ ಆಹಾರ ಕೊಡಬೇಕು. ಆಹಾರ ಅಂದರೆ ಊಟವಲ್ಲ.

 ದುರ್ವಿಚಾರ,  avoid abuse and bad thoughts

 

ಸತ್ಸಂಗ, ಸದ್ವಿಚಾರಗಳೆ ಮನಸಿನ ಊಟ. ನಾವು ಪ್ರತಿ ದಿನ ಊಟ ಮಾಡುವಂತೆ ಮನಸ್ಸಿಗೂ ಆಗಾಗಾ ಊಟ ಮಾಡಿಸಬೇಕಾಗುತ್ತದೆ. ನಾವು ಮೊದಲು ಮನಸ್ಸಿಗೆ ಸಂಸ್ಕಾರ ಕೊಡಬೇಕು. ಕೆಟ್ಟದನ್ನು ವಿಚಾರ ಮಾಡುವುದಕ್ಕೆ ಅವಕಾಶ ನೀಡಬಾರದು. ಪ್ರತಿಯೊಬ್ಬ ಮನುಷ್ಯ ಪ್ರತಿ ದಿನ ಸಹಸ್ರಾರು ಯೋಚನೆ ಮಮಾಡುತ್ತಾನೆ. ಅದರಲ್ಲಿ ಯಾವುದು ಒಳ್ಳೆಯದೋ ಅದನ್ನು ಸ್ವೀಕರಿಸಬೇಕು. ಕೆಟ್ಟ ಯೋಚನೆಗಳು ಮನಸ್ಸಿನ ಮೇಲೆ ಹಾದು ಹೊಗುತ್ತವೆ. ಅವುಗಳನ್ನು ಸ್ವೀಕರಿಸಬಾರದು. ಸದಾ ದುರ್ವಿಚಾರ ಮಾಡುವುದರಿಂದ ತಲೆಯಲ್ಲಿ ಕೆಟ್ಟ ಯೋಚನೆಗಳೆ ಸುಳಿಯುತ್ತವೆ. ಒಳ್ಳೆ ಕಾರ್ಯ ಮಾಡುವುದಕ್ಕೆ ಬಿಡುವುದಿಲ್ಲ. 

ಇನ್ನೊಬ್ಬರಿಗೆ ಕೆಡಕು ಮಾಡುವುದರಲ್ಲೆ ಖುಷಿ ಇದೆ ಎಂದೆನಿಸುತ್ತದೆ. ಆದರೆ ಮುಂದೊಂದು ದಿನ ಅರ್ಥವಾಗುತ್ತದೆ ತಾನು ಬಗೆದ ಕೆಡುಕಿನ ದುಷ್ಪರಿಣಾಮ. ತಿದ್ದಕೊಳ್ಳಬೇಕು ಎನ್ನುವಷ್ಟರಲ್ಲಿ ಆಯುಷ್ಯ ಮುಗಿದು ಹೋಗುತ್ತದೆ.
ದುರ್ವಿಚಾರ ಮಾಡಿ ನಮ್ಮತನ ಹಾಳು ಮಾಡಿಕೊಳ್ಳುವ ಬದಲು ಸದ್ವಿಚಾರ ಮಾಡುವ ಮೂಲಕ ನಾವೆಲ್ಲರೂ ಉತ್ತಮ ಸಮಾಜ ಕಟ್ಟೋಣ.

ವಸುದೈವ ಕುಟುಂಬಕಂ , Vasudeva Kutumbakam


ಹಿಂದೂ ಮನೆಯೆಂದರೆ ಅದು ಮಾಡು-ಗೋಡೆಗಳ ಬರಿಯ ಕಟ್ಟಡವಲ್ಲ; ಭಾವಬಂಧುರದ ತಾಣ, ಅನ್ಯವೆಂಬ ಭೇದವಿಲ್ಲದ ನೆಲೆ, ಬದುಕಿನ ಕಲೆಯನ್ನು ಕಲಿಯಬಹುದಾದ ಸಂಸ್ಕಾರಕೇಂದ್ರ.

ನಿಜಕ್ಕಾದರೆ ಗೊತ್ತು ಪರಿಚಯವಿಲ್ಲದ ವ್ಯಕ್ತಿ. ಎಲ್ಲಿಂದ ಬಂದ, ಯಾಕೆ ಬಂದ ಎಂಬ ಯಾವ ವಿವರವೂ ಗೊತ್ತಿಲ್ಲದೆ, ಹಾಗೆ ಗೊತ್ತುಮಾಡಿಕೊಳ್ಳುವ ಗೋಜಿಗೂ ಹೋಗದೆ ಮನೆಮಂದಿ ‘ವಿಶ್ವಂ ಭವತ್ಯೇಕನೀಡಮ್’ – ಎಂಬ ನಮ್ಮ ವಾಙ್ಮಯದ ಉಕ್ತಿಯಂತೆ ಇಡಿಯ ವಿಶ್ವವೇ ಒಂದು ಗೂಡು, ಅಂದರೆ ಮನೆ. ನೀಡಮ್ ಅಂದರೆ ಹಕ್ಕಿ ತನ್ನ ಪುಟ್ಟ ಸಂಸಾರಕ್ಕಾಗಿ ತಾನೇ ಕಟ್ಟಿಕೊಳ್ಳುವ ಗೂಡು. ಹಾಗಾಗಿ ಅದು ಬೇರೆಯವರು ನಿರ್ಮಿಸಿದ ಬಂಧನದ ಗೂಡಲ್ಲ, ಸ್ವಾಭಿಮಾನದಿಂದ ಕಟ್ಟಿದ ಸಂಬಂಧದ ಬೆಸುಗೆಯ ಸ್ವಾತಂತ್ರ್ಯವುಳ್ಳ ಗೂಡು. ವಿಶ್ವವೇ ಅಂಥ ಗೂಡೆಂದಾಗ ಅಲ್ಲಿ ಭಾವಸಂಬಂಧದ ಆಧಾರದಲ್ಲಿ ಎಲ್ಲರೂ ಒಂದೇ ಎಂಬ ತತ್ತ್ವವೂ ಇದೆ; ವಿಶ್ವವು ಎಲ್ಲರಿಗೂ ಸಮಾನವಾಗಿ ಸೇರಿದ್ದು ಎಂಬ ಆಶ್ರಯ ಭರವಸೆಯೂ ಇದೆ.

ಹೆಚ್ಚುಕಡಮೆ ಇದೇ ಧ್ವನಿಯನ್ನು ಹೊರಡಿಸುವ ಇನ್ನೊಂದು ಅಂಥ ವಾಕ್ಯ ‘ವಸುಧೈವ ಕುಟುಂಬಕಮ್’. ಇಲ್ಲಿ ಇಳೆಯನ್ನು ಒಂದು ಕುಟುಂಬವೆನ್ನಲಾಗಿದೆ. ಕುಟುಂಬದಂತೆ ಅಲ್ಲ, ಕುಟುಂಬವೇ. ಇಳೆಯೆಂದಾಗ ಇಲ್ಲಿಯ ಚರಾಚರವೆಲ್ಲವೂ ಸೇರಿದಂತೆ ಸಮಸ್ತ ಸೃಷ್ಟಿಯೂ ಒಳಗೊಂಡಿತು. ಇವೆಲ್ಲವೂ ನಮ್ಮ ಕುಟುಂಬಿಕರೇ.

ಇವೆರಡನ್ನು ಅಕ್ಕಪಕ್ಕ ಇಟ್ಟುಕೊಂಡು ನೋಡಿದರೆ ನಾವು ಯಾವುದೇ ಧಾರ್ಮಿಕ ವಿಧಿಗಳಲ್ಲಿ – ‘ಅಸ್ಮಾಕಂ ಸಹಕುಟುಂಬಾನಾಂ ಸ ಪರಿವಾರಾಣಾಂ ದ್ವಿಪದ ಚತುಷ್ಪದ ಸಹಿತಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯ ಐಶ್ವರ್ಯ…. ಕರ್ಮ ಕರಿಷ್ಯೇ’ – ಎಂದು ಎರಡು ಕಾಲಿನವುಗಳು, ನಾಲ್ಕು ಕಾಲಿನವುಗಳು ಸೇರಿದಂತೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಯಾಕೆ ಪ್ರಾರ್ಥಿಸುತ್ತೇವೆ, ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂದು ಯಾಕೆ ಹೇಳುತ್ತೇವೆ ಎಂದು ಅರ್ಥೈಸಿಕೊಳ್ಳುವುದು ಸುಲಭ. ಅದು ನಮ್ಮ ಉದಾರತೆಗಿಂತ ಮಿಗಿಲಾಗಿ ಎಲ್ಲರೂ ಎಲ್ಲವೂ ನಮ್ಮದೆಂಬ ಆತ್ಮಭಾವ ಇಲ್ಲಿ ಅತ್ಯಂತ ಸಹಜವಾಗಿ ಕೆಲಸ ಮಾಡುತ್ತಿದೆ ಅಷ್ಟೆ.

ಸರ್ವಾನುಷ್ಠಾನವಿಶೇಷ

ಸಣ್ಣ ಗುಂಪಲ್ಲಿ, ಪುಟ್ಟ ಪ್ರದೇಶದಲ್ಲಿ, ಒಂದೇ ಭಾಷೆ-ಪರಂಪರೆ-ನಂಬಿಕೆಗಳಿರುವಲ್ಲೇ ಇಂಥ ಭಾವ ಔನ್ನತ್ಯವನ್ನು ಸಾಧಿಸುವುದು ಕಷ್ಟ. ಅಂಥದ್ದರಲ್ಲಿ ಪ್ರಾಚೀನದಲ್ಲಿ ಇಡಿಯ ವಿಶ್ವದ ಕುರಿತು ಅಂಥ ಅನುಷ್ಠಾನ ಅದ್ವೈತವನ್ನು ಹೇಗೆ ಸಾಧಿಸಿದರು?

ಇದಕ್ಕೆ ಉತ್ತರವೊಂದೇ – ನಮ್ಮ ಕುಟುಂಬ ಪದ್ಧತಿ.

ನೀವು ಇದನ್ನೇಕೆ ಹಾಗೆ ಮಾಡಿದಿರಿ ಎಂಬ ಒಂದು ನಿರ್ದಿಷ್ಟ ಕ್ರಮದ ಕುರಿತ ಪ್ರಶ್ನೆಗೆ `ಅದು ನಮ್ಮ ಪದ್ಧತಿ’ ಎಂಬ ಉತ್ತರವನ್ನು ಕೇಳುತ್ತೇವೆ ನೋಡಿ. ಎಂದರೆ, ಎಲ್ಲರೂ ಅನುಷ್ಠಾನ ಮಾಡಿದಾಗ ಪದ್ಧತಿಯಾಗುತ್ತದೆ. ಎಲ್ಲರಿಗೂ ಅಂಥ ನಿರ್ದಿಷ್ಟ ಕ್ರಮವೊಂದು ಸರಿಯೆಂದು, ಉತ್ತಮವೆಂದು, ಸಮಷ್ಟಿಗೆ ಹಿತವೆಂದು ಅನಿಸಿ ಅದಕ್ಕೆ ತಕ್ಕಂತೆ ತೊಡಗಿದಾಗ ಅಲ್ಲಿ ಪದ್ಧತಿಯೊಂದು ರೂಪಗೊಳ್ಳುತ್ತದೆ. ಅದು ಪೀಳಿಗೆಯಿಂದ ಪೀಳಿಗೆಗೆ ಸಂವಹನಗೊಂಡು ಸ್ಥಾಯೀರೂಪವನ್ನು ಪಡೆಯುತ್ತದೆ. ಹಿಂದೂ ಕುಟುಂಬ ಪದ್ಧತಿ ಹಾಗೆ ಪೀಳಿಗೆಯಿಂದ ಪೀಳಿಗೆಗೆ ದಾಟಿಕೊಂಡು ಬಂದ ಸಂಸ್ಕಾರಸಂಬಂಧಿತವಾದ ಒಂದು ಪದ್ಧತಿ.

ಮನೆಯಲ್ಲಿ ಒಂದು ಮಗು ಹುಟ್ಟಿದಾಗ ಸಹಜವಾಗಿ ಎಲ್ಲರಿಗೂ ಅದು ಸಂಭ್ರಮದ ಕ್ಷಣವಾಗುತ್ತದೆ. ಹೊಸ ಸದಸ್ಯನೊಬ್ಬ ಆ ಮನೆಗೆ ಪ್ರವೇಶ ಪಡೆಯುವ ಕ್ಷಣವದು. ಆದರೆ ಆ ಹೊಸ ಸದಸ್ಯನಿಗೆ ಇದಾವುದರ ಪರಿವೆಯೇ ಇರುವುದಿಲ್ಲ. ಕ್ರಮೇಣವಾಗಿ ಮಗು ತಾನು ಒಬ್ಬನೇ ಇರುವುದಲ್ಲ, ತನ್ನ ಜತೆಗೆ ತಾಯಿ ತಂದೆ ಅಣ್ಣ ಅಕ್ಕ ದೊಡ್ಡಮ್ಮ ದೊಡ್ಡಪ್ಪ ಚಿಕ್ಕಪ್ಪ ಚಿಕ್ಕಮ್ಮ ಅಜ್ಜಿ ಅಜ್ಜ ಹೀಗೆ ಮನೆಮಂದಿಯೆಲ್ಲರೂ ಇದ್ದಾರೆ ಎಂಬ ಭರವಸೆಯನ್ನು ಹೊಂದುತ್ತದೆ ಮತ್ತು ಅವರೆಲ್ಲರನ್ನೂ ತನ್ನವರೆಂಬ ಭರವಸೆಯನ್ನು ಅನುಭವಿಸುತ್ತದೆ. ಎಲ್ಲರೂ ತನ್ನವರು ಎಂಬುದು ನಮ್ಮ ಮನೆಗಳಲ್ಲಿ ಸಿಗುವ ವಿಶಿಷ್ಟ ಭಾವ.

ಸಂಸ್ಕಾರವಿಶೇಷ

ಈ ಭಾವ ಬಲಿತಂತೆ ಮಗುವಿಗೆ ಬಲವಾದ ಸಂಸ್ಕಾರವು ಲಭ್ಯವಾಗುತ್ತದೆ. ಮಗುವಿಗೆ ಕಲಿಸುವ ಭಾಷೆಯಲ್ಲಿ, ಕೆಲಸದಲ್ಲಿ ಎಲ್ಲದರಲ್ಲೂ ಸಂಸ್ಕಾರದ ಅಂಶವಿರುವುದರ ಕಡೆಗೆ ಒತ್ತು ಇರುತ್ತದೆ. ಮಗು ಒಳ್ಳೆಯದನ್ನೇ ಮಾತಾಡಬೇಕು, ಒಳ್ಳೆಯ ಶಬ್ದಗಳನ್ನೇ ಉಚ್ಚರಿಸಬೇಕು, ಸಾತ್ತ್ವಿಕ ಧ್ವನಿಯಿಂದಲೇ ಉಸುರಬೇಕು ಎಂಬ ಆಗ್ರಹ ತಾಯಂದಿರದಾಗಿರುತ್ತದೆ. ಮಗು ಅಪ್ಪಿತಪ್ಪಿಯೂ ಕೆಟ್ಟ ಶಬ್ದವನ್ನು ಹೇಳದಂತೆ ಅವರ ಎಚ್ಚರವಿರುತ್ತದೆ. ಅಂದರೆ ತಾಯಿಯಾದವಳು ಮಗುವಿಗೆ ಭಾಷೆಯನ್ನು ಕಲಿಸುವುದೆಂದರೆ ಅದು ಭಾಷೆಯಷ್ಟೇ ಅಲ್ಲ, ಉದಾತ್ತ ಸಂಸ್ಕಾರವೂ ಕೂಡ. ತಾನು ಅತ್ಯಂತ ಸುಲಭದಲ್ಲಿ ಮತ್ತು ಕಷ್ಟವಿಲ್ಲದೆ ಮಾಡಬಹುದಾದ ಕೆಲಸವನ್ನು ಮಗುವಿನ ಕೈಯಲ್ಲಿ ತಾಯಿ ಮಾಡಿಸುತ್ತಾಳೆ. ಹಾಗೆ ಮಾಡಿಸುವಾಗ ಅಮ್ಮನಿಗೆ ಸಹಾಯ ಮಾಡುವ, ಅಜ್ಜನ ಸೇವೆ ಮಾಡುವ, ದೊಡ್ಡಪ್ಪನ ಕಷ್ಟ ನಿವಾರಿಸುವ ಹೀಗೆ ಮಗು ಮಾಡುವ ಕೆಲಸವು ಇನ್ನೊಬ್ಬರಿಗಾಗಿ ಎಂಬ ಭಾವವನ್ನು ಆ ಮಗುವಿನಲ್ಲಿ ಮೂಡಿಸುತ್ತಾಳೆ. ಅಂದರೆ, ತಾಯಿ ಮಗುವಿಗೆ ಕೆಲಸವನ್ನು ಮಾತ್ರ ಕಲಿಸುವುದಿಲ್ಲ, ಜತೆಜತೆಗೇ ಸಂಸ್ಕಾರವನ್ನು ಕೂಡ. ಹೀಗೆ ತಾಯಿ ಮಗುವಿಗೆ ಏಕಕಾಲದಲ್ಲಿ ವಾತ್ಸಲ್ಯಮಯೀ ಅಮ್ಮನೂ ಆಗುತ್ತಾಳೆ, ತಿದ್ದಿ ತೀಡುವ ಗುರುವೂ ಆಗುತ್ತಾಳೆ. ಕ್ರಮೇಣ ಮನೆಮಂದಿಯೆಲ್ಲ ಇಂಥ ಸಂಸ್ಕಾರಪ್ರದಾನ ಮಾಡುವಲ್ಲಿ ತಾಯಿಗೆ ಸಹಕಾರಿಗಳಾಗುತ್ತಾರೆ, ಮಗುವಿಗೆ ಅನೌಪಚಾರಿಕ ಮಾರ್ಗದರ್ಶಕರಾಗುತ್ತಾರೆ. ಮಗು ತಮ್ಮದೆಂಬ ಭಾವ ಎಲ್ಲರದು. ಎಲ್ಲರೂ ತನ್ನವರೆಂಬ ಭಾವ ಮಗುವಿನದು. ಆಡುವ ಆಟದಲ್ಲಿ, ಮಾತಾಡುವ ಭಾಷೆಯಲ್ಲಿ, ಉಣ್ಣುವ ಊಟದಲ್ಲಿ ಹೀಗೆ ಎಲ್ಲದರಲ್ಲೂ ಮಗುವಿಗೆ ಸಂಸ್ಕಾರ, ಏಕಾತ್ಮಭಾವಗಳು ಅತ್ಯಂತ ಸಹಜವಾಗಿ ಲಭಿಸುತ್ತ ಹೋಗುತ್ತವೆ.

ಗಾರ್ಹ ವೈಶಿಷ್ಟ್ಯ

ಹಿಂದೂ ಮನೆಯೆಂದರೆ ಅದು ಮಾಡು-ಗೋಡೆಗಳ ಬರಿಯ ಕಟ್ಟಡವಲ್ಲ; ಭಾವಬಂಧುರದ ತಾಣ, ಅನ್ಯವೆಂಬ ಭೇದವಿಲ್ಲದ ನೆಲೆ, ಬದುಕಿನ ಕಲೆಯನ್ನು ಕಲಿಯಬಹುದಾದ ಸಂಸ್ಕಾರಕೇಂದ್ರ. ‘ಅತಿಥಿ ದೇವೋ ಭವ’ ಎನ್ನುವುದು ಶಾಸ್ತ್ರದ ಸೂಚನೆ. ಅದರ ಅನುಷ್ಠಾನರೂಪವನ್ನು ಹಿಂದೂ ಮನೆಯಲ್ಲಿ ಕಾಣಬಹುದು. ಅತಿಥಿ ಎಂದರೆ ಕರೆಯದೆ ಬಂದವರು ಎನ್ನುವ ಒಂದು ವಿವರವಿದೆ. ಕರೆದು ಬಂದವರು ಅಭ್ಯಾಗತರು ಎಂಬ ನೆಲೆಯಲ್ಲಿ ಈ ವಿವರವಿರುವುದು. ಅತಿಥಿ ಅವರನ್ನು ಮನೆಗೆ ಬಂದ ದೇವರೆಂದೇ ಪರಿಗಣಿಸಿ, ದೇವಸಮಾನವಾಗಿ ಉಪಚರಿಸಿ, ತೃಪ್ತಭಾವವನ್ನು ಅವರಲ್ಲಿ ಕಂಡ ಬಳಿಕ, ಇನ್ನು ತಮ್ಮಿಂದ ಏನಾಗಬೇಕೆಂದು ವಿಚಾರಿಸಿ, ಅದನ್ನು ಯಥೋಚಿತವಾಗಿ ಪೂರೈಸಿದರೆ ಆತಿಥ್ಯ ಮಾಡಿದಂತಾಗುತ್ತದೆ. ಆತಿಥ್ಯದ ಅನುಷ್ಠಾನವನ್ನು ಮಗು ಕಣ್ಣಾರೆ ನೋಡುತ್ತದೆ, ಕೈಯಾರೆ ತೊಡಗುತ್ತದೆ, ಮನಸಾರೆ ಅನುಭವಿಸುತ್ತದೆ.

ಮನೆಯಲ್ಲಿ ಎಲ್ಲ ವಯೋಮಾನದವರೂ ಇರುತ್ತಾರೆ. ಮುಖ್ಯವಾಗಿ ಏರುವಯಸ್ಸಿನವರು ಮತ್ತು ಇಳಿವಯಸ್ಸಿನವರು. ಇಳಿವಯಸ್ಸಿನಲ್ಲಿ ಆರೋಗ್ಯದ ಸಮಸ್ಯೆ. ಏರುವಯಸ್ಸಿನಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸುವ ಹುಮ್ಮಸ್ಸು. ಮನೆಯಲ್ಲಿ ಇವೆರಡು ಪರಸ್ಪರ. ಸಮಸ್ಯೆ ತಮ್ಮವರನ್ನು ಕಾಡಿದೆಯೆಂದಾಗ ಅದರ ಪರಿಹಾರಕ್ಕೆ ಧಾವಿಸುವುದು, ಕಾಳಜಿಯಿಂದ ತೊಡಗುವುದು ಮನೆಯ ಸದಸ್ಯರೆಲ್ಲರಲ್ಲಿ ಕಾಣಬಲ್ಲ ಸಹಜ ಚಿತ್ರಣ. ಮನೆ ತಮ್ಮದು, ಮನೆಮಂದಿ ತಮ್ಮವರು, ಯಾವುದೇ ರೀತಿಯ ಸಮಸ್ಯೆಯಿಂದ ಮನೆಯೂ ಮುಕ್ತವಾಗಿರಬೇಕು, ಮನೆಮಂದಿಯೂ ಮುಕ್ತವಾಗಿರಬೇಕು – ಮನೆಯ ಯಾವುದೇ ಸದಸ್ಯ ಆಲೋಚಿಸುವ ರೀತಿಯಿದು.

ಮನೆಮಂದಿಯೆಲ್ಲ ಪರಸ್ಪರರ ಬಗೆಗೆ, ಮುಖ್ಯವಾಗಿ ಹಿರಿಯರ ಬಗೆಗೆ, ಒಟ್ಟಾರೆಯಾಗಿ ಮನೆಯ ಬಗೆಗೆ ತೋರುವ ಇಂಥ ಕಾಳಜಿಯನ್ನು ಮಗು ಕಂಡನುಭವಿಸುತ್ತಿರುತ್ತದೆ. ಯಾರೂ ಅದಕ್ಕೆ ಮನೆಯ, ಮನೆಜನರ ಹಿತವನ್ನು ಬಯಸಬೇಕೆಂದು ಹೇಳಿಕೊಡಬೇಕಿಲ್ಲ, ಕಲಿಸಬೇಕಿಲ್ಲ, ಸಹಜವಾಗಿಯೇ ಅಂಥ ಭಾವನೆ ಅದರ ಸ್ವಭಾವವಾಗುತ್ತದೆ.  ಗೊತ್ತು ಪರಿಚಯ ಇಲ್ಲದ ಅತಿಥಿಯನ್ನು ದೇವರೆಂದು ತಿಳಿವ ಹಿನ್ನೆಲೆಯ ಇಂಥ ಕೌಟುಂಬಿಕ ಪರಿಸರದಲ್ಲಿ ಸಮಾಜಬಂಧುಗಳನ್ನು ತನ್ನವರೆಂದು ಭಾವಿಸುವುದು ಸಹಜವೇ ಇದೆ. ಸಮಾಜವೂ ತನ್ನದೇ, ಸಮಾಜಬಂಧುಗಳೂ ತನ್ನವರೇ. ಅಲ್ಲಿ ಎದುರಾಗಬಲ್ಲ ಎಂಥದ್ದೇ ಸವಾಲು ತನಗೆದುರಾಗಿರುವ ಸವಾಲೇ ಸರಿ. ಅದರ ಪರಿಹಾರಕ್ಕೆ ತೊಡಗುವುದೂ ತನ್ನದೇ ಕರ್ತವ್ಯ. ಸಮಾಜದ, ಸಮಾಜಬಂಧುಗಳೆಲ್ಲರ ಕುರಿತು ಇಂಥ ಭಾವ ಮಗುತನದಲ್ಲೇ ಉದಾತ್ತಗೊಳ್ಳಲು ಮನೆ ಆಧಾರವಾಗುತ್ತದೆ.

ಮನೆಯ ಸದಸ್ಯನಾಗುವುದೆಂದರೆ ಮನೆಮಂದಿಯ ಜತೆ ಸಂಬಂಧ ಹೊಂದುವುದು. ಯಾರದೇ ಜತೆಗಿನ ಸಂಬಂಧಕ್ಕೆ ಮುಖ್ಯವಾಗಿ ಬೇಕಾದುದು ಭಾವದ್ರವ್ಯ. ತಾಯಿ ಮಗುವಿಗೆ ಅಪ್ಪನಿಂದ ತೊಡಗಿ ಒಬ್ಬೊಬ್ಬರನ್ನೇ ಸಂಬಂಧದ ನೆಲೆಯಲ್ಲಿ ಪರಿಚಯಿಸುತ್ತ ಹೋದಂತೆಲ್ಲ, ಅವರೆಲ್ಲ ತನಗಾಗಿ ಮಾಡುವ ಕಾರ್ಯವನ್ನು ನೋಡಿದಂತೆಲ್ಲ ಮಗುವಿನ ಭಾವಕೋಶ ಬೆಳೆಯುತ್ತ ಹೋಗುತ್ತದೆ. ಇದು ಬೆಳೆಬೆಳೆದು ಮನೆಮಂದಿಯ ಬಗೆಗೆ ಪ್ರೀತಿವಾತ್ಸಲ್ಯದ ಸ್ವರೂಪವನ್ನೂ ಸಮಾಜಬಂಧುಗಳ ಬಗೆಗೆ ಸ್ನೇಹಪ್ರೇಮಳ ಸ್ವರೂಪವನ್ನೂ ಪಡೆಯುತ್ತದೆ. ನಮ್ಮ ವಾಙ್ಮಯ ಸೂಚಿಸುವಂತೆ; ಮನುಷ್ಯ ಬದುಕಿನ ಆತ್ಯಂತಿಕ ಧ್ಯೇಯ ಪರಮಸತ್ಯದ ಜತೆಗಿನ ಸಂಬಂಧವನ್ನು ಕಂಡುಕೊಳ್ಳುವುದು. ಇದನ್ನು ಕಂಡುಕೊಳ್ಳಲು ಮನೆಮಂದಿಯ, ಸಮಾಜಬಂಧುಗಳ ಜತೆಗಿನ ಸಂಬಂಧ ಪೂರಕ, ಪ್ರಾರಂಭಿಕ ಮೆಟ್ಟಿಲು. ಪರಮಸತ್ಯವನ್ನು ಉಪನಿಷತ್ತು ‘ಅದು’ ಎಂದಿತು, ಉಳಿದ ಶಾಸ್ತ್ರಗಳು ಪರಬ್ರಹ್ಮ ಎಂದವು, ಪುರಾಣಗಳು ಭಗವಂತ ಎಂದವು, ಶ್ರೀಸಾಮಾನ್ಯರು ದೇವರು ಎಂದರು. ಏನೇ ಎನ್ನಿ, ಅದರ ಕುರಿತು ನಾವು ನಮ್ಮೊಳಗೆ ಬೆಳೆಸಿಕೊಳ್ಳಬೇಕಾದ ಭಾವ ಮುಖ್ಯ. ಭಾವಕೋಶವು ಈ ನಿಟ್ಟಿನಲ್ಲಿ ಬೆಳೆಬೆಳೆದು ಶ್ರದ್ಧೆಯಾಗುತ್ತದೆ, ಭಕ್ತಿಯಾಗುತ್ತದೆ. ಜ್ಞಾನದೆತ್ತರವನ್ನು ತಲುಪಬಲ್ಲದಾಗುತ್ತದೆ. ಮನುಷ್ಯನ ಭಾವಕೋಶವನ್ನು ಹಾಗೆ ಔನ್ನತ್ಯಕ್ಕೆ ಬೆಳೆಸಲು ಹಿಂದೂ ಮನೆಯಲ್ಲಿರುವ ಒಂದು ಸುಂದರ ವ್ಯವಸ್ಥೆಯೆಂದರೆ ದೇವರ ಕೋಣೆ. ಅದೇ ಸಮಾಜದ ವ್ಯವಸ್ಥೆಯಲ್ಲಿ ದೇವಸ್ಥಾನ, ಮಠಮಂದಿರಗಳು. ಮನುಷ್ಯನನ್ನು ಹಿಂದೂ ಮನೆಯು ಮನೆಗೆ ಸೀಮಿತಗೊಳಿಸದೆ ಉತ್ತಮ ಮನೆಸದಸ್ಯನಾಗುವುದರ ಜತೆಗೆ ಸಮಾಜಬಂಧುವೂ ಆಗುತ್ತ ವಿಶ್ವಕುಟುಂಬಿಯನ್ನಾಗಿ ಆತನ ವ್ಯಾಪ್ತಿಯನ್ನು ಹಿಗ್ಗಿಸಿ ಅಲ್ಲಿಗೇ ನಿಲ್ಲದೆ ದೇವನಾಗುವತ್ತ ಸಾಗಲು ದಾರಿ ಮಾಡಿಕೊಡುತ್ತದೆ.

ಯಾವ ಗೀತೆಯನ್ನೂ ಓದದೆ, ಮನೆಯಲ್ಲಿ ಲಭಿಸುವ ಇಂಥ ಸಂಸ್ಕಾರದಿಂದ ಮಗು ಕರ್ಮಯೋಗಿಯೂ ಆಗುತ್ತದೆ, ವಿಶ್ವಕುಟುಂಬಿಯೂ ಆಗುತ್ತದೆ.

ಮನೆ ವಿಶ್ವವ್ಯವಸ್ಥೆಯ ಅತಿಸಣ್ಣ ಘಟಕ. ‘ವಿಶ್ವನೀಡಮ್’ ಎಂಬಲ್ಲಿ, ‘ವಸುಧಾ ಕುಟುಂಬ’ ಎಂಬಲ್ಲಿ ಈ ಎರಡು ‘ಅತಿ’ ಎಂದರೆ ಗಡಿಗಳನ್ನು ಅಕ್ಕಪಕ್ಕ ಇಟ್ಟು ತಾತ್ತ್ವಿಕ ಸೂತ್ರವನ್ನು ನೀಡಲಾಗಿದೆ. ಎರಡು ‘ಅತಿ’ ಎಂದರೆ: ಒಂದು – ಇನ್ನದಕ್ಕಿಂತ ದೊಡ್ಡದಿಲ್ಲದ ವಿಶ್ವ ಮತ್ತು ಭೂಮಿ, ಎರಡು – ಇನ್ನಿದಕ್ಕಿಂತ ಸಣ್ಣದಿಲ್ಲದ ಮನೆ ಅಥವಾ ಕುಟುಂಬ

ಭಾವ ವೈಶಿಷ್ಟ್ಯ

ವಿಶ್ವವೂ ಮನೆಯೂ ಅಕ್ಕಪಕ್ಕವೇ ಇರಬೇಕು. ಯಾಕೆಂದರೆ ಅವೆರಡರ ನಡುವೆ ಅವಿನಾಭಾವ ಸಂಬಂಧವಿದೆ. ವಿಶ್ವದ ಹ್ರಸ್ವರೂಪ ಮನೆ. ಮನೆಯ ವಿರಾಡ್‍ರೂಪ ವಿಶ್ವ. ಮನೆಮಂದಿ ತಮ್ಮೊಳಗೆ ಪರಸ್ಪರ ಏನೇನೆಲ್ಲವನ್ನು ಭಾವಿಸುತ್ತಾರೋ ಅವನ್ನೇ ವಿಶ್ವದೊಳಗಣ ಎಲ್ಲರೂ ಪರಿಭಾವಿಸಬೇಕು. ಇದು ನಿಜವಾದ ವೈಶ್ವಿಕಭಾವ.

ನಮ್ಮೀ ವೈಶ್ವಿಕಭಾವಕ್ಕೆ ಆಧಾರಭೂತವಾದ ವಿಚಾರವೆಂದರೆ ಹಿಂದೂ ರಾಷ್ಟ್ರೀಯತೆ. ಹಿಂದೂ ರಾಷ್ಟ್ರೀಯತೆಯು ವೇದ, ಉಪನಿಷತ್, ಗೀತೆ, ರಾಮಾಯಣ, ಮಹಾಭಾರತ ಇತ್ಯಾದಿ ನಮ್ಮ ಪ್ರಾಚೀನ ವಾಙ್ಮಯಗಳಿಂದ ತಾತ್ತ್ವಿಕ ಸಂಗತಿಗಳನ್ನು ಸ್ವೀಕರಿಸಿ ಪರಿಪುಷ್ಟಗೊಂಡಿದೆ. ಹಿಂದೂ ಮನೆಯ ಮೂಲದ್ರವ್ಯವೂ ಇವುಗಳಿಂದಲೇ ಲಭಿಸಿದ್ದು. ಹೀಗೆ ನಮ್ಮೀ ರಾಷ್ಟ್ರೀಯತೆಯ ಒಂದು ತುದಿ ಮನೆಯಲ್ಲಿದ್ದು ಮತ್ತೊಂದು ವಿಶ್ವವನ್ನು ಒಳಗೊಂಡಿದೆ.

ಮನೆಯನ್ನು ವಿಶ್ವದೋಪಾದಿಯಲ್ಲಿ ವಿಸ್ತರಿಸುವ, ವಿಶ್ವವನ್ನು ಮನೆಯ ಸ್ಫೂರ್ತಿಯಿಂದ ಉನ್ನತೀಕರಿಸುವ ನಮ್ಮೀ ವಿಚಾರದ ವ್ಯಾವಹಾರಿಕ ಬುನಾದಿ – ಹಿಂದೂ ಕುಟುಂಬ ಪದ್ಧತಿ.

ಈ ಹಿನ್ನೆಲೆಯಲ್ಲಿ – ಭಾರತೀಯ ಪರಂಪರೆಯಲ್ಲಿ ಭಾರತದಲ್ಲಿ ನಾಲ್ಕು ಆಶ್ರಮಗಳ ಪೈಕಿ ಗೃಹಸ್ಥಾಶ್ರಮ ಅತ್ಯಂತ ಶ್ರೇಷ್ಠ. ಒಬ್ಬ ಸುಭಾಷಿತಕಾರ ಹೇಳುವಂತೆ:

ಯಥಾ ವಾಯುಂ ಸಮಾಶ್ರಿತ್ಯ ವರ್ತಂತೇ ಸರ್ವಜಂತವಃ |

ತಥಾ ಗೃಹಸ್ಥಮಾಶ್ರಿತ್ಯ ವರ್ತಂತೇ ಸರ್ವ ಆಶ್ರಮಾಃ ||


(ಹೇಗೆ ವಾಯುವನ್ನು ಆಶ್ರಯಿಸಿ ಎಲ್ಲ ಜೀವಿಗಳೂ ಬದುಕುತ್ತವೆಯೋ, ಹಾಗೆಯೇ ಗೃಹಸ್ಥನನ್ನು ಆಶ್ರಯಿಸಿ ಎಲ್ಲ ಆಶ್ರಮಗಳೂ ಇರುತ್ತವೆ.)

ಚಾಣಕ್ಯರು ಕೂಡ ‘ಧನ್ಯೋ ಗೃಹಸ್ಥಾಶ್ರಮಃ’ ಎಂದು ಹೇಳಿದರು. ಈ ಧನ್ಯತೆಯು ಲಭಿಸಬೇಕಾದರೆ, ಮನೆಯಲ್ಲಿ ಇರಲೇಬೇಕಾದ, ಅನುಸರಿಸಲೇಬೇಕಾದ ಹತ್ತು ವಿಷಯಗಳನ್ನು ಕ್ರೋಡೀಕರಿಸಿ ಚಾಣಕ್ಯರು ಹೀಗೆ ಹೇಳುತ್ತಾರೆ:

 ವಸುದೈವ ಕುಟುಂಬಕಂ , Vasudeva Kutumbakam


ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ಮನೋಹಾರಿಣೀ

ಸನ್ಮಿತ್ರಂ ಸುಧನಂ, ಸ್ವಯೋಷಿತಿ ರತಿಃ ಚಾಜ್ಞಾಪರಾಃ ಸೇವಕಾಃ |

ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮೃಷ್ಟಾನ್ನಪಾನಂ ಗೃಹೇ

ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||


ಸಾನಂದಂ ಸದನಂ: ನಗುನಗುತ್ತಾ ಇರುವ ಮನೆ
ಸುತಾಶ್ಚ ಸುಧಿಯಃ: ಇಲ್ಲಿ ಬುದ್ಧಿವಂತ ಮಕ್ಕಳು ಎನ್ನುವುದರ ಅರ್ಥ ಭಾರತೀಯ ಸಂಸ್ಕೃತಿಯಲ್ಲಿ ಶರೀರ, ಮನಸ್, ಬುದ್ಧಿ ಮತ್ತು ಏಕಾತ್ಮತಾ ಭಾವ ಇದ್ದರೆ ಮಾತ್ರ ಬುದ್ಧಿವಂತ ಎನಿಸಿಕೊಳ್ಳುವುದು. ಹಣವಿದ್ದಾಗ ಅಲ್ಲ. ಮಕ್ಕಳಲ್ಲಿ ಈಗ ಶರೀರ ಮನಸ್ ಹಾಗೂ ಬುದ್ಧಿಯ ಬೆಳವಣಿಗೆಗೆ ವ್ಯವಸ್ಥೆ ಇದೆ. ಆದರೆ ಏಕಾತ್ಮತಾ ಭಾವವನ್ನು ಬೆಳೆಸಲು ಅಗತ್ಯವಾದಂಥ ವಾತಾವರಣ ಇಲ್ಲ. ಅದು ಇಲ್ಲದಿದ್ದರೆ ಅವರು ಬುದ್ಧಿವಂತರಾಗುವುದಿಲ್ಲ.
ಕಾಂತಾ ಮನೋಹಾರಿಣೀ: ಮನಸ್ಸನ್ನು ಗೆಲ್ಲುವ ಪತ್ನಿ;
ಸನ್ಮಿತ್ರಂ ಸುಧನಂ: ನೈಜ ಸಂಪತ್ತೆಂದರೆ ಯೋಗ್ಯ ಮಿತ್ರರು;
ಸ್ವಯೋಷಿತಿ ರತಿಃ: ತನ್ನ ಪತ್ನಿಯೊಂದಿಗೆ ಮಾತ್ರ ಗಂಡು-ಹೆಣ್ಣಿನ ಸಂಬಂಧ; ಉಳಿದ ಎಲ್ಲ ಹೆಣ್ಣುಮಕ್ಕಳು ತಾಯಿಯಂತೆ;
ಆಜ್ಞಾಪರಾಃ ಸೇವಕಾಃ: ಸೇವಕನನ್ನು ಮನೆಯ ಸದಸ್ಯನಂತೆ ಎಂದು ತಿಳಿದುಕೊಂಡಾಗ ನಮ್ಮ ಅನಿಸಿಕೆಗೆ ತಕ್ಕಂತೆ ಆತ ಕೆಲಸ ಮಾಡುತ್ತಾನೆ. ಮನೆಯಲ್ಲಿ ಕೆಲಸ ಮಾಡುವವರನ್ನು ನಮ್ಮ ಮನೆಯ ಸದಸ್ಯರಂತೆ ಭಾವಿಸುವುದು;
ಆತಿಥ್ಯಂ: ಅತಿಥಿ ಸತ್ಕಾರ;
ಶಿವಪೂಜನಂ: ಪ್ರತಿನಿತ್ಯ ದೇವರ ಪೂಜೆ; ಪೂಜೆ ಎಂದರೆ ಆರತಿ, ಗಂಟೆ ಇಷ್ಟೆ ಅಲ್ಲ. ಕೋಣೆಯಲ್ಲಿ ಕುಳಿತುಕೊಂಡು ಆತ್ಮಾವಲೋಕನ ಮಾಡುತ್ತಾ ತನ್ನನ್ನು ತಾನು ದೇವತ್ವದ ಎತ್ತರಕ್ಕೆ ಏರಿಸುವ ನಿಜವಾದ ಕಾರ್ಯವೇ ಪೂಜೆ;
ಮೃಷ್ಟಾನ್ನಪಾನಂ ಗೃಹೇ: ಮನೆಯಲ್ಲಿ ಅಡುಗೆ; ಹೊಟೇಲ್‍ನಲ್ಲಿ ಅಲ್ಲ. ಶನಿವಾರ, ಆದಿತ್ಯವಾದ ಅಡುಗೆಕೋಣೆಗೆ ರಜೆ ಇಲ್ಲ;
ಸಾಧೋಃ ಸಂಗಮುಪಾಸತೇ: ಸಜ್ಜನರ ಸಂಗ;

ಇವಿಷ್ಟೂ ಯಾವ ಮನೆಯಲ್ಲಿ ಇರುತ್ತವೆಯೋ, ಆ ಮನೆಯ ಮಕ್ಕಳು ಸಹಜವಾಗಿ ವಿಶ್ವವನ್ನು ಒಂದು ಕುಟುಂಬವಾಗಿ ನೋಡುವಂತಹ ಶಕ್ತಿಯನ್ನು ಪಡೆಯುತ್ತಾರೆ.

ಈ ದೃಷ್ಟಿಯಲ್ಲಿ, ವಿಶ್ವಕ್ಕೆ ಕೌಟುಂಬಿಕ ಜೀವನಮೌಲ್ಯಗಳ ವಿಕಾಸದ ಕಾರಣದಿಂದ ‘ವಸುಧೈವ ಕುಟುಂಬಕಮ್’ ಎಂಬ ವಿರಾಡ್‍ರೂಪ ಪಡೆಯಲು ಚಾಣಕ್ಯನ ಈ ಸೂತ್ರಗಳು ನಮಗೆ ಸಹಕಾರಿಯಾಗುತ್ತವೆ.

ಸಂಸ್ಕಾರವೆಂದರೇನು? What is Sanskar

ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..!

ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..!

ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಹೆರಳ ತುಂಬ ಹೂವು ಸಂಸ್ಕಾರ..!

ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ..!

ಯಜಮಾನಿಕೆ ದೊಡ್ಡಸ್ತಿಕೆ ಇದ್ದರು ಚಿಕ್ಕವರಿಗೆ ತೋರಿಸೋ ಪ್ರೀತಿ ವಿಶ್ವಾಸ ಕಳಕಳಿ ಸಂಸ್ಕಾರ..!

ನಮ್ಮ ನಡವಳಿಕೆಯಲ್ಲಿರೋ ನಯ ವಿನಯ ನಾಜೂಕತನ ಸಂಸ್ಕಾರ..!

ಓದು ಬರಹ ಉದ್ಯೋಗದ ಹೊರತಾಗಿಯೂ ಹೊರುವ ಜವಾಬ್ದಾರಿ ಸಂಸ್ಕಾರ..!

ಖಾಯಿಲೆಯ ತಂದೆಯನ್ನು ಮಗನಂತೆಯೇ ಜೋಪಾನ ಮಾಡೋದು ಸಂಸ್ಕಾರ..!

ಸದಾ ಕುಟುಂಬದ ಕಣ್ಣಾದ ತಾಯಿಯ ಬೇಕು ಬೇಡ ಕೇಳಿ ಈಡೇರಿಸುವದು ಸಂಸ್ಕಾರ..!

ಮುದ್ದಿನ ಮಗ ತಪ್ಪು ಮಾಡಿದಾಗ ಮೃದು ಮಾತಿನಿಂದ ದಾರಿಗೆ ತರೋದು ಸಂಸ್ಕಾರ..!

ಅಡ್ಡ ದಾರಿ ತುಳಿತಾ ಇರೋ ಮಗಳಿಗೆ ನಲ್ಮೆಯ ಮಾತುಗಳಿಂದ ಮನವೊಲಿಸುವುದು ಸಂಸ್ಕಾರ...!

ತನ್ನ ನೂರು ಕಷ್ಟಗಳ ಮಧ್ಯೆಯೂ ಸಹಾಯ ಬೇಡಿದೊಡನೆ ಸಹಾಯ ಮಾಡೊ ಗೆಳೆಯನ ಗುಣ ಸಂಸ್ಕಾರ..!

ಸಣ್ಣ ಸಂಪಾದನೆಯಲ್ಲಿ ತನ್ನ ಇಷ್ಟಾ ನಿಷ್ಟ ಮರೆತು ನಿಮ್ಮನ್ನೊಪ್ಪಿ ಬಂದ ಹೆಂಡತಿಯ ಉದಾರ ಗುಣ ಸಂಸ್ಕಾರ..! 



 ಸಂಸ್ಕಾರ ಎಲ್ಲೆಲ್ಲೂ ಇದೆ.. ಅಂಗಳದ ರಂಗೋಲಿಯಲ್ಲಿ..ದೇವರ ಮುಂದೆ ದೀಪದಲ್ಲಿ..
ಅಡುಗೆಯಾದೊಡನೆ ಬರುವ ಘಮದಲ್ಲಿ.. ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ತಾರದಲ್ಲಿ..
ತುಳಸಿ ಕಟ್ಟೆ ಮುಂದೆ ಕೈ ಮುಗಿವ ಕೈಗಳಲ್ಲಿ.. ತಟ್ಟೆಯ ಮುಂದೆ ಕೂತಾಗ ಬಡಿಸುವವನ ಕೈಯಲ್ಲಿ.. ಹುಶಾರಿಲ್ಲದೆ ಮಲಗಿದಾಗ ಏನಾಯಿತು ಎಂದು ಮರಗುವವರ ಮನದಲ್ಲಿ..

ನಮ್ಮ ನಡವಳಿಕೆ ಗುಣ ಮಾತು ನಡತೆಯಲ್ಲಿ ಸಂಸ್ಕಾರ ಅಡಗಿದೆ..!

ಲೋಕಕಲ್ಯಾಣಕ್ಕಾಗಿ ನಿಜವಾದ ಸಂತರು

ಸಜ್ಜನರು ಕೆಲ ವಿಶೇಷ ವ್ಯಕ್ತಿಗಳು ಇಂದ್ರನ ವಜ್ರದ ತರಹ ಸಮಯ ಬಂದಾಗ ಅತಿ ಕಠೂರವಾಗಿರುತ್ತಾರೆ. ಅದೇ ತರಹ ಪುಷ್ಪದ ಹಾಗೆ ಅತಿ ಕೋಮಲವಾಗಿರುತ್ತಾರೆ. ಇಂತಹ ವ್ಯಕ್ತಿಗಳು ಲೋಕಕ್ಕೆ ಲೋಕದ ವ್ಯವಹಾರಕ್ಕೆ ಭಿನ್ನವಾಗಿ ಎತ್ತರದಲ್ಲಿ ಇರುತ್ತಾರೆ. ಇವರ ಹೃದಯವನ್ನು ತಿಳಿಯಲು ಯಾರು ಸಮರ್ಥರು.?


ಅಂತಹ ಕೆಲ ಸಂತರು ನಮ್ಮ ದೇಶದಲ್ಲಿ ಆಗಿ ಹೋಗಿದ್ದಾರೆ ಹಾಗೂ ಈಗಲೂ ಇದ್ದಾರೆ. ಸಂತ ಶ್ರೀ ಚಾಣಕ್ಯ ಸಂತ ಶ್ರೀ ಸಮರ್ಥ ರಾಮದಾಸರು ಸಂತ ಶ್ರೀ ವಿದ್ಯಾರಣ್ಯರು 

ಇಂದು ಕೆಲ ಸಂತರು ಕೇವಲ ತಮ್ಮ ಮಠದ ತಮ್ಮ ಶಿಷ್ಯರ ಅಭಿವೃದ್ಧಿ ನೋಡುತ್ತಾ ತಾವು ಬಹಳ ಸಾತ್ವಿಕರಾಗಿ ಸಂಭವಿತರಾಗಿ ದೇಶ, ಸಮಾಜ ಏನೇ ಆಗಲಿ ತಾವು ಮಾತ್ರ ಯಾವುದೇ ವಿವಾದಗಳಿಗೆ ಸಿಕ್ಕಿಹಾಕಿಕೊಳ್ಳದೆ ದೇವರ ಪೂಜೆ,ಜಪ-ತಪಗಳಲ್ಲಿ ಮೌನವಾಗಿ ಕಾಲ ಕಳೆಯುತ್ತಾರೆ.

ಇನ್ನೂ ಕೆಲವು ಸಂತರು ನೀಲಕಂಠನ ತರ ತಾವು ಲೋಕನಿಂದೆ ಸಮಾಜದ ವಿರೋಧ ಲೆಕ್ಕಿಸದೆ ಲೋಕಕಲ್ಯಾಣಕ್ಕಾಗಿ ಸದಾ ದುಡಿಯುತ್ತಿರುತ್ತಾರೆ ಇಂಥವರನ್ನು ನಿಜವಾದ ಸಂತರು ಎಂದರೆ ತಪ್ಪಾಗಲಿಕ್ಕಿಲ್ಲ.

1. ಚೈನಾ ದೇಶದ ಫಾಹಿಯಾನ್ ಎಂಬ ಪರ್ಯಟನಕಾರ ಬಹಳ ದಿನಗಳ ಹಿಂದೆ ಭಾರತದ ಮಗದ ರಾಜ್ಯಕ್ಕೆ ಬಂದಿದ್ದ. ನಂತರ ಆತ ತನ್ನ ಪುಸ್ತಕದಲ್ಲಿ ಬರೆಯುತ್ತಾನೆ.ಮಗಧ ರಾಜ್ಯದಲ್ಲಿ ನಾನು ಪ್ರಾಮಾಣಿಕ ಕಠೋರ ನಿರ್ಣಯ ತೆಗೆದುಕೊಳ್ಳಬಲ್ಲ ಅದ್ಭುತ ಮೇಧಾ ಶಕ್ತಿ ಸರಳ ಸಾತ್ವಿಕ ನಿರಾಡಂಬರ ವಾಗಿ ಜೀವಿಸುತ್ತಿದ್ದ ಶ್ರೀ ಚಾಣಕ್ಯ ಎಂಬ ರಾಜಕೀಯ ಸಂತನನ್ನು ನೋಡಿದ್ದೆ ಎಂದು ಪುಸ್ತಕದಲ್ಲಿ ಬರೆದಿದ್ದಾನೆ.


ಒಮ್ಮೆ ಚಂದ್ರಗುಪ್ತ ರಾಜನಿಗೆ ತನ್ನ ಅತಿ ಸುಂದರ ಮಗಳನ್ನು ಕೊಟ್ಟು ವಿವಾಹ ಮಾಡಬೇಕೆಂದು ಒಬ್ಬ ರಾಜ ಬಂದಿರುತ್ತಾನೆ. ಆತನ ಅತಿ ಸುಂದರ ಮಗಳನ್ನು ನೋಡಿ ಚಂದ್ರಗುಪ್ತ ಮೋಹಿತನಾಗಿ ಇಂದೇ ವಿವಾಹ ಮಾಡಿಕೊಳ್ಳುತ್ತೇನೆ ಎಂಬ ನಿರ್ಣಯಕ್ಕೆ ಬರುತ್ತಾನೆ. ಇದೆಲ್ಲವನ್ನು ಗಮನಿಸುತ್ತಿದ್ದ ಚಾಣಕ್ಯ ಇಂದು ವಿವಾಹ ಮುಹೂರ್ತ ಇಲ್ಲ ನಾಳೆ ನಿಮ್ಮ ವಿವಾಹ ನಾನೇ ಜರುಗಿಸುತ್ತೇನೆ ಎಂದು ಚಂದ್ರಗುಪ್ತನಿಗೆ ಹೇಳಿ ಅಂದು ಆಗಬೇಕಾಗಿದ್ದ ವಿವಾಹವನ್ನು ಮಾರನೇ ದಿನಕ್ಕೆ ಮುಂದೂಡುತ್ತಾನೆ. ರಾತ್ರಿ ಆ ಅತಿಥಿ ರಾಜ ಆತನ ಸುಂದರ ಮಗಳನ್ನು ತನ್ನ ಪಕ್ಕದ ಅತಿಥಿ ಗೃಹದಲ್ಲಿ ಸಕಲ ರಾಜ ಮರ್ಯಾದೆಗಳ ಜೊತೆ ನಿವಶಿಸಲು ಅನುಕೂಲ ಮಾಡಿಕೊಡುತ್ತಾನೆ. ಅಂದು ರಾತ್ರಿ 2 ಗಂಟೆ ಸಮಯ ಅತಿಥಿ ರಾಜ ಆತನ ಸುಂದರ ಮಗಳು ಗಾಢ ನಿದ್ರೆಯಲ್ಲಿದ್ದಾಗ ಆ ಅತಿಥಿ ಗ್ರಹಕ್ಕೆ ಶ್ರೀ ಚಾಣಕ್ಯ ಬೆಂಕಿ ಹಚ್ಚಿ ಅವರಿಬ್ಬರನ್ನು ಜೀವಂತ ಸುಟ್ಟುಬಿಡುತ್ತಾನೆ. ಮಾರನೇ ದಿನ ಚಂದ್ರಗುಪ್ತ ಈ ವಿಷಯವನ್ನು ತಿಳಿದುಕೊಂಡು ಶ್ರೀ ಚಾಣಕ್ಯನೇ ಅವರನ್ನು ದಹನ ಮಾಡಿದ್ದಾನೆಂದು ತಿಳಿದು ಕೋಪದಿಂದ ಶ್ರೀ ಚಾಣಕ್ಯನ ಹತ್ತಿರ ಬರುತ್ತಾನೆ. ನೀವು ಅತಿಥಿ ರಾಜ ಆತನ ಸುಂದರ ಮಗಳನ್ನು ಬೆಂಕಿ ಇಟ್ಟು ಕೊಂದಿರಂತೆ ಇದು ನಿಜವಾ ಎಂದು ಕೇಳುತ್ತಾನೆ. ಆಗ ಚಾಣಕ್ಯ ಸಂಧ್ಯಾವಂದನೆ ಮಾಡುತ್ತಿದ್ದೇನೆ ಸ್ವಲ್ಪ ಕುಳಿತುಕೋ ಎಂದು ಹೇಳುತ್ತೇನೆ . ರಾಜ ಚಂದ್ರಗುಪ್ತ ಮನುಷ್ಯರನ್ನು ಸುಡುವ ವ್ಯಕ್ತಿಗಳು ಸಂಧ್ಯಾವಂದನೆ ಕೂಡ ಮಾಡುತ್ತಾರೆಯೇ ? ಎಂದು ಗುಣಗುತ್ತ ಕೂತಿರುತ್ತಾನೆ. ನಂತರ ಶ್ರೀ ಚಾಣಕ್ಯ ಬಂದು ಗೂಢಚಾರವನ್ನು ಕರಿಸಿ ಎಲ್ಲ ವಿಷಯ ವಿವರಿಸುತ್ತಾನೆ. ಆ ಸುಂದರ ಕನ್ಯೆ ಒಬ್ಬ ವಿಷಕನ್ನೇ ನಾಗರಹಾವಿನ ವಿಷವನ್ನು ಸ್ವಲ್ಪ ಸ್ವಲ್ಪವಾಗಿ ಆಕೆ ವರ್ಷಗಟ್ಟಲೆ ಸೇವಿಸಿ ಮೈಯಲ್ಲ ವಿಷದಿಂದ ತುಂಬಿ ಇರುತ್ತಾಳೆ ಆಕೆಯನ್ನು ಯಾರು ಲಗ್ನವಾಗುತ್ತಾರೋ ಅಂದು ರಾತ್ರಿಯೇ ಆಕೆ ಶರೀರ ಸಹವಾಸದಿಂದ ಲಗ್ನವಾದ ವ್ಯಕ್ತಿ ಮೃತರಾಗುತ್ತಾರೆ ಅಷ್ಟು ವಿಷ ಆಕೆ ಶರೀರದಲ್ಲಿ ಇರುತ್ತದೆಯಂತೆ. ನೀನು ನಿನ್ನೆ ಲಗ್ನವಾಗಿದ್ದರೆ ನಿನ್ನೆ ರಾತ್ರಿ ನೀನು ಮರಣ ಹೊಂದುತ್ತಿದ್ದಿ ಎಂದು ಶ್ರೀ ಚಾಣಕ್ಯ ಚಂದ್ರಗುಪ್ತನಿಗೆ ಹೇಳುತ್ತಾನೆ. ಈ ವಿಷಯ ಗೂಢಾಚಾರರು ಖಚಿತಪಡಿಸುತ್ತಾರೆ. ಗಾಬರಿಗೊಂಡ ಚಂದ್ರಗುಪ್ತ ಶ್ರೀ ಚಾಣುಕ್ಯರ ಪಾದಗಳಿಗೆ ನಮಸ್ಕರಿಸಿ ಧನ್ಯವಾದಗಳು ಹೇಳಿ ಹೋಗುತ್ತಾನೆ. ಇಷ್ಟು ಕಠೋರ ನಿರ್ಣಯ ಮುಂಜಾಗ್ರತೆ ಆಲೋಚನ ಶಕ್ತಿ ಹೊಂದಿದ್ದರು ಶ್ರೀ ಚಾಣಕ್ಯರು.

ಲೋಕಕಲ್ಯಾಣಕ್ಕಾಗಿ ನಿಜವಾದ ಸಂತರು


2, ಇದೇ ತರ ಚಾಣಕ್ಯರ ಜೀವನದ ಇನ್ನೊಂದು ಘಟನೆ. ಮಗದ ರಾಜ್ಯದ ಧನಾನಂದನೆಂಬ ದುಷ್ಟ ರಾಜನನ್ನು ಚಂದ್ರಗುಪ್ತನ ಸಹಾಯದಿಂದ ಸಂವರಿಸಲಾಯಿತು. ಮುಂದೆ ಚಂದ್ರಗುಪ್ತನನ್ನು ರಾಜನಾಗಿ ಮಾಡಬೇಕು. ಆದರೆ ಬ್ರಾಹ್ಮಣ ಪಂಡಿತರು ಇದಕ್ಕೆ ವಿರೋಧ ಮಾಡುತ್ತಾರೆ. ಚಂದ್ರಗುಪ್ತ ಶೂದ್ರ ಜಾತಿಯ ವ್ಯಕ್ತಿ ಕೇವಲ ಕ್ಷತ್ರಿಯರಿಗೆ ಮಾತ್ರ ರಾಜ್ಯ ಅಧಿಕಾರ ಶೂದ್ರ ಹೇಗೆ ರಾಜನಾಗುತ್ತಾನೆ ಎಂಬುವ ವಾದ ಬ್ರಾಹ್ಮಣ ಪಂಡಿತರು ಮುಂದಿಡುತ್ತಾರೆ. ಆಗ ಚಾಣಕ್ಯ ಕಲಿಯುಗದಲ್ಲಿ ಮನು ಸ್ಮೃತಿ ನೋಡಬಾರದು ಕಲಿಯುಗದಲ್ಲಿ ಪರಾಶರ ಸ್ಮೃತಿ ಮಾತ್ರ ನೋಡಬೇಕು ಹಾಗೂ ಯಾಜ್ಞವಲ್ಕರ ಸೂಕ್ಷ್ಮ ಧರ್ಮ ಸಂದೇಶಗಳನ್ನು ಬ್ರಾಹ್ಮಣ ಪಂಡಿತರ ಮುಂದಿಡುತ್ತಾರೆ. ಇದಾವುದಕ್ಕೂ ಬ್ರಾಹ್ಮಣ ಪಂಡಿತರು ಒಪ್ಪದೇ ಸಭೆಯಿಂದ ಎದ್ದು ಹೋಗಿಬಿಡುತ್ತಾರೆ. ಮಾರನೆಯ ದಿನ ಶ್ರೀ ಚಾಣಕ್ಯ ತನ್ನ ಮಂತ್ರಿಗಳನ್ನು ಕರೆದು ಬ್ರಾಹ್ಮಣ ಪಂಡಿತರು ವಾಸವಾಗಿರುವ ಊರುಗಳ ಪಟ್ಟಿಯನ್ನು ತರಿಸಿ ಆ ಎಲ್ಲಾ ಬ್ರಾಹ್ಮಣರು ವಾಸಿಸುವ ಓಣಿಗಳಿಗೆ ಬೆಂಕಿ ಹಚ್ಚಿ ಬ್ರಾಹ್ಮಣರನ್ನು ಜೀವಂತ ಸುಟ್ಟು ಬಿಡಲು ಆಗ್ನೆ ಮಾಡುತ್ತಾನೆ. ಇದನ್ನು ತಿಳಿದು ಗಾಬರಿಗೊಂಡ ಬ್ರಾಹ್ಮಣ ಪಂಡಿತರು ಚಾಣಕ್ಯನ ಹತ್ತಿರ ಬಂದು ಇಲ್ಲ ಇಲ್ಲ ಶೂದ್ರ ಜಾತಿಯ ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡಿ ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳುತ್ತಾರೆ. ನೋಡಿ ಚಾಣಕ್ಯನ ಕಠೋರ ಕೆಲ ನಿರ್ಣಯಗಳು ಸಮಾಜಹಿತಕ್ಕಾಗಿ ರಾಷ್ಟ್ರ ಹಿತಕ್ಕಾಗಿ ತೆಗೆದುಕೊಂಡದ್ದು. ಇಂತಹ ನಿರ್ಣಯ ತೆಗೆದುಕೊಳ್ಳುವಾಗ ಸ್ವಜನ ಪಕ್ಷಪಾತ, ಸ್ವಜಾತಿ ಯಾವುದನ್ನು ಲೆಕ್ಕಿಸಲಿಲ್ಲ. ಶ್ರೀ ಕೃಷ್ಣ ಪರಮಾತ್ಮ ಕೂಡ ದ್ರೋಣಾಚಾರ್ಯ ಕರ್ಣನನ್ನು ಕೊಲ್ಲುವಾಗ ಇದೇ ರೀತಿ ಕಠೋರ ನಿರ್ಣಯ ತೆಗೆದುಕೊಂಡಿದ್ದರು. ಶ್ರೀಚಾಣಕ್ಯ ನಿಗೆ ಮೊದಲನೆಯ ಪ್ರಧಾನ್ಯತೆ ತನ್ನ ರಾಷ್ಟ್ರ .ಹೀಗಿದ್ದ ಶ್ರೀ ಚಾಣಕ್ಯ. ಇದು 52 ಉಪನಿಷತ್ ಗಂಗಾ ದಲ್ಲಿ ಉಲ್ಲೇಖವಿದೆ. ಕಾರಣ ನಾವು ನಮ್ಮ ಮೊದಲ ಪ್ರಾಧಾನ್ಯತೆ  ನಮ್ಮ ದೇಶಕ್ಕೆ ಕೊಡಬೇಕು. ಅನಂತರ ಪಕ್ಷಕ್ಕೆ ಕೊಡಬೇಕು ಮೂರನೇಯ ಪ್ರಾಧಾನ್ಯತೆ ನಮ್ಮ ನಾಯಕನಿಗೆ/ವ್ಯಕ್ತಿಗೆ ಕೊಡಬೇಕು. ನಮಗೆ ಮೊದಲು ದೇಶ.

Life till 60 and after 60

ಅರವತ್ತರವರೆಗೆ ನಮ್ಮ ಬದುಕು, ನಮ್ಮ ನಿರ್ಧಾರ!
ಅರವತ್ತರ ನಂತರ ದೇವರ ಬದುಕು, ದೇವರ ನಿರ್ಧಾರ!!

ಅರವತ್ತರವರೆಗೆ ನಮ್ಮಿಚ್ಛೆ; ಅರವತ್ತರ ನಂತರ ದೇವರಿಚ್ಛೆ.
ಅರವತ್ತರವರೆಗೆ ಸ್ವಾಧೀನ; ಅರವತ್ತರ ನಂತರ ಪರಾಧೀನ.

ಅರವತ್ತರವರೆಗೆ ಸ್ವಾವಲಂಬನದ ಪ್ರವಚನ;
ಅರವತ್ತರ ನಂತರ ಪರಾವಲಂಬನ ಪಾಠ.

ಅರವತ್ತರವರೆಗೆ ನಾವುಗಳು ನಮ್ಮ ಕೈಯಲ್ಲಿ!
ಅರವತ್ತರ ನಂತರ ನಾವುಗಳು ದೇವರ ಕೈಯಲ್ಲಿ!!

ಅರವತ್ತರವರೆಗೆ ಎಲ್ಲವೂ ನನ್ನದು, ನನ್ನದು!!
ಅರವತ್ತರ ನಂತರ ಯಾವುದೂ ನನ್ನದಲ್ಲ;
ನನ್ನದೂ ನನ್ನದಲ್ಲ; ನನ್ನ ದೇಹವೂ ನನ್ನದಲ್ಲ!!!

ಅರವತ್ತರವರೆಗೆ ಜೀವನ ಜೋಕಾಲಿ!
ಅರವತ್ತರ ನಂತರ ಜೀವನ ಖಾಲಿ, ಖಾಲಿ!!

ಅರವತ್ತರವರೆಗೆ ನಿವೃತ್ತಿ ಐಚ್ಛಿಕ.
ಅರವತ್ತರ ನಂತರ ನಿವೃತ್ತಿ ಕಡ್ಡಾಯ.

ಅರವತ್ತರ ನಂತರವೂ ಹೆಚ್ಚು ಹೆಚ್ಚು
ಉತ್ಸಾಹ, ಲವಲವಿಕೆಯಿಂದ ಬದುಕುತ್ತಿದ್ದೇವೆ ಎಂದರೆ
ಅದು ದೇವರ ಕೊಡುಗೆ.

Life till 60 and after 60


ಅರವತ್ತರ ನಂತರ ದೈಹಿಕವಾಗಿ, ಮಾನಸಿಕವಾಗಿ,
ಬೌದ್ಧಿಕವಾಗಿ ಕುಸಿಯುತ್ತಿದ್ದೇವೆ ಎಂದರೆ ಅದು ದೇವರ ಇಚ್ಛೆ.

ಅರವತ್ತರವರೆಗೆ ಕವಿ ಹೇಳಿದಂತೆ
“ಬದುಕು ಜಟಕಾಬಂಡಿ”!
ಅರವತ್ತರ ನಂತರ  ಅದೇ  ಕವಿ ಹೇಳಿದಂತೆ
“ವಿಧಿಯದರ ಸಾಹೇಬ”!!

ಅರವತ್ತರ ನಂತರವೂ ಆಸೆ,
ಆಮಿಷಗಳು ಹೆಚ್ಚುತ್ತಲಿವೆ ಎಂದರೆ
ಅದು “ವಿನಾಶ ಕಾಲೇ ವಿಪರೀತಬುದ್ಧಿಃ” ಎಂದರ್ಥ.

ಅರವತ್ತರ ನಂತರವೂ ಅಧಿಕಾರದ
ದಾಹ, ಮೋಹಗಳ ವಿಸ್ತಾರವದು
ಅಂಕೆ ಮೀರುತ್ತಲಿದೆ, ಲಂಕೆ ಜಿಗಿಯುತ್ತಲಿದೆ ಎಂದರೆ
ಅದು ಆರಲಿರುವ ದೀಪ ಢಾಳಾಗಿ ಉರಿಯುತ್ತಲಿದೆ ಎಂದರ್ಥ.

ಅರವತ್ತರವರೆಗೆ ದೇವರಲ್ಲಿ ನಾವುಗಳು
“ಅವರಿಗೆ ಒಳ್ಳೆಯ ಬುದ್ಧಿ ಕೊಡು”,
 “ಇವರಿಗೆ ಒಳ್ಳೆಯ ಬುದ್ಧಿ ಕೊಡು”
ಎಂದು ಕೇಳಿಕೊಂಡರೆ ದೇವರು
ಅದಕ್ಕೆ “ಭಲೇ, ಭೇಷ್” ಎನ್ನುತ್ತಾನೆ.

 ಅರವತ್ತರ ನಂತರ ದೇವರಲ್ಲಿ ನಾವುಗಳು,
“ನಮಗೆ ಒಳ್ಳೆಯ ಬುದ್ಧಿ ಕೊಡು”,
“ನಮಗೆ ಅಂತರಂಗಶುದ್ಧಿ ಕೊಡು” ಎಂದು
ಕೇಳಿಕೊಳ್ಳತೊಡಗಿದರೆ
ದೇವರು ಅದಕ್ಕೆ “ವಾಹವ್ವಾ, ಶಹಬ್ಬಾಶ್” ಹೇಳುತ್ತಾನೆ.

ಅರವತ್ತರ ನಂತರ ನಮಗೆ ನಾವೇ
ಸಾಕುದೀಕ್ಷೆಯನ್ನು ಕೊಟ್ಟುಕೊಂಡಿದ್ದರೆ
ದೇವರು “ಭಲೇ, ಭಲೇ” ಎನ್ನುತ್ತಾನೆ.

ಅರವತ್ತರ ನಂತರವೂ ನಮಗೆ ನಾವು
ಬೇಕುದೀಕ್ಷೆಯನ್ನು ಕೊಟ್ಟುಕೊಂಡು
“ಅದು ಬೇಕು, ಇದು ಬೇಕು” ಎನ್ನತೊಡಗಿದರೆ
ದೇವರು ನಮ್ಮ ಬದುಕಿಗೆ “ಬ್ರೆಕ್” ಹಾಕುವ ಕುರಿತು
ಯೋಚಿಸತೊಡಗುತ್ತಾನೆ.

ಅರವತ್ತರವರೆಗೆ ಜೀವರಥದ
ಹ್ಯಾಂಡಲ್ಲು, ಬ್ರೆಕ್ಕು ನಮ್ಮ ಕೈಯಲ್ಲಿ!!

ಅರವತ್ತರ ನಂತರ ಜೀವರಥದ
ಹ್ಯಾಂಡಲ್ಲು, ಬ್ರೆಕ್ಕು ದೇವರ ಕೈಯಲ್ಲಿ!!!

ಅರವತ್ತರವರೆಗೆ ``ಒನ್ಸ್ ಮೋರ್ '' Once More!!
ಅರವತ್ತರ ನಂತರ ``ಒನ್ಸ್ ಫಾರ್ ಆಲ್''' Once for all !!!

ಇದುವರೆಗೆ ನಾವು ಅರವತ್ತರವರೆಗೆ
ಮತ್ತು ಅರವತ್ತರ ನಂತರದ ಕುರಿತಾಗಿ ಹೇಳಿದ್ದು
ಸಾಮಾನ್ಯ ಮತ್ತು ಇದೆಲ್ಲ ಸರ್ವೇಸಾಮಾನ್ಯ.

ಇನ್ನು ಈ “ಅರವತ್ತರವರೆಗೆ” ಮತ್ತು “ಅರವತ್ತರ ನಂತರ”ದ
ಕುರಿತಾದ  ವಿಷಯದಲ್ಲಿ
ಎಲ್ಲರ ಅನುಭವಕ್ಕೆ ಬಂದಿರುವ ಹಾಗೆ

ಅಪವಾದಗಳೂ ಇರಬಹುದು;
ಆರೋಪಗಳೂ ಇರಬಹುದು.

ಏಕೆಂದರೆ ಜೀವನವೂ ಕೂಡ
ಅಕ್ಷರ, ಪದ, ವಾಕ್ಯಗಳ ಒಂದು ವ್ಯಾಕರಣ ತಾನೆ?

ಸ್ವೀಟ್ ಸಿಕ್ಸ್‌ಟೀನ್‌ಗೂ  (Sweet 16 )
ಸ್ವೀಟ್‌ಲೆಸ್ ಸಿಕ್ಸ್ಟಿಗೂ (Sweetless 60)
ಇರುವ ವ್ಯತ್ಯಾಸವನ್ನು
ಅರ್ಥಮಾಡಿಕೊಂಡು ಬದುಕಿದರೆ
ಜೀವನ ನಂದನವನವಾಗುತ್ತದೆ;

ಈ ವ್ಯತ್ಯಾಸವನ್ನು ಅರಿಯದೆ ಹೋದರೆ
ಜೀವನವದು ಹಾಲಾಹಲವಾಗುತ್ತದೆ;
ಅದು ಕೋಲಾಹಲವಾಗುತ್ತದೆ

ಆಗಲಿ ಮನೆ ಮನಗಳೂ ನಂದಗೋಕುಲ

ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!

 ಮನೆಸುತ್ತ ಕಾಂಪೌಂಡು, ಗೇಟು ಭದ್ರ, ಒಳಗಿರುವ ಮನಸುಗಳೇ ಏಕೋ ಛಿದ್ರ ಛಿದ್ರ...!

ಬಂಧುಗಳೇ ಬಾರದ, ಸ್ನೇಹಿತರೂ ಸೇರದ ಮನೆಗಳ ಮುಂದೆ ಸದಾ ಕಾವಲುಗಾರ...!

 ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ, ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ...!

 ಅಡುಗೆ ಮನೆ, ಸದಾ ಖಾಲಿ ಖಾಲಿ ಇರುತ್ತೆ. ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ...!

 ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ... ಎತ್ತರ... ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ...ಹತ್ತಿರ...! ಸಂತೋಷ ಏನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ...!

 ಅಂದು...ಬಿಸಿಲು, ಮಳೆ, ಚಳಿಗೆ ಮೈ ಒಗ್ಗಿತ್ತು, ಮನೆ ತಣ್ಣಗಿತ್ತು. ಒಲೆ ಹೊಗೆಯಾಡುತ್ತಿತ್ತು. ಬಿಸಿನೀರ ಹಂಡೆ ಹಬೆಯಾಡುತ್ತಿತ್ತು...!

 ಕಣಜದ ತುಂಬಾ... ದವಸ ಧಾನ್ಯ ತುಂಬಿತ್ತು. ಬಂಧುಬಳಗದ ನಡುವೆ ಅನುಬಂಧವಿತ್ತು

 ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು...!
 ಮನೆ ಚಿಕ್ಕದಾದ್ರೂ, ಮನಸು ಚೊಕ್ಕವಾಗಿತ್ತು...!

 ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...ನಲಿವಿತ್ತು, ಒಲವಿತ್ತು, ಸಂತಸದ ಸೆಲೆಯಿತ್ತು...!

 ಮುಖ್ಯ ಬಾಗಿಲು ಚಿಕ್ಕದಿತ್ತು, ತಲೆಬಾಗಬೇಕಿತ್ತು.

ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು

 ಮಾಡು ಚಿಕ್ಕದಿತ್ತು, ಬದುಕು ದೊಡ್ಡದಿತ್ತು. ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು.ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು...!

 ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ. ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು.ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು.

ಆಗಲಿ ಮನೆ ಮನಗಳೂ ನಂದಗೋಕುಲ


 ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು...ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ...!

 ಕೆಲಸಕ್ಕೆ ಶ್ರದ್ಧೆ, ದೇವರ ಮೇಲೆ ನಂಬಿಕೆಯಿತ್ತು...!
 ಸಾವಿಗೂ ಸಹ ಮನೆಯೇ ಸಾಕ್ಷಿ ಯಾಗುತ್ತಿತ್ತು...!

 ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು.ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು....!

 ನೆಂಟರು ಬಂದರೆ, ಹಬ್ಬದ ಸಡಗರವಿತ್ತು. ಕೆಲವು ಸಾವುಗಳ ಸೂತಕವೂ ಇತ್ತು. ಸತ್ತ ಹಿರಿಯರ ನೆನಪು ಅಚ್ಚಳಿಯದೇ ಉಳಿದಿತ್ತು...!

 ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕ ವೂ ಇತ್ತು...! ಬದುಕಿನ ಸಾಧಕ ಭಾದಕ ಗಳೆಲ್ಲವೂ ಇತ್ತು...!

 ಇಂದು...? ಮನೆ ರಾಜನಿಲ್ಲದ ಅರಮನೆಯಂತೆ, ಸಕಲ ಸವಲತ್ತು ಗಳಿರುವ ದರ್ಬಾರಿನಂತೆ,ನೆರೆ ಮನೆಯ ಹಂಗಿಲ್ಲದ ಸೆರೆಮನೆ ಯಂತೆ. ಆದ್ರೂ ಮನೆಮಂದಿಗೆಲ್ಲ ಬಹಳ  ದುಡ್ಡಿನದೇ ಚಿಂತೆ ಚಿಂತೆ..!

 ಬೇಕಾಗಿದ್ದಕ್ಕಿಂತ, ಬೇಕೆನಿಸಿದ್ದೇ ತುಂಬಿದೆ, ದೊಡ್ಡದಿದೆ, ಶ್ರೀಮಂತವಾಗಿದೆ, ಸಜ್ಜಾಗಿದೆ. ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ...!

 ಶುಭ ಕಾರ್ಯಗಳು, ಸಂತೋಷ ಕೂಟಗಳು, ಮನೆಬಿಟ್ಟು, ಹೋಟೆಲ್ಲುಗಳ ಸೇರಿಕೊಂಡಿವೆ. ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ...!

 ನೆಂಟರಿಷ್ಟರು ಮನೆಗೆ ಬಂದರೆ, ಬರೀ ನಕ್ಕೂ ನಗದೇ... ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆ ಮಕ್ಕಳು.

 ಸ್ನೇಹ,ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ...!

 ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ. ಆಗಲಿ ಮನೆ ಮನಗಳೂ ನಂದಗೋಕುಲ...!

ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ...! ಕಲಿಯಲಿ ಎಲ್ಲರು ಸಂತಸದಿ, ಒಟ್ಟಾಗಿ ನಗುವ ಕಲೆ...!

 ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!

Life lessons which birds teach us

ಪಕ್ಷಿಗಳಿಂದನಾವುಜೀವನದ ಪಾಠ  ಕಲಿಯೋಣ.🦉🦆🦜🐦🦅🦚🦆


1. ರಾತ್ರಿ ಏನನ್ನೂ ತಿನ್ನುವುದಿಲ್ಲ.... 🦜
2. ರಾತ್ರಿಯಲ್ಲಿ ತಿರುಗಾಡುವುದಿಲ್ಲ.... 🦜
3. ತಮ್ಮ ಮಗುವಿಗೆ ಸರಿಯಾದ ಸಮಯದಲ್ಲಿ ಕಲಿಸುತ್ತವೆ.... 🦜
4. ಗಬಗಬನೇ, ಗಟ್ಟಿಯಾಗಿರುವುದನ್ನು ತಿನ್ನುವುದಿಲ್ಲ.. ಎಷ್ಟೇ ಕಾಳು ಹಾಕಿದರೂ ಸ್ವಲ್ಪ ತಿಂದು  ಹಾರಿಹೋಗುತ್ತವೆ.... 🦜
5. ರಾತ್ರಿಯಾದ ತಕ್ಷಣ ನಿದ್ರೆಗೆ ಹೋಗುತ್ತವೆ, ಬೆಳಿಗ್ಗೆ ಬೇಗ ಏಳುತ್ತವೆ ಚಿಲಿಪಿಲಿ ಹಾಡುತ್ತಾ
ಏಳುತ್ತಾರೆ....🦜
6. ತಮ್ಮ ಆಹಾರವನ್ನು ಎಂದಿಗೂ ಬದಲಾಯಿಸವುದಿಲ್ಲ.... 🦜
7. ತಮ್ಮ ದೈಹಿಕ ಚಟುವಟಿಕೆ ಮೂಲಕ  ನಿರಂತರವಾಗಿ ಕೆಲಸ ಮಾಡಿ. ರಾತ್ರಿ
ಹೊರತುಪಡಿಸಿ ವಿಶ್ರಾಂತಿ ಇಲ್ಲ.... 🦜
8. ತಮಗೆ ಕಾಯಿಲೆ ಬಂದರೆ, ಅವು ತಿನ್ನುವುದನ್ನು ನಿಲ್ಲಿಸುತ್ತವೆ ಮತ್ತು ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಅವು  ತಿನ್ನುತ್ತವೆ.... 🦜
9. ತಮ್ಮ ಮಗುವಿಗೆ ಸಾಕಷ್ಟು ಪ್ರೀತಿಯನ್ನು ನೀಡುತ್ತವೆ.. 🦜

Life lessons which birds teach us

 

10. ಅನೇಕ ಕಾಯಿಲೆಗಳು ದೈಹಿಕ ಕೆಲಸದಿಂದ  ಬರುವುದಿಲ್ಲ.. 🦜
11. ಪ್ರಕೃತಿಯಿಂದ ಎಷ್ಟು  ಬೇಕೋ ಅಷ್ಟು ಮಾತ್ರ ತೆಗೆದುಕೊಳ್ಳುತ್ತವೆ..🦜
12. ತಮ್ಮ ಮನೆಯನ್ನು ಪರಿಸರ ಸ್ನೇಹಿಯಾಗಿಸಿಕೊಳ್ಳುತ್ತವೆ....🦜
13. ತಮ್ಮ ಸ್ವಂತ ಭಾಷೆಯನ್ನು ಬಿಟ್ಟು, ಇತರ ಅರ್ಥವಾಗದ ಭಾಷೆಯಲ್ಲಿ ಸಂವಹನ
ಮಾಡುವುದಿಲ್ಲ.... 🦜
14.  ತಮ್ಮ ಮಕ್ಕಳಿಗೆ ಬದುಕುವ ಶಿಕ್ಷಣವನ್ನು ತಾವೇ ನೀಡುತ್ತವೆ. ಬೇರೆಯವರ ಬಳಿ ಟ್ಯೂಷನ್
ಕಳಿಸುವುದಿಲ್ಲ.🦜
15.  ತಮ್ಮಗಾಗದ ಪರಿಸರದಲ್ಲಿ ಒಂದು ಕ್ಷಣವು ಇರುವುದಿಲ್ಲ.... 🦜
16.  ಶತ್ರುವಿನ ಮುನ್ಸೂಚನೆ ಸಿಕ್ಕ ತಕ್ಷಣ ಉಳಿದ ಪಕ್ಷಿ ಪ್ರಾಣಿ  ಸಂಕುಲಗಳಿಗೆ ಎಚ್ಚರಿಕೆ
ಸಂದೇಶ ರವಾನಿಸುತ್ತವೆ....🦜
17.  ತಮ್ಮದಲ್ಲದ ವಸ್ತುವನ್ನು ತಿರುಗಿ ಸಹ ನೋಡುವುದಿಲ್ಲ..🦜
18.  ಪ್ರಕೃತಿ ನಿಯಮವನ್ನುಚಾಚು ತಪ್ಪದೆ ಪಾಲಿಸಿತ್ತವೆ..🦜
19.  ಹಸಿವೆಯಾದಾಗ ಮಾತ್ರ ಆಹಾರ ಪಡೆಯುತ್ತವೆ....🦜
20. ಕಷ್ಟಕಾಲಕ್ಕೆ ಮುಂಚಿತವಾಗಿಯೇ ಯೋಜನೆ ನಿರೂಪಿಸುತ್ತವೆ.... 🦜
21.  ಅವು ಬೇರೆ ಬೇರೆ ಪಕ್ಷಿಗಳ ಜೊತೆ ಜಗಳ ಆಡುವುದೇ ಇಲ್ಲ.... 🦜
🙏🦜🦜🕊️🦚🕊️🙏


"ತುಂಬಾ ಬೋಧಪ್ರದ!! ನಾವು ಸಹ ಅವುಗಳಿಂದ ಏನನ್ನಾದರೂ ಕಲಿತರೆ, ಜೀವನವು ಸರಳ, ಸುಂದರ ಮತ್ತು ಯಶಸ್ವಿಯಾಗುತ್ತದೆ!"

ಯಾವಾಗ ಬಾಯಿ ಮಾತನಾಡುವುದಿಲ್ಲವೊ , ಆಗ ಕಣ್ಣು ಗಳು ಮಾತನಾಡುತ್ತವೆ

ಇದೂವರೆಗೂ ವಿಜ್ಞಾನಿಗಳಿಗೆ ಕಣ್ಣೀರಿನ ಉದ್ದೇಶವನ್ನು  ನಿಖರವಾಗಿ ವಿವರಿಸಲು ಸಾಧ್ಯವಾಗಿಲ್ಲ. ಕಣ್ಣಿನಲ್ಲಿ ಧೂಳುತುಂಬಿಕೊಂಡು ಅದನ್ನು ಹೊರದೂಡಲು ಕಣ್ಣೀರು ಹರಿಯುತ್ತದೆ, ಎನ್ನುತ್ತಾರೆ.

  ಹಾಗಾದರೆ, ದೇಹದ  ಬೇರೆ ಯಾವುದೇ ಅಂಗಕ್ಕೆ ,ಪೆಟ್ಟಾದಾಗ,   
 ದುಃಖಿತರಾದಾಗ ಅಥವಾ ಆನಂದಿತರಾದಾಗ   ಕಣ್ಣೀರೇಕೆ ಬರಬೇಕು. ಅಂತಹ ಸಮಯದಲ್ಲಿ ಕಣ್ಣಲ್ಲಿ ಧೂಳು ಹೇಗೆ ಬೀಳುತ್ತದೆ?


    ಅತಿಯಾದ ನೋವು ಅಥವಾ ನಲಿವು  ಉಂಟಾದಾಗ ,ಮನಸ್ಸು ತುಂಬಿ ಬಂದಾಗ  ಕಣ್ಣೀರು ಹರಿಯತೊಡಗುತ್ತದೆ.ಬಾಷ್ಪಗ್ರಂಥಿಗಳು ಚೇತರಿಕೆ ಗೊಂಡು  ಕಣ್ಣೀರು ಹರಿಯಲು  ಪ್ರಾರಂಭಿಸುತ್ತದೆ.


   ಭಕ್ತರು ಕೂಡಾ ಅಳುತ್ತಾರೆ,ಆದರೆ ಅವರ ಕಣ್ಣೀರಿಗಿರುವ ಗುಣಗಳು ಬೇರೆ.ಭಕ್ತ ರಲ್ಲದವರು ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವನಿಗೆ ಜೀವನದಲ್ಲಿ ಏನೋ ಕಷ್ಟ ವಿರಬೇಕು ,ಅದನ್ನು ಸಹಿಸಿಕೊಳ್ಳಲಾಗದೇ ,ಕೈ ಮುಗಿದು ಅಳುತ್ತಿದ್ದಾನೆ ಎಂದು ಅನ್ನಿಸಬಹುದು. ಯಾರು ಕಷ್ಟಗಳ ಕಾರಣದಿಂದ ಕಣ್ಣೀರಿಡುತ್ತಾನೋ ಅವನು ಭಕ್ತನೇ ಅಲ್ಲಾ .ಭಕ್ತಿ ಯ ಬಗ್ಗೆ ಅವನಿಗೆ ಏನೇನೂ ತಿಳಿದಿರುವುದೇ ಇಲ್ಲಾ.ಅವನು ತನ್ನ ಸ್ವಂತ ಅಸ್ತಿತ್ವದ ಕೇಂದ್ರ ಬಿಂದುವಾಗಿರುತ್ತಾನೆ.

ಯಾವಾಗ ಬಾಯಿ ಮಾತನಾಡುವುದಿಲ್ಲವೊ , ಆಗ ಕಣ್ಣು ಗಳು ಮಾತನಾಡುತ್ತವೆ


  ಆದರೆ ಕೆಲವೊಮ್ಮೆ ನಮ್ಮ ಅಂತರಾಳದಲ್ಲಿ ಗಟ್ಟಿಯಾಗಿ ಹುದುಗಿರುವ, ನಿರ್ಭಾವುಕತೆ,ನಿಷ್ಟುರತೆ ಕರಗತೊಡಗಿ ,ಅದರ ಅರಿವು ಮೂಡುವುದರಿಂದ ಕಣ್ಣೀರು ತನಗೆ ತಾನೇ ಹರಿಯತೊಡಗುತ್ತದೆ. ಹಾಗೇ ನಮ್ಮ ಸುತ್ತಲಿನ ಜಗತ್ತಿಗೆ ಪ್ರತಿಯಾಗಿ  ಕೃತಜ್ಞತೆಗಳನ್ನು ,ಧನ್ಯವಾದಗಳನ್ನು ಅರ್ಪಿಸಲು ಕಣ್ಣೀರು  ತನಗೆ ತಾನೇ ಹರಿಯುತ್ತದೆ. ಪ್ರಕೃತಿಯಿಂದ  ನಮ್ಮೆಡೆಗೆ ಹರಿದು ಬರುತ್ತಿರುವ ಕರುಣೆಗೆ ಪ್ರತಿಯಾಗಿ ಅರ್ಪಿಸಲು ನಮ್ಮ ಬಳಿ ಕಣ್ಣೀರು ಬಿಟ್ಟರೆ  ಬೇರೇನೂ ಇಲ್ಲಾ.  ಇಂತಹ ಭಾವನೆ ಬರುತ್ತದೆ ಎಂದು  ನಾವೆಂದೂ ಕನಸನ್ನೂ ಕಂಡಿರುವುದಿಲ್ಲ.ಕಣ್ಣೀರ ಹೊರೆತು ,ಕೃತಜ್ಞತೆಗಳನ್ನು ಅರ್ಪಿಸಲು ನಮ್ಮಲ್ಲಿ ಬೇರೇನೂ ಇಲ್ಲಾ.ಪದಗಳಾಗಲೀ ,ಮತ್ತೊಂದಾಗಲೀ ಅದನ್ನು ವರ್ಣಿಸಲು ಸಾಧ್ಯವೇಇಲ್ಲ. ಇಂತಹ ಕ್ಷಣಗಳಲ್ಲಿ ಕಣ್ಣುಗಳು  ಬೇರೊಂದು ರೀತಿಯಲ್ಲಿ ಅಳುತ್ತವೆ.


   ಒಬ್ಬ ಪ್ರೇಮಿಯು ಕೂಡಾ ಅಳಬಹುದು,ಆದರೆ ಆ ಅಳುವಿಗೆ ಬೇರೆ ಗುಣಗಳಿರುತ್ತವೆ.ಅದು ಆಸೆ ,ಬೇಡಿಕೆಗಳಿಂದ ತುಂಬಿರುತ್ತದೆ.   ಅಷ್ಟೇ.ಆದರೆ ನಿಜ ಭಕ್ತನ ಕಣ್ಣೀರಿನಲ್ಲಿ ಯಾವುದೇ ಆಸೆ ಬೇಡಿಕೆಗಳಿರುವುದಿಲ್ಲಾ.ಅವನ ಕಣ್ಣು ಕಾರಣವಿಲ್ಲದೇ ಅಳುತ್ತವೆ, ಅವನು ಅದನ್ನು ನಿಯಂತ್ರಿಸಲು  ನಿಸ್ಸಹಾಯಕನಾಗಿರುತ್ತಾನೆ.ಅವನೆಷ್ಟು ಭಾವಪರವಶನಾಗಿರುತ್ತಾನೆಂದರೆ,ಕೃತಜ್ಞತೆಗಳನ್ನು  ತಿಳಿಸಲು ಯಾವ ಪದಗಳು  ಸಹ ಅವನ ಬಾಯಿಗೆ ಬರುವುದಿಲ್ಲ.


     ಯಾವಾಗ ಬಾಯಿ ಮಾತನಾಡುವುದಿಲ್ಲವೊ,ಆಗ ಕಣ್ಣು ಗಳು ತಮ್ಮದೇ ರೀತಿಯಲ್ಲಿ ಮಾತನಾಡುತ್ತವೆ. ಆರಾಧನೆಯ ಸಾರ್ಥಕತೆ ,ಸಂಪೂರ್ಣತೆ, ಕಣ್ಣೀರಿನಲ್ಲಿದೆ,ಅದರ ಹರಿವಿನಲ್ಲಿದೆ.

- ಸುವರ್ಣಾ ಮೂರ್ತಿ

The 9 secrets to be kept within and why

आयुर्वित्तं  गृहच्छिद्रं  मन्त्रमैथुन भेषजं |
दानापमानं साहसं च नव गॊप्यानि कारयॆत् ||

ಆಯುರ್ವಿತ್ತಂ ಗೃಹಚ್ಛಿದ್ರಂ ಮಂತ್ರಮೈಥುನ ಭೇಷಜಂ |
ದಾನಾಪಮಾನಂ ಸಾಹಸಂ ಚ ನವ ಗೋಪ್ಯಾನಿ ಕಾರಯೇತ್ ||

ಆಯುಸ್ಸು , ಹಣ , ಮನೆಯ ಒಳಜಗಳ , ಮಂತ್ರ , ಮೈಥುನ , ಔಷಧ , ದಾನ , ಅವಮಾನ , ದುಡುಕಿನಿಂದಾದ ಕಾರ್ಯ ಈ ಒಂಭತ್ತನ್ನು ರಹಸ್ಯವಾಗಿ ಇಟ್ಟಿರಬೇಕು.

1)    ಆಯುಸ್ಸು - ತನ್ನ ಆಯುಸ್ಸು ಎಷ್ಟೆಂದು ಗೊತ್ತಿದ್ದರೆ ಅದನ್ನು ಇನ್ನೊಬ್ಬರಿಗೆ ಹೇಳಬಾರದು. ಹಾಗೆಯೇ ಜ್ಯೋತಿಷ್ಯವನ್ನು ಬಲ್ಲವರು ಇನ್ನೊಬ್ಬರ ಆಯುಸ್ಸನ್ನು ಹೇಳಬಾರದು. ಏಕೆಂದರೆ ಅದು ಅಪ್ರಿಯವಾದ ಸತ್ಯ. ಕೇಳಿಸಿಕೊಂಡವರ ಮೇಲೆ ಅದು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.  

2)    ವಿತ್ತಂ - ತನ್ನಲ್ಲಿರುವ ಹಣವನ್ನಾಗಲೀ ತನ್ನ ಆದಾಯವನ್ನಾಗಲೀ ಇನ್ನೊಬ್ಬರಿಗೆ ಹೇಳಬಾರದು. ಅದೇ ರೀತಿ ಇನ್ನೊಬ್ಬರ ಸಂಬಳ ಎಷ್ಟು ಎಂದು ಕೇಳಬಾರದು. ಏಕೆಂದರೆ ಅದು ಶಿಷ್ಟಾಚಾರ ಅಲ್ಲ.

3)    ಗೃಚ್ಚಿದ್ರಂ - ಸಂಸಾರದಲ್ಲಿನ ಬಿರುಕನ್ನು ಇತರರಿಗೆ ತಿಳಿಸಬಾರದು. ಎಲ್ಲರ ಮನೆಯ ದೋಸೆಯೂ ತೂತೇ ಆಗಿರುತ್ತದೆ. ಗಂಡ ಹೆಂಡತಿಯ ನಡುವೆ ಆಗಲಿ , ತಂದೆ ಮಕ್ಕಳ ನಡುವೆ ಆಗಲಿ , ಅಣ್ಣ ತಮ್ಮಂದಿರ ನಡುವೆ ಆಗಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಅದನ್ನು ತಮ್ಮೊಳಗೇ ಪರಿಹರಿಸಿಕೊಳ್ಳಬೇಕು , ಬಹಿರಂಗಪಡಿಸಬಾರದು. ಹೊರಗಿನವರಿಗೆ ತಿಳಿದರೆ ಸಣ್ಣ ನ್ಯೂನತೆಯನ್ನೇ ದೊಡ್ಡದು ಮಾಡಿ ಆಡಿಕೊಳ್ಳುತ್ತಾರೆ , ಶತ್ರುಗಳಾದರೆ ಅದರ ದುರ್ಲಾಭವನ್ನೂ ಪಡೆಯುತ್ತಾರೆ.

The 9 secrets to be kept within and why


4)    ಮಂತ್ರಂ - ಮಂತ್ರ ಎಂದರೆ ಇಬ್ಬರು ಸೇರಿ ಮಾಡಿಕೊಂಡ ಕಾರ್ಯ ತಂತ್ರ. ರಾಜಕೀಯದಲ್ಲಿ ಇಂತಹ ಮಂತ್ರಾಲೋಚನೆಗಳು ಹಲವು ಇರುತ್ತವೆ. ಅವೆಲ್ಲವೂ ರಹಸ್ಯವಾದವುಗಳು.

5)    ಮೈಥುನ – ಹೆಂಡತಿಯೊಡನೆ ನಡೆಸುವ ರತಿಕ್ರಿಡೆಯ ಸಂದರ್ಭದ ವಿಷಯಗಳನ್ನು ಎಷ್ಟೇ ಆಪ್ತನಾದ ಮಿತ್ರನೇ ಆಗಿರಲಿ ಆತನೊಡನೆ ಹೇಳಬಾರದು.

6)     ಭೇಷಜಂ – ಭೇಷಜಂ ಅಂದರೆ ಔಷಧ. ವೈದ್ಯನು ತಾನು ಕೊಡುವ ಔಷಧ ಯಾವುದೆಂದು ರೋಗಿಗೆ ತಿಳಿಸಬಾರದು. ತನ್ನ ವ್ಯಾಧಿಯು ಪ್ರಬಲವಾದದ್ದೆಂದೂ ಅದಕ್ಕೆ ಬಹಳ ಬೆಲೆ ಬಾಳುವ ಔಷಧವೇ ಬೇಕಾಗುತ್ತದೆ ಎಂದೂ ಆತ ತಿಳಿದಿರುತ್ತಾನೆ. ವೈದ್ಯನು ಬಹಳ ಚಿಕ್ಕ ಔಷಧದಿಂದಲೇ ಅದನ್ನು ಗುಣಪಡಿಸಿದರೆ ಆಗ ಆತನಿಗೆ ನಂಬಿಕೆ ಬರುವುದಿಲ್ಲ. ರೋಗ ಗುಣವಾಗಬೇಕಾದರೆ ನಂಬಿಕೆಯೇ ಮುಖ್ಯ.   

7)    ದಾನಂ - ತಾನು ಮಾಡಿದ ದಾನ ಧರ್ಮ ಪುಣ್ಯ ಕಾರ್ಯಗಳ ಬಗ್ಗೆ ಇತರರೊಡನೆ ಹೇಳಿಕೊಳ್ಳಬಾರದು. ಹಾಗೆ ಹೇಳಿಕೊಂಡರೆ ಅದರಿಂದ ಸಂಚಯವಾದ ಪುಣ್ಯವು ಕ್ಷೀಣಿಸುತ್ತದೆ ಎಂದು ಧರ್ಮಶಾಸ್ತ್ರ ಹೇಳುತ್ತದೆ. ನಹುಷ ರಾಜನು ಪುಣ್ಯಕಾರ್ಯಗಳನ್ನು ಮಾಡಿ ಸ್ವರ್ಗಕ್ಕೆ ಹೋಗಿ ಅಲ್ಲಿ ದೇವೇಂದ್ರನಂತೆ ಮೆರೆಯುತ್ತಿದ್ದ. ದೇವೇಂದ್ರನು ಆತ ಮಾಡಿದ ಪುಣ್ಯಕಾರ್ಯಗಳು ಏನೆಂದು ಕೇಳಿದಾಗ ನಹುಷನು ತನ್ನ ಕಾರ್ಯಗಳನ್ನೆಲ್ಲ ಕೊಚ್ಚಿಕೊಂಡನಂತೆ. ಆಗ ಅವನ ಪುಣ್ಯವು ಕ್ಷೀಣಿಸಿತು. ಸಮಯ ಸಾಧಿಸುತ್ತಿದ್ದ ದೇವೇಂದ್ರನು ಒಡನೆಯೇ ಅವನನ್ನು ಸ್ವರ್ಗದಿಂದ ಕೆಳಗೆ ತಳ್ಳಿದನಂತೆ. ಆದ್ದರಿಂದ ನಾವು ಮಾಡಿದ ದಾನಧರ್ಮಗಳ ಬಗ್ಗೆ ಇತರರಲ್ಲಿ ಕೊಚ್ಚಿಕೊಳ್ಳಬಾರದು. ಸಣ್ಣ ವಸ್ತುವನ್ನು ದಾನ ಮಾಡಿ ಅದರ ಮೇಲೆ ದೊಡ್ಡದಾಗಿ ಇದು ‘ಇಂಥವರ ಸೇವೆ’ ಎಂದು ಬರೆಸಿಡುವುದು ಸರಿಯಲ್ಲ.

8)    ಅಪಮಾನಂ – ಎಲ್ಲಿಯೇ ಆಗಲಿ ಯಾರಿಂದಲೇ ಆಗಲಿ ತನಗೆ ಉಂಟಾದ ಅಪಮಾನದ ಕುರಿತಾಗಿ ಇನ್ನೊಬ್ಬರಲ್ಲಿ ಹೇಳಿಕೊಳ್ಳಬಾರದು.  

9)    ಸಾಹಸಂ – ಇಲ್ಲಿ ಸಾಹಸ ಎಂದರೆ ವಿವೇಚನೆಯಿಲ್ಲದೇ ದುಡುಕಿನಿಂದ ಮಾಡಿದ ಎಡವಟ್ಟು ಕೆಲಸ ಎಂದರ್ಥ. ಎಂತಹ ವಿವೇಕಿಯೇ ಆಗಿದ್ದರೂ ಜೀವನದಲ್ಲಿ ಒಮ್ಮೆಯಾದರೂ ಎಡವುತ್ತಾನೆ. ಕಾಮ ಕ್ರೋಧಗಳಿಗೆ ವಶನಾಗಿ ಅಕಸ್ಮಾತ್ ಒಂದು ತಪ್ಪು ಕೆಲಸವನ್ನು ಮಾಡುತ್ತಾನೆ. ಹಾಗೆ ತಪ್ಪು ಮಾಡುವುದು ಅವನ ಸ್ವಭಾವವೇನಲ್ಲ. ತಾನು ಮಾಡಿದ ತಪ್ಪಿಗೆ ನಂತರ ಅವನಿಗೆ ಪಶ್ಚಾತ್ತಾಪವೂ ಆಗಿರುತ್ತದೆ. ಅದನ್ನು ಇನ್ನೊಬ್ಬರಿಗೆ ತಿಳಿಸಿದರೆ ಅದು ಹತ್ತಾರು ಜನರ ಕಿವಿಗೆ ಬಿದ್ದು ಈತನ ವಿಷಯದಲ್ಲಿ ಜನರಿಗೆ ತಪ್ಪು ಅಭಿಪ್ರಾಯವೇ ಮೂಡಿಬಿಡುತ್ತದೆ.

30 Daily Self care Useful tips for senior citizens

ಒಂದು ಮುಖ್ಯವಾದ ವಿಷಯ , 60 ವರ್ಷ ಮೇಲ್ಪಟ್ಟ ಅಪ್ಪಂದಿರಿಗೆ, 55 ವರ್ಷಗಳು ದಾಟಿದ ಅಮ್ಮಂದಿರಿಗಾಗಿ. ನೇರಮಾತುಗಳು ದಯವಿಟ್ಟು ತಾಳ್ಮೆಯಿಂದ ಪೂರ್ತಿ ಓದಿರಿ , ಆಲೋಚಿಸಿರಿ , ಚಿಂತಿಸ ಬೇಡಿ. 

1. ಸ್ನಾನ ಮಾಡುವಾಗ ಸುಮ್ಮನೆ ಬಾಗಿಲು ಹಾಕಿಕೊಳ್ಳಿ, ಚಿಲಕ ಹಾಕಬೇಡಿ. *ಸ್ಟೂಲು ಅಥವಾ ಚೇರ್ ಮೇಲೆ ಕೂತ್ಕೊಂಡು ಸ್ನಾನ ಮಾಡಬೇಕು *ನಿಂತುಕೊಂಡು ಸ್ನಾನ ಮಾಡಬಾರದು
2 . ಕಮೋಡ್ ಮೇಲೆ ಕೂತುಕೊಂಡಾಗ ಏಳುವುದಕ್ಕೂ, ಕುಳಿತುಕೊಳ್ಳುವುದಕ್ಕೂ *ಒಂದು ರಾಡನ್ನು ಹಾಕಿಸಿಕೊಳ್ಳುವುದು ಸಪೋರ್ಟ್*               
3. ಹೆಂಗಸರಾಗಲಿ ಗಂಡಸರಾಗಲಿ ಪ್ಯಾಂಟನ್ನು ಹಾಕಿಕೊಳ್ಳುವಾಗ ಚೇರ್ ಮೇಲೆ ಅಥವಾ ಬೆಡ್ ಮೇಲೆ ಕೂತ್ಕೊಂಡು ಹಾಕಿಕೊಳ್ಳಬೇಕು *ನಿಂತಿ ಕೊಂಡು ಹಾಕಿಕೊಳ್ಳಬಾರದು.          
4. ನಿದ್ದೆ ಮಾಡಿ ಎಳುವಾಗ ಎದ್ದು ಕೂತುಕೊಂಡು *30 ಸೆಕೆಂಡು ನಂತರ ಓಡಾಡಬೇಕು ಮುಖ್ಯವಾಗಿ ರಾತ್ರಿಯ ಹೊತ್ತು
5. ಒದ್ದೆ ಅಂದರೆ *ನೀರು ಇರುವ ಜಾಗದಲ್ಲಿ ಓಡಾಡಬಾರದು.
6. ಚೇರ್, ಬೆಂಚ್ *ಇವುಗಳ ಮೇಲೆ ನಿಂತು ಯಾವುದೇ ಕೆಲಸವನ್ನು ಮಾಡಬೇಡಿ
7. ವಾಹನಗಳನ್ನು ಓಡಿಸುವಾಗ ಕಾರ್ ಅಥವಾ ಬೈಕ್ ನಲ್ಲಿ *ಒಬ್ಬರೇ ಹೋಗಬೇಡಿ ಯಾರಾದರೂ *ಜೊತೆಯಲ್ಲಿ ಇರಬೇಕು.
8. ಯಾವುದೇ ಮೆಡಿಸನ್ ತೆಗೆದುಕೊಂಡರೆ *ಡಾಕ್ಟರನ್ನು ಕೇಳಿ ತೆಗೆದುಕೊಳ್ಳಿ ನೀವಾಗೆ ತೆಗೆದುಕೊಳ್ಳಬೇಡಿ     
9. ನಿಮಗೆ ಏನು ಅನಿಸುತ್ತೋ ಅದನ್ನೇ ಮಾಡಿ ನಿಮಗೆ ಹೇಗೆ ಸಮಾಧಾನವಾಗುತ್ತದೆಯೊ, *ಯಾರೋ ಹೇಳಿದರು ಅಂತ ಮಾಡಬೇಡಿ.          
10. ಎಲ್ಲಿಗಾದರೂ (ಬ್ಯಾಂಕ್, ಶಾಪ್, ಶಾಪಿಂಗ್, ಮಾರ್ಕೆಟ್) ಹೋಗಬೇಕಾದರೆ ಗಂಡ ಅಥವಾ ಹೆಂಡತಿ ಇಲ್ಲಾಂದರೆ ಮಕ್ಕಳು *ಯಾರಾದರೂ ಸರಿ ಅವರ ಜೊತೆ ಹೋಗಬೇಕು
11. ಮನೆಯಲ್ಲಿ ಒಬ್ಬರೇ ಇರಬೇಕಾದರೆ *ಗುರುತು ಪರಿಚಯ ವಿಲ್ಲದವರನ್ನು ಮನೆಯೊಳಗೆ ಸೇರಿಸಬೇಡಿ
12. ಮನೆಯ ಮೈನ್ ಡೋರ್ ಕೀಲಿ ಕೈ *ಗಂಡನ ಹತ್ತಿರ ಒಂದು ಹೆಂಡತಿಯ ಹತ್ತಿರ ಒಂದು ಇರಬೇಕು.           
13. ನಿಮ್ಮ ಬೆಡ್ ರೂಮಿನಲ್ಲಿ *ಒಂದು ಕಾಲ್ ಬೆಲ್ ಇದ್ದರೆ ಒಳ್ಳೆಯದು ಎಮರ್ಜೆನ್ಸಿ ಇದ್ದರೆ ಕರೆಯುವುದಕ್ಕೆ.
14. ಎಲ್ಲರ ಜೊತೆಯಲ್ಲೂ *ನಯ ವಿನಯದಿಂದ ಮಾತಾಡಿ   
15. ಯಾವಾಗಲೂ ನಿಮ್ಮ ಹಿಂದಿನ ಮುಂದಿನ ವಿಷಯಗಳ ಬಗ್ಗೆ ಯೋಚನೆ ಮಾಡಬೇಡಿ *ಈಗ ನಡೆಯುವ ಬಗ್ಗೆ ಯೋಚಿಸಿ ಇದು ಮುಖ್ಯವಾದ ವಿಷಯ                       

Self care Useful tips for senior citizens


16. ಈ ವಯಸ್ಸಿನಲ್ಲಿ ನೆಮ್ಮದಿಯ ಜೀವನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಖುಷಿಯಾಗಿರುವುದು *ಒಳ್ಳೆಯ ಸಂಬಂಧಗಳು ಒಳ್ಳೆಯ ಸ್ನೇಹಿತರು ಇದು ಮುಖ್ಯವಾದದ್ದು.   
17.ಯಾವ ಜ್ಯೋತಿಷ್ಯಿಗಳನ್ನ,ಶಾಸ್ತ್ರ ಹೇಳುವವ *ಮನೆಯ ಒಳಗೆ ಸೇರಿಸಿಕೊಳ್ಳ ಬೇಡಿ
18.ರಸ್ತೆಯ ಬದಿಯಲ್ಲಿ ಹೋಸ ವ್ಯಕ್ತಿಗಳೊಂದಿಗೆ ವಾದ ವಿವಾದ ಮಾಡಿಕೊಳ್ಳ ಬೇಡಿ.
19. ರಸ್ತೆಯಲ್ಲಿ ಹೋಗುವಾಗ ಯಾರಾದರೂ ಏನಾದರೂ ಕೊಟ್ಟಲ್ಲಿ ತೆಗೆದುಕೊಳ್ಳ ಬೇಡಿ.
20.ಅಪರಿಚಿತರ ಸಂಗಡ ಮಾತಾಡ ಬೇಡಿ,ವ್ಯವಹರಿಸ ಬೇಡಿ.
21.ನಿಮ್ಮ ಮನೆಯ ವಿಳಾಸ,ಮಕ್ಕಳ,ನಿಮ್ಮವರ,ನೆರಮನೆಯವರ ದೂರವಾಣಿ ಸಂಖ್ಯೆ ಬರೆದಿಟ್ಟುಕೊಳ್ಳಿ.
22.ನಿಮ್ಮ ಮಕ್ಕಳ,ಮೋಮ್ಮಕ್ಕಳ ಬಗ್ಗೆ ಯಾರಿಗೂ ಹೇಳ ಬೇಡಿ.
23.ಮಕ್ಕಳು ಕೆಲಸ ಮಾಡುವ ವಿಳಾಸ , ದೂರವಾಣಿ ಸಂಖ್ಯೆ ಯನ್ನ ಯಾರೊಂದಿಗೂ ಹಂಚಿಕೊಳ್ಳಲು ಹೋಗ ಬೇಡಿ.
24. ಬಸ್,ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಲಗ್ಗೇಜ್ ಒಯ್ಯ ಬೇಡಿ.
25. ಅಂತಿಮವಾಗಿ, ಕಟ್ಟಕಡೆಯದಾಗಿ ತಿಳಿಸುವುದೇನೆಂದರೆ ಯಾವುದೇ ಕಾರಣ ಕ್ಕೂ ಅಪ್ಪಿ,ತಪ್ಪಿ ಯಾವುದೆ ಪತ್ರ ವ್ಯವಹಾರಗಳನ್ನ ನಿಮ್ಮ ವರು / ಬೇಕಾದವರು/ಮಕ್ಕಳು ಇಲ್ಲದಾಗ ಸಹಿ ಹಾಕುವುದು,ಕೊಡುವುದು,ಹರಿಯುವುದು ಮಾಡಲೆ ಬೇಡಿ. 26.ನಿಮ್ಮ ಬ್ಯಾಂಕ್ ವಿವರಗಳನ್ನ ಯಾರಿಗೂ ತಿಳಿಸಲೆ ಬೇಡಿ.
27.ನಿಮ್ಮ ಮೋಬೈಲ್ ಸಂಖ್ಯೆ,ಈ ಮೈಲ್ ಪಾಸ್ ವರ್ಡ್ ,ಓಟಿಪಿ ಗಳನ್ನ ಯಾರಿಗೂ ಹೇಳ ಬೇಡಿ.
28.ಸದಾ ನಿಮ್ಮೋಂದಿಗೆ ಸಣ್ಣ ಪುಸ್ತಕ, ಪೆನ್ ,ಬಿಳಿಯ ಹಾಳೆಯನ್ನ ಒಂದು ಸೈಡ್ ಬ್ಯಾಗ್ ನಲ್ಲಿಟ್ಟುಕೊಳ್ಳಿ.ನಿಮ್ಮೋಡನೆ ಸದಾ ಇರಲಿ.
29. ನಿಮ್ಮ ಬಳಿ ಇರುವ ಹಣವನ್ನ ಒಂದೆ ಜೇಬಿನಲ್ಲಿ ಇಟ್ಟುಕೊಳ್ಳದೆ ಎಲ್ಲಾ ಜೇಬಿಗು ಬಿಡಿ, ಬಿಡಿಯಾಗಿಟ್ಟುಕೊಳ್ಳಿ.
30. ಆಟೋ,ಓಲಾ, ಬಸ್ ಗಳಲ್ಲಿ ಪ್ರಯಾಣಿಸುವಾಗ ಹೋಗ ಬೇಕಾದ ಸ್ಥಳ, ಅಂದಾಜು ಚಾರ್ಜ್ ಮಾತ್ರ ಮೇಲಿಟ್ಟುಕೊಳ್ಳಿ.

ಯೋಚನೆ ಮಾಡ ಬೇಡಿ, ಆದರೆ ತಪ್ಪದೆ ಹುಷಾರಾಗಿರಿ

How to age well , here are few tips

  • Don't get involved in the children's lives.
  • Do not interfere with grandchildren's education.
  • Love your son-in-law and daughter-in-law, it was your son/daughter who made the choice.
  • Never take sides or give opinions on their wedding.
  • Don't be an old complainer.
  • Don't be an old man with self-pity.
  • Don't keep talking ABOUT MY TIME, it's already past, nobody is interested in your history. 
  • Have plans for your future.
  • Don't talk about sickness or  diseases.  No one is interested.
  • No matter how much you earn, save an amount every month.
  • Save some money for your funeral or at least have a plan.  Don't leave the burden to the children.
How to age well , here are few tips

 
  • Have a health plan or save some money for medical expenses.  (If possible)
  • Don't stay or  tuned too much to the news or politics, after all you won't be able to solve anything.
  • Just enjoy your  TV program or listening to your favourite music. Learn to have fun and don't get anxious or upset about any news.
  • If you like it, keep a pet for companionship.
  • Stay active, perhaps, learn to cook, make garden, exercise, go for a stroll. Whatever it is, just don't sit around and do nothing. 
  • Keep yourself neat and clean all the time. Maintain personal hygiene. 
  • Accept aging happily, till then, enjoy each passing  day and live wisely.
  • Let age be a bridge to the future and never a ladder to the past.
Finally, don't keep good whisky, wine or beer for tomorrow, it might be too late! Let your life be a celebration , a joy and a blessing to many . Cheers

ಕೇಳಿಸಿಕೊಂಡು ಸಮಾಧಾನ ಹೇಳಿ ಸಾಂತ್ವನ

ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ನನ್ನ ಹುಟ್ಟೂರು. ನಮ್ಮ ಅಜ್ಜಿ (ಪಿತಾಮಹಿ)  ಜಾನಮ್ಮವ್ವ, ನಮ್ಮ ತಾಯಿ ಸಾವಿತ್ರಮ್ಮ, ನಮ್ಮ ತಂದೆ ಮಾನಕರಿ ಹುಲಿಕುಂಟಾಚಾರ್. ಅಪ್ಪ ಪ್ರಾಥಮಿಕ ಶಾಲಾ ಶಿಕ್ಷಕರು, ಹೋಮಿಯೋಪತಿ ವೈದ್ಯರು ಮತ್ತು ಹಳ್ಳಿಯ ಹತ್ತು ಸಮಸ್ತರ  ಹಿತಚಿಂತಕರು.
 
ನಮ್ಮ ಹಳ್ಳಿಯ ಕೆಲವು ರೈತಮಹಿಳೆಯರು  ತಮ್ಮ ಹೊಲಗಳಲ್ಲಿ ಬೆಳೆದ ಹೀರೆಕಾಯಿ ಸೌತೆಕಾಯಿ ಸೊಪ್ಪು ಅಥವಾ ಹಸಿಮೆಣಸಿನಕಾಯಿಯನ್ನು  ತಮ್ಮ ಸೆರಗಿನಲ್ಲಿ ಕಟ್ಟಿಕೊಂಡು  "ಮೇಷ್ಟ್ರ ಮನೆಗೆ ಕೊಡುವ ನೆಪ" ಮಾಡಿಕೊಂಡು  ನಮ್ಮ ಅಜ್ಜಿ ಅಥವಾ ನಮ್ಮ ಅಮ್ಮನ ಬಳಿ ತಮ್ಮ ಸಾಂಸಾರಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು  ಆಗಾಗ ಬರುತ್ತಿದ್ದರು.

ಅಮ್ಮ ಅಥವಾ ಅಜ್ಜಿ  ನಮ್ಮ ಮನೆಯ ವರಾಂಡದಲ್ಲೋ ಪಡಸಾಲೆಯ ಮೂಲೆಯಲ್ಲೋ ಅಥವಾ ದನದ ಕೊಟ್ಟಿಗೆಯಲ್ಲೋ    ಅವರನ್ನು ಕರೆದು ಪ್ರೀತಿಯಿಂದ ಕೂಡಿಸಿಕೊಂಡು ಗಂಟೆಗಟ್ಟಲೆ ಅವರಿಗಾಗಿ ಸಮಯ ಮೀಸಲಿಟ್ಟು ಅವರ ಕಷ್ಟ ಕಾರ್ಪಣ್ಯಗಳಿಗೆ  ಕಿವಿಯಾಗುತ್ತಿದ್ದರು.

 ಅವರು ತಮ್ಮ ಗಂಡನ ದುರ್ನಡತೆಯ ಬಗ್ಗೆಯೋ ಅತ್ತೆ ಮಾವ ಭಾವ ಮೈದುನ ವಾರಗಿತ್ತಿ ಅಥವಾ ಮಕ್ಕಳು ಕೊಡುವ ದುಃಖದ ಬಗ್ಗೆಯೋ ತಮ್ಮ ಅಳಲನ್ನು ತೋಡಿಕೊಂಡು ಅತ್ತು ಕರೆದು ನಿಟ್ಟುಸಿರು ಬಿಟ್ಟು ಸಮಾಧಾನ ತಾಳುತ್ತಿದ್ದರು.  ಕೆಲವರಂತೂ  ಬಾವಿಯಲ್ಲಿ ಹಾರುತ್ತೇವೆ ಬೆಂಕಿ ಹಚ್ಚಿಕೊಳ್ಳುತ್ತೇವೆ ಉರುಲು ಹಾಕಿಕೊಳ್ಳುತ್ತೇವೆ ಎಂದೆಲ್ಲಾ  ಹೇಳಿದ್ದುಂಟು. ಅದೆಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡು ನಡುನಡುವೆ ಸಾಂತ್ವನದ ಮಾತನ್ನಾಡುತ್ತಾ ಅವರ ಕಷ್ಟಕ್ಕೆ ಸ್ಪಂದಿಸಿ ಇವರು ಸಹ ಒಮ್ಮೊಮ್ಮೆ ಕಣ್ಣೀರು ಮಿಡಿಯುತ್ತಾ ನಿಟ್ಟುಸಿರು ಬಿಡುತ್ತಾ ಕೊನೆಗೆ ಧೈರ್ಯವನ್ನು ಹೇಳಿ  "ಸಾಯುವುದಿಲ್ಲವೆಂದು ಆಣೆ ಪ್ರಮಾಣ" ಮಾಡಿಸಿಕೊಂಡು ಒಂದಿಷ್ಟು ಅವಲಕ್ಕಿಯನ್ನೋ ಮಂಡಾಳನ್ನೋ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳನ್ನೋ ಕೊಟ್ಟು ಕಳುಹಿಸುತ್ತಿದ್ದರು.

ಕೇಳಿಸಿಕೊಂಡು ಸಮಾಧಾನ ಹೇಳಿ ಸಾಂತ್ವನ


ಬಿಗಿದ ಮುಖದಿಂದಲೂ ಗಂಟು ಹಾಕಿದ ಹುಬ್ಬಿನಿಂದಲೂ ಬಂದಿದ್ದ ಆ ತಾಯಂದಿರು ನೆಮ್ಮದಿಯ ನಸುನಗೆಯ ಮುಖವನ್ನು  ಹೊತ್ತು ಹೊಸ ಜೀವನೋತ್ಸಾಹದ ಗಟ್ಟಿ ಹೆಜ್ಜೆಗಳನ್ನಿಡುತ್ತಾ  ಹೊರಡುವ ದೃಶ್ಯವನ್ನು ಕಂಡು ನಮಗೆ ಅದೇನೋ ಸಮಾಧಾನ.

ಸಮಸ್ಯೆ ತೀವ್ರ ಮಟ್ಟಕ್ಕೆ ಹೋಗಿದ್ದರೆ  ಅದನ್ನು  ನಮ್ಮ ತಂದೆಯವರಿಗೆ ತಿಳಿಸಿ ಆ ಮನೆಯ ಗಂಡಸರನ್ನು ಕರೆಯಿಸಿ ಅವರಿಗೆ  ನಮ್ಮತಂದೆಯವರೇ ಗದರಿಸಿ ಹಿತವನ್ನು ಹೇಳುವಂತೆ ಅಜ್ಜಿ ಅಮ್ಮ ವ್ಯವಸ್ಥೆ ಮಾಡುತ್ತಿದ್ದುದೂ ಉಂಟು.

ಹೀಗೆ ಮತ್ತೆ ಮತ್ತೆ ನಮ್ಮ ಮನೆಗೆ ಭೇಟಿ ನೀಡುತ್ತಿದ್ದ  ಇಪ್ಪತ್ತು ಮೂವತ್ತು ಮಹಿಳೆಯರ ಹೆಸರು ಮುಖಗಳು ನನಗಿನ್ನೂ ನೆನಪಿವೆ. ಅವರು ಹೇಳುತ್ತಿದ್ದ ಸುದ್ದಿಯ ಕೆಲ ಕೆಲಭಾಗಗಳು ನನಗೂ ಗೊತ್ತಿವೆ ಆದರೆ ಆ ವಿವರಗಳನ್ನು ನಾನು  ಅಂದು ಯಾರಿಗೂ ಹೇಳಿರಲಿಲ್ಲ. ಈಗಲೂ ಹೇಳುವುದಿಲ್ಲ.   ಅದರಲ್ಲಿ ಬಹುಪಾಲು ಜನ ಈಗ ಬದುಕಿಲ್ಲ ಆದರೂ ಅವರ ಹೆಸರನ್ನು ನಾನು ಹೇಳಲಾರೆ ಹೇಳಿದರೆ ಅವರ ಮಕ್ಕಳಿಗೆ ಮೊಮ್ಮಕ್ಕಳಿಗೆ ನೋವಾದೀತು.

ಹೀಗೆ ಇತರರ ನೋವನ್ನು ದುಗುಡ ದುಮ್ಮಾನವನ್ನು ಕೇಳಿಸಿಕೊಂಡು ಸಮಾಧಾನ ಹೇಳಿ ಸಾಂತ್ವನ ನೀಡಿದರೂ ಆ ಗುಟ್ಟನ್ನು ಮತ್ತೊಂದು ಕಿವಿಗೆ ತಲುಪಿಸದಂತೆ ಗುಟ್ಟನ್ನಾಗಿಯೇ ಉಳಿಸಿಕೊಂಡು ಬಾಳಿದ ಅಮ್ಮ ಮತ್ತು ಅಜ್ಜಿಯ ನೆನಪಾದಾಗ ಅವರ ವ್ಯಕ್ತಿತ್ವದ ಬಗ್ಗೆ ಗೌರವ ಮೂಡುತ್ತದೆ.

ಇಂದು ಆಪ್ತಸಲಹೆ  (ಕೌನ್ಸಿಲಿಂಗ್) ಒಂದು ಲಾಭದಾಯಕ ವೃತ್ತಿಯಾಗಿ ವಿಕಾಸಗೊಂಡಿದೆ ಆದರೆ ಯಾವುದೇ ಲಾಭದ ಅಪೇಕ್ಷೆಯಿಲ್ಲದೆ  ಅದನ್ನು ನಮ್ಮ ಮನೆಯ ಮಕ್ಕಳ ಸಮಸ್ಯೆಯೋ ಎನ್ನುವಂತೆ ಪ್ರೀತಿಯಿಂದ ಕೇಳಿಸಿಕೊಂಡು ಸಾಂತ್ವನ ನೀಡುತ್ತಿದ್ದ ಅವರ ನೆನಪು ಇಂದು ನನ್ನನ್ನು ಬಹು ಕಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ  ಅಂತಹ ಸೇವೆಯನ್ನು ಮಾಡಬಯಸಿದರೂ  "ಬೇರೊಬ್ಬರಿಗೆ  ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವವ"ರ ಸಂಖ್ಯೆ ಕಡಿಮೆಯಾಗುತ್ತಿದೆ.   ನಮ್ಮಿಂದ ಒಬ್ಬಿಬ್ಬರಿಗೆ ನಿರ್ವ್ಯಾಜ  ನೆಮ್ಮದಿ ನೀಡಲು ಸಹ ಪುಣ್ಯ ಮಾಡಿರಬೇಕು!

ಮನೆಯ ಸಮೃದ್ದಿ ಮತ್ತು ಸಾತ್ವಿಕತೆಗೆ ಕೆಲವು ಸಲಹೆಗಳು


🌷 *ಒಡೆದಿರುವ ಅಥವಾ ಬಿರುಕು ಬಿಟ್ಟಿರುವ ಕನ್ನಡಿ ಇಡಬೇಡಿ* ; ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.

🌷 *ಮನೆಯ ಯಾವುದೇ ಸ್ಥಳದ ನಲ್ಲಿಯಲ್ಲಿ ನೀರು ನಿರಂತರ ಸೋರುವಿಕೆ ಇರಬಾರದು* ; ಅದರಿಂದ ಹಣ ವ್ಯಯ ಸಂಭವ.

🌷 *ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ* ; ಇದರಿಂದ ಮನಸ್ಸನಲ್ಲಿ ಖಿನ್ನತೆ ಉಂಟಾಗುವ ಸಂಭವ.

🌷 *ಸಾಧ್ಯವಾದಷ್ಟು ದೇವರಿಗೆ ಮನೆಯ ಹೂವುಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ.* ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸಬೇಕು. ಶುದ್ಧ ಮಾಡಿ ನಂತರ ಉಪಯೋಗಿಸಬೇಕು. ಇಲ್ಲದಿದ್ದರೆ ಮನೆಯ ಅಡುಗೆ ಸಾಮಗ್ರಿ ಹಾಳಾಗುವ ಸಂಭವ.

🌷 *ನಿಂತ ಗಡಿಯಾರವು ಅಶುಭ* ಲಕ್ಷಣ.ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ

🌷 *ದೇವರ ಕೋಣೆಯ ಮೇಲೆ ಅತಿಯಾದ ಭಾರವನ್ನು ಇಡಬಾರದು.ಒಡೆದುಹೋದ ದೇವರ ಮೂರ್ತಿ ಅಥವಾ ಫೋಟೋಗಳನ್ನು ಇಡಬೇಡಿ.*

🌷 *ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ-ತಾಯಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ.* ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು.ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ

🌷 *ದೇವರ ಕೋಣೆಯಲ್ಲಿ ಒಂಟಿ ದೀಪ ಉರಿಸಬಾರದು. ಸಣ್ಣ ದೀಪವಾದರೂ ಅಡ್ಡಿ ಇಲ್ಲ, ಎರಡು ದೀಪಗಳನ್ನು ಇಡಿ.*

🌷 *ಚಾಪೆ ಬಳಸುತ್ತಿದ್ದರೆ ಮುಗುಚಿ ಹಾಕಬಾರದು. ಸಂಜೆ* ಗುಡಿಸಿದ ಕಸವನ್ನು ಹೊರಗೆ ಹಾಕಬಾರದು.

🌷 *ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳುವುದು.* ಇದರಿಂದ ವಸ್ತುವಿನಲ್ಲಿ ಇದ್ದ ಕಲಿ ದೋಷ ದೂರವಾಗುವುದು.

🌷 *ಕುಲದೇವರಿಗೆ ;ಇಷ್ಟ ದೇವರಿಗೆ; ಗ್ರಾಮ ದೇವರಿಗೆ ಮನೆಯ ಎಲ್ಲ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ* .

🌷 *ಜೇಡರಬಲೆ ಮನೆಯಲ್ಲಿ ಕಟ್ಟಿದ್ದರೆ ತಕ್ಷಣ ನಿವಾರಿಸಿ- ಅದು ಅಶುಭ ತರುವ ಸಂಕೇತ.* ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ವೃದ್ಧಿಸುವುದು

🌷 *ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ - ಅದು ಕಷ್ಟಗಳು ಎದುರಾಗುವ ಸಂಕೇತ.* ಅವುಗಳ ಪ್ರಾಣ ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು.

🌷 *ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು* . ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ.

🌷ಬಾವುಲಿಗಳು ಮನೆಯ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರವಹಿಸಿ

🌷 *ಹಿರಿಯರು ನಂಬಿಕೊಂಡು ಬಂದ ದೈವಗಳಿಗೆ; ಅವರದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ.*

🌷 *ಉತ್ತರ ದಿಕ್ಕಿಗೆ ತಲೆ ಮಾಡಿ* *ಮಲಗಬಾರದು* . ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು

🌷 *ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ* ವಸ್ತ್ರಗಳನ್ನು ಧರಿಸುವುದು ಮಾಡಬೇಡಿ.

🌷 *ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿಮಾಡಿ.* ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಿಷ್ಣು ಸಹಸ್ರನಾಮ ಅಥವಾ ನಿಮ್ಮ ಇಷ್ಟದೇವರ ಯಾವುದೇ ಸ್ತೋತ್ರ ಮಂತ್ರ (ಭಜನೆ) ಪಠಿಸಿ ಅಥವಾ ಅದನ್ನು ಮನೆಯಲ್ಲಿ ಕೇಳುವಂತೆ ನಿತ್ಯ ವ್ಯವಸ್ಥೆ ಮಾಡಿ. ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ

ಮನೆಯ ಸಮೃದ್ದಿ ಮತ್ತು ಸಾತ್ವಿಕತೆಗೆ ಕೆಲವು ಸಲಹೆಗಳು



🌷 *ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು* . ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು. ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬೇಡಿ. ನೆಗಟಿವ್ ಎನರ್ಜಿ ವಕ್ಕರಿಸುವ ಅಪಾಯವಿರುತ್ತದೆ.

🌷 *ಆಹಾರ ಸೇವಿಸಿದ ನಂತರ ಎಂಜಲು ಮುಸುರೆ ಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ*

🌷 *ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ* . ಒಂದು ವೇಳೆ, ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ರಾತ್ರಿಹೊತ್ತಿನಲ್ಲಿ ಕನ್ನಡಿ ನೋಡುವುದು ಅಷ್ಟು ಸಮಂಜಸವಲ್ಲ

🌷 *ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ* ಉತ್ತಮ. ಇದರಿಂದ ವಾಸ್ತು ಸದೃಢವಾಗಿರುತ್ತದೆ

🌷 *ವರ್ಷಕ್ಕೆ ಒಮ್ಮೆಯಾದರೂ ಶ್ರೀ ವೈಷ್ಣವ  ಬ್ರಾಹ್ಮಣ ಸುವಾಸಿನಿ (ಅತಿಥಿಸತ್ಕಾರ ) ಪೂಜೆ ಮಾಡಿ* . ಯೋಗ್ಯರಿಗೆ ದಾನ ಮಾಡಿ. ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ

🌷 **ಸಾಧ್ಯವಿದ್ದಲ್ಲಿ ನಿತ್ಯವೂ ಮನೆಯ ಸಮೀಪದದೇವಾಲಯ ಮತ್ತು ಗ್ರಾಮದೇವರಸಂದರ್ಶನ ಉತ್ತಮ .*
*
🌷ವರ್ಷಕ್ಕೆ ಒಮ್ಮೆಯಾದರೂ ಸಮಾಜದ (ಕುಟುಂಬದ) ಗುರುಪೀಠದ ಫಲಮಂತ್ರಾಕ್ಷತೆಯನ್ನು ತರುವುದು.

🌷ಮನೆಯ ಹಾಲ್ ನಲ್ಲಿ ಅಕ್ವೇರಿಯಂ ಇದ್ದರೆ, ಆಗ್ನೇಯ(ಸೌಥ್ ಈಸ್ಟ್) ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಒಳ್ಳೆಯದು

🌷 *ಸ್ನಾನವಿಲ್ಲದೆ ಊಟ ಮಾಡುವುದು ಒಳ್ಳೆಯದಲ್ಲ. ಅನ್ನವು ದೇವರಿಗೆ ಸಮಾನ.*

🌷 *ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ.ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ.*

🌷 *ಹಣದಿಂದ ನಾವು ಏನೆಲ್ಲ ಕೊಂಡು ಕೊಳ್ಳಬಹುದು ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನಲ್ಲ* . ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯ ಗಳನ್ನು ಆಚರಿಸಿದಾಗ ಮಾತ್ರ ಸಾಧ್ಯ

 

Learn proverbs knowledge quiz - 3

Proverbs are fun to learn and apply . Learn popular widely used proverbs through this knowledge quiz

Learn Proverbs Knowledge Quiz 3

1) A main is a slave to this
1. Hands
2. Legs
3. Stomach
4. Eyes
2) The more haste
1. Worse speed
2. Worse slow
3. More fast
4. More slow
3) Once bitten
1. Always bitten
2. Always shy
3. Twice bitten
4. Twice shy
4) A honey tongue
1. Tastes young
2. Heart of gall
3. Heart of gold
4. Brittles young
5) A little knowledge is more
1. Useful
2. Dangerous
3. Enough
4. Sufficient
6) All is well
1. That starts well
2. Thats ends well
3. Thats done well
4. Thats sounds well
7) Style makes
1. the man
2. the boy
3. the kid
4. the baby
8) One nail
1. drives another
2. hangs another
3. One hole
4. One hammer
9) Truth lies at
1. End of a story
2. waves of ocean
3. Top of the sea
4. Bottom of well
10) There is time
1. for everything
2. for nothing
3. for something
4. for fewthings
11) One lie leads to
1. Full lies
2. Full truth
3. Another lie
4. Another truth
12) It take all sorts to make a
1. Ocean
2. Sky
3. World
4. Air
13) It takes two to make a
1. Quarrel
2. Event
3. Game
4. Music
14) A friend is need
1. is always a need
2. friend in deed
3. is a great need
4. is ones greed

Learn proverbs knowledge quiz - 2

Proverbs are fun to learn and apply . Learn popular widely used proverbs through this knowledge quiz

Learn Proverbs Knowledge Quiz 2

1) Fools praise
1. Fools
2. Brave
3. Intelligent
4. Coward
2) Many heads
1. Many hairs
2. Many eyes
3. Many minds
4. Many ears
3) Barking dogs
1. Always bite
2. Seldom bite
3. Seldom bark
4. Always bark
4) It is no use building castle
1. In air
2. in wood
3. in concrete
4. in plastic
5) Penny wise
1. Always wise
2. Pound foolish
3. Always foolish
4. Pound wise
6) Given loan
1. make friends
2. returns own
3. then moan
4. enemy own
7) Birds of a feather
1. fight together
2. flock together
3. play together
4. sing together
8) Where there is a will
1. there is money
2. there is health
3. there is a way
4. there is nothing
9) A bad carpenter quarrels with his
1. Client
2. Tools
3. Colleagues
4. Himself
10) Silence is half
1. Ignorance
2. Consent
3. Reluctance
4. Nice

Learn proverbs knowledge quiz - 1

Proverbs are fun to learn and apply . Learn popular widely used proverbs through this knowledge quiz

Learn Proverbs Knowledge Quiz 1

1) When in Rome
1. Do as Romans do
2. Do Roam
3. Be at home
4. Visit palace
2) As you sow
1. it grows
2. you get crop
3. it shall grow
4. so shall you reap
3) A thing is valued
1. By its price
2. Where it belongs
3. By its nature
4. Where its sold
4) To the good
1. Enjoy their food
2. On high mood
3. World appears good
4. Love neighbour hood
5) An empty vessel
1. Is very light
2. Is cheap
3. Makes much noise
4. Stores more
6) Health is
1. Wealth
2. Money
3. Prioirty
4. Status
7) No Pain
1. No gain
2. Less gain
3. More gain
4. High gain
8) Time once lost
1. Can be used
2. Can be tracked
3. Cannot be gained
4. Cannot be tracked
9) Society
1. is made by man
2. moulds man
3. changes a man
4. Uplifts a man
10) Union is
1. Ultimate
2. Power
3. Great
4. Strength
Terms | Privacy | 2024 🇮🇳
–>